Get Updates
Get notified of breaking news, exclusive insights, and must-see stories!

Karna Serial: "ಕರ್ಣ" ಧಾರಾವಾಹಿಯಿಂದ ಹೊರಬಂದ ಟಿ.ಎಸ್.‌ನಾಗಾಭರಣ, ಹಿರಿಯ ನಟ ಅಭಿಜಿತ್ ಎಂಟ್ರಿ

ಕನ್ನಡ ಕಿರುತೆರೆ ಪ್ರೇಕ್ಷಕರ ನೆಚ್ಚಿನ 'ಕರ್ಣ' ಧಾರಾವಾಹಿಯಲ್ಲಿ ಈಗ ಮಹತ್ವದ ಬದಲಾವಣೆಯಾಗಿದೆ. ಧಾರಾವಾಹಿಯ ಪ್ರಮುಖ ಪಾತ್ರವಾದ ಕರ್ಣನ ತಂದೆ 'ರಮೇಶ್' ಪಾತ್ರದಿಂದ ಹಿರಿಯ ನಟ ಹಾಗೂ ನಿರ್ದೇಶಕ ಟಿ.ಎಸ್.ನಾಗಾಭರಣ ಅವರು ಹೊರನಡೆದಿದ್ದಾರೆ. ಅವರ ಜಾಗಕ್ಕೆ ಸ್ಯಾಂಡಲ್‌ವುಡ್‌ನ ಖ್ಯಾತ ಹಿರಿಯ ನಟ ಅಭಿಜಿತ್ ಅವರು ಬಂದಿದ್ದಾರೆ.

ಇದುವರೆಗೆ ಕರ್ಣನ ತಂದೆ ರಮೇಶ್ ಪಾತ್ರದಲ್ಲಿ ಟಿ.ಎಸ್. ನಾಗಾಭರಣ ಅವರು ಅಭಿನಯಿಸುತ್ತಿದ್ದರು. ತಮ್ಮ ಅದ್ಭುತ ನಟನೆಯ ಮೂಲಕ ಅವರು ಮನೆಮಾತಾಗಿದ್ದರು. ಆದರೆ ಈಗ ಅನಿವಾರ್ಯ ಕಾರಣಗಳಿಂದ ಅವರು ಧಾರಾವಾಹಿಯಿಂದ ಹೊರಬಂದಿದ್ದಾರೆ. ಇನ್ನು ಮುಂದೆ ರಮೇಶ್ ಪಾತ್ರದಲ್ಲಿ ಹಿರಿಯ ನಟ ಅಭಿಜಿತ್ ಕಾಣಿಸಿಕೊಳ್ಳಲಿದ್ದಾರೆ. ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅಭಿಜಿತ್, ಈಗ ಕಿರುತೆರೆಯ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.

Karna Kannada Serial

ಪ್ರೋಮೋದಲ್ಲಿ ಮಿಂಚಿದ ಅಭಿಜಿತ್

ಜೀ ಕನ್ನಡ ವಾಹಿನಿಯು ಈ ಬದಲಾವಣೆಯ ಬಗ್ಗೆ ಅಧಿಕೃತವಾಗಿ ಹೊಸ ಪ್ರೋಮೋ ಬಿಡುಗಡೆ ಮಾಡಿದೆ. ಪ್ರೋಮೋದಲ್ಲಿ ಅಭಿಜಿತ್ ಅವರ ಎಂಟ್ರಿಯನ್ನು ಅತ್ಯಂತ ಅದ್ದೂರಿಯಾಗಿ ತೋರಿಸಲಾಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. 'ಕರ್ಣ' ಧಾರಾವಾಹಿಯು ಪ್ರಸ್ತುತ ರೋಚಕ ಹಂತದಲ್ಲಿದ್ದು, ಕಥೆಯಲ್ಲಿ ಹಲವು ತಿರುವುಗಳನ್ನು ಪಡೆಯುತ್ತಿವೆ. ಈ ಸಮಯದಲ್ಲಿ ತಂದೆಯ ಪಾತ್ರಕ್ಕೆ ಹೊಸ ನಟನ ಆಗಮನವಾಗಿರುವುದು ಕಥೆಗೆ ಹೊಸ ಆಯಾಮ ನೀಡುವ ನಿರೀಕ್ಷೆಯಿದೆ. ನಾಗಾಭರಣ ಅವರ ಗಾಂಭೀರ್ಯದ ನಟನೆಯನ್ನು ಮಿಸ್ ಮಾಡಿಕೊಳ್ಳುತ್ತಿರುವ ಅಭಿಮಾನಿಗಳು, ಅಭಿಜಿತ್ ಅವರು ಈ ಪಾತ್ರಕ್ಕೆ ಹೇಗೆ ನ್ಯಾಯ ಒದಗಿಸಲಿದ್ದಾರೆ ಎಂದು ನೋಡಲು ಕಾತರರಾಗಿದ್ದಾರೆ.

ಧಾರಾವಾಹಿಯ ಪ್ರಬಲ ನೆಗೆಟಿವ್‌ ಪಾತ್ರವಾಗಿದ್ದ 'ರಮೇಶ್' (ಕರ್ಣನ ತಂದೆ) ಪಾತ್ರಧಾರಿಯ ಬದಲಾವಣೆ ವೀಕ್ಷಕರಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಖ್ಯಾತ ಹಿರಿಯ ನಟ ಮತ್ತು ನಿರ್ದೇಶಕ ಟಿ.ಎಸ್. ನಾಗಾಭರಣ ಅವರು ರಮೇಶ್ ಪಾತ್ರಕ್ಕೆ ತಮ್ಮದೇ ಆದ ಗಾಂಭೀರ್ಯ ಮತ್ತು ತೂಕವನ್ನು ನೀಡಿದ್ದರು. ಕೌಟುಂಬಿಕವಾಗಿ ತಂದೆಯ ಪಾತ್ರವೇ ಆದರೂ, ಅದರಲ್ಲಿರುವ ನೆಗೆಟಿವ್‌ ಛಾಯೆ ಮತ್ತು ಕುತಂತ್ರದ ಸ್ವಭಾವವನ್ನು ನಾಗಾಭರಣ ಅವರು ಬಹಳ ಅದ್ಭುತವಾಗಿ ನಿಭಾಯಿಸಿದ್ದರು. ಅವರ ನಟನೆಯಿಂದಾಗಿ ಈ ಪಾತ್ರವು ಮನೆಮಾತಾಗಿತ್ತು. ಕಥೆಗೆ ಒಂದು ಬಲವಾದ ತಿರುವು ನೀಡುತ್ತಿತ್ತು.

ನಾಗಾಭರಣ ಅವರು ಧಾರಾವಾಹಿಯಿಂದ ಹೊರಬರಲು ನಿಖರವಾದ ಕಾರಣ ಇನ್ನೂ ಅಧಿಕೃತವಾಗಿ ಹೊರಬಿದ್ದಿಲ್ಲ. ಆದರೆ ಲಭ್ಯವಿರುವ ಮಾಹಿತಿಯ ಪ್ರಕಾರ, ಅವರು ವೈಯಕ್ತಿಕ ಕಾರಣಗಳಿಂದಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಕಳೆದ ಕೆಲವು ಸಂಚಿಕೆಗಳಿಂದ ಅವರು ಕಾಣಿಸಿಕೊಳ್ಳದಿದ್ದಾಗ ಅಭಿಮಾನಿಗಳಲ್ಲಿ ಅನುಮಾನ ಶುರುವಾಗಿತ್ತು. ಈಗ ಪ್ರೋಮೋ ಮೂಲಕ ನಾಗಾಭರಣ ಅವರ ಬದಲಿಗೆ ಅಭಿಜಿತ್‌ ಅವರ ಎಂಟ್ರಿ ಖಚಿತವಾಗಿದೆ.‌

ನೆಗೆಟಿವ್‌ ಪಾತ್ರದಲ್ಲಿ ನಾಗಾಭರಣ ಅಬ್ಬರ

ಕನ್ನಡ ಚಿತ್ರರಂಗದ ಮತ್ತೊಬ್ಬ ಹಿರಿಯ ನಟ ಅಭಿಜಿತ್‌ ಈಗ ಈ ನೆಗೆಟಿವ್‌ ಪಾತ್ರವನ್ನು ವಹಿಸಿಕೊಂಡಿದ್ದಾರೆ. ನಾಗಾಭರಣ ಅವರು ಸೃಷ್ಟಿಸಿರುವ ಈ ಪಾತ್ರದ ಪ್ರಭಾವವನ್ನು ಮುಂದುವರಿಸಿಕೊಂಡು ಹೋಗುವ ಸವಾಲು ಈಗ ಅಭಿಜಿತ್‌ ಅವರ ಮುಂದಿದೆ. ಹೊಸ ಪ್ರೋಮೋದಲ್ಲಿ ಅಭಿಜಿತ್‌ ಅವರು ತಮ್ಮದೇ ಶೈಲಿಯಲ್ಲಿ ವಿಲನ್‌ ಆಗಿ ಅಬ್ಬರಿಸುವ ಸೂಚನೆ ನೀಡಿದ್ದಾರೆ. ಇತ್ತೀಚಿನ ಸಂಚಿಕೆಗಳಲ್ಲಿ ಕರ್ಣ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದು, ಆತನ ವಿರುದ್ಧದ ಕುತಂತ್ರಗಳ ಹಿಂದೆ ಇರುವುದು ಯಾರು ಎಂಬುದನ್ನು ಪತ್ತೆ ಮಾಡಲು ಶಪಥ ಮಾಡಿದ್ದಾನೆ.

ಈ ಹಂತದಲ್ಲಿ ಹೊಸ 'ರಮೇಶ್' ಆಗಿ ಅಭಿಜಿತ್‌ ಅವರ ಪಾತ್ರವು ಕಥೆಯಲ್ಲಿ ಮತ್ತಷ್ಟು ರೋಚಕತೆ ತುಂಬಲಿದೆ. ನಾಗಾಭರಣ ಅವರು ಧಾರಾವಾಹಿಯಿಂದ ದಿಢೀರ್‌ ಹೊರಬರಲು ಕಾರಣವೇನು? ಎಂಬುದು ತಿಳಿದುಬಂದಿಲ್ಲ. ಆದರೆ ಅಭಿಜಿತ್‌ ಅವರನ್ನು ಆ ಪಾತ್ರಕ್ಕೆ ಕರೆತರುವ ಮೂಲಕ ಕಥೆ ನಿಭಾಯಿಸುವಲ್ಲಿ ತಂಡ ಯಶಸ್ವಿಯಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+