ಚಿಕ್ಕಮಗಳೂರು : ನಾಗರಕಲ್ಲಿಗೆ ಚಪ್ಪಲಿಹಾರ
ಚಿಕ್ಕಮಗಳೂರು, ಆ. 4 : ನಗರದ ಬಸವನಹಳ್ಳಿ ಮುಖ್ಯರಸ್ತೆಯಲ್ಲಿರುವ ಶಂಕರಮಠದ ಪಕ್ಕದ ಅರಳೀಮರದ ಕೆಳಗೆ ಇರುವ ನಾಗಕಲ್ಲಿಗೆ ಕಿಡಿಗೇಡಿಗಳು ಚಪ್ಪಲಿಹಾರ ಹಾಕಿದ್ದರಿಂದ ನಗರದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ಘಟನೆಯ ಹಿನ್ನೆಲೆಯಲ್ಲಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ಆರಂಭಿಸಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ವಿಶ್ವಹಿ೦ದೂ ಪರಿಷತ್, ಬಜರ೦ಗದಳ, ಬಿಜೆಪಿ ಮತ್ತು ಶ್ರೀರಾಮಸೇನೆಯ ಕಾರ್ಯಕರ್ತರು ಭಾರೀ ಪ್ರಮಾಣದಲ್ಲಿ ಜಮಾಯಿಸಿದ್ದು, ಪವಿತ್ರವಾದ ಆವರಣವನ್ನು ಶುಚಿಗೊಳಿಸಬೇಕು. ಚಪ್ಪಲಿಹಾರ ಹಾಕಿದ ಕಿಡಿಗೇಡಿಗಳನ್ನು ಬ೦ಧಿಸಬೇಕು ಮತ್ತು ಪ್ರಮುಖ ದೇವಾಲಯಗಳ ಎದುರು ಪೋಲೀಸ್ ಬ೦ದೋಬಸ್ತ್ ಹಾಕಬೇಕೆ೦ದು ಪಟ್ಟು ಹಿಡಿದಿದ್ದಾರೆ.
ಸದ್ಯಕ್ಕೆ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥಿತೆ ಹತೋಟಿಯಲ್ಲಿದ್ದರೂ, ಪ್ರಕ್ಷುಬ್ಧ ವಾತಾವರಣ ಮು೦ದುವರಿದಿದ್ದು ಪರಿಸ್ಥಿತಿ ಬೂದಿಮುಚ್ಚಿದ ಕೆ೦ಡದ೦ತಿದೆ. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಭಾರೀ ಬಿಗಿ ಬ೦ದೋಬಸ್ತ್ ಕೈಗೊಳ್ಳಲಾಗಿದ್ದು, ಜಿಲ್ಲಾಧಿಕಾರಿ ನಾರಾಯಣಸ್ವಾಮಿ ಸ್ಥಳದಲ್ಲೇ ಮೊಕ್ಕಾ೦ ಹೂಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)