ಕೋಮುಗಲಭೆಯ ಬೀಡಾಗಿರುವ ಚಿಕ್ಕಮಗಳೂರು

ಆಗಸ್ಟ್ 4ರಂದು ನಡೆದದು ಇಷ್ಟೇ, ಚಿಕ್ಕಮಗಳೂರಿನ ಬಸವನಹಳ್ಳಿ ರಸ್ತೆಯಲ್ಲಿರುವ ಶಂಕರ ಮಠಕ್ಕೆ ಅಂಟಿಕೊಂಡಿರುವ ಒಂದು ನಾಗನ ಬನವಿದೆ. ಬೆಂಗಳೂರಿನಲ್ಲಿರುವಂತೆ ಹಾದಿ ಬೀದಿಗೆ ಒಂದರಂತೆ ಬನಗಳು ಅಲ್ಲಿಲ್ಲ. ಸುತಮುತ್ತಲಿಗೆಲ್ಲ ಅಲ್ಲಿರುವುದು ಒಂದೇ. ಈ ಬನಕೆ ಯಾರೋ ಕಿಡಿಗೇಡಿಗಳು, ಮುರ್ಖರು ಚಪ್ಪಲಿಯನ್ನು ನಾಗನ ಕಲ್ಲಿನ ಬಳಿ ತಂದು ಹಾಕಿದರಂತೆ. ಇದಕೆ ಪ್ರತಿಯಾಗಿ ಯಾರೋ ಪ್ರಜ್ಞಾಹೀನರು ಈ ಮಠದಿಂದ ಸುಮಾರು ಒಂದು ಮೈಲಿ ದೂರದಲ್ಲಿರುವ ಕೆಂಪನಹಳ್ಳಿ ರಸ್ತೆಯಲ್ಲಿರುವ ಮಸೀದಿಗೆ ಹಂದಿಯ ತಲೆ ತಂದು ಹಾಕಿದರು. ಇದಿಷ್ಟು ನಡೆದ ಘಟನೆ. ಅದೃಷ್ಟವಶಾತ್ ನಮ್ಮ ಗೃಹ ಇಲಾಖೆ ಪರಿಸ್ಥಿತಿಯ ಗಾಂಭೀರ್ಯವನ್ನರಿತು, ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರಿಂದ ಹೆಚ್ಚಿನ ಘರ್ಷಣೆ ಸಂಭವಿಸಲಿಲ್ಲ. ಈ ಸುದ್ದಿ ಯಾವ ಸುದ್ದಿವಾಹಿನಿಯ ಬೇಟೆಗೆ ಸಿಗದೇ ಇಲ್ಲಿಗೆ ಮುಗಿಯಿತು.
ಬಿಜೆಪಿಗೆ ಇಂಥ ಸಣ್ಣಪುಟ್ಟ ಘಟನೆಗಳಿಂದ ದೇಶಾದ್ಯಂತ ಸುದ್ದಿಯಾಗುವ ಶಾಪವಿದೆ. ಪುಣ್ಯಕ್ಕೆ ಇದು ಇಲ್ಲಿಗೆ ಮುಗಿಯಿತು ಬಿಜೆಪಿಗೆ ಸ್ವಲ್ಪಮಟ್ಟಿಗೆ ನೆಮ್ಮದಿ ಸಿಕ್ಕಿತು. ಒಂದು ದಶಕದ ಹಿಂದೆ ಚಿಕ್ಕಮಗಳೂರಿನ ವಿಜಯಪುರದಲ್ಲಿರುವ ಆಂಜನೇಯ ದೇವಸ್ಥಾನದ ಕಟ್ಟಡದಲ್ಲಿರುವ ವಿಗ್ರಹಕ್ಕೆ ಚಪ್ಪಲಿಹಾರ ಹಾಕಿದರಿಂದ ನಗರ ಹೊಡೆದಾಟ, ರಕ್ತಪಾತದಲ್ಲಿ ಜರ್ಝರಿತವಾಗಿತ್ತು. ಸಿಆರ್ ಪಿಸಿ ಸೆಕ್ಷನ್ 144 ಅಡಿಯಲ್ಲಿ ನಿಷೇಧಾಜ್ಞೆ ಕೂಡ ಜಾರಿಗೆಬಂತು. ಇದರ ಬೆನ್ನಲ್ಲೇ ದತ್ತಪೀಠ ಗಲಭೆ. ಕೆಲವು ಬುದ್ದಿಜೀವಿಗಳು ಚಿಕ್ಕಮಗಳೂರನ್ನು ಎರಡನೆಯ ಅಯೋಧ್ಯೆ ಎಂದು ರಂಗುಹಚ್ಚಿ ಇನ್ನಷ್ಟು ತುಪ್ಪಸುರಿದರು.
ನಾ ಕಂಡಂತೆ ಅಲ್ಲಿ ಎಲ್ಲಾ ಕೋಮುವಿನವರು ಒಟ್ಟಾಗಿ ಬಾಳುತ್ತಿದ್ದಾರೆ. ಆದರೆ ಕೆಲವೊಮ್ಮೆ ಕಿಡಿಗೀಡಿಗಳ ಕೆಲವು ಕೃತ್ಯ ದಿಂದ ಇಲ್ಲಿ ಶಾಂತಿಭಂಗವಾಗುತ್ತಿದೆ. ನೀವೇ ಯೋಚಿಸಿ, ಚಪ್ಪಲಿ ಹಾರ ಹಾಕಿದ ಕೃತ್ಯವಾಗಲಿ, ಹಂದಿಯ ತಲೆಯನ್ನು ಮಸೀದಿಗೆ ಹಾಕಿದ ಘಟನೆಯಾಗಲಿ ಇಂಥದೇ ಕೋಮುವಿನವರು ಹಾಕಿದಾರೆ ಎಂದು ಸಾಕ್ಷಿ ನೀಡುತ್ತದೆಯೆ? ಯಾರೋ ಕುಡಿದ ಅಮಲಿನಲ್ಲಿ ಅಥವಾ ಯಾವುದೋ ರಾಜಕೀಯ ಪಕ್ಷ ಶಾಂತಿಯನ್ನು ಕದಡಲು ಈ ಕೆಲಸವನ್ನು ಮಾಡಿರಬಹುದಲ್ಲ? ಇಂಥ ಕೆಲಸಗಳನ್ನು ಮಾಡುವವರು ಯಾವ ಧರ್ಮಕ್ಕೂ ಸೇರಿರುವುದಿಲ್ಲ. ಏಕೆಂದರೆ ಇಂತಹ ಕೆಲಸಕ್ಕೆ ಯಾವ ಧರ್ಮವು ಪ್ರೇರಣೆ ನೀಡುವುದಿಲ್ಲ. ಎಲ್ಲ ತಪ್ಪುತಿಳಿವಳಿಕೆಯಿಂದ ಇಂಥ ಘಟನೆಗಳು ಮರುಕಳಿಸುತ್ತಿವೆ.
ಗಲಾಟೆ ಮಾಡಲು ಎಷ್ಟು ಹೊತ್ತು ಬೇಕು? ಆದರೆ, ಪರಿಸ್ಥಿತಿ ಶಾಂತವಾದೊಡನೆ ಜನಜೀವನ ಸಹಜಸ್ಥಿತಿಗೆ ಬರಲು ವಾರಗಟ್ಟಲೆ ಬೇಕು. ಇನ್ನೇನು ಎಲ್ಲ ಶಾಂತವಾಗಿದೆ ಎನ್ನುವಷ್ಟರಲ್ಲಿ ಇನ್ನೊಂದು ಸಂಭವಿಸಿರುತ್ತದೆ. ಮತ್ತೊಂದು ಕೋಮುಗಲಭೆ. ಇಂಥ ಘಟನೆಗಳಿಂದ ಚಿಕ್ಕಮಗಳೂರು ಜನತೆಗೆ ಬಿಡುಗಡೆಯಾದರೂ ಎಂದು?
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications