ತ್ವರಿತ ಅಲರ್ಟ್ ಗಳಿಗಾಗಿ
For Daily Alerts
‘ನೂರೊಂದು ’ನಮನ
- ಚೆನ್ನವೀರ ಕಣವಿ
ಸಭೆಗೊಂದು ಗಾಂಭೀರ್ಯ; ತಿಳಿನಗೆ ಸೂಸುಪಾರ್ಯ
ನೆನಪಿನ ಗಣಿಯ ಮಣಿಯ ಹೊರತರುವುದನಿವಾರ್ಯ
ಶತಮಾನದಿತಿಯಾಸ ಬಿಚ್ಚಿ -ಕಟ್ಟುವ ಮೆಲುಕು
ವೃತ್ತಿ-ಪ್ರವೃತ್ತಿ-ನ್ಯಾಯ ನಿಷ್ಠುರತೆ? ನಿಟ್ಟೂರು
ಬೋಧೆ-ಬರವಣಿಗೆ -ಪ್ರಕಾಶನ-ಸತ್ಯಶೋಧನೆ
ಸಾಮಾನ್ಯರೊಡನೆ ಬೆರೆತು ನುರಿತ ಸವಿಚಿಂತನೆ
ಶಾಂತಿ ಚಳವಳಿಗೆ ಬಳುವಳಿ ಮಾನವ ಹಕ್ಕು
ಕಿರಿಯರಾದರು ಕಲಿಯಬಹುದೆಂಬ ಹಿರಿಯ ಗುಣ
ಕಲೆ-ಸಾಹಿತ್ಯ-ಸಂಸ್ಕೃತಿ; ಸದಾ ಸಂವಾದಿ
ಎಲ್ಲಾ ಹದಗೆಟ್ಟಿಲ್ಲ ಎಂಬ ಆಶಾವಾದಿ
ಒಟ್ಟಾಗಿ ನಿಂತು ನೈತಿಕ ಮಟ್ಟವೆತ್ತೋಣ
ಪ್ರಜಾಸತ್ತೆಗೆ ನೀಡಿ ಪರಿಶುದ್ಧತೆಯ ದೀಕ್ಷೆ
ನೂರಕ್ಕೆ ನೂರು ನಿಮ್ಮದೇ ಚಾರಿತ್ರ್ಯ-ನಕ್ಷೆ
(ನಿಟ್ಟೂರರಿಗೆ ನೂರು ತುಂಬಿದ ಸಂದರ್ಭದಲ್ಲಿ ಬರೆದದ್ದು)
ಪೂರಕ ಗದ್ಯ
ಉಸಿರುಗಟ್ಟಿಸೊ ನಗರಿಯ ಉದ್ಯಾನವಾಗಿದ್ದವರು
Comments
Story first published: Monday, February 3, 2003, 5:30 [IST]