ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲರಿಗೂ ಬೇಕಾದವರು ನಮ್ಮೀ ಶ್ರೀನಿವಾಸಭಟ್ಟರು

By Oneindia Staff
|
Google Oneindia Kannada News

ಶ್ರೀನಿವಾಸ ಎಸ್‌ ಭಟ್ಟರ ಎರಡು ಕವಿತೆಗಳು
ಬಹುಮುಖಿ ಪ್ರತಿಭೆಯ ಭಟ್ಟರು ಕವಿತೆ ಹೊಸೆಯುವುದರಲ್ಲಿ ಕಡಿಮೆಯೇನಿಲ್ಲ . ಭಟ್ಟರ ಕವಿತ್ವದ ಮಾದರಿಯಾಗಿ ಎರಡು ಕಾವ್ಯ ಸೆಳಕುಗಳನ್ನಿಲ್ಲಿ ಕಾಣಿಸುತ್ತಿದ್ದೇವೆ. ಒಪ್ಪಿಸಿಕೊಳ್ಳಿ.

‘ಆಶ್ಚರ್ಯ ಕೂಟ’ ದ ನೆನಪು

  • ಶ್ರೀನಿವಾಸ ಎಸ್‌ ಭಟ್ಟ (ಪೊಮೊನಾ, ಕ್ಯಾಲಿಫೋರ್ನಿಯ)
ಅಲ್ಲ ಸ್ವಾಮಿ, ಖಂಡಿತವಾಗಿಯೂ ಅಲ್ಲ !
ಅಪ್ಪ , ಅಮ್ಮ , ಹೆಂಡತಿ ಮಕ್ಕಳನು,
ಬಂಧು ಬಳಗದವರನ್ನು , ಸ್ನೇಹಿತರನ್ನು, (ಅ)ಪರಿಚಿತರನು,
ಸೇರಿ ಅಂಕುಡೊಂಕಿನ, ಏರುಪೇರಿನ ಹಾದಿಯ ಬಳಸಿ
ಊರೂರು ಅಲೆದು ಮುಟ್ಟಿದ್ದಾಯಿತು ಬೆಟ್ಟದ ತುದಿಯನ್ನು .

ನಿಜ, ಕೆಳಗೆ ನೋಡಿದರೆ, ಇಳಿಯಬಯಸಿದರೆ
ಕೈಯ್ಯಲ್ಲಿ ಕೋಲಿದ್ದರೂ ಜಾರಿ ಬಿದ್ದೇನೆಂಬ ಭಯ !
ಯಾಕಿಳಿಯಬೇಕು ?
** ** **
ಪಯಣದಂತ್ಯದಲಿ ವಿಶ್ರಮಿಸಲು ತುದಿಗಿಂತಲೂ ಏರಿಲ್ಲ ;
ಎಲ್ಲೆಲ್ಲೂ , ನೋಟದ ಕೊನೆಯಲ್ಲೂ ಕಾಣುತಿವೆ
ಮುಗಿಲೆತ್ತರದ ಶಿಖರಗಳು!
ಗೋಮುಖ ವ್ಯಾಘ್ರಗಳ ಸುಳಿವಿಲ್ಲ ದಿನರಾತ್ರಿಗಳಿಗಂಜಲು ;
ಚೇಷ್ಟೆಯಲಿ ಹಾನಿಗೊಳಿಸಲು ಇಲ್ಲಿ
ಬಯಲು ಸೀಮೆಯಲಿರುವ ಕಾಮಧೇನುಗಳಿಲ್ಲಿಲ್ಲ !
ಅಷ್ಟಿಷ್ಟು ಒಳಿತ ಮಾಡಲು ಕಾಲಾವಕಾಶಗಳು ಬಹಳಿತ್ತು ,
ಮಿಕ್ಕುಳಿದ ಕಾರ್ಯಕ್ಕೆ ಸಮಯಾಭಾವದ
ಬಿಳಿಸುಳ್ಳಿನ ಹೇಳಿಕೆಯಿನ್ನೇನು ಬೇಕಿಲ್ಲ !
ಕುಳಿತಿಲ್ಲೆ ತೇಲಿ ಬರುವಾ ಮೇಘಗಳ ತಡೆಹಿಡಿದೊಡೆ-
ತುಂಬೀತು ಕೆರೆ ಬಾವಿಗಳು, ಮೂಡ್ಯಾವು ಕಾಮನಬಿಲ್ಲು
ನೆನಪಿನಲೆಗಳ ಮೇಲೆ!
ತಾಳ್ಮೆಯಲಿರೆ ಬಂದು ಸೇರ್ಯಾರು ಹಿಂದುಳಿದ ಗೆಳೆಯಾರು !
** ** **
ಸ್ನೇಹಿತರೆ, ಮತ್ತೊಮ್ಮೆ ಸಮಕ್ಷಮ ಭೇಟಿಯಾಗೋಣ,
ಮನಸಲ್ಲೆ ಹುದುಗಿರುವ, ಬರೆಯಲಾಗದ ಆ ಭಾವನೆಗಳನ್ನೆಲ್ಲ
ಪರಸ್ಪರ ಹಂಚಿಕೊಳ್ಳೋಣ !

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X