99738birth centenaryಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ/column/gv/2008/1227-vk-gokak-birth-centenary-memoirs-part2.htmlಕನ್ನಡ ಮತ್ತು ಇಂಗ್ಲಿಷಿನ ಮೇಲಿನ ಅದಮ್ಯ ಪ್ರಭುತ್ವದಿಂದಾಗಿ ಕನ್ನಡನಾಡಿನ ಒಳಗಡೆ ಮತ್ತು ಹೊರಗಡೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿನಾಯಕ ಕೃಷ್ಣ ಗೋಕಾಕ್ ಅತ್ಯಂತ ಪ್ರಭಾವಶಾಲಿ ಸಾಹಿತಿಯಾಗಿ ಹೊರಹೊಮ್ಮಿದ್ದರು. ಇತರ ಸಾಹಿತಿಗಳನ್ನು ರಾಷ್ಟ್ರಮಟ್ಟದಲ್ಲಿ ಸಮರ್ಥವಾಗಿ ಬಿಂಬಿಸಿದ್ದರಿಂದ ಕನ್ನಡ ರಾಷ್ಟ್ರದುದ್ದಕ್ಕೂ ಮೆರೆಯುವಂತಾಯಿತು. ಜನ್ಮಶತಮಾನೋತ್ಸವದ ನಿಮಿತ್ತ ಗೋಕಾಕ್ ಸ್ಮರಣೆಯ ಎರಡನೆಯ ಭಾಗ.* ಡಾ. 'ಜೀವಿ' ಕುಲಕರ್ಣಿ, ಮುಂಬಯಿಗೋಕಾಕರ ವಿದ್ಯಾರ್ಥಿ ಜೀವನಕ್ಕೆ ಅವರ ಮದುವೆ 33727http://kannada.oneindia.com/img/2008/12/27-vk-gokak-bendre1.jpg99738birth centenaryಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ (ಭಾಗ 3)/column/gv/2009/0117-vinayaka-krishna-gokak-part3.htmlಇಂಗ್ಲೆಂಡಿನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಬಿಎ ಮಾಡಿ ಭಾರತಕ್ಕೆ ಮರಳಿದ ವಿನಾಯಕ ಕೃಷ್ಣ ಗೋಕಾಕ್ ಅವರು ಮಾಡಿಕೊಂಡ ದೊಡ್ಡ ಆಸ್ತಿಯೆಂದರೆ ಅಪಾರ ಶಿಷ್ಯವೃಂದ. ಹೇಮಂತ ಕುಲಕರ್ಣಿ, ಸುಬ್ಬಣ್ಣ ಎಕ್ಕುಂಡಿ, ವಿ.ಜಿ.ಭಟ್ಟ, ಗಾಂಗಾಧರ ಚಿತ್ತಾಲ ಮೊದಲಾದ ಖ್ಯಾತ ಲೇಖಕರು ಗೋಕಾಕರ ಗರಡಿಯಲ್ಲಿ ಪಳಗಿದವರೇ.* ಡಾ|ಜೀವಿ ಕುಲಕರ್ಣಿಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಆಂಗ್ಲಸಾಹಿತ್ಯದಲ್ಲಿ ಪ್ರಥಮ ದರ್ಜೆಯಲ್ಲಿ ಬಿ.ಎ.(ಆಗ್ಝನ್) ಡಿಗ್ರಿ ಪಡೆದು ವಿಕ್ರಮ ಸಾಧಿಸಿದ ಗೋಕಾಕರು 34120http://kannada.oneindia.com/img/2009/01/17-vk-gokak3e.jpg99738birth centenaryಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ (ಭಾಗ 4)/column/gv/2009/0124-vinayaka-krishna-gokak-part4.htmlಮಹರ್ಷಿ ಶ್ರೀ ಅರವಿಂದರ ಕೃತಿಗಳನ್ನು ಅರಗಿಸಿ ಕುಡಿದು ತಮ್ಮ ಜೀವನದಲ್ಲಿ ಹಾಗೂ ಸಾಹಿತ್ಯದಲ್ಲಿ ಅದರ ಬೆಳಕನ್ನು ಹರಡಿದ ಕೆಲವೇ ಶ್ರೇಷ್ಠ ಸಾಹಿತಿಗಳಲ್ಲಿ ಗೋಕಾಕರೂ ಒಬ್ಬರು ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ಜ್ಞಾನಪೀಠ ಪ್ರಶಸ್ತಿ ವಿಜೇತ ವಿನಾಯಕ ಕೃಷ್ಣ ಗೋಕಾಕರ ಜನ್ಮಶತಮಾನೋತ್ಸವ ನಿಮಿತ್ತ ಲೇಖನ ಸರಣಿ ಮುಂದುವರಿಯುತ್ತಿದೆ.* ಡಾ|ಜೀವಿ ಕುಲಕರ್ಣಿ1947ರಲ್ಲಿ ಭಾರತಕ್ಕೆ ಸ್ವಾತಂತ್ಯ ದೊರೆತ ನಂತರ ಬರೋಡಾ ಸಂಸ್ಥಾನ ಭಾರತ ಸರಕಾರದಲ್ಲಿ 34269http://kannada.oneindia.com/img/2009/01/24-vk-gokak4.jpg99738birth centenaryಧಾರವಾಡಕ್ಕೂ ಗೋಕಾಕರಿಗೂ ಬಿಡಲಾರದ ನಂಟು/column/gv/2009/0131-unforgettable-days-of-gokak-in-dharwad.htmlಧಾರವಾಡಕ್ಕೂ ವಿಕೆ ಗೋಕಾಕರಿಗೂ ಬಿಡಲಾರದ ನಂಟು. ಅವರು ಧಾರವಾಡಕ್ಕೆ ಬರುತ್ತಿದ್ದಾರೆಂದು ತಿಳಿದಕೂಡಲೆ ಅಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಗೋಕಾಕರ ಮಹತ್ವದ ಕೃತಿಗಳು ಪ್ರಕಟವಾಗಿದ್ದು ಅವರು ಧಾರವಾಡದಲ್ಲಿದ್ದಾಗಲೇ. ಧಾರವಾಡದಲ್ಲಿನ ಅವರ ಒಡನಾಟ, ವಿದ್ಯಾರ್ಥಿಗಳೊಂದಿಗಿನ ಬಾಂಧವ್ಯ, ಸಾಂಸ್ಕೃತಿಕ ನಗರಿಯಲ್ಲಿ ಕಳೆದ ಅವಿಸ್ಮರಣೀಯ ಗಳಿಗೆಗಳನ್ನು ಜೀವಿ ಕುಲಕರ್ಣಿಯವರು ಇಲ್ಲಿ ಮೆಲುಕು ಹಾಕಿದ್ದಾರೆ. ಗೋಕಾಕ್ ಜನ್ಮಶತಮಾನೋತ್ಸವದ ನಿಮಿತ್ತ ಗೋಕಾಕ್ ಲೇಖನ ಸರಣಿಯ ಭಾಗ 34397http://kannada.oneindia.com/img/2009/01/31-vk-gokak4.jpg99738birth centenaryಗೋಕಾಕರಿಗೆ ಸತ್ಯಸಾಯಿಬಾಬಾ ಅನುಗ್ರಹ/column/gv/2009/0207-vk-gokak-birth-centenary-part-6.htmlಶೈಕ್ಷಣಿಕವಾಗಿ ಮಾತ್ರ ವಿನಾಯಕ ಕೃಷ್ಣ ಗೋಕಾಕರು ಪರೀಕ್ಷೆಗಳನ್ನೆದುರಿಸಲಿಲ್ಲ ಜೀವನದುದ್ದಕ್ಕೂ ಅನೇಕ ಸತ್ವಪರೀಕ್ಷೆಗಳನ್ನು ಅವರು ಎದುರಿಸಿದರು. ಹೋದಲ್ಲೆಲ್ಲ ವಿಜಯಶಾಲಿಯಾದರು, ಗೆಳೆಯರನ್ನು ಸಂಪಾದಿಸಿದರು, ಶಿಷ್ಯಂದಿರನ್ನು ಹುಟ್ಟುಹಾಕಿದರು. ಅವರ ವ್ಯಕ್ತಿತ್ವವೇ ಅಂತಹುದಾಗಿದ್ದು. ಗೋಕಾಕರ ಜೀವನವನ್ನು, ವ್ಯಕ್ತಿತ್ವವನ್ನು ಬಣ್ಣಿಸುವ 'ಜೀವಿ' ಕುಲಕರ್ಣಿಯವರ ಸರಣಿ ಲೇಖನದ ಆರನೇ ಭಾಗ, ಗೋಕಾಕರ ಜನ್ಮಶತಮಾನೋತ್ಸವದ ನಿಮಿತ್ತ.ಗೋಕಾಕರು ಎರಡನೆಯ ಸಲ ಹೈದ್ರಾಬಾದ್‌ಗೆ ತೆರಳಿದ್ದು ಆಕಸ್ಮಿಕವಾಗಿದ್ದರೂ, ಒಂದು ರೀತಿಯಲ್ಲಿ, ಇದು 34531http://kannada.oneindia.com/img/2009/02/07-vk-gokak4.jpg464065kannada writerಪೂರ್ಣಚಂದ್ರ ತೇಜಸ್ವಿ ಇಲ್ಲದ ಎರಡು ವರ್ಷ!/column/manikanth/2009/0406-kp-poornachandra-tejaswi-kannada-novelist.htmlನೆನಪಿಸಿಕೊಂಡಷ್ಟೂ ನೆನಪಾಗುತ್ತಲೇ ಇರುವ ಮಹಾಚೇತನ ತೇಜಸ್ವಿ. ಅವರ ಕಾಲದಲ್ಲಿ ನಾವಿದ್ದೆವಲ್ಲ ಎಂದುಕೊಂಡಾಗ ಖುಷಿಯಾಗುತ್ತದೆ, ಹೆಮ್ಮೆಯಾಗುತ್ತದೆ. ಅವರು ಜತೆಗಿಲ್ಲ ಅನಿಸಿದಾಗ ಮಾತ್ರ- ಮನೆಯ ಹಿರಿಯನೊಬ್ಬ ಒಂದು ಮಾತೂ ಹೇಳದೆ ಹೋಗಿಬಿಟ್ಟಾಗ ಆಗುತ್ತದಲ್ಲ- ಅಂಥ ಸಂಕಟವಾಗುತ್ತದೆ ಮತ್ತು ಈ ಸಂಕಟ ಜತೆಗೇ ಇರುತ್ತದೆ- ನಾವಿರುವ ತನಕ!* ಎಆರ್ ಮಣಿಕಾಂತ್ಎರಡು ವರ್ಷ ಕಳೆದೇ ಹೋಯ್ತು ನಿಜ. ಆದರೆ, ಅವರು ನಮ್ಮೊಂದಿಗಿಲ್ಲ' 35750http://kannada.oneindia.com/img/2009/04/06-tejaswi3.jpg464065kannada writerತೇಜಸ್ವಿ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ/news/2009/04/08/seminar-on-kp-poornachandra-tejaswi-bes-college.htmlಬೆಂಗಳೂರು, ಏ. 8 : ಲೇಖಕ ಹಾಗೂ ಚಿಂತಕ ಕೆ ಪಿ ಪೂರ್ಣಚಂದ್ರ ತೇಜಸ್ವಿ ಕುರಿತಂತೆ ಸಾಹಿತ್ಯ ಸಂಸ್ಕೃತಿ ಚಿಂತನೆ ಸಂಸ್ಥೆ ವತಿಯಿಂದ ಜಯನಗರದ ಬಿಇಎಸ್ ಕಾಲೇಜಿನ ಸಭಾಂಗಣದಲ್ಲಿ ಏಪ್ರಿಲ್ 9 ರಂದು ರಾಜ್ಯ ಸಂಕಿರಣವನ್ನು ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ. ಏಪ್ರಿಲ್ 9 ರಂದು ಬೆಳಗ್ಗೆ 10 ಗಂಟೆ ಖ್ಯಾತ ವಿಮರ್ಶಕ ಪ್ರೊ.ಜಿ ಎಸ್ ನಾಯಕ ಕಾರ್ಯಕ್ರಮ 35818http://kannada.oneindia.com/img/2009/04/08-tejasvi1.jpg464065kannada writerಮತ್ತೊಮ್ಮೆ ನೆನಪಾದರು ಪೂರ್ಣಚಂದ್ರ ತೇಜಸ್ವಿ.../column/manikanth/2009/0429-remembering-poornachandra-tejaswi.htmlಒಂದಿಡೀ ತಲೆಮಾರಿಗೆ ಆದರ್ಶ'ದಂತೆ ಬದುಕಿದವರು ತೇಜಸ್ವಿ. ಅವರು ನಮ್ಮೊಂದಿಗಿಲ್ಲದೆ ಆಗಲೇ ಎರಡು ವರ್ಷ ಕಳೆಯಿತು ನಿಜ. ಆದರೆ ತೇಜಸ್ವಿಯವರು ಇಲ್ಲ' ಎನ್ನಲು ಮನಸ್ಸು ಒಪ್ಪುವುದೇ ಇಲ್ಲ. ಅಪರಿಚಿತರಿಗೆ ಮಾತ್ರವಲ್ಲ, ತುಂಬ ಪರಿಚಿತರಿಗೂ ಕಡೆಯ ದಿನದ ತನಕವೂ ಒಂದು ಬೆರಗಿನಂತೆಯೇ ಕಾಣಿಸಿಕೊಂಡವರು ತೇಜಸ್ವಿ. ಅವರನ್ನು ತುಂಬ ಹತ್ತಿರದಿಂದ ಕಂಡ ವಿನಯ ಮಾಧವರ ಬರಹ ಇಲ್ಲಿದೆ...ನನಗನ್ನಿಸುತ್ತೆ, ಎಲ್ಲಾ ಜೀವಂತ ವಸ್ತುಗಳಂತೆ, 36291http://kannada.oneindia.com/img/2009/04/29-tejaswi4.jpg464065kannada writerವೆಂಕಟಲಕ್ಷ್ಮಿಗೆ ಕಾಯ್ಕಿಣಿ ಮಾಡುವ ನಮಸ್ಕಾರಗಳು/literature/people/2009/0708-tribute-to-writer-bs-venkatalakshmi.htmlಮಹಿಳೆಯರ ಸ್ಥಿತಿ ಮತ್ತು ಸಾಧ್ಯತೆಗಳ ಕುರಿತು ಆಳವಾದ ಚಿಂತನೆ, ಬರವಣಿಗೆ ನಡೆಸಿದ ಗಟ್ಟಿಗಿತ್ತಿ ಬಿಎಸ್ ವೆಂಕಟಲಕ್ಷ್ಮಿ. ಇತ್ತೀಚೆಗೆ ನಿಧನರಾದ ಕನ್ನಡ ನೆಲ ಕಂಡ ಓರ್ವ ಅಪರೂಪದ ವ್ಯಕ್ತಿ ಎಂಟಿ ಬಗ್ಗೆ ಅವರನ್ನು ಹತ್ತಿರದಿಂದ ಬಲ್ಲ ಜಯಂತ್ ಬರೆಯುತ್ತಾರೆ. ಅಂದಹಾಗೆ, ಬಿಎಸ್ವಿ ಬರೆದಿರುವ ಉಯಿಲು ಅವರ ಬದುಕಿಗೆ ಅವರೇ ಬರೆದುಕೊಂಡ ಭಾಷ್ಯವಾಗಿದೆ. ಓದಿ.* ಜಯಂತ್ ಕಾಯ್ಕಿಣಿಮುಕ್ತವಾದ ಮನಸ್ಸಿನ, ಅಪರೂಪದ 37857http://kannada.oneindia.com/img/2009/07/08-venkatalakshmi1.jpg464065kannada writerವೆಬ್ ನಲ್ಲಿ ತೇಜಸ್ವಿ ವಿಸ್ಮಯಲೋಕ ಅನಾವರಣ/news/2009/09/08/moodigere-tejaswi-birthday-vismaya-trust-website.htmlಮೂಡಿಗೆರೆ, ಸೆ.8: ರಾಷ್ಟ್ರಕವಿ ಕುವೆಂಪು ಅವರ ಮಗ ಸಾಹಿತಿ, ಚಿಂತಕ ಕೆಪಿ ಪೂರ್ಣಚಂದ್ರತೇಜಸ್ವಿ ಅವರ ಹುಟ್ಟುಹಬ್ಬ. ಸರಳ ಜೀವನ ಸಾಗಿಸಿದ ಈ ಮಾನವತಾವಾದಿಯ ಜನ್ಮದಿನಾಚರಣೆಯನ್ನು ವಿಸ್ಮಯ ಟ್ರಸ್ಟ್ ಇಂದು ನಗರದಲ್ಲಿ ಸರಳವಾಗಿ ಆಚರಿಸಿತು. ಈ ಸಂದರ್ಭದಲ್ಲಿ ಅವರ ಅಭಿಮಾನಿಗಳು ಹಾಗೂ ಅವರ ಒಡನಾಡಿಗಳು ಹಾಜರಿದ್ದರು.ತೇಜಸ್ವಿ ಜೊತೆಗೆ ನಾವು ಇದ್ದದ್ದು ನಮಗೆ ಹೆಮ್ಮೆಯ ವಿಷಯ, ಅವರು ನಮ್ಮನ್ನು ತೊರೆದಿಲ್ಲ 39068http://kannada.oneindia.com/img/2009/09/08-pctejasvi.jpg483793uttara kannadaಹಣಕೋಣ ವಿದ್ಯುತ್ ಸ್ಥಾವರಕ್ಕೆ ತೀವ್ರ ವಿರೋಧ/news/2009/07/30/karwar-hankona-villagers-protest-over-power-plant.htmlಕಾರವಾರ, ಜು. 30 : ಇಲ್ಲಿಗೆ ಸಮೀಪ ನಿರ್ಮಿಸಲು ಉದ್ದೇಶಿಸಲಾಗಿರುವ ಹಣಕೋಣ ಉಷ್ಣ ವಿದ್ಯುತ್ ಸ್ಥಾವರದ ಸ್ಥಳದಲ್ಲಿ ಗ್ರಾಮ ಪಂಚಾಯಿತಿ ಅನುಮತಿ ಪಡೆಯದೆ ಯೋಜನೆಯನ್ನು ಗುತ್ತಿಗೆ ಪಡೆದ ಕಂಪನಿ ಅನಧಿಕೃತವಾಗಿ ಶೆಡ್ ನಿರ್ಮಾಣ ಮಾಡಿದ್ದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ಆರಂಭಿಸಿದ್ದಾರೆ.ಈ ಸಂದರ್ಭದಲ್ಲಿ ಪೊಲೀಸರು ಗ್ರಾಮಸ್ಥರ ಮೇಲೆ ಲಾಠಿ ಚಾರ್ಜ್ ಮಾಡಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. 38321http://kannada.oneindia.com/img/2009/07/30-karwar-map1e.gif483793uttara kannada'ಚುಟುಕು ಬ್ರಹ್ಮ' ದೇಸಾಯಿಗೆ ನುಡಿ ನಮನ/literature/articles/2009/0910-chutuka-brahma-dinakar-desai-birth-centenary.html'ಚುಟುಕು' ಎಂದಾಕ್ಷಣ ನಮಗೆ ನೆನಪಿಗೆ ಬರುವವರು ಕವಿ ದಿನಕರ ದೇಸಾಯಿ. ಉತ್ತರ ಕನ್ನಡದ ಹೆಸರಾಂತ ಕವಿ, ಚುಟುಕು ಸಾರ್ವಭೌಮ, 'ಅಭಿನವ ಸರ್ವಜ್ಞ', 'ಚೌಪದಿಯ ಜನಕ' - ಹೀಗೆ ಹಲವಾರು ಹೆಸರನಿತ್ತು ಅಭಿಮಾನಿಗಳು ಕರೆದಿದ್ದಾರೆ. ಈ ವರ್ಷ ಅವರ ಜನ್ಮಶತಮಾನೋತ್ಸವವನ್ನು ಆಚರಿಸಲಾಗುತ್ತದೆ. ಅವರದೇ ಹುಟ್ಟಿದ ದಿನ ಸೆಪ್ಟೆಂಬರ್ 10ರಂದು ಚುಟುಕ ಬ್ರಹ್ಮನಿಗೆ ಚುಟುಕುಗಳ ಮುಖಾಂತರ ನಮನ.* ಸುಧಾ ಎಂ., 39103http://kannada.oneindia.com/img/2009/09/10-dinakar-desai1.jpg483793uttara kannadaಯಲ್ಲಾಪುರದ ವಾಹನಗಳ 'ಮ್ಯೂಸಿಯಂ'ಗೆ ಸ್ವಾಗತ!/cj/satish-magod/2009/0921-sorry-state-of-seized-vehicles-in-yellapur.htmlಯಾವುದೋ ಸುದ್ದಿ ಸಂಗ್ರಹಕ್ಕೆಂದು ಯಲ್ಲಾಪುರದ ಅರಣ್ಯ ಇಲಾಖೆಯ ಕಛೇರಿಗೆ ತೆರಳಿದ್ದೆ. ಕೆಲಸ ಮುಗಿಸಿ ಹೊರ ಬರುವಾಗ ಅರಣ್ಯ ಸಂರಕ್ಷಣಾಧಿಖಾರಿಗಳ ಕಾರ್ಯಾಲಯದೆದುರು ದೃಷ್ಟಿ ಹರಿಯಿತು. ಅರೆರೆ...! ಇದೇನು ಧರ್ಮಸ್ಥಳದಲ್ಲಿರುವ ಸ್ವಾತಂತ್ರಾಪೂರ್ವದ ವಾಹನಗಳ ಮ್ಯೂಸಿಯಮ್ಮಾ ಅಥವಾ ಗ್ಯಾರೇಜಾ ಎಂಬ ಅನುಮಾನ ಕಾಡತೊಡಗಿತು. ಅಲ್ಲಿರುವ ವಾಹನಗಳ ಎಲ್ಲಾ ಅಂಗಗಳೂ ಊನವಾಗಿದ್ದವು. ಕೆಲವಕ್ಕೆ ಹೆಡ್‌ಲೈಟುಗಳಿರಲಿಲ್ಲ. ಕೆಲವು ವಾಹನಗಳ ಟೈರ್ ಮಾಯವಾಗಿತ್ತು. ಇನ್ನೂ ಕೆಲವು 39291http://kannada.oneindia.com/img/2009/09/21-yellapur-forest-dept1.jpg483793uttara kannadaಮತ್ತೆಂದೂ ಮರುಕಳಿಸದಿರಲಿ ಕಡವಾಡ ದುರ್ಘಟನೆ/cj/vinayak-patagar/2009/1013-who-is-responsible-for-kadwad-mud-slide.htmlಪ್ರಕೃತಿಯ ಮುನಿಸಿನ ಮುಂದೆ ನಾವೆಷ್ಟು ಕುಬ್ಜರು ಎಂಬುದಕ್ಕೆ ಕಾರವಾರದ ಕಡವಾಡದಲ್ಲಿ ಗುಡ್ಡ ಕುಸಿತ ಉಂಟಾಗಿ 19 ಜನರನ್ನು ಬಲಿ ತೆಗೆದುಕೊಂಡಿರುವುದೇ ಸಾಕ್ಷಿ. ಯಾರದೋ ತಪ್ಪಿನಿಂದಾಗಿ ಇನ್ನಾರೋ ಬಲಿಯಾಗಿರುವುದು ನಿಜಕ್ಕೂ ಮಾನವನ ದುರಾಸೆಗೆ ಹಿಡಿದ ಕನ್ನಡಿ. ಗುಡ್ಡ ಕುಸಿತ, ಅದಕ್ಕೆ ಕಾರಣವಾಗಿರುವ ಅಂಶಗಳನ್ನು ಲೇಖಕರು ಇಲ್ಲಿ ಅತ್ಯಂತ ವೈಜ್ಞಾನಿಕವಾಗಿ ವಿಶ್ಲೇಷಿಸಿದ್ದಾರೆ. ಇನ್ನಾದರೂ ದುರಾಸೆಯ ಮಾನವ ತನ್ನ ತಪ್ಪುಗಳನ್ನು ತಿದ್ದಿಕೊಳ್ಳದಿದ್ದರೆ 39666http://kannada.oneindia.com/img/2009/10/13-kadawad-tragedy1.jpg483793uttara kannadaಯಕ್ಷಲೋಕದಲ್ಲಿ ಲೀನರಾದ ಕೆರೆಮನೆ/cj/chidambar-baikampady/2009/1030-keremane-mahabala-hegde-yakshagana-legacy.htmlನವರಸಗಳ ಮೂಲಕ ಯಕ್ಷಗಾನ ರಂಗವನ್ನು ಆಳಿದ ಮೇರು ಕಲಾವಿದ ಕೆರೆಮನೆ ಮಹಾಬಲ ಹೆಗಡೆ ಈಗ ನೆನಪು. ಉತ್ತರಕನ್ನಡ ಜಿಲ್ಲೆಯಲ್ಲಿ 1927ರಲ್ಲಿ ಜೂನ್ 30 ರಂದು ಜನಿಸಿದ ಮಹಾಬಲ ಹೆಗಡೆ ಅವರು ಗುರುವಾರ ಮಧ್ಯಾಹ್ನ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಅಳಕೆಯಲ್ಲಿನ ಪುತ್ರನ ಮನೆಯಲ್ಲಿ ಕೊನೆಯುಸಿರೆಳೆದರು. ಈ ಮೂಲಕ ಕೆರೆಮನೆಯ ಮತ್ತೊಂದು ಕೊಂಡಿ ಕಳಚಿಕೊಂಡಿತು.ಸುಮಾರು ಆರುದಶಕಗಳ ಕಾಲ 39948http://kannada.oneindia.com/img/2009/10/30-keremane-mahabala-hegde1.jpgnews"> 'ಚುಟುಕು ಬ್ರಹ್ಮ' ದೇಸಾಯಿಗೆ ನುಡಿ ನಮನ | Chutuka brahma | Dinakara Desai | Birth Centenary | Sudha M Karkisavalu - 'ಚುಟುಕು ಬ್ರಹ್ಮ' ದೇಸಾಯಿಗೆ ನುಡಿ ನಮನ - Kannada Oneindia

'ಚುಟುಕು ಬ್ರಹ್ಮ' ದೇಸಾಯಿಗೆ ನುಡಿ ನಮನ

Chutuka Brahma Dinakar Desai
'ಚುಟುಕು' ಎಂದಾಕ್ಷಣ ನಮಗೆ ನೆನಪಿಗೆ ಬರುವವರು ಕವಿ ದಿನಕರ ದೇಸಾಯಿ. ಉತ್ತರ ಕನ್ನಡದ ಹೆಸರಾಂತ ಕವಿ, ಚುಟುಕು ಸಾರ್ವಭೌಮ, 'ಅಭಿನವ ಸರ್ವಜ್ಞ', 'ಚೌಪದಿಯ ಜನಕ' - ಹೀಗೆ ಹಲವಾರು ಹೆಸರನಿತ್ತು ಅಭಿಮಾನಿಗಳು ಕರೆದಿದ್ದಾರೆ. ಈ ವರ್ಷ ಅವರ ಜನ್ಮಶತಮಾನೋತ್ಸವವನ್ನು ಆಚರಿಸಲಾಗುತ್ತದೆ. ಅವರದೇ ಹುಟ್ಟಿದ ದಿನ ಸೆಪ್ಟೆಂಬರ್ 10ರಂದು ಚುಟುಕ ಬ್ರಹ್ಮನಿಗೆ ಚುಟುಕುಗಳ ಮುಖಾಂತರ ನಮನ.

* ಸುಧಾ ಎಂ., ಕರ್ಕಿಸವಲು, ಸಿದ್ಧಾಪುರ, ಉತ್ತರ ಕನ್ನಡ

ನಾನು ಹುಟ್ಟಿದ್ದು ಸೆಪ್ಟಂಬರದ ಹತ್ತು |
ನೆಲತಾಯಿ ಬಸುರಾಗಿ ಕದಿರು ಮಾಡಿತ್ತು |
ಹಸಿರು ಸೀರೆಯನುಟ್ಟು ಧರೆಗೆ ಆನಂದ |
ಇದು ನನ್ನ ಸೌಭಾಗ್ಯವೆನ್ನುವೆನು ಕಂದ |

ಭೂಮಿತಾಯಿ ಹಸಿರು ಸೀರೆಯನ್ನುಟ್ಟು ನಳನಳಿಸುತಿರುವಾಗ, ಪಚ್ಚೆ ಪೈರುಗಳು ಕುಡಿಯೊಡೆದು ಹೊರಬರುವ ಸುಸಮಯದಲ್ಲಿ ತನ್ನ ಜನನವೆಂದು ಬೀಗುತ್ತಾರೆ. ಪ್ರತಿಯೊಂದು ಚುಟುಕವೂ ಹೀಗೆ. ನಮಗೆ ಚಿಕ್ಕದೆನಿಸಿದ ಹಲವಾರು ವಿಷಯಗಳು ಅವರಿಗೆ ಹಿರಿದಾಗಿ ಕಂಡಿದೆ. ಅವರ ಎಲ್ಲ ಮುಕ್ತಕಗಳು ಅದೇ ತೆರನಾಗಿ ಸಾಗುತ್ತವೆ. ಹಾಗಾಗಿ ಅವರ ಚುಟುಕಿನ ರುಚಿ ಹತ್ತಿಸಿಕೊಳ್ಳದ ಜನರೇ ಇರಲಿಕ್ಕಿಲ್ಲ. ಬಾಯಿಂದ ಬಾಯಿಗೆ, ಮಾತು - ಮಾತಿಗೆ ದೇಸಾಯಿ ಚುಟುಕು ಹರಿದಾಡಿವೆ. ಸಮಯೋಚಿತವಾಗಿ ನಲಿದಾಡಿವೆ. ಮಕ್ಕಳ ಬಾಯಲ್ಲಂತೂ ಅವರ ಅನೇಕ ಪದ್ಯಗಳು ಅಭಿನಯದ ಮೂಲಕವೂ ಹೇಳುತ್ತ, ಮಾಡಿತೋರಿಸಿದ್ದುಂಟು.

ಮುದ್ದು ಮುದ್ದಾಗಿ ಹಾಡಿದ 'ಬೆಕ್ಕೆ, ಬೆಕ್ಕೆ | ಮುದ್ದಿನ ಸೊಕ್ಕೆ | ಎಲ್ಲಿಗೆ ಹೋಗಿದ್ದೆ' | ಎಂಬ ಹಾಡು ಮೈ ನವಿರೇಳಿಸಿದ್ದುಂಟು. 'ತಿಪ್ಪಾ ಭಟ್ಟರ ಚಂದ ಕೊಡೆ | ಸಾವಿರ ತೂತುಗಳೆಲ್ಲ ಕಡೆ' | ಈ ಮಕ್ಕಳ ಪದ್ಯ ಕಲಿಸಿದಾಗ, ಅದೇ ಮುಂದೆ ತಿಪ್ಪಾ ಭಟ್ಟರ ಡೊಳ್ಳು | ನೋಡಲು ಮಕ್ಕಳು ಮಳ್ಳು | ಎಂದು ಪಡ್ತಿ ಮಾಸ್ತರರು ಅಭಿನಯದ ಮೂಲಕ ತೋರಿಸಿದಾಗ, ಅವರ ಜೊತೆ ನಾವೂ ನಗುತ್ತಾ ಕಲಿತಿದ್ದಿತ್ತು. ಆದರೆ ಅದೇ ಪದ್ಯವನ್ನು ಈಗ ಓದಿದಾಗ ಹೀಗೊಮ್ಮೆ ಯೋಚಿಸುವಾಗ ಅಪಹಾಸ್ಯ. ಉಪಹಾಸ, ಹಾಸ್ಯಲೇಪದ ನೆರಳು ಕಾಣುತ್ತದೆ. ದೇಸಾಯಿಯವರು ರಚಿಸಿದ ಎಲ್ಲ ಹಾಡುಗಳಲ್ಲೂ ಕಟುವಾದ ಕುಚೇಷ್ಟೆಯಿದೆ, ಮೊನಚಿದೆ, ವ್ಯಂಗ್ಯವಿದೆ. ವಿನೋದವಿದೆ. ಅವರ (ಕವಿತೆಗಳು) ಚುಟುಕುಗಳು 'ನಾದ' ನೀಡುವಂತದಲ್ಲ. ಏನಿದ್ದರೂ 'ಭೋಧ' ಕೊಡುವಂತವುಗಳು. ಏಕೆಂದರೆ ಅವರು ಈ ಜಿಲ್ಲೆಯ ಜನರ ಸಂಕಟವನ್ನು ಕಂಡವರು. ಅವರ ಜೊತೆ ಜೊತೆಗಾದವರು.

ದೇಸಾಯಿ ಬರೀ ಕವಿ ಮಾತ್ರವಲ್ಲ. ಜನಸೇವಕರು. ಸಾರ್ವಜನಿಕ ಸೇವೆಯಲ್ಲಿ ಅವರಿಗೆ ಬಹಳ ಆಸಕ್ತಿ. ಕವಿ ವಿಷ್ಣುನಾಯ್ಕರು 'ದಿನಕರನ ಆಯ್ದ ಚೌಪದಿ' ಕೃತಿಯ ಪ್ರಸ್ತಾವನೆಯಲ್ಲಿ ಹೀಗೆ ಹೇಳುತ್ತಾರೆ. 'ದೇಸಾಯಿಯವರ ಚೌಪದಿಗಳು ಪರಮೋಚ್ಛ ಕಾಳಜಿ, ನೆಮ್ಮದಿಯ ಸಮಾಜ ನಿರ್ಮಾಣ, ಊನವಿಲ್ಲದ, ಕಿಲುಬಿಲ್ಲದ, ಹಸಿವು - ಬೇಗುದಿಯಿಲ್ಲದ, ಮನುಷ್ಯ ಪ್ರೀತಿಯ, ಹೃದಯ ಸಂಪನ್ನತೆಯ ಬದುಕಿಗಾಗಿ ಅವರ ಭಾವಗೀತೆಗಳು ಹೇಗೋ, ಹಾಗೆ ಅವರ ಮುಕ್ತಕ (ಚೌಪದಿ)ಗಳೂ ಹಾತೊರೆಯುತ್ತವೆ. ಹಾರೈಸುತ್ತವೆ. ಭ್ರಷ್ಟ ವ್ಯವಸ್ಥೆಯ ವಿರುದ್ಧ ಕಳವಳಗೊಳ್ಳುತ್ತವೆ. ಕೆಂಡಕಾರುತ್ತವೆ. ನಿಸರ್ಗ, ದೇವರು - ಧರ್ಮದ ಬಗೆಗೆ ಇವರು ಬರೆದರೂ, ಬರೆದದ್ದು ಕಡಿಮೆ ಪ್ರಮಾಣ. ಅವರ ಸೂಕ್ಷ್ಮ ದೃಷ್ಟಿಗೆ ಅಲ್ಲೂ ಒಳಗೆಲ್ಲೋ ಒಂದು ಮೂಲೆಯಲ್ಲಿ ಸಿಗುವುದು ಈ ನೆಲದ ಪ್ರೀತಿ. ಇಲ್ಲಿಯ ಬವಣೆ, ದೇವರು - ಧರ್ಮಗಳ ಹೆಸರಲ್ಲಿ ನಡೆದ ಅನಾಚಾರ, ಕಣ್ಮುಂದೆ ಹಸಿದ ಹೊಟ್ಟೆಗಳಿರುವಾಗ, ಹನಿವ ಕಂಗಳಿರುವಾಗ, ಮುರುಕಲು ಗುಡಿಸಲುಗಳಿರುವಾಗ, ಒಡೆದು ಚೂರಾದ ಎದೆಗಳಿರುವಾಗ, ಚುಟುಕು ಹೊಸೆಯುತ್ತ ಕೂಡ್ರಲಾರರು' ಅಂದಿದ್ದಾರೆ. ಇದು ಒಪ್ಪಬೇಕಾದ ವಿಷಯ. ಅವರ ಸಮಕಾಲೀನರು, ಶಿಷ್ಯರು, ಹತ್ತಿರದಿಂದ ಬಲ್ಲವರು ದೇಸಾಯರನ್ನು ಕೊಂಡಾಡುತ್ತಾರೆ. ದೇಸಾಯಿಯವರು ಕಷ್ಟಗಳಲ್ಲಿ ಬದುಕುವ ಜನತೆಗಾಗಿ ಮಿಡಿಯುತ್ತಾರೆ. ಅವರಿಗಾಗಿ ದುಡಿದಿದ್ದಾರೆ, ಹೋರಾಡಿದ್ದಾರೆ. ಅಂತಹ ಕರ್ಮಯೋಗಿಯ ಒಂದು ಕವಿತೆಯ ತುಣುಕು ಹೀಗಿದೆ.

ಹರಿಗೆ ಎಂದು ಗುಡಿಯನೊಂದ ಕಟ್ಟುತ್ತಿರುವೆಯಾ ?
ಹರಿಯ ಒಲುಮೆ ಪಡೆದು ಪುಣ್ಯಗಳಿಸುತಿರುವೆಯಾ ?

ಎಂದು ಪ್ರಶ್ನಿಸುತ್ತ, ಬಡಜನರು ಸಂಕಷ್ಟ ನೋಡಬೇಕಾದರೆ ಮೊದಲು ಇಲ್ಲಿ ನೋಡು. 'ನೋಡಿ ಮಾಡು' ಅನ್ನುತ್ತಾರೆ.

ಹುಚ್ಚ ನೀನು ಹಳ್ಳಿಗೋಡು | ದೀನ ಜನರ ಪಾಡು ನೋಡು
ಇರಲು ಗುಡಿಯು ಇಲ್ಲವಲ್ಲ | ಹೊಟ್ಟೆ ತುಂಬ ಅನ್ನವಿಲ್ಲ |
ಹರಿಗೆ ಎಂದು ಗುಡಿಯನೊಂದ ಕಟ್ಟುತ್ತಿರುವೆಯಾ |
ಎಂದು ಕನಲುತ್ತಾರೆ.

ದೇವರ ಒಲುಮೆ ಪಡೆದು ಪುಣ್ಯಗಳಿಸುವದಕ್ಕಿಂತ, ದೀನ ಜನರಿಗಾಗಿ ದುಡಿದರೆ, ಮಿಡಿದರೆ, ಕನಿಷ್ಠ ಸೌಲಭ್ಯವನ್ನಾದರೂ ಕೊಟ್ಟರೆ ಅದೇ ದೇವರ ಸೇವೆ ಎಂದು ಬಗೆಯುತ್ತಾರೆ. ಅವರು ಜನಪರ ಕಳಕಳಿಯಿರುವ ಪ್ರಾಮಾಣಿಕ ಕವಿ. ಆ ನಿಲುವಿನಿಂದ ಬಂದಂತ ಅದೆಷ್ಟೋ ಚುಟುಕುಗಳು ನಮಗೆ ಸಿಗುತ್ತವೆ. ಅವರ ಎಲ್ಲಾ ಕವಿತೆ, ಚುಟುಕುಗಳು ಅತೀ ಸರಳವಾಗಿ, ಗ್ರಾಮ್ಯ ಭಾಷೆಯೂ ಸೇರಿಕೊಂಡು ಎಂತವರನ್ನೂ ಸೆಳೆಯುತ್ತದೆ. ಓದಿದರೆ ಮನಸ್ಸು ಅರಳುತ್ತದೆ. ಆ ಕವಿಯ ಆದರ್ಶವೇ ಅಂತಹುದು. ಅವರ ಒಲವು. ನಿಲುವು ಜೊತೆಗೆ ಗೆಲುವು ಕಂಡದ್ದೂ ಕೂಡಾ ಆದರ್ಶದಲ್ಲಿಯೇ.

ಕಲ್ಲಿಗೂ ದೃಢವಾಗಿ ಮನುಜ ಸಂಕಲ್ಪ |
ಹೂವಾಗಿ ಅರಳಿದರೆ ಗೊಮ್ಮಟನ ಶಿಲ್ಪ |
ಉಕ್ಕಿಗೂ ಬಿರುಸಾಗಿ ಮಾನವನ ಹೃದಯ |
ಬೆಣ್ಣೆಯೊಲು ಕರಗಿದರೆ ಗೌತಮನ ಉದಯ |

ವೆನ್ನುತ್ತಾ ತಮ್ಮ ಅನುಭವದ ಆದರ್ಶದ ಸಾರವನ್ನು ಬಿಚ್ಚಿಡುತ್ತಾರೆ. ಅದೇ ಗಟ್ಟಿ ನಿಲುವು ಹೂವಾಗಿ ಅರಳಿ, ಯಾರ ಒತ್ತಡಕ್ಕೂ ಮಣಿಯದೆ ಮುಖವಾಡ ಧರಿಸದೆ ಮುನ್ನಡೆದರೆ ಎಂತಹ ಕೆಲಸವನ್ನೂ ಮಾಡಬಲ್ಲ ಮನುಷ್ಯನಿಗೆ ಇಲ್ಲಿ ನೂರಾರು ಅವಕಾಶಗಳಿವೆ. ಇರುವ ಸಮಯದಲ್ಲಿ ಒಳಿತಿನ ಸತ್ಕಾರ್ಯ ನಮ್ಮಿಂದ ನಡೆಯಲಿ ಅನ್ನುತ್ತಾರೆ. ನಮ್ಮ ಆದರ್ಶದ ಕನವರಿಕೆ ಮುನ್ನಡೆಯಬೇಕಾದರೆ ಔನ್ನತ್ಯವಾಗಿ ಬೆಳೆಯಬೇಕಾದರೆ ನಮ್ಮಲ್ಲಿ ನೂರ್ಮಡಿಯ ಉತ್ಸಾಹವಿರಬೇಕು. ಯಶ ಕಾಣಬೇಕು. ಈ ಯಶಕ್ಕೆ ಜನ ನೋಡಿ ಹೊಗಳಬೇಕು ಎಂಬುದರ ಅವರ ಆಶಯ ಹೀಗಿದೆ.

ಯಾವುದಕ್ಕೂ ಮಗನೆ, ಬೇಕು ಉತ್ಸಾಹ |
ಎಲ್ಲರೂ ತಲೆ ದೂಗಿ ಅನಬೇಕು ವ್ಹಾ | ವ್ಹಾ |
ಶಿಖಿಯ ಉತ್ಸಾಹದಲಿ ಕರಗುವುದು ಬೆಣ್ಣೆ |
ಉತ್ಸಾಹ ಅಡಗಿದರೆ ಮೋರೆ ಹರಳೆಣ್ಣೆ |

ಹೀಗೆ ಆದರ್ಶದ ಕುರಿತು ಹೇಳುತ್ತ, ಉತ್ಸಾಹ ತುಂಬುತ್ತಾರೆ ಹುರುದುಂಬಿಸುತ್ತಾರೆ. ಅವರ ಚುಟುಕುಗಳು ಸರಳವಾಗಿ ನೇರವಾಗಿ ಸ್ಪಷ್ಟವಾಗಿದ್ದು ಅಂತರಾಳವನ್ನು ತಟ್ಟುತ್ತದೆ. ಮಲಗಿದವರನ್ನು ಬಡಿದೆಬ್ಬಿಸುತ್ತದೆ. 'ಚುಟುಕ ಬ್ರಹ್ಮ' ನೆನೆಸಿಕೊಂಡಿರುವ ಇವರು ಮನೋವೃತ್ತಿಯಲ್ಲಿ ಕವಿ. ವೃತ್ತಿಯಲ್ಲಿ ಜನ ಸೇವಕ. ಸಾಮಾಜಿಕ ಕಾರ್ಯಕರ್ತ, ದೀನರ ಬಂಧು, ಜನತೆಯ ಸೇವೆಯಲ್ಲಿ ಜನಾರ್ಧನನನ್ನು ಕಾಣುವ ದೇಸಾಯಿ ಮಾನವತೆಯ ಉಪಾಸಕರಂತೂ ಹೌದು. ಅವರ ಚುಟುಕ, ಕವಿತೆಗಳಲ್ಲಿ ಆದೇಶ, ಉದ್ದೇಶ, ಆವೇಶ ಕಂಡು ಬರುತ್ತದೆ. ನಮ್ಮ ಜಿಲ್ಲೆಯ ಹೆಮ್ಮೆಯ ಈ ಕವಿ ನಮ್ಮ ಮುಂದಿಲ್ಲ. ಅವರು ನಮಗಿತ್ತ ಕೊಡುಗೆ ಅಪಾರ. ಅವರಿಗೆ ಬೇಕಿರಲಿಲ್ಲ ಯಾವ ಪುರಸ್ಕಾರ. ತನ್ನನ್ನು ತಾನೆ ಆತ್ಮಾರ್ಪಣೆ ಮಾಡಿಕೊಳ್ಳುತ್ತ, ಧನ್ಯತೆಯ ಭಾವವನ್ನು ಈ ರೀತಿಯಲ್ಲಿ ಅರ್ಪಿಸುತ್ತಾರೆ.

'ನನ್ನ ದೇಹದ ಬೂದಿ ಗಾಳಿಯಲಿ ತೂರಿ ಬಿಡಿ,
ಹೋಗಿ ಬೀಳಲಿ ಬತ್ತ ಬೆಳೆಯುವಲ್ಲಿ |
ನನ್ನ ದೇಹದ ಬೂದಿ ನೀರಲ್ಲಿ ತೇಲಿ ಬಿಡಿ |
ಹೋಗಿ ಬೀಳಲಿ ಮೀನ ಬಾಯಿಯಲ್ಲಿ |
ಮುಷ್ಟಿ ಬೂದಿಯಲೆಂದು ಪುಷ್ಪವಾಗಲು ಮೀನು,
ಧನ್ಯವಾಯಿತು ಹುಟ್ಟು ಸಾವಿನಲ್ಲಿ |

ಎಂದು ಹಂಬಲಿಸುತ್ತಾರೆ. ನಿವೇದಿಸಿಕೊಳ್ಳುತ್ತಾರೆ. ತನ್ನ ಸಾವಿನ ನಂತರವೂ ದೇಹದ ಬೂದಿ ಎಲ್ಲಕ್ಕೂ ಸೇರಬೇಕು. ಹುಟ್ಟಿನ ಧನ್ಯತೆ ಸಾವಿನಲ್ಲಿ ಸಾರ್ಥಕವಾಗಲಿ ಎಂಬ ಬಯಕೆಯೊಡನೆ ಜೀವನ ಪ್ರೀತಿ, ದೇಹ ಪ್ರೀತಿ ಎರಡನ್ನೂ ಹೇಳುತ್ತಾರೆ. ಕವಿ ಕರ್ಮಯೋಗಿ ದೇಸಾಯಿಯವರಿಗೆ ಇಡೀ ಜಿಲ್ಲೆಯೇಕೆ ? ಕರ್ನಾಟಕವೇ ಅವರಿಗೆ ನುಡಿ-ನಮನ ಸಲ್ಲಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+