ಮಾಯಾಮೃಗದ ಲಕ್ಷ್ಮೀ ಚಂದ್ರಶೇಖರ್ ಸಂದರ್ಶನ
- ಅನೇಕ ದೇಶ ಮತ್ತು ಸಂಸ್ಕೃತಿಗಳನ್ನು ಕಂಡವರು ನೀವು. ಬೇರೆ ಬೇರೆ ದೇಶಗಳ ರಂಗಭೂಮಿಯಲ್ಲಿ ನಡೆಯುವ ಪ್ರಯೋಗಗಳ ಮಾದರಿಯಲ್ಲಿ ನಮ್ಮಲ್ಲೂ ಪ್ರಯೋಗಗಳು ನಡೆಯುತ್ತಿವೆಯೇ ? ಬೇರೆ ಬೇರೆ ರಂಗಭೂಮಿಗಳ ಅಡ್ವಾನ್ಸ್ಮೆಂಟ್ಗಳು ನಮ್ಮಲ್ಲಿಗೂ ಹರಿಯುತ್ತಿವೆಯೇ ?
ನನಗೆ ತಿಳಿದಂತೆ ಬೇರೆ ಬೇರೆ ದೇಶಗಳಲ್ಲಿ ರಂಗಭೂಮಿಯ ಚಟುವಟಿಕೆಗಳಲ್ಲಿ ಸರ್ಕಾರ ಸಕ್ರಿಯವಾಗಿ ಭಾಗವಹಿಸುತ್ತದೆ. ಆರ್ಥಿಕವಾಗಿ ಬೆಂಗಾವಲಾಗಿ ನಿಲ್ಲುತ್ತದೆ. ನಮ್ಮಲ್ಲಿ ಕನ್ನಡ ರಂಗಭೂಮಿಯ ಬಗ್ಗೆ ಸರಕಾರಗಳು ದಿವ್ಯ ನಿರ್ಲಕ್ಷ್ಯ ತಾಳಿವೆ. ಸರಕಾರ ನೀಡುವ ಪ್ರೋತ್ಸಾಹ ಧನ ಯಾವುದಕ್ಕೂ ಸಾಲದು. ಕನ್ನಡ ನಾಟಕ ಅಕಾಡೆಮಿಗೆ ಪ್ರತಿವರ್ಷ ಸರಕಾರದಿಂದ ಸಿಗುವ ಪ್ರೋತ್ಸಾಹ ಧನ ನಾಲ್ಕು ಲಕ್ಷ ರೂಪಾಯಿಗಳು. ನಮ್ಮ ಯುವ ನಿರ್ದೇಶಕರು ಬಹಳ ಪ್ರತಿಭಾವಂತರು. ಬಹಳ ಐಡಿಯಾಗಳನ್ನು ಹೊಂದಿರುವವರು. ಆದರೆ ಐಡಿಯಾಗಳ ಅಳವಡಿಕೆಯಲ್ಲಿ ಆಗುವ ಖರ್ಚುಗಳಿಗೆ ಹಾಗೂ ಸಫಲನಾಗದಿದ್ದರೆ ಗತಿ ಏನು ಎಂಬ ಯೋಚನೆಗಳಿಂದ ಹಿಂಜರಿಯುತ್ತಾರೆ.
ಹೀಗಾಗಿ ರಿಸ್ಕ್ ಇಲ್ಲದೇ ತೆಗೆದುಕೊಳ್ಳಬಹುದಾದ ಸೃಜನಶೀಲ ಪ್ರಯೋಗಗಳ ಕಡೆಗೆ ವಾಲುತ್ತಾರೆ. ಇಷ್ಟು ಸಮಸ್ಯೆಗಳ ನಡುವೆಯೂ ಪ್ರೇಕ್ಷಕನನ್ನು ಆಕರ್ಷಿಸಲು ನಾಟಕಗಳಲ್ಲಿ ಬ್ಯಾಲೆ, ಸರ್ಕಸ್, ಫೈಟಿಂಗ್, sculpture ಗಳನ್ನು ಒಳಗೊಂಡ ಪ್ರಯೋಗಗಳನ್ನು ಪಾಶ್ಚಿಮಾತ್ಯ ರಂಗಭೂಮಿಯಿಂದ ತೆಗೆದುಕೊಳ್ಳುತ್ತಿದ್ದೇವೆ ಹಾಗೂ, ನಮ್ಮ ಸಂಸ್ಕೃತಿಗೆ ತಕ್ಕಂತೆ ಅಳವಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ.
- ಟಿ.ವಿ. ಧಾರಾವಾಹಿಗಳ ಜನಪ್ರಿಯತೆ ನಾಟಕ ರಂಗದ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ? ಇಂದು ಒಬ್ಬ ರಂಗಭೂಮಿಯ ಕಲಾವಿದ ರಂಗಭೂಮಿಯಲ್ಲಿಯೇ ಮುಂದುವರೆಯುವ ಬದಲು ದೂರದರ್ಶನದ ಕಡೆ ವಾಲುವುದು ಒಂದು ರೀತಿಯ pattern ಆಗಿದೆ ಅಲ್ಲವೇ ?
- ರಂಗಭೂಮಿಯಲ್ಲಿ ಭಾರತೀಯ ಭಾಷೆಗಳ ನಡುವೆ ಅತ್ಯುನ್ನತ ಸ್ಥಾನದಲ್ಲಿರುವ ನಾವು ಸಿನಿಮಾ ರಂಗದಲ್ಲಿ ಶೋಚನೀಯವಾದ ಸ್ಥಾನದಲ್ಲಿದ್ದೇವೆ. ಅದರಲ್ಲೂ ಮಲಯಾಳಂನಲ್ಲಿ ಬರುವ ಸಿನಿಮಾ ಗುಣಮಟ್ಟಕ್ಕೆ ನಮ್ಮಲ್ಲಿ ಅಲ್ಲೊಂದು ಇಲ್ಲೊಂದು ಬರುವ ಅತೀ ಕೆಲವು ಸಿನಿಮಾಗಳನ್ನು ಬಿಟ್ಟು ಹೋಲಿಸಲೂ ಸಾಧ್ಯವಿಲ್ಲ. ಹೀಗೇಕಾಯಿತು ?
ಒಮ್ಮೊಮ್ಮೆ ನಮ್ಮ ಪ್ರೇಕ್ಷಕರನ್ನೂ ಕಮರ್ಷಿಯಲ್ ಸಿನಿಮಾಗಳಿಗೆ ಟ್ಯೂನ್ ಮಾಡಿಬಿಟ್ಟಿದ್ದೇವೆಯೇನೋ ಎನ್ನಿಸುತ್ತದೆ. ತುಂಬಾ ಸೀರಿಯಸ್ಸಾದ ಸಿನಿಮಾಗಳನ್ನು ಜನ ನೋಡುವುದಿಲ್ಲ. ಹಾಗೆಯೇ ಕಲಾತ್ಮಕವಾಗಿಯೂ ಮತ್ತು ಕಮರ್ಷಿಯಲ್ ಆಗಿ ಯಶಸ್ವಿಯಾಗುವಂತಹ ಸಿನಿಮಾಗಳನ್ನು ಮಾಡುವುದು ಬಹಳ ಇಬ್ಬಂದಿಯ ವಿಚಾರ. ಸಿನೆಮಾ ಒಂದು ಲಾಭಗಳಿಸುವ ಉದ್ಯಮ ಮಾತ್ರ ಎಂದು ಯೋಚಿಸುವವರ ಮುಷ್ಟಿಯಲ್ಲಿ ಕನ್ನಡ ಚಿತ್ರರಂಗ ಸಿಕ್ಕಿಹೋಗಿದೆ. ಇಂತಹ ಮನೋಧರ್ಮದವರು ಇಡೀ ಚಿತ್ರರಂಗವನ್ನೇ ಆಕ್ರಮಿಸಿಕೊಂಡಿದ್ದಾರೆ. ಬೇರೆ ರೀತಿಯ ಹಾಗೂ ಕಲಾತ್ಮಕ ಚಿತ್ರಗಳು ಬರಲು ಅವರು ಬಿಡುವುದೇ ಇಲ್ಲ. ಪ್ರೇಕ್ಷಕರೂ ಒಂದು ರೀತಿಯ ಕೆಟ್ಟ ಟೇಸ್ಟ್ ಸಿನಿಮಾಗಳಿಗೆ ಒಗ್ಗಿ ಹೋಗಿದ್ದಾರೆ. ಅವರು ನೋಡುವುದಿಲ್ಲ ಎಂದು ಇವರು ಮಾಡುವುದಿಲ್ಲ. ಇವರು ಮಾಡುವುದಿಲ್ಲ ಎಂದು ಅವರು ನೋಡುವುದಿಲ್ಲ. ಒಂದು ರೀತಿಯಲ್ಲಿ ಇದೊಂದು ವಿಷವೃತ್ತ.
- ಮಾಯಾಮೃಗ ಪ್ರಶಸ್ತಿ ವಿವಾದದಿಂದ ನಿಮಗೆ ತುಂಬಾ ಬೇಸರವಾಗಿದೆ. ಪ್ರಶಸ್ತಿಯನ್ನು ಹಿಂದಿರುಗಿಸುವ ಮಟ್ಟಕ್ಕೂ ಹೋಗಿದ್ದೀರಿ. ಇದಕ್ಕೆಲ್ಲಾ ಯಾರು ಕಾರಣ ಅಂತೀರಿ ?
- ಪ್ರಸ್ತುತ ಯಾವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೀರಿ ?
ಮುಖಪುಟ / ಸಾಹಿತ್ಯ ಸೊಗಡು