ಎಲ್ಲರಿಗೂ ಬೇಕಾದವರು ನಮ್ಮೀ ಶ್ರೀನಿವಾಸಭಟ್ಟರು
ಶ್ರೀನಿವಾಸ
ಎಸ್
ಭಟ್ಟರ
ಎರಡು
ಕವಿತೆಗಳು
ಬಹುಮುಖಿ
ಪ್ರತಿಭೆಯ
ಭಟ್ಟರು
ಕವಿತೆ
ಹೊಸೆಯುವುದರಲ್ಲಿ
ಕಡಿಮೆಯೇನಿಲ್ಲ
.
ಭಟ್ಟರ
ಕವಿತ್ವದ
ಮಾದರಿಯಾಗಿ
ಎರಡು
ಕಾವ್ಯ
ಸೆಳಕುಗಳನ್ನಿಲ್ಲಿ
ಕಾಣಿಸುತ್ತಿದ್ದೇವೆ.
ಒಪ್ಪಿಸಿಕೊಳ್ಳಿ.
‘ಆಶ್ಚರ್ಯ ಕೂಟ’ ದ ನೆನಪು
- ಶ್ರೀನಿವಾಸ ಎಸ್ ಭಟ್ಟ (ಪೊಮೊನಾ, ಕ್ಯಾಲಿಫೋರ್ನಿಯ)
ಅಪ್ಪ , ಅಮ್ಮ , ಹೆಂಡತಿ ಮಕ್ಕಳನು,
ಬಂಧು ಬಳಗದವರನ್ನು , ಸ್ನೇಹಿತರನ್ನು, (ಅ)ಪರಿಚಿತರನು,
ಸೇರಿ ಅಂಕುಡೊಂಕಿನ, ಏರುಪೇರಿನ ಹಾದಿಯ ಬಳಸಿ
ಊರೂರು ಅಲೆದು ಮುಟ್ಟಿದ್ದಾಯಿತು ಬೆಟ್ಟದ ತುದಿಯನ್ನು .
ನಿಜ,
ಕೆಳಗೆ
ನೋಡಿದರೆ,
ಇಳಿಯಬಯಸಿದರೆ
ಕೈಯ್ಯಲ್ಲಿ
ಕೋಲಿದ್ದರೂ
ಜಾರಿ
ಬಿದ್ದೇನೆಂಬ
ಭಯ
!
ಯಾಕಿಳಿಯಬೇಕು
?
**
**
**
ಪಯಣದಂತ್ಯದಲಿ
ವಿಶ್ರಮಿಸಲು
ತುದಿಗಿಂತಲೂ
ಏರಿಲ್ಲ
;
ಎಲ್ಲೆಲ್ಲೂ
,
ನೋಟದ
ಕೊನೆಯಲ್ಲೂ
ಕಾಣುತಿವೆ
ಮುಗಿಲೆತ್ತರದ
ಶಿಖರಗಳು!
ಗೋಮುಖ
ವ್ಯಾಘ್ರಗಳ
ಸುಳಿವಿಲ್ಲ
ದಿನರಾತ್ರಿಗಳಿಗಂಜಲು
;
ಚೇಷ್ಟೆಯಲಿ
ಹಾನಿಗೊಳಿಸಲು
ಇಲ್ಲಿ
ಬಯಲು
ಸೀಮೆಯಲಿರುವ
ಕಾಮಧೇನುಗಳಿಲ್ಲಿಲ್ಲ
!
ಅಷ್ಟಿಷ್ಟು
ಒಳಿತ
ಮಾಡಲು
ಕಾಲಾವಕಾಶಗಳು
ಬಹಳಿತ್ತು
,
ಮಿಕ್ಕುಳಿದ
ಕಾರ್ಯಕ್ಕೆ
ಸಮಯಾಭಾವದ
ಬಿಳಿಸುಳ್ಳಿನ
ಹೇಳಿಕೆಯಿನ್ನೇನು
ಬೇಕಿಲ್ಲ
!
ಕುಳಿತಿಲ್ಲೆ
ತೇಲಿ
ಬರುವಾ
ಮೇಘಗಳ
ತಡೆಹಿಡಿದೊಡೆ-
ತುಂಬೀತು
ಕೆರೆ
ಬಾವಿಗಳು,
ಮೂಡ್ಯಾವು
ಕಾಮನಬಿಲ್ಲು
ನೆನಪಿನಲೆಗಳ
ಮೇಲೆ!
ತಾಳ್ಮೆಯಲಿರೆ
ಬಂದು
ಸೇರ್ಯಾರು
ಹಿಂದುಳಿದ
ಗೆಳೆಯಾರು
!
**
**
**
ಸ್ನೇಹಿತರೆ,
ಮತ್ತೊಮ್ಮೆ
ಸಮಕ್ಷಮ
ಭೇಟಿಯಾಗೋಣ,
ಮನಸಲ್ಲೆ
ಹುದುಗಿರುವ,
ಬರೆಯಲಾಗದ
ಆ
ಭಾವನೆಗಳನ್ನೆಲ್ಲ
ಪರಸ್ಪರ
ಹಂಚಿಕೊಳ್ಳೋಣ
!
ಮುಖಪುಟ / ಸಾಹಿತ್ಯ ಸೊಗಡು