ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ನೂರೊಂದು ’ನಮನ

By Staff
|
Google Oneindia Kannada News
  • ಚೆನ್ನವೀರ ಕಣವಿ
ನೀವು ಮೆಲ್ಲಗೆ ಬಂದು ಎದುರು ಬಂದು ಕುಳಿತರೆ ಸಾಕು
ಸಭೆಗೊಂದು ಗಾಂಭೀರ್ಯ; ತಿಳಿನಗೆ ಸೂಸುಪಾರ್ಯ
ನೆನಪಿನ ಗಣಿಯ ಮಣಿಯ ಹೊರತರುವುದನಿವಾರ್ಯ
ಶತಮಾನದಿತಿಯಾಸ ಬಿಚ್ಚಿ -ಕಟ್ಟುವ ಮೆಲುಕು
ವೃತ್ತಿ-ಪ್ರವೃತ್ತಿ-ನ್ಯಾಯ ನಿಷ್ಠುರತೆ? ನಿಟ್ಟೂರು
ಬೋಧೆ-ಬರವಣಿಗೆ -ಪ್ರಕಾಶನ-ಸತ್ಯಶೋಧನೆ
ಸಾಮಾನ್ಯರೊಡನೆ ಬೆರೆತು ನುರಿತ ಸವಿಚಿಂತನೆ
ಶಾಂತಿ ಚಳವಳಿಗೆ ಬಳುವಳಿ ಮಾನವ ಹಕ್ಕು
ಕಿರಿಯರಾದರು ಕಲಿಯಬಹುದೆಂಬ ಹಿರಿಯ ಗುಣ
ಕಲೆ-ಸಾಹಿತ್ಯ-ಸಂಸ್ಕೃತಿ; ಸದಾ ಸಂವಾದಿ
ಎಲ್ಲಾ ಹದಗೆಟ್ಟಿಲ್ಲ ಎಂಬ ಆಶಾವಾದಿ
ಒಟ್ಟಾಗಿ ನಿಂತು ನೈತಿಕ ಮಟ್ಟವೆತ್ತೋಣ
ಪ್ರಜಾಸತ್ತೆಗೆ ನೀಡಿ ಪರಿಶುದ್ಧತೆಯ ದೀಕ್ಷೆ
ನೂರಕ್ಕೆ ನೂರು ನಿಮ್ಮದೇ ಚಾರಿತ್ರ್ಯ-ನಕ್ಷೆ

(ನಿಟ್ಟೂರರಿಗೆ ನೂರು ತುಂಬಿದ ಸಂದರ್ಭದಲ್ಲಿ ಬರೆದದ್ದು)


ಪೂರಕ ಗದ್ಯ
ಉಸಿರುಗಟ್ಟಿಸೊ ನಗರಿಯ ಉದ್ಯಾನವಾಗಿದ್ದವರು

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X