278229ಮೊಬೈಲ್ಕೃಷಿ ಮುನ್ನಡೆಗೆ ಮಾಧ್ಯಮಗಳ ಕೊಡುಗೆ/news/2009/02/17/media-contribution-to-agricultural-development.htmlಬೆಂಗಳೂರು, ಫೆ. 17 : ಕರ್ನಾಟಕದಲ್ಲಿ ಕೃಷಿ ಕ್ಷೇತ್ರ ಕೂಡ ಆಧುನಿಕ ತಂತ್ರಜ್ಞಾನಗಳಿಗೆ ತೆರೆದುಕೊಳ್ಳುತ್ತಿದೆ. ಇಂಟರ್ನೆಟ್ ಸೇರಿದಂತೆ ಮಾಧ್ಯಮಗಳ ಸಹಕಾರದಿಂದ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಅದರಲ್ಲೂ ಅಂತರ್ಜಾಲ ಮಾಧ್ಯಮ ಮತ್ತು ಮೊಬೈಲ್ ತಂತ್ರಜ್ಞಾನ ಕೃಷಿಗೆ ವರದಾನವಾಗಿ ಪರಿಣಮಿಸಿವೆ. ಕೃಷಿಕರು ಮೊಬೈಲ್ ಸಹಾಯದಿಂದ ಬೆರಳತುದಿಯಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಉಪಯುಕ್ತ ಮಾಹಿತಿಯನ್ನು ಕನ್ನಡದಲ್ಲೇ ಪಡೆಯಲು ಸಾಧ್ಯವಾಗುತ್ತಿದೆ.ಈ ನಿಟ್ಟಿನಲ್ಲಿ ಕೃಷಿ 34704http://kannada.oneindia.com/img/2009/02/17-mobile-sms1.jpg278229ಮೊಬೈಲ್ಬಿಎನ್ನೆಸ್ಸೆಲ್ ಬ್ರಾಂಡ್ ರಾಯಭಾರಿಯಾಗಿ ಬಂಗಾರ್!/column/majavani/2009/0320-mobile-politician-bangarappa-political-humor.htmlಬೆಂಗಳೂರು, ಮಾ.20: ಬಿಜೆಪಿ, ಸಮಾಜವಾದಿ ಪಕ್ಷ ಹೀಗೆ ಹಲವಾರು ಪಕ್ಷಗಳನ್ನು ಸುತ್ತಿ ಕಾಂಗ್ರೆಸ್‌ಗೆ ಮರಳಿ ಬಂದಿರುವ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಅದೃಷ್ಟ ಖುಲಾಯಿಸಿದೆ. ರಾಷ್ಟ್ರದ ಅತಿದೊಡ್ಡ ಮೊಬೈಲ್ ಫೋನ್ ಸಂಪರ್ಕ ಸಂಸ್ಥೆಯಾದ ಬಿ.ಎನ್.ಎಸ್.ಎಲ್. ಬಂಗಾರಪ್ಪನವರನ್ನು ತನ್ನ ಬ್ರಾಂಡ್ ರಾಯಭಾರಿಯನ್ನಾಗಿ ನೇಮಕ ಮಾಡಿದೆ.ಈ ಕುರಿತು ನಮ್ಮ ಪತ್ರಿಕೆಗೆ ಮಾಹಿತಿ ನೀಡಿದ ಬಿ.ಎನ್.ಎಸ್.ಎಲ್. ಮುಖ್ಯಸ್ತ ತಿರುತ್ತಣಿ ಅಗರ್‌ವಾಲ್, "ಪ್ರಸಕ್ತ ರಾಜಕೀಯ 35380http://kannada.oneindia.com/img/2009/03/20-majavani-bangarappa1.jpg278229ಮೊಬೈಲ್ಟ್ರಾಫಿಕ್ ಪೊಲೀಸರ ಕೈಯಲ್ಲಿ ಹೈಟೆಕ್ ಇಂಟರ್‌ಸೆಪ್ಟರ್!/cj/pasha/2009/0604-hitech-interceptor-for-shivamogga-police.htmlಶಿವಮೊಗ್ಗ, ಜೂ. 4 : ವೇಗವಾಗಿ ವಾಹನ ಓಡಿಸುವವರ, ಸಿಗ್ನಲ್ ಜಂಪ್ ಮಾಡುವವರ, ಕುಡಿದು ವಾಹನ ಓಡಿಸುವವರ, ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಓಡಿಸುವವರನ್ನು ಸುಲಭವಾಗಿ ಗುರುತಿಸಿ ಕೇಸು ದಾಖಲಿಸಲು ರಾಜ್ಯ ಸರಕಾರ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ ಇಂಟರ್‌ಸೆಪ್ಟೆರ್ ವಾಹನ ಜಿಲ್ಲಾ ಪೊಲೀಸರಿಗೆ ನೀಡಿದೆ.ಸಂಚಾರಿ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ದೇವರಾಜ್ ನೇತೃತ್ವದಲ್ಲಿ ಇಂದು ಸಂಜಾರಿ ಪೊಲೀಸರು ನಗರದ ಬಸವೇಶ್ವರ 37115http://kannada.oneindia.com/img/2009/06/04-shivamogga-police1.jpg278229ಮೊಬೈಲ್ಎಚ್ಜಿಕೆಗೆ ಕರೆ ಮಾಡಿ ಜೀವ ತಿನ್ನುತ್ತಿದ್ದಾಕೆ ಬಂಧನ/news/2009/06/17/honey-trap-nabs-hd-kumaraswamys-phony-girl.htmlಬೆಂಗಳೂರು, ಜೂ. 17 : ಮಹತ್ವದ ಕಾರ್ಯಾಚರಣೆಯಲ್ಲಿ ಕಳೆದ 8 ತಿಂಗಳಿಂದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಕರೆ ಮಾಡಿ ಜೀವ ತಿನ್ನುತ್ತಿದ್ದ ಯುವತಿಯನ್ನು ಬಂಧಿಸುವಲ್ಲಿ ಸದಾಶಿವನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ನಂದಿನಿಲೇಔಟ್ ನ ಲಕ್ಷ್ಮಿದೇವಿ ನಗರದ ನಿವಾಸಿಯಾಗಿರುವ ಜಯಲಕ್ಷ್ಮಿ ಎಂಬ ಪಿಯುಸಿ ಅನುತ್ತೀರ್ಣವಾದ ಯುವತಿ ಕುಮಾರಸ್ವಾಮಿ ಅವರ ನಿದ್ದೆಗೆಡಿಸಿದಾಕೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು 37400http://kannada.oneindia.com/img/2009/06/17-hd-kumaraswamy2e.jpg278229ಮೊಬೈಲ್ಮೊಬೈಲ್ ಕಳ್ಳರ ಪತ್ತೆಗೆ ಗೂಢಾಚಾರಿ/literature/articles/2009/0702-onward-mobility-solution-for-mobile-theft.htmlದೈನಂದಿನ ಜೀವನದ ಅತ್ಯಂತ ಅವಶ್ಯಕ ವಸ್ತುವಾಗಿ ಎಷ್ಟೋ ಜನರಿಗೆ ಜೀವನಾನೆ ಮೊಬೈಲ್ ಆಗಿರುವುದಂತೂ ಸುಳ್ಳಲ್ಲ. ಮೊಬೈಲ್ ಫೋನ್ ಕಳೆದುಕೊಂಡಾಗ ಹೇಗಿರುತ್ತೆ ಅದು ಊಹೆಗೂ ನಿಲುಕದ್ದು ಅಂತಾ ಭಟ್ಟರು ಇತ್ತೀಚೆಗೆ ಲೇಖನದಲ್ಲಿ ಹೇಳಿದ್ದರು. ಅದರಂತೆ ಈಗ ಮೊಬೈಲ್ ಕೇವಲ ಸಂಭಾಷಣೆಗೆ ಮಾತ್ರವಲ್ಲದೆ ಹತ್ತು ಹಲವು ಸೌಲಭ್ಯಗಳನ್ನು ಅಂಗೈಗೆ ನಿಲುಕುವಂತೆ ಮಾಡಿರುವ ಮಾಂತ್ರಿಕ ಪರಿಕರ. ಒಮ್ಮೆ ಕಳೆದುಕೊಂಡರೆ ಮೊಬೈಲ್ ನಲ್ಲಿದ್ದ 37715http://kannada.oneindia.com/img/2009/07/02-iphone1e.jpg234746ಮಹೇಶ್ ಮಲ್ನಾಡ್ತಮಿಳಿಗೆ ಹೋದ ಕನ್ನಡ ಕುವರಿ ಆದ್ಳೇ ಕುರಿ/movies/controversy/2009/02/05-tamil-producer-petition-kannada-lass-meghna.html'ಒಮ್ಮೆ ತಮಿಳು ಚಿತ್ರರಂಗಕ್ಕೆ ಕಾಲಿಟ್ಟು ಯಶಸ್ವಿಯಾದರೆ ಮುಗಿತು, ಹಿಂದಿರುಗಿ ನೋಡುವ ಮಾತಿಲ್ಲ' ಎಂಬ ಮಾತು ನಿಜ ಎನ್ನುವಷ್ಟರಲ್ಲೇ ವಿವಾದಗಳ ಹುತ್ತದಲ್ಲಿ ಕನ್ನಡ ಕುವರಿ ಮೇಘನಾ(ನಟ ಸುಂದರ್ ರಾಜ್ ಹಾಗೂ ನಟಿ ಪ್ರಮೀಳಾ ಜೋಷಾಯ್ ಮಗಳು) ಕುಳಿತು ಬಿಟ್ಟಿದ್ದಾರೆ. ತಮಿಳಿನ ಕೆ. ಬಾಲಚಂದರ್ ರಂತಹ ಹಿರಿಯ ಚಿತ್ರಕರ್ಮಿ ಅವರ ಕವಿತಾಲಯ ಬ್ಯಾನರ್ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ 34487http://kannada.oneindia.com/img/2009/02/05-meghna2e.jpg234746ಮಹೇಶ್ ಮಲ್ನಾಡ್ಮೈಸೂರು ಕೆಫೆ : ದುರ್ಗದ ಹೆಮ್ಮೆಯ ಸಂಕೇತ/literature/sammelana/chitradurga/2009/0207-mysore-cafe-pride-of-chitradurga.html* ಮಲೆನಾಡಿಗಚಿತ್ರದುರ್ಗದ ಹಳೆ ತಲೆಗಳಿಗೆ ಚಿರಪರಿಚಿತವಾದ ಹೆಸರು ಲಕ್ಷ್ಮಿಭವನ(ಕೆಫೆ) ಹಾಗೂ ಮೈಸೂರು ಕೆಫೆ. ನಗರದ ಐತಿಹಾಸಿಕ ದ್ವಾರ ರಂಗಯ್ಯನ ಬಾಗಿಲ ಬಳಿ ಇರುವ ದೊಡ್ಡಪೇಟೆಯಲ್ಲಿರುವ ಈ ಕೆಫೆ ಹೊಕ್ಕ ನಮಗೆ ಬೆಂಗಳೂರಿನ ಬಸವನಗುಡಿಯ ದ್ವಾರಕ, ಹನುಮಂತನಗರದ ಮಂಗಳ ಹೋಟೆಲ್ ಗಳ ನೆನಪು ಬರುತ್ತದೆ. ಅದೇ ಹಳೆ ಕಾಲದ ಮರದ ಕುರ್ಚಿಗಳು, ಪಾದರಸ ಆತ್ತಿತ್ತ ಅಲುಗಾಡದ ದೊಡ್ಡ ಗಾಜಿನ 34527http://kannada.oneindia.com/img/2009/02/07-mysore-cafe1.jpg234746ಮಹೇಶ್ ಮಲ್ನಾಡ್ಮುಗಿಯಿತು ಬಿಸಿಲುಮಳೆ ಅಕ್ಷರಜಾತ್ರೆಯಲ್ಲಿ ಧೂಳಹೊಳೆ/literature/sammelana/chitradurga/2009/0207-yawning-kavigoshthi-and-yawning-tourism.htmlಕೊನೆಯ ದಿನದ ಸಮ್ಮೇಳನ ವಾದ್ಯಗೋಷ್ಠಿಯೊಂದಿಗೆ ಆರಂಭ. ಬೆಳಗ್ಗೆ ತಿಂಡಿಗೆ ಉಪ್ಪಿಟ್ಟು ಮಾಡಿದ್ದರು. ಆದರೆ ಬೇಗ ಮುಗಿದು ಹೋಗಿ ಮತ್ತೆ ಇನ್ನಷ್ಟು ಜನರ ಸರತಿ ಹೆಚ್ಚುತ್ತಿದ್ದಂತೆ ಮತ್ತೆ ತಿಂಡಿಯ ಭರವಸೆ. ಆದರೆ ಹತ್ತು ರು. ನೀಡಿ ಇಸ್ಕಾನ್ ಅವರು ನೀಡುತ್ತಿರುವ ಪುಳಿಯೋಗರೆ, ಬಿಸಿಬೇಳೆ ಬಾತ್, ಕೇಸರಿಬಾತ್ ಖಾಲಿ ಮಾಡಲು ಜನಸಂದಣಿ ಹೆಚ್ಚುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮಂಡಕ್ಕಿ, ಖಾರ ರೊಟ್ಟಿ, 34529http://kannada.oneindia.com/img/2009/02/07-chitradurga-tourism1.jpg234746ಮಹೇಶ್ ಮಲ್ನಾಡ್ಇ-ಸ್ಕೂಟರ್ ಸವಾರಿಗೆ ಯಾರ ಅನುಮತಿ ಬೇಕಿಲ್ಲ/lifestyle/automobiles/2009/0216-bsa-launches-e-scooter.htmlಬೆಂಗಳೂರಿನಂಥ ನಗರಗಳಲ್ಲಿ ದ್ವಿಚಕ್ರ, ನಾಲ್ಕುಚಕ್ರ ವಾಹನಗಳ ವಿಪರೀತ ಏರಿಕೆಯಿಂದಾಗಿ ವಾಯುಮಾಲಿನ್ಯದ ಮಟ್ಟ ವಿಪರೀತ ಏರಿದೆ. ವಾಹನದಟ್ಟಣೆ ನೋಡಿದರೆ ದ್ವಿಚಕ್ರ ವಾಹನ ರಸ್ತೆಗಿಳಿಸದೆ ಗತ್ಯಂತರವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪರಿಸರ ಪ್ರೇಮಿಯಾಗಿರುವ ಇ ಸ್ಕೂಟರನ್ನು ಬಿಎಸ್ಎ ಕಂಪನಿ ರಸ್ತೆಗೆ ಬಿಟ್ಟಿದೆ. ರೇಸ್ ಗೀಸೆಂದು ತಲೆಕೆಡಿಸಿಕೊಳ್ಳದ ನಗುಮೊಗದ ಚೆಲುವೆಯರಿಗೆ ಈ ಇಸ್ಕೂಟರ್ ಹೇಳಿ ಮಾಡಿಸಿದಂತಿದೆ. ಸ್ಮೈಲ್, ದಿವಾ ,ಸ್ಟ್ರೀಟ್ ರೈಡರ್... ಯಾವ್ದು 34675http://kannada.oneindia.com/img/2009/02/16-bsa-tamanna1.jpg234746ಮಹೇಶ್ ಮಲ್ನಾಡ್ಕೇಸರಿ ಹರವೂ ಈಗೇನು ಮಾಡುತ್ತಿದ್ದಾರೆ?/movies/headlines/2009/02/17-director-kesari-haravoo-back-with-a-documentary.html*ಮಹೇಶ್ ಮಲ್ನಾಡ್ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ನೇತೃತ್ವ ವಹಿಸಿದ್ದ ನಿರ್ದೇಶಕ ಕೇಸರಿ ಹರವೂ ಅವರು, ಪ್ರಸ್ತುತ ಯಾವ ಯೋಜನೆಯಲ್ಲಿದ್ದಾರೆ ಎಂಬ ಪ್ರಶ್ನೆ ಹಾಕಿಕೊಂಡು ಹುಡುಕಿದಾಗ ಅವರು ಸಿಕ್ಕಿದ್ದು ಮೈಸೂರಿನಲ್ಲಿ. ಕಳೆದ ಸಾಲಿನ ಚಲನಚಿತ್ರಗಳನ್ನು ವೀಕ್ಷಿಸಿ, ಸಮರ್ಥವಾಗಿ ಚಿತ್ರಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ ಕೀರ್ತಿ/ಅಪಕೀರ್ತಿಯನ್ನು ಕೇಸರಿ ಅವರ ನೇತೃತ್ವದ ಸಮಿತಿ ಹೊತ್ತು ಕೊಂಡಿತ್ತು.ಕೆಲ ಆಪ್ತ ಸ್ನೇಹಿತರಿಂದಲೇ 34695http://kannada.oneindia.com/img/2009/02/17-kesari-haravu1.jpg234745mahesh malnadಯೋಜನ ಗಂಧಿನಿ, ಆರೋಗ್ಯವರ್ಧಿನಿ : ಯಾರಿವಳು?/recipe/culture/2007/220107garlic.htmlಬೆಳ್ಳುಳ್ಳಿ ರಾಯರ ಮಹಾತ್ಮೆ ಎಷ್ಟು ಹೇಳಿದರೂ ಕಡಿಮೆಯೇ. ಅಡುಗೆ ರುಚಿಗೆ ಮಾತ್ರವಲ್ಲ, ಸಾಮಾನ್ಯ ನೆಗಡಿಯಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ಗುಣಪಡಿಸುವಲ್ಲಿ ಸಹಾ ಬೆಳ್ಳುಳ್ಳಿ ಪಾತ್ರ ಹಿರಿದು!ಮಹೇಶ್‌ ಮಲ್ನಾಡ್‌ಬೆಳ್ಳುಳ್ಳಿ ಎಂದಾಕ್ಷಣ ಇಬ್ಬಗೆಯ ನೋಟಗಳು ನಿಮ್ಮನ್ನು ಎದುರುಗೊಳ್ಳುತ್ತವೆ. ಒಂದು ನೇರನೋಟ, ಇನ್ನೊಂದು ವಾರೆನೋಟ. ಅಬ್ಬಾ ನನಗೂ ನಾಲ್ಕು ಎಸಳು ಕೊಡಿ ಎನ್ನುವುವವರು ಒಂದು ಕಡೆ, ಮೂಸಬಾರದ್ದನ್ನು ಮೂಸಿದಂತೆ ಮೂಗು ಮುರಿಯುವ(ಮುಚ್ಚಿಕೊಳ್ಳುವ) 6367http://kannada.oneindia.com/img/2009/09/15-garlic1.jpg234745mahesh malnadತಮಿಳಿಗೆ ಹೋದ ಕನ್ನಡ ಕುವರಿ ಆದ್ಳೇ ಕುರಿ/movies/controversy/2009/02/05-tamil-producer-petition-kannada-lass-meghna.html'ಒಮ್ಮೆ ತಮಿಳು ಚಿತ್ರರಂಗಕ್ಕೆ ಕಾಲಿಟ್ಟು ಯಶಸ್ವಿಯಾದರೆ ಮುಗಿತು, ಹಿಂದಿರುಗಿ ನೋಡುವ ಮಾತಿಲ್ಲ' ಎಂಬ ಮಾತು ನಿಜ ಎನ್ನುವಷ್ಟರಲ್ಲೇ ವಿವಾದಗಳ ಹುತ್ತದಲ್ಲಿ ಕನ್ನಡ ಕುವರಿ ಮೇಘನಾ(ನಟ ಸುಂದರ್ ರಾಜ್ ಹಾಗೂ ನಟಿ ಪ್ರಮೀಳಾ ಜೋಷಾಯ್ ಮಗಳು) ಕುಳಿತು ಬಿಟ್ಟಿದ್ದಾರೆ. ತಮಿಳಿನ ಕೆ. ಬಾಲಚಂದರ್ ರಂತಹ ಹಿರಿಯ ಚಿತ್ರಕರ್ಮಿ ಅವರ ಕವಿತಾಲಯ ಬ್ಯಾನರ್ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ 34487http://kannada.oneindia.com/img/2009/02/05-meghna2e.jpg234745mahesh malnadಮುಗಿಯಿತು ಬಿಸಿಲುಮಳೆ ಅಕ್ಷರಜಾತ್ರೆಯಲ್ಲಿ ಧೂಳಹೊಳೆ/literature/sammelana/chitradurga/2009/0207-yawning-kavigoshthi-and-yawning-tourism.htmlಕೊನೆಯ ದಿನದ ಸಮ್ಮೇಳನ ವಾದ್ಯಗೋಷ್ಠಿಯೊಂದಿಗೆ ಆರಂಭ. ಬೆಳಗ್ಗೆ ತಿಂಡಿಗೆ ಉಪ್ಪಿಟ್ಟು ಮಾಡಿದ್ದರು. ಆದರೆ ಬೇಗ ಮುಗಿದು ಹೋಗಿ ಮತ್ತೆ ಇನ್ನಷ್ಟು ಜನರ ಸರತಿ ಹೆಚ್ಚುತ್ತಿದ್ದಂತೆ ಮತ್ತೆ ತಿಂಡಿಯ ಭರವಸೆ. ಆದರೆ ಹತ್ತು ರು. ನೀಡಿ ಇಸ್ಕಾನ್ ಅವರು ನೀಡುತ್ತಿರುವ ಪುಳಿಯೋಗರೆ, ಬಿಸಿಬೇಳೆ ಬಾತ್, ಕೇಸರಿಬಾತ್ ಖಾಲಿ ಮಾಡಲು ಜನಸಂದಣಿ ಹೆಚ್ಚುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮಂಡಕ್ಕಿ, ಖಾರ ರೊಟ್ಟಿ, 34529http://kannada.oneindia.com/img/2009/02/07-chitradurga-tourism1.jpg234745mahesh malnadಇ-ಸ್ಕೂಟರ್ ಸವಾರಿಗೆ ಯಾರ ಅನುಮತಿ ಬೇಕಿಲ್ಲ/lifestyle/automobiles/2009/0216-bsa-launches-e-scooter.htmlಬೆಂಗಳೂರಿನಂಥ ನಗರಗಳಲ್ಲಿ ದ್ವಿಚಕ್ರ, ನಾಲ್ಕುಚಕ್ರ ವಾಹನಗಳ ವಿಪರೀತ ಏರಿಕೆಯಿಂದಾಗಿ ವಾಯುಮಾಲಿನ್ಯದ ಮಟ್ಟ ವಿಪರೀತ ಏರಿದೆ. ವಾಹನದಟ್ಟಣೆ ನೋಡಿದರೆ ದ್ವಿಚಕ್ರ ವಾಹನ ರಸ್ತೆಗಿಳಿಸದೆ ಗತ್ಯಂತರವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪರಿಸರ ಪ್ರೇಮಿಯಾಗಿರುವ ಇ ಸ್ಕೂಟರನ್ನು ಬಿಎಸ್ಎ ಕಂಪನಿ ರಸ್ತೆಗೆ ಬಿಟ್ಟಿದೆ. ರೇಸ್ ಗೀಸೆಂದು ತಲೆಕೆಡಿಸಿಕೊಳ್ಳದ ನಗುಮೊಗದ ಚೆಲುವೆಯರಿಗೆ ಈ ಇಸ್ಕೂಟರ್ ಹೇಳಿ ಮಾಡಿಸಿದಂತಿದೆ. ಸ್ಮೈಲ್, ದಿವಾ ,ಸ್ಟ್ರೀಟ್ ರೈಡರ್... ಯಾವ್ದು 34675http://kannada.oneindia.com/img/2009/02/16-bsa-tamanna1.jpg234745mahesh malnadಕೇಸರಿ ಹರವೂ ಈಗೇನು ಮಾಡುತ್ತಿದ್ದಾರೆ?/movies/headlines/2009/02/17-director-kesari-haravoo-back-with-a-documentary.html*ಮಹೇಶ್ ಮಲ್ನಾಡ್ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ನೇತೃತ್ವ ವಹಿಸಿದ್ದ ನಿರ್ದೇಶಕ ಕೇಸರಿ ಹರವೂ ಅವರು, ಪ್ರಸ್ತುತ ಯಾವ ಯೋಜನೆಯಲ್ಲಿದ್ದಾರೆ ಎಂಬ ಪ್ರಶ್ನೆ ಹಾಕಿಕೊಂಡು ಹುಡುಕಿದಾಗ ಅವರು ಸಿಕ್ಕಿದ್ದು ಮೈಸೂರಿನಲ್ಲಿ. ಕಳೆದ ಸಾಲಿನ ಚಲನಚಿತ್ರಗಳನ್ನು ವೀಕ್ಷಿಸಿ, ಸಮರ್ಥವಾಗಿ ಚಿತ್ರಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ ಕೀರ್ತಿ/ಅಪಕೀರ್ತಿಯನ್ನು ಕೇಸರಿ ಅವರ ನೇತೃತ್ವದ ಸಮಿತಿ ಹೊತ್ತು ಕೊಂಡಿತ್ತು.ಕೆಲ ಆಪ್ತ ಸ್ನೇಹಿತರಿಂದಲೇ 34695http://kannada.oneindia.com/img/2009/02/17-kesari-haravu1.jpgnews"> ಮೊಬೈಲ್ ಕಳ್ಳರ ಪತ್ತೆಗೆ ಗೂಢಾಚಾರಿ | Mobile Theft and Data Loss | Onward Mobility| Security Software | Data Protection | High end Mobiles| ಮೊಬೈಲ್ ಕಳ್ಳರ ಪತ್ತೆಗೆ ಗೂಢಾಚಾರಿ - Kannada Oneindia

ಮೊಬೈಲ್ ಕಳ್ಳರ ಪತ್ತೆಗೆ ಗೂಢಾಚಾರಿ

Onward Mobility One Stop Solution for Mobile Theft and Data Loss
ದೈನಂದಿನ ಜೀವನದ ಅತ್ಯಂತ ಅವಶ್ಯಕ ವಸ್ತುವಾಗಿ ಎಷ್ಟೋ ಜನರಿಗೆ ಜೀವನಾನೆ ಮೊಬೈಲ್ ಆಗಿರುವುದಂತೂ ಸುಳ್ಳಲ್ಲ. ಮೊಬೈಲ್ ಫೋನ್ ಕಳೆದುಕೊಂಡಾಗ ಹೇಗಿರುತ್ತೆ ಅದು ಊಹೆಗೂ ನಿಲುಕದ್ದು ಅಂತಾ ಭಟ್ಟರು ಇತ್ತೀಚೆಗೆ ಲೇಖನದಲ್ಲಿ ಹೇಳಿದ್ದರು. ಅದರಂತೆ ಈಗ ಮೊಬೈಲ್ ಕೇವಲ ಸಂಭಾಷಣೆಗೆ ಮಾತ್ರವಲ್ಲದೆ ಹತ್ತು ಹಲವು ಸೌಲಭ್ಯಗಳನ್ನು ಅಂಗೈಗೆ ನಿಲುಕುವಂತೆ ಮಾಡಿರುವ ಮಾಂತ್ರಿಕ ಪರಿಕರ. ಒಮ್ಮೆ ಕಳೆದುಕೊಂಡರೆ ಮೊಬೈಲ್ ನಲ್ಲಿದ್ದ ಸ್ವವಿವರಗಳು, ಅಸಂಖ್ಯ ಸಂಪರ್ಕಮಾಹಿತಿ, ಚಿತ್ರಗಳು, ವಿಡಿಯೋ..ಇತ್ಯಾದಿಗಳು ಅಮೂಲ್ಯ ಡಾಟಾ ನಾಶವಾದಂತೆ, ಹೆಚ್ಚೆಂದರೆ ಅದೇ ಸಿಮ್ (ಫೋನ್ ನಂಬರ್) ಪಡೆಯಬಹುದು.

ಪೊಲೀಸರು ಇದುವರೆವಿಗೂ ಮೊಬೈಲ್ ಕಳ್ಳರನ್ನು ಹಿಡಿದು ಕಳೆದುಕೊಂಡವರಿಗೆ ಹಿಂದಿರುಗಿಸಿದ್ದು ವಿರಳ. ಪರಿಸ್ಥಿತಿ ಹೀಗಿರುವಾಗ, ಮೊಬೈಲ್ ಫೋನ್ ಸುರಕ್ಷತೆಗಾಗಿ ಆನ್ ವರ್ಡ್ ಮೊಬಿಲಿಟಿ ಎಂಬ ಸಂಸ್ಥೆ ಹಲವು ಉಪಯುಕ್ತ ಸೌಲಭ್ಯಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಿದೆ. ಪ್ರಯೋಗಿಕ ಹಂತದಲ್ಲಿರುವ ಮೊಬಿಕಾಪ್, ಮೊಬಿಕಾಪಿ, ಟ್ರಾಕ್ 007, ಮೊಬಿಮೇಟ್ ತಂತ್ರಾಂಶಗಳು ಸಾರ್ವಜನಿಕರ ಉಪಯೋಗಕ್ಕೆ ಸದ್ಯದಲ್ಲೇ ಲಭ್ಯವಾಗಲಿದೆ. ಇದಕ್ಕೂ ಮುನ್ನ ಮೊಬೈಲ್ ಕಳ್ಳರ ಜಾಡು ಹಿಡಿಯಬಲ್ಲ ಈ ಗೂಢಾಚಾರಿ ತಂತ್ರಾಂಶದ ಮೇಲೆ ಒಂದು ನೋಟ

ಮಾಹಿತಿ: ಮಹೇಶ್ ಮಲ್ನಾಡ್

ಪ್ರಮುಖ ಉತ್ಪನ್ನಗಳು:
1. ಮೊಬಿಕಾಪ್ :
ಇದು ನಿಮ್ಮ ಮೊಬೈಲ್ ಕಳ್ಳತನವಾದಲ್ಲಿ ಇಲ್ಲವೆ ನೀವು ಅದನ್ನು ಕಳೆದುಕೊಂಡಲ್ಲಿ ಅದು ಎಲ್ಲಿದೆಯೆಂದು ಪತ್ತೆ ಹಚ್ಚಬಲ್ಲ ಒಂದು ಸರಳ ಸಾಫ್ಟವೇರ್. ಇದೊಂದು ಗುಪ್ತ ಪ್ರಯೋಗವಾಗಿದ್ದು, ನೀವು ಪಾಸ್ ವರ್ಡ್ ಬಳಸುವ ಮೂಲಕ ಮಾತ್ರ ಇದರ ಲಾಭ ಪಡೆಯಬಹುದು. ನಿಮ್ಮ ಫೋನ್ ಟ್ರ್ಯಾಕ್ ಮಾಡುವ ಜೊತೆಗೆ ನಿಮ್ಮ ಮಾಹಿತಿಯನ್ನು ಗುಪ್ತವಾಗಿ ಇಲ್ಲವೆ ಮುಕ್ತವಾಗಿಡಲು ಮೊಬಿಕಾಪ್ ಅವಕಾಶ ಕಲ್ಪಿಸುತ್ತದೆ.

ಲಕ್ಷಣಗಳು:
* ಖಾಸಗಿ ಮಾಹಿತಿ ನಿರ್ವಹಣೆ : ನಿಮ್ಮ ಮಾಹಿತಿಯನ್ನು ಗುಪ್ತವಾಗಿ ಇಲ್ಲವೆ ಮುಕ್ತವಾಗಿಡಲು ಮೊಬಿಕಾಪ್ ಅವಕಾಶ ಕಲ್ಪಿಸುತ್ತದೆ.
* ಸಿಮ್ ಬದಲಾವಣೆಯ ಮಾಹಿತಿ : ಮೊಬಿಕಾಪ್ ನಿಮ್ಮ ಮೊಬೈಲ್ ಗೆ ಸಿಮ್ ಕಾರ್ಡ್ ಬದಲಿಸಿದಲ್ಲಿ ತಕ್ಷಣವೇ ನಿಮ್ಮ ಇನ್ನೊಂದು ನಂಬರಿಗೆ ಮಾಹಿತಿ ರವಾನಿಸುವ ಮೂಲಕ ಫೋನ್ ಎಲ್ಲಿದೆಯೆಂದು ಪತ್ತೆಹಚ್ಚುವಲ್ಲಿ ಸಹಾಯ ಮಾಡುತ್ತದೆ.
* ಫೋನ್ ಪತ್ತೆಹಚ್ಚುವದು ಮತ್ತು ನಿಗಾ ವಹಿಸುವುದು : ನಿಮ್ಮ ಮೊಬೈಲ್ ಗೆ ಸಿಮ್ ಕಾರ್ಡ್ ಬದಲಿಸಿದಲ್ಲಿ ತಕ್ಷಣವೇ ಬದಲಾದ ಸಿಮ್ ನಂಬರ್, ಆ ದೇಶದ ಕೋಡ್, ಸ್ಥಳದ ಕೋಡ್, ನೆಟ್ ವರ್ಕ್ ಐಡಿ, ಸೆಲ್ ಐಡಿ ಮತ್ತು ಸೆಲ್ ಬ್ರೊಡ್ಕಾಸ್ಟ್ ಮೆಸ್ಸೆಜ್ ಕುರಿತ ಮಾಹಿತಿಯನ್ನು ನಿಮಗೆ ತಲುಪಿಸುತ್ತದೆ.
* ಮಾಹಿತಿ ರಕ್ಷಣೆ : ಮೊಬಿಕಾಪ್ ನಿಮ್ಮ ಎಸ್ ಎಮ್ ಎಸ್ ಡಾಟಾ, ಫೋನ್ ಬುಕ್, ಇಮೇಜ್ ಗಳು, ವಿಡಿಯೊ ಮುಂತಾದವನ್ನು ಕಾಪಾಡುತ್ತದೆ. ಸಿಮ್ ಕಾರ್ಡ್ ಬದಲಿಸಿದಲ್ಲಿ ನಿಮ್ಮ ಮಾಹಿತಿ ಯಾಂತ್ರಿಕವಾಗಿ ಗುಪ್ತ ಸ್ಥಿತಿಗೆ ಹೊರಟುಹೋಗುತ್ತದೆ. ಅದನ್ನು ನೀವೇ ಆಯ್ಕೆಮಾಡಿದ ಪಾಸ್ ವರ್ಡ್ ಎಂಟರ್ ಮಾಡುವ ಮೂಲಕ ಮರಳಿ ಪಡೆಯಬಹುದು.
* ಮೆಮೊರಿ ಕಾರ್ಡ್ ರಕ್ಷಣೆ : ಸಿಮ್ ಕಾರ್ಡ್ ಬದಲಿಸಿದಲ್ಲಿ ಮೊಬಿಕಾಪ್ ಯಾಂತ್ರಿಕವಾಗಿ ನಿಮ್ಮ ಮೆಮೊರಿ ಕಾರ್ಡನಲ್ಲಿರುವ ಮಾಹಿತಿ ಪ್ರದರ್ಶಿತವಾಗದಂತೆ ತಡೆಯುತ್ತದೆ.
* ಕಳೆದುಹೋದ ನಿಮ್ಮ ಫೊನ್ ಗೆ ಲಗ್ಗೆ ಹಾಕಿ : ಒಂದು ಸರಳ ಎಸ್ ಎಮ್ ಎಸ್ ಮೂಲಕ ನಿಮ್ಮ ಮೊಬೈಲ್ ನ್ನು ಯಾರೂ ದುರುಪಯೋಗ ಮಾಡಿಕೊಳ್ಳದಂತೆ ಸುಪ್ತ ಸ್ಥಿತಿಯಲ್ಲಿಡಬಹುದು. ಇದರಿಂದ ನಿಮ್ಮ ಫೊನ್ ಲಾಕ್ ಆಗುವುದಲ್ಲದೆ ಯರಾದರೂ ಬಳಸಲು ಯತ್ನಿಸಿದಲ್ಲಿ ಸೈರನ್ ಮೊಳಗುವುದು.
* ರಿಮೊಟ್ ಸ್ಪೈಯಿಂಗ್ : ಮೊಬಿಕಾಪ್ ಕದ್ದವನಿಗೆ ತಿಳಿಯದಂತೆ ನಿಮ್ಮ ಫೋನ್ ನಿಂದ ಮಾಡಿದ ಕರೆಯ ಮಾಹಿತಿ, ಕಳಿಸಿದ ಎಸ್ ಎಮ್ ಎಸ್ ಪ್ರತಿಯನ್ನು ನಿಮಗೆ ಕಳುಹಿಸುತ್ತದೆ.
* ಸೈರನ್ ಅಲಾರಮ್ : ಸಿಮ್ ಕಾರ್ಡ್ ಬದಲಿಸಿದಲ್ಲಿ ತಕ್ಷಣವೇ ಸೈರನ್ ಅಲಾರಮ್ ಮೊಳಗುವುದು ಅಲ್ಲದೆ ಮೊಬೈಲ್ ರಿಸ್ಟಾರ್ಟ್ ಮಾಡಿದರೆ ಅದು ಮುಂದುವರೆಯುವುದು.
* ಫೊನ್ ಬುಕ್ ರೆಟ್ರೈವಲ್ : ಮೊಬಿಕಾಪ್ ನಿಮ್ಮ ಕಳೆದುಹೋದ ಫೊನ್ ಬುಕ್ ನ್ನು ಎಸ್ ಎಮ್ ಎಸ್ ಮೂಲಕ ಇಲ್ಲವೆ ಜಿ ಪಿ ಆರ್ ಎಸ್ ಮೂಲಕ ಆನ್ ಲೈನ್ ಸರ್ವರ್ ನಿಂದ ಪಡೆಯುವ ಸೌಲಭ್ಯ ಒದಗಿಸುತ್ತದೆ.
* ಕಸ್ಟಮೈಸ್ಡ್ ಮೆಸ್ಸೆಜ್ ಗಳು ಮತ್ತು ರಿಂಗ್ ಟೋನ್ ಗಳು : ಮೊಬಿಕಾಪ್ ಸಿಮ್ ಕಾರ್ಡ್ ಬದಲಾವಣೆ ಪತ್ತೆ ಹಚ್ಚುವುದಲ್ಲದೇ ಕೀಪ್ಯಾಡ್ ಲಾಕ್ ಮಾಡಿ ಪೂರ್ವ ನಿಯೋಜಿತ ಮೆಸ್ಸೆಜನ್ನು ಸ್ಕ್ರೀನ್ ಮೇಲೆ ಡಿಸ್ಪ್ಲೇ ಮಾಡುವ ಮೂಲಕ ಫೋನ್ ಮೇಲೆ ಸ್ವಯಂ ದಾಳಿ ಮಾಡುತ್ತದೆ. ಅಲ್ಲದೆ ಮೊಬಿಕಾಪ್ ರಿಂಗ್ ಟೋನ್ ಅಕ್ಟಿವೇಟ್ ಆಗುವ ಮೂಲಕ ಕಳ್ಳನಿಗೆ ಪ್ರತಿ ಬಾರಿ ಕರೆ ಬಂದಾಗಲೂ ಅದು ಮೊಳಗುತ್ತದೆ.

2. ಮೊಬಿಕಾಪಿ :
ನಿಮ್ಮ ಕಾಂಟ್ಯಾಕ್ಟ್ ಗಳನ್ನು ಎಸ್ ಎಮ್ ಎಸ್ ಮೂಲಕ ಇಲ್ಲವೆ ಜಿ ಪಿ ಆರ್ ಎಸ್ ಮೂಲಕ ಆನ್ ಲೈನ್ ಸರ್ವರ್ ನಿಂದ ಪಡೆಯುವ ಸೌಲಭ್ಯ ಒದಗಿಸುವುದು ಮೊಬಿಕಾಪಿಯ ವಿಶೇಷತೆಯಾಗಿದೆ. ನಿಮ್ಮ ಫೊನ್ ಬುಕ್ ಕಳೆದುಹೋದರೂ ಸರಳವಾಗಿ ಕಾಂಟ್ಯಾಕ್ಟ್ ಗಳನ್ನು ಮತ್ತೆ ಪಡೆಯಬಹುದು. ಕಾಲ ಕಾಲಕ್ಕೆ ಬ್ಯಾಕ್ ಅಪ್ ಪಡೆಯಲು ಗಣಕ ಯಂತ್ರದಲ್ಲಿ ಅವಕಾಶ ಒದಗಿಸುತ್ತದೆ. ಸರ್ವರ್ ಗೆ ಬ್ಯಾಕ್ ಅಪ್ ಪಡೆಯಲು ಜಿ ಪಿ ಆರ್ ಎಸ್ ಅವಶ್ಯಕತೆಯೂ ಇಲ್ಲಾ. ಇದೊಂದು ಸಾಮಾನ್ಯ ಪ್ರಯೋಗವಾಗಿದ್ದು ಯವುದೇ ಜಿ ಎಸ್ ಎಮ್/ ಸಿ ಡಿ ಎಮ್ ಎ ಫೋನ್ ನಲ್ಲೂ ಅಳವಡಿಸಬಹುದು.

*ಎಸ್ ಎಮ್ ಎಸ್ ಮೂಲಕ ಬ್ಯಾಕ್ ಅಪ್ ಪಡೆಯುವುದು: ನೀವು ಬ್ಯಾಕ್ ಅಪ್ ಲಿಂಕ್ ಕ್ಲಿಕ್ಮಾಡಿದಾಗ ಅದರೊಂದಿಗೆ ಮೊಬಿಕಾಪಿ ನಿಮ್ಮ ಫೊನ್ ಬುಕ್ ನ್ನು ಸ್ಕ್ಯಾನ್ ಮಾಡುತ್ತದೆ. 3-4 ಎಸ್ ಎಮ್ ಎಸ್ ಗಳನ್ನು ಜೊತೆಗೂಡಿಸಿ ಆನ್ ಲೈನ್ ಸರ್ವರ್ ಗೆ ಕಳುಹಿಸುವುದು ವಿಶೇಷ. ಪ್ರಾಥಮಿಕವಾಗಿ ಸಂಪೂರ್ಣ ಬ್ಯಾಕ್ ಅಪ್ ಪಡೆದ ನಂತರ ಫೋನ್ ಬುಕ್ ನ ಪ್ರತಿ ಹೊಸ ಎಂಟ್ರಿಯನ್ನು 24 ಗಂಟೆಗಳೊಳಗೆ ಪರೀಕ್ಷಿಸಲಾಗುವುದು ಮತ್ತು ಬದಲಾವಣೆಯನ್ನು ಬಳಕೆದಾರರಿಂದ ಖಚಿತಪಡಿಸಿದ ನಂತರ ಸರ್ವರ್ ಗೆ ಬ್ಯಾಕ್ ಅಪ್ ಪಡೆಯಲಾಗುವುದು.
* ಜಿ ಪಿ ಆರ್ ಎಸ್ ಬಳಕೆಯಿಂದ ಬ್ಯಾಕ್ ಅಪ್ ಪಡೆಯುವುದು : ಮೊಬಿಕಾಪ್ ಮಾಹಿತಿಯ ಬ್ಯಾಕ್ ಅಪ್ ಪಡೆಯಲು ಜಿ ಪಿ ಆರ್ ಎಸ್ ಕೂಡಾ ಬಳಸುತ್ತದೆ.
* ಒನ್ ಟಚ್ ರಿಸ್ಟೋರ್ : ನಿಮ್ಮ ಫೊನ್ ಬುಕ್ ಅಳಿಸಿಹೋದಲ್ಲಿ ............ ಗೆ ಲಾಗ್ ಆನ್ ಮಾಡಿ, ನಿಮ್ಮ ಯುಸರ್ ನೇಮ್ ಮತ್ತು ಪಾಸ್ ವರ್ಡ್ ಎಂಟ್ರಿ ಮಾಡಿ ರಿಸ್ಟೋರ್ ಬಾಯ್ ಎಸ್ ಎಮ್ ಎಸ್ ಕ್ಲಿಕ್ ಮಾಡುವ ಮೂಲಕ ನಿಮ್ಮ ಫೋನ್ ಬುಕ್ ಮರಳಿ ಪಡೆಯಿರಿ ಮತ್ತು ಮುಂದುವರೆಯಿರಿ

3. ಟಾಕ್ 007 :
ಟಾಕ್ 007 ನಿಮ್ಮ ಧ್ವನಿಮುದ್ರಣದ ಅವಶ್ಯಕತೆಗಳನ್ನು ನೀಗಿಸಬಲ್ಲದು. ಸರಳವಾದ ಹಾಟ್ ಕೀ ಪ್ರೆಸ್ ಮಾಡುವ ಮೂಲಕ ನಿಮಗೆ ಬೇಕೆಂದಾಗೆಲ್ಲಾ ವಾಯ್ಸ್ ಮೆಮೊಗಳನ್ನು ಮತ್ತು ಕರೆಗಳನ್ನುರೆಕಾರ್ಡ್ ಮಾಡಲು ಅವಕಾಶ ಕಲ್ಪಿಸುತ್ತದೆ. ಯಾಂತ್ರಿಕವಾಗಿಯೂ ಇದು ಕರೆಗಳನ್ನು ರೆಕಾರ್ಡ್ ಮಾಡಬಲ್ಲದು. ನೀವು ರೆಕಾರ್ಡ್ ಮಾಡಿದ ಕರೆಗಳನ್ನು ಬ್ರೌಸ್ ಮಾಡಬಹುದು, ಅಳಿಸಬಹುದು ಮತ್ತು ಟ್ರಾನ್ಸ್ ಫರ್ ಕೂಡಾ ಮಾಡಬಹುದು.

* ಬೀಪ್ ಸದ್ದಿಲ್ಲದೆ ಧ್ವನಿಮುದ್ರಣ : ಧ್ವನಿಮುದ್ರಣಕ್ಕೆ ಯಾವದೇ ತೊ೦ದರೆ ಇಲ್ಲದ೦ತೆ ಬೀಪ್ ಶದ್ಬವಿಲ್ಲದೆ ನಿಮಗೆ ಬರುವ ಹಾಗು ನೀವು ಮಾಡುವ ಕರೆಗಳ ಧ್ವನಿಮುದ್ರಣ ಮಾಡಬಹುದು.
* ಅನಿಯಮಿತ ಕರೆಗಳ ಧ್ವನಿಮುದ್ರಣ : ಫೋನ್ ನ ಇಲ್ಲವೆ ಮೆಮೊರಿ ಕಾರ್ಡನ ಮೆಮೊರಿ ಲಿಮಿಟ್ ಕಡಿಮೆ ಇದ್ದಾಗ ಮಾತ್ರ ಧ್ವನಿಮುದ್ರಣ ಮಾಡಲಾಗುವದಿಲ್ಲ.
*ಡಿಕ್ಟಾಫೊನ್ ಎಬಿಲಿಟಿ : ಕೇವಲ ಒ೦ದು ಬಟನ್ ಒತ್ತುವ ಮೂಲಕ ಮೀಟಿ೦ಗ್ ಮತ್ತು ಯಾವುದೇ ಸ೦ಭಾಷಣೆಯನ್ನು ಧ್ವನಿಮುದ್ರಣ ಮಾಡಬಹುದು.

4. ಮೊಬಿಮೇಟ್ :
ಮೊಬಿಮೇಟ್ ಹಲವು ಸೌಲಭ್ಯಗಳ ಆಗರ. ಇದು ಮೆಸೆಜಿಂಗ್ ಅಸಿಸ್ಟಂಟಾಗಿ ಯಾಂತ್ರಿಕಕವಾಗಿ ಕರೆಗಳಿಗೆ ಉತ್ತರ ಕೊಡುವ ಕಾರ್ಯ, ಧ್ವನಿ ಮೂಲಕ ಉತ್ತರ ಕೊಡುವ ಕಾರ್ಯ, ಯಾಂತ್ರಿಕವಾಗಿ ಎಸ್ ಎಂ ಎಸ್ ಕಳಿಸುವ ಕಾರ್ಯ, ಯಾವುದೇ ಫೊನ್ ನಂಬರ್ ನ್ನು ಬ್ಲ್ಯಾಕ್ ಲಿಸ್ಟ್ ನಲ್ಲಿ ಹಾಕುವ ಕಾರ್ಯ ಮತ್ತು ಧ್ವನಿಮುದ್ರಣ ಕಾರ್ಯ ನಿರ್ವಹಿಸುತ್ತದೆ.

* ಆನ್ಸರಿಂಗ್ ಮಶಿನ್ :
ನಿಮ್ಮ ಯಾಂತ್ರಿಕ ಉತ್ತರಗಳನ್ನು ಫೋನ್ ಗೆ ಸೇರಿಸಬಹುದು ಮತ್ತು ನಿಮ್ಮ ಸ್ವಯಂ ಮೆಮೊರಿಯಲ್ಲಿ ಸೇವಾ ಸಹಾಯಕರ ಧ್ವನಿಯ ರಹಿತವಾಗಿ ವಾಯ್ಸ್ ಮೆಸೇಜ್ ಗಳನ್ನು ಸೇರಿಸಿಕೊಳ್ಳಬಹುದು.
* ಎಸ್ ಎಮ್ ಎಸ್ ರೆಸ್ಪಾನ್ಸ್: ಯಾರ ಕರೆಗಳಿಗೆ ಉತ್ತರಿಸಲಾಗಿಲ್ಲವೊ ಅವರಿಗೆ ನಿಮ್ಮ ಸ್ವಂತ ಹಾಗೂ ಪೂರ್ವನಿರ್ಧರಿತ ಎಸ್ ಎಮ್ ಎಸ್ ಕಳುಹಿಸಬಹುದು
* ಬ್ಲ್ಯಾಕ್ ಲಿಸ್ಟ್ : ಮೊದಲೇ ಉಲ್ಲೇಖಿಸಲಾದ ನಂಬರ್ ಗಳಿಗೆ ಕರೆ ಮಾಡುವುದನ್ನು ತಪ್ಪಿಸಬಹುದು.

ನಿಮ್ಮ ನೆಚ್ಚಿನ ಮೊಬೈಲ್ ಫೊನ್ ನನ್ನು ಸಂಪೂರ್ಣ ಕಾಪಾಡುವ ಈ ಎಲ್ಲಾ ಸೌಲಭ್ಯಗಳು ಶೀಘ್ರದಲ್ಲೇ ಕರ್ನಾಟಕದ ಮಾರುಕಟ್ಟೆ ಪ್ರವೇಶಿಸಲಿವೆ. ಈ ಸೌಲಭ್ಯಗಳನ್ನು ಪಡೆಯುವ ಮೂಲಕ ನೀವು ಹೆಮ್ಮೆಯಿಂದ ಬೀಗುವಿರಲ್ಲದೆ ನಿಮ್ಮ ಫೊನ್ ನನ್ನು ಕಳೆದುಕೊಳ್ಳುವ ಭಯವಿಲ್ಲದೆ ನಿಶ್ಚಿಂತರಾಗಿ ಸಂಪೂರ್ಣ ಬಳಸಬಹುದು. ಈ ಹಿಂದೆ ಮೊಬೈಲ್ ಫೊನ್ ಮತ್ತು ಮಾಹಿತಿಯನ್ನು ಕಳೆದುಕೊಂಡವರು ಆನ್ ವರ್ಡ್ ಮೊಬಿಲಿಟಿ ಸಂಪರ್ಕಿಸಿ ಅವರ ಸೇವೆಯ
ಲಾಭ ಪಡೆಯಬಹುದು ಎಂದು ಸಂಸ್ಥೆಯ ಮಾರಾಟ ವಿಭಾಗದಮುಖ್ಯಸ್ಥ ಬಾಬು ಹೇಳುತ್ತಾರೆ

ಅಭಿವೃದ್ಧಿ ಹೊಂದುತ್ತಿರುವ ಹೊಸ ಪೀಳಿಗೆಯ ಕಂಪೆನಿಯಾದ ಆನ್‌ವರ್ಡ್ ಮೊಬಿಲಿಟಿ, ಮೊಬೈಲ್ ಆರೋಗ್ಯ ಸೇವೆಯ ಕುರಿತು ಹೊಸ ತರಹದ ಪರಿಹಾರವನ್ನು ಅಭಿವೃದ್ಧಿಪಡಿಸುವ ಯೋಜನೆ ಹೊಂದಿದೆ. ದೂರದ ಗ್ರಾಮಸ್ಥರಿಗೆ ವೈದ್ಯಕೀಯ ಸೇವೆ ಒದಗಿಸುವುದು, ಅವಶ್ಯಕತೆಯಿರುವ ವಿದ್ಯಾರ್ಥಿಗಳಿಗೆ ವಿದ್ಯಾದಾನ, ತಾಯ್ನೆಲದ ರಕ್ಷಣೆಗೆ ಮೊಬೈಲ್ ಹೊಮ್ ಲ್ಯಾಂಡ್ ಸೆಕ್ಯುರಿಟಿ ಒದಗಿಸುವುದು ಇವರ ಉದ್ದೇಶ. ಮೊಬೈಲ್ ಸಾಫ್ಟವೇರ್ ಕ್ಷೇತ್ರಕ್ಕೆ ಒಂದು ಭರವಸೆಯ ಭವಿಷ್ಯವನ್ನು ನೀಡುವ ಆಶಾಭಾವನೆ ಈ ಕಂಪೆನಿ ಹೊಂದಿದೆ ಮತ್ತು ವಿಶ್ವದ ಅತಿದೊಡ್ಡ ಬಿನ್ ಸಲೇಮ್ ಇರ್ವಹಿತ ಅರಬ್ ಕಂಪನಿ ಬಿ ಎಸ್ ಟೆಕ್ನಾಲಜಿಯೊಂದಿಗೆ ಜಂಟಿ ಉದ್ಯೋಗದ ಸಹಭಾಗಿತ್ವ ಇದ್ದಾಗ್ಯೂ ಇತ್ತೀಚೆಗಷ್ಟೇ ತನ್ನ ಪ್ರಥಮ ಕೊಡುಗೆಯಾದ ಮೊಬಿಕಾಪ್ ಅನ್ನು ಯುರೋಪ್, ಮಧ್ಯ ಪ್ರಾಚ್ಯ, ಅಫ್ರಿಕಾ ಮತ್ತು ರಷಿಯಾದಲ್ಲಿ ಬಿಡುಗಡೆಗೊಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :- ದೂರವಾಣಿ : +919986 777612
http://www.onwardmobility.com

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+