ಮಂಗಳ ಸುತ್ತುಗದೆಡೆ ಚಿಮ್ಮಿದ ಇಸ್ರೋದ ಬಾನಬಂಡಿ
ಗ್ರಾಂತಿಕ ಬಾಶೆಯನ್ನು ಅತ್ಲಾಗಿಟ್ಟು ಆಡುಮಾತಿನಲ್ಲೇ ಬರೆದ ಬರಹವನ್ನು ಓದುವುದೇ ಒಂದು ಆನಂದ. ಇದು ವಿಚಿತ್ರವೆನಿಸಬಹುದು. ಆದರೆ, ಅಚ್ಚಕನ್ನಡದ ಪದಗಳನ್ನೇ ಬಳಸಿ ಲೇಕನಗಳನ್ನು ಬರೆಯುವ 'ಎಲ್ಲರಕನ್ನಡ' ಎಂಬ ಚಳುವಳಿಯೊಂದು ಅಂತರಜಾಲದಲ್ಲಿ ಆರಂಭವಾಗಿದೆ. ಮಂಗಳಯಾನ ಕುರಿತ ಲೇಕನವನ್ನು ಕೂಡ ಅದೇ ಬಾಶೆಯನ್ನು ಬಳಸಿ ಬರೆಯಲಾಗಿದೆ. ಗ್ರಾಂತಿಕ ಬಾಶೆಯನ್ನು ಇಶ್ಟಪಡುವವರು ಇಲ್ಲಿ ಕಾಗುಣಿತ ತಪ್ಪುಗಳನ್ನು ಹುಡುಕುವ ಬದಲು ಓದುವ ಆನಂದದಲ್ಲಿ ತಲ್ಲೀನರಾಗಬೇಕೆಂದು ವಿನಂತಿ. - ಸಂಪಾದಕ.
ಮಂಗಳವಾರ, 05.11.2013, ಏರುಹೊತ್ತು 2.38ಕ್ಕೆ ಇಸ್ರೋ ಅಣಿಗೊಳಿಸಿರುವ ಬಾನಬಂಡಿ ಮಂಗಳ (Mars) ಸುತ್ತುಗದೆಡೆಗೆ ಚಿಮ್ಮಿದೆ. ಆಂದ್ರಪ್ರದೇಶದ ಶ್ರೀಹರಿಕೋಟ ಏರುನೆಲೆಯಿಂದ ಬಾನಿಗೆ ಹಾರಿರುವ ಬಾನಬಂಡಿ (spacecraft), ಮತ್ತೊಮ್ಮೆ ನಮ್ಮ ಇಸ್ರೋದ (ISRO) ಅರಿಮೆಯ ಕಸುವನ್ನು ಎತ್ತಿ ತೋರಿಸಲಿದೆ. ಇಸ್ರೋ ಕಯ್ಗೊಂಡಿರುವ ಈ ಹಮ್ಮುಗೆಯ ಕುರಿತು ತಿಳಿದುಕೊಳ್ಳುವ ಮುನ್ನ ಮಂಗಳ ಸುತ್ತುಗದ ಬಗ್ಗೆ ತುಸು ತಿಳಿದುಕೊಳ್ಳೋಣ ಬನ್ನಿ.

ಮಂಗಳ, ನೇಸರ ಕೂಟದಲ್ಲಿನ (solar system) ಎರಡನೇ ಚಿಕ್ಕ ಸುತ್ತುಗ. (ಬುದ ಎಲ್ಲಕ್ಕಿಂತ ಚಿಕ್ಕದು) ನೆಲಕ್ಕಿಂತ ಮಂಗಳವು ನೇಸರನಿಂದ ಹೆಚ್ಚಿಗೆ ದೂರದಲ್ಲಿದ್ದು, ನೇಸರನಿಂದ ಅದರ ಸರಾಸರಿ ದೂರ 1.5 ಬಾನಳತೆ (Astronomical Unit - AU) ಅಂದರೆ ಸುಮಾರು 23,00,00,000 ಕಿಲೋ ಮೀಟರಗಳಾಗಿವೆ.
ಮಂಗಳ ತನ್ನದೇ ಸುತ್ತ ಒಂದು ಸುತ್ತ ತಿರುಗಲು ಸರಿ ಸುಮಾರು ನೆಲದಶ್ಟೇ ಹೊತ್ತನ್ನು ತೆಗೆದುಕೊಳ್ಳುವುದರಿಂದ, ಅದರ ಒಂದು ದಿನ ಸುಮಾರು ನೆಲದಶ್ಟು ಅಂದರೆ 24 ಗಂಟೆಗಳ ಗಡುವು ಹೊಂದಿದೆ. ನೇಸರನ ಸುತ್ತ ಒಂದು ಸುತ್ತು ಹಾಕಲು ಮಂಗಳಕ್ಕೆ ಸುಮಾರು 687 ದಿನಗಳು ಬೇಕು. ಹಾಗಾಗಿ ಅದರ ಒಂದು ವರುಶದಲ್ಲಿ 687 ದಿನಗಳಿರುತ್ತವೆ. ದುಂಡಳತೆಯಲ್ಲಿ ನೆಲಕ್ಕಿಂತ ಸುಮಾರು ಅರ್ದದಶ್ಟಿರುವ ಮಂಗಳದ ರಾಶಿ (mass) ನೆಲದ 11% ರಶ್ಟಿದೆ.
ಮಂಗಳದ ಮೇಲ್ಮೆ ತುಂಬಾ ಚಳಿಯಿಂದ ಕೂಡಿದ್ದು, ಅದರ ಸರಾಸರಿ ಬಿಸುಪು (temperature) -63 ಡಿ.ಸೆ. ಆಗಿದೆ. ನೆಲದಂತೆ ಮಂಗಳವೂ ಕೂಡ ಹಲವಾರು ಬಗೆಯ ಜಲ್ಲಿ, ಅದಿರುಗಳನ್ನು ತನ್ನೊಡಲೊಳಗೆ ಅಡಗಿಸಿಕೊಂಡಿದೆ. ಮಂಗಳ ಸುತ್ತುಗದ ಮೇಲ್ಮೆಯ ಹೆಚ್ಚಿನ ಪಾಲು ಕಬ್ಬಿಣದ ಆಕ್ಸಾಯಡ್ನಿಂದ ಕೂಡಿದುದರಿಂದಾಗಿ ಅದರ ಮಯ್ ಬಣ್ಣ ಕೆಂಪಾಗಿ ಕಾಣುತ್ತದೆ. ಹಾಗಾಗಿ ಇದನ್ನು 'ಕೆಂಪು ಸುತ್ತುಗ' (Red Planet) ಅಂತಾನೂ ಕರೆಯುತ್ತಾರೆ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications