ಮೊಳಕಾಲ್ಮೂರಲ್ಲಿ ಮಾತಾಡುವ ಕನ್ನಡ ಕೇಳಿದ್ದೀರಾ?

ನಮ್ಮೂರು ಬಳ್ಳಾರಿಗೆ ಹತ್ತಿರವಾದರು (ಸುಮಾರು 40 ಕಿ.ಮೀ) ಚಿತ್ರದುರ್ಗ ಜಿಲ್ಲೆಗೆ ಸೇರುವ ಅತ್ಯಂತ ಹಿಂದುಳಿದ, ಶಾಶ್ವತ ಬರಗಾಲ ರೂಢಿಮಾಡಿಕೊಂಡಿರುವ, ಬಡಕಲು ಬಯಲ ಸೀಮೆಯಲ್ಲಿರುವ ತಾಲೂಕ್. ಇಲ್ಲಿನ ರೈತರು ಮಳೆಯನ್ನೇ ಅವಲಂಬಿಸಿ ಬೆಳೆಯುವ ಜೋಳ, ಕಡಲೆಕಾಯಿ, ಈರುಳ್ಳಿ, ಪ್ರಮುಖ ಬೆಳೆಗಳು, ಹಾಗು ಮಳೆಗಾಲದ ಆರಂಭದಲ್ಲಿ ಅನುಸರಿಸುವ ಮಿಶ್ರಬೇಸಾಯ ಪದ್ದತಿಯಲ್ಲಿ ಬೆಳೆಯುವ ಕಡಲೆ, ಅವರೆ, ನೌಣೆ, ಹೆಸರು, ತೊಗರಿ, ಗೂರೆಳ್ಳು ಇತ್ಯಾದಿಗಳು ಸಾಮಾನ್ಯ ಪರ್ಯಾಯ ಬೆಳೆಗಳು. ಈಚೆಗೆ ಮೆಕ್ಕೆಜೋಳ ಮತ್ತು ಸೂರ್ಯಕಾಂತಿ ಹೂ ಸಹಾ ಹೆಚ್ಚಾಗಿ ಕಾಣಬಹುದು.
ಇನ್ನು ಜನಗಳ ಧಾರ್ಮಿಕ ಶ್ರದ್ಧೆ ಎಲ್ಲಾ ಕಡೆಯಹಾಗೆ. ಹಳೆಯ ನಮ್ಮ ಮನೆತನದ ವೆಂಕಟೇಶ ದೇವಸ್ಥಾನ, ಊರ ಹೊರಗಿದ್ದ ಆಂಜನೇಯನ ದೇವಸ್ಥಾನ, ರಾಯದುರ್ಗ ರಸ್ತೆಯಲ್ಲಿನ ಗಾಳಿಮಾರಮ್ಮ, ಪ್ರೌಢಶಾಲೆ ಬಳಿಯ ಹಾನ್ ಗಲ್ ರಸ್ತೆಯಲ್ಲಿನ ದುರ್ಗಮ್ಮನ ಗುಡಿ ಊರಿನ ಮಧ್ಯದಲ್ಲಿರುವ ಮಾರ್ಕಂಡೇಯ, ಈಶ್ವರ ದೇವಸ್ಥಾನ, ಹಾಗೂ ಬೆಟ್ಟದ ನೀರಿನ ಟ್ಯಾಂಕ್ ಬಳಿ ಇರುವ ಈಶ್ವರ ಗುಡಿ. ಇತ್ತೀಚೆಗೆ ಆರಂಭವಾದ, ಪಾಂಡುರಂಗ ಗುಡಿ, ಊರ ಹೊರಗೆ ಇರುವ ರಾಘವೇಂದ್ರ ಸ್ವಾಮಿಯ ಮಠ ಮತ್ತು ಶಿರಡಿ ಸಾಯಿಬಾಬಾ ದೇವಸ್ಥಾನಗಳು ಪ್ರಮುಖ ಗುಡಿಗಳು. ಹಳೇ ಮಸೀದಿ ಮತ್ತು ಹನುಮಂತನ ಗುಡಿ ಹೆಚ್ಚು ಕಡಿಮೆ ಪಕ್ಕ ಪಕ್ಕದಲ್ಲೇ ಇರುವುದು ವಿಶಿಷ್ಟ. ಈಗ ಇನ್ನೆರಡು ಹೊಸ ಮಸೀದಿಗಳಾಗಿವೆ.
ಸುಮಾರು ಒಂದುವರೆ, ಎರಡು ದಶಕಗಳಿಂದ ಮೊಳಕಾಲ್ಮೂರಿನ ರೇಷ್ಮೆ ಸೀರೆಗಳು ಒಳ್ಳೆ ವ್ಯಾಪಾರ ನಡೆಸುತ್ತಿವೆ. ತಾಲೂಕ್ ಕೇಂದ್ರವಾದರೂ ಇಲ್ಲಿ ಪೆಟ್ರೋಲ್ ಬಂಕ್ ಇಲ್ಲ. ಬಳ್ಳಾರಿ ಅಥವಾ ರಾಯದುರ್ಗಕ್ಕೆ ಹೋಗಬೇಕು. ಈಗಲೂ ಎಥೇಚ್ಚವಾಗಿ ದೊರೆಯುವ ಬಿಸಿಲಿಗೆ ಇಲ್ಲಿ ಮೋಡಗಳು ಅಡ್ಡಬರುವುದು ಬಲು ಅಪರೂಪ. ಧೂಳು, ರಣರಣ ರಾಚುವ ಬಿಸಿಲು, ರುಚಿ ಇಲ್ಲದ ಗಡಸು ನೀರು ಕುಡಿದುಕೊಂಡೇ ಮಧ್ಯಾನ್ಹ ಮೆಣಸಿನಕಾಯಿ ತಿನ್ನುವ, ತೆಲುಗು, ಮರಾಠಿ, ಉರ್ದು ಮಿಶ್ರಿತ ಕನ್ನಡ ಕೇಳಲೇಬೇಕು ನೀವೆಲ್ಲಾ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications