ವಿರಾಟ್ ಹಿಂದೂ ಸಮಾಜೋತ್ಸವದ ಸತ್ಪರಿಣಾಮ
ಎರಡು ವರ್ಷಗಳ ಹಿಂದೆ, ಬಹುತೇಕ ರಾಜ್ಯದ ಎಲ್ಲ ತಾಲ್ಲೂಕು ಕೇಂದ್ರಗಳಲ್ಲೂ ಸಂಘಪರಿವಾರದ ಕಡೆಯಿಂದ ನಡೆದ ವಿರಾಟ್ ಹಿಂದೂ ಸಮಾಜೋತ್ಸವದ ವಿರುದ್ಧ ಅತ್ಯಂತ ಸಹಜವಾಗಿಯೇ ಕೆಲವು ಜನ ಪ್ರತಿಭಟನೆ ಮಾಡಿದ್ದರು. ಆ ಮೂಲಕ ತಮ್ಮ ಪ್ರತಿಭಟನಾ ಹಕ್ಕನ್ನು ಚಲಾಯಿಸಿದ್ದರು. ಆದರೆ ಈ ಕಾರ್ಯಕ್ರಮಗಳ ಕಾರಣದಿಂದ ಸಮಾಜದಲ್ಲುಂಟಾದ ಪರಿಣಾಮಗಳ ಕುರಿತು, ಯಾವ ಪ್ರತಿಭಟನಾಕಾರರಾಗಲೀ, ವಿಚಾರವಾದಿಗಳಾಗಲೀ ಚಿಂತನೆ ನಡೆಸುವ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ.
ನಡೆದ ಎಲ್ಲ ಹಿಂದೂ ಸಮಾಜೋತ್ಸವಗಳಲ್ಲಿ ಅತ್ಯಂತ ಮಹತ್ವದ ವಿಷಯವಾಗಿ ಅಸ್ಪೃಶ್ಯತೆಯನ್ನು ವಿರೋಧಿಸಲಾಯಿತು. ಸಮಾಜದಲ್ಲಿನ ನೂರಾರು ಪೀಠಾಧಿಪತಿಗಳನ್ನು ಒಂದೇ ವೇದಿಕೆಯಡಿ ಕರೆತಂದು, ಸಮಾಜದ ಎಲ್ಲ ಸಮುದಾಯಗಳಿಗೆ ಅಸ್ಪೃಶ್ಯತೆಯನ್ನು ವಿರೋಧಿಸುವಂತೆ ಕರೆ ನೀಡಿಸಲಾಯಿತು. ಈ ಕಾರಣದಿಂದ ಹಿಂದೂ ಸಮಾಜದಲ್ಲಿ ನಂಬಿಕೆಯಿರುವ ಲಕ್ಷಾಂತರ ಮಂದಿಗೆ ಅಸ್ಪೃಶ್ಯತೆಯನ್ನು ದೂರಗೊಳಿಸುವ ಪ್ರೇರಣೆಯಾಗಿದೆ. ಈ ಪರಿಣಾಮಗಳು ಅಕ್ಷರಶಃ ಸಮಾಜದಲ್ಲಿ ಆಚರಣೆಗೆ ಬರತೊಡಗಿವೆ. ಅವುಗಳ ಕುರಿತು ಕಿಂಚಿತ್ ಅರಿತರೆ ನಮಗೂ ಪ್ರೇರಣೆಯಾಗಬಹುದು.
ಮೇಲ್ವರ್ಗವೆಂಬ ವರ್ಗಕ್ಕೆ ಸೇರಿದ ಯುವಕನೊಬ್ಬ ಬೆಂಗಳೂರಿನಲ್ಲಿ ಮನೆಯೊಂದನ್ನು ಬಾಡಿಗೆಗೆ ಹುಡುಕುತ್ತಿದ್ದ. ಆದರೆ ಸಿಗುತ್ತಿದ್ದ ಎಲ್ಲ ಮನೆಯ ಸುತ್ತ-ಮುತ್ತ ತನ್ನ ಸಮುದಾಯದವರಿಲ್ಲ ಎಂಬ ಕಾರಣಕ್ಕೆ ಆ ಎಲ್ಲ ಮನೆಗಳನ್ನೂ ತಿರಸ್ಕರಿಸಿದ್ದ. ಆದರೆ, ವಿರಾಟ್ ಹಿಂದೂ ಸಮಾಜೋತ್ಸವದ ನಂತರ, ಅದೇ ಯುವಕ ಸ್ವಯಂ ಪ್ರೇರಿತನಾಗಿ ತಿರಸ್ಕರಿಸಿದ ಮನೆಗಳಲ್ಲೇ ಒಂದನ್ನು ಆಯ್ಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾನೆ. ನಗರದ ಪ್ರಮುಖ ಬಡಾವಣೆಯೊಂದರಲ್ಲಿ ವೈದಿಕ ಪರಂಪರೆಯೊಂದರಲ್ಲಿರುವ ಕುಟುಂಬವೊಂದು ತಿಂಗಳಲ್ಲಿ ಒಮ್ಮೆ,ಯಾರು ತಮ್ಮನ್ನು ದಲಿತರು ಎಂದು ಕರೆದುಕೊಳ್ಳುತ್ತಾರೋ ಅವರಲ್ಲೊಬ್ಬರನ್ನು ಮನೆಗೆ ಕರೆದು ಭೋಜನ ನೀಡುವ ಸಂಪ್ರದಾಯವನ್ನು ಪ್ರಾರಂಭಿಸುವ ಮಟ್ಟಿಗೆ ವಿರಾಟ್ ಹಿಂದೂ ಸಮಾಜೋತ್ಸವ ಅವರಿಗೆ ಪರಿಣಾಮ ನೀಡಿದೆ!
ಒಂದೂರಿನಲ್ಲಿ, ಒಂದು ಬೀದಿಯನ್ನು ಶೂದ್ರರ ಬೀದಿ, ಹೊಲೆಯರ ಬೀದಿ ಎಂದು ಕರೆಯುತ್ತಿದ್ದ ಶಾಲಾ ಮಕ್ಕಳು, ವಿರಾಟ್ ಹಿಂದೂ ಸಮಾಜೋತ್ಸವ ನಂತರ ಅವೆಲ್ಲವನ್ನು ರೈತರ ಬೀದಿ ಎನ್ನಲು ಪ್ರಾರಂಭಿಸಿದ್ದಾರೆ. ಅಕಸ್ಮಾತ್ ತಮ್ಮ ತಂದೆ-ತಾಯಿ ಬಾಯಿತಪ್ಪಿ ಹೇಳಿದರೂ ಮಕ್ಕಳೇ ಅವರಿಗೆ ಬುದ್ಧಿ ಹೇಳುತ್ತಾರೆ. ತಾನು ಕೆಳವರ್ಗವೆಂಬ ವರ್ಗಕ್ಕೆ ಸೇರಿದವ ಎಂಬ ಒಂದೇ ಕಾರಣಕ್ಕೆ ಬೇರೆ ಮೇಲ್ವರ್ಗದವರ ಜತೆ ಬೆರೆಯದಿದ್ದ ಒಬ್ಬ ಪ್ರೌಢ ಶಾಲಾ ವಿದ್ಯಾರ್ಥಿ, ವಿರಾಟ್ ಹಿಂದೂ ಸಮಾಜೋತ್ಸವದ ನಂತರ ತನ್ನ ಕೀಳರಿಮೆಯನ್ನು ಬಿಟ್ಟು, ಧೈರ್ಯವಾಗಿ ಎಲ್ಲರ ಜತೆ ಮುಕ್ತ ಮನಸ್ಸಿನಿಂದ ಬೆರೆತು ಆಟವಾಡುತ್ತಿದ್ದಾನೆ.
ಮೊನ್ನೆ ಒಬ್ಬ ಯುವಕ ತನ್ನ ಹುಟ್ಟುಹಬ್ಬವನ್ನು ಯಾವ ರೀತಿಯಲ್ಲಿ ಆಚರಿಸಿದ ಗೊತ್ತೇ? ತನ್ನ ಸುತ್ತಮುತ್ತಲ ಇರುವ 4 ಜನ ಚಮ್ಮಾರರನ್ನು ಪರಿಚಯ ಮಾಡಿಕೊಂಡು ಅವರನ್ನು ಒಂದು ಒಳ್ಳೆಯ ಹೋಟೆಲ್ಗೆ ಕರೆದುಕೊಂಡು ಹೋಗಿ ಹೊಟ್ಟೆ ತುಂಬ ಒಳ್ಳೆಯ ಊಟವನ್ನು ನೀಡಿ, ಆಶೀರ್ವಾದವನ್ನು ಬೇಡಿದ್ದಾನೆ. ಇದಕ್ಕೆಲ್ಲ ಪ್ರೇರಣೆ ಏನು ಅಂದು ಕೇಳಿದ್ದಕ್ಕೆ ಅವನ ಉತ್ತರ ವಿರಾಟ್ ಹಿಂದೂ ಸಮಾಜೋತ್ಸವ! ಈ ಎಲ್ಲ ಸತ್ಪರಿಣಾಮಗಳನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುವ ತಾಕತ್ತು, ಪ್ರಾಮಾಣಿಕತೆ, ಸಮಾಜದ ಬಗೆಗೆ ನಿಷ್ಠೆ ತಥಾಕಥಿತ ಬುದ್ಧಿಜೀವಿಗಳಿಗೆ, ಪ್ರಗತಿಪರರಿಗೆ, ವಿಚಾರವಾದಿಗಳಿಗೆ, ಜಾತ್ಯತೀತವಾದಿಗಳಿಗಿದೆಯೇ?
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications