ಮಂಗಳ ಸುತ್ತುಗದೆಡೆ ಚಿಮ್ಮಿದ ಇಸ್ರೋದ ಬಾನಬಂಡಿ
ಗ್ರಾಂತಿಕ ಬಾಶೆಯನ್ನು ಅತ್ಲಾಗಿಟ್ಟು ಆಡುಮಾತಿನಲ್ಲೇ ಬರೆದ ಬರಹವನ್ನು ಓದುವುದೇ ಒಂದು ಆನಂದ. ಇದು ವಿಚಿತ್ರವೆನಿಸಬಹುದು. ಆದರೆ, ಅಚ್ಚಕನ್ನಡದ ಪದಗಳನ್ನೇ ಬಳಸಿ ಲೇಕನಗಳನ್ನು ಬರೆಯುವ 'ಎಲ್ಲರಕನ್ನಡ' ಎಂಬ ಚಳುವಳಿಯೊಂದು ಅಂತರಜಾಲದಲ್ಲಿ ಆರಂಭವಾಗಿದೆ. ಮಂಗಳಯಾನ ಕುರಿತ ಲೇಕನವನ್ನು ಕೂಡ ಅದೇ ಬಾಶೆಯನ್ನು ಬಳಸಿ ಬರೆಯಲಾಗಿದೆ. ಗ್ರಾಂತಿಕ ಬಾಶೆಯನ್ನು ಇಶ್ಟಪಡುವವರು ಇಲ್ಲಿ ಕಾಗುಣಿತ ತಪ್ಪುಗಳನ್ನು ಹುಡುಕುವ ಬದಲು ಓದುವ ಆನಂದದಲ್ಲಿ ತಲ್ಲೀನರಾಗಬೇಕೆಂದು ವಿನಂತಿ. - ಸಂಪಾದಕ.
ಮಂಗಳವಾರ, 05.11.2013, ಏರುಹೊತ್ತು 2.38ಕ್ಕೆ ಇಸ್ರೋ ಅಣಿಗೊಳಿಸಿರುವ ಬಾನಬಂಡಿ ಮಂಗಳ (Mars) ಸುತ್ತುಗದೆಡೆಗೆ ಚಿಮ್ಮಿದೆ. ಆಂದ್ರಪ್ರದೇಶದ ಶ್ರೀಹರಿಕೋಟ ಏರುನೆಲೆಯಿಂದ ಬಾನಿಗೆ ಹಾರಿರುವ ಬಾನಬಂಡಿ (spacecraft), ಮತ್ತೊಮ್ಮೆ ನಮ್ಮ ಇಸ್ರೋದ (ISRO) ಅರಿಮೆಯ ಕಸುವನ್ನು ಎತ್ತಿ ತೋರಿಸಲಿದೆ. ಇಸ್ರೋ ಕಯ್ಗೊಂಡಿರುವ ಈ ಹಮ್ಮುಗೆಯ ಕುರಿತು ತಿಳಿದುಕೊಳ್ಳುವ ಮುನ್ನ ಮಂಗಳ ಸುತ್ತುಗದ ಬಗ್ಗೆ ತುಸು ತಿಳಿದುಕೊಳ್ಳೋಣ ಬನ್ನಿ.

ಮಂಗಳ, ನೇಸರ ಕೂಟದಲ್ಲಿನ (solar system) ಎರಡನೇ ಚಿಕ್ಕ ಸುತ್ತುಗ. (ಬುದ ಎಲ್ಲಕ್ಕಿಂತ ಚಿಕ್ಕದು) ನೆಲಕ್ಕಿಂತ ಮಂಗಳವು ನೇಸರನಿಂದ ಹೆಚ್ಚಿಗೆ ದೂರದಲ್ಲಿದ್ದು, ನೇಸರನಿಂದ ಅದರ ಸರಾಸರಿ ದೂರ 1.5 ಬಾನಳತೆ (Astronomical Unit - AU) ಅಂದರೆ ಸುಮಾರು 23,00,00,000 ಕಿಲೋ ಮೀಟರಗಳಾಗಿವೆ.
ಮಂಗಳ ತನ್ನದೇ ಸುತ್ತ ಒಂದು ಸುತ್ತ ತಿರುಗಲು ಸರಿ ಸುಮಾರು ನೆಲದಶ್ಟೇ ಹೊತ್ತನ್ನು ತೆಗೆದುಕೊಳ್ಳುವುದರಿಂದ, ಅದರ ಒಂದು ದಿನ ಸುಮಾರು ನೆಲದಶ್ಟು ಅಂದರೆ 24 ಗಂಟೆಗಳ ಗಡುವು ಹೊಂದಿದೆ. ನೇಸರನ ಸುತ್ತ ಒಂದು ಸುತ್ತು ಹಾಕಲು ಮಂಗಳಕ್ಕೆ ಸುಮಾರು 687 ದಿನಗಳು ಬೇಕು. ಹಾಗಾಗಿ ಅದರ ಒಂದು ವರುಶದಲ್ಲಿ 687 ದಿನಗಳಿರುತ್ತವೆ. ದುಂಡಳತೆಯಲ್ಲಿ ನೆಲಕ್ಕಿಂತ ಸುಮಾರು ಅರ್ದದಶ್ಟಿರುವ ಮಂಗಳದ ರಾಶಿ (mass) ನೆಲದ 11% ರಶ್ಟಿದೆ.
ಮಂಗಳದ ಮೇಲ್ಮೆ ತುಂಬಾ ಚಳಿಯಿಂದ ಕೂಡಿದ್ದು, ಅದರ ಸರಾಸರಿ ಬಿಸುಪು (temperature) -63 ಡಿ.ಸೆ. ಆಗಿದೆ. ನೆಲದಂತೆ ಮಂಗಳವೂ ಕೂಡ ಹಲವಾರು ಬಗೆಯ ಜಲ್ಲಿ, ಅದಿರುಗಳನ್ನು ತನ್ನೊಡಲೊಳಗೆ ಅಡಗಿಸಿಕೊಂಡಿದೆ. ಮಂಗಳ ಸುತ್ತುಗದ ಮೇಲ್ಮೆಯ ಹೆಚ್ಚಿನ ಪಾಲು ಕಬ್ಬಿಣದ ಆಕ್ಸಾಯಡ್ನಿಂದ ಕೂಡಿದುದರಿಂದಾಗಿ ಅದರ ಮಯ್ ಬಣ್ಣ ಕೆಂಪಾಗಿ ಕಾಣುತ್ತದೆ. ಹಾಗಾಗಿ ಇದನ್ನು 'ಕೆಂಪು ಸುತ್ತುಗ' (Red Planet) ಅಂತಾನೂ ಕರೆಯುತ್ತಾರೆ.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications