Get Updates
Get notified of breaking news, exclusive insights, and must-see stories!

‘ಕನ್ನಡ- ಕನ್ನಡ, ಬರ್ರಿನಮ್ಮ ಸಂಗಡ’ ಮತ್ತು ತ್ರಿವೇಣಿ ಸಂಸ್ಮರಣೆ

ಬೆಂಗಳೂರು : ತಮ್ಮ ಕಾದಂಬರಿಗಳು ಚಲನಚಿತ್ರವಾಗಬೇಕು ಅನ್ನುವ ಆಸೆಯನ್ನು ತ್ರಿವೇಣಿ ಹೊಂದಿದ್ದರು. ಅವರು ಜೀವಂತವಿದ್ದಾಗ ಅವರ ಕಾದಂಬರಿಗಳು ಸಿನಿಮಾ ಆಗಲಿಲ್ಲ . ನಿಧನಾನಂತರ ಕೆಲವು ಕಾದಂಬರಿಗಳು ಸಿನಿಮಾ ಆದರೂ, ಅವರ ಬಹುತೇಕ ಕಾದಂಬರಿಗಳಿಗೆ ಸಿನಿಮಾ ಮಾಧ್ಯಮದಲ್ಲಿ ನ್ಯಾಯ ದೊರೆತಿಲ್ಲ ಎಂದು ಲೇಖಕಿ ಆರ್ಯಾಂಬ ಪಟ್ಟಾಭಿ ವಿಷಾದಿಸಿದ್ದಾರೆ.

ತ್ರಿವೇಣಿ ಸಂಸ್ಮರಣೆ ಹಾಗೂ ಸಾಹಿತಿ ಚಂದ್ರಶೇಖರ ಪಾಟೀಲ ಅವರ ‘ಕನ್ನಡ- ಕನ್ನಡ, ಬರ್ರಿ ನಮ್ಮ ಸಂಗಡ’ ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಆರ್ಯಾಂಬ ಪಟ್ಟಾಭಿ ಮಾತನಾಡುತ್ತಿದ್ದರು. ವಿಮರ್ಶಕರ ಬಗ್ಗೆ ತ್ರಿವೇಣಿ ಎಂದೂ ತಲೆ ಕೆಡಿಸಿಕೊಳ್ಳಲಿಲ್ಲ . ಓದುಗರೇ ನಿಜವಾದ ವಿಮರ್ಶಕರು ಎಂದು ಅವರು ಸದಾ ಹೇಳುತ್ತಿದ್ದುದನ್ನು ಆರ್ಯಾಂಬ ಸ್ಮರಿಸಿಕೊಂಡರು.

ಪುರುಷ ಸಾಹಿತಿಗಳು ಮಹಿಳಾ ಸಾಹಿತ್ಯದ ಬಗೆಗೆ ತಾತ್ಸಾರ ಮನೋಭಾವನೆ ವ್ಯಕ್ತಪಡಿಸುವ ಬಗ್ಗೆ ತೀವ್ರ ವಿಷಾದ ಹಾಗೂ ಆಕ್ರೋಶ ವ್ಯಕ್ತಪಡಿಸಿದ ಅವರು, ಮಹಿಳಾ ಸಾಹಿತಿಗಳು ಒಂದೆಡೆ ಸೇರಿ ಚರ್ಚಿಸುವ ಉದ್ದೇಶದಿಂದ ಈ ಮುನ್ನ ನಡೆಯುತ್ತಿದ್ದ ಮಹಿಳಾ ಸಾಹಿತ್ಯ ಸಮ್ಮೇಳನಗಳನ್ನು ಪುನಶ್ಚೇತನಗೊಳಿಸಬೇಕಿದೆ ಎಂದರು.

ಗೋಕಾಕ ಚಳವಳಿ ನೆನಪುಗಳು

‘ಕನ್ನಡ- ಕನ್ನಡ, ಬರ್ರಿ ನಮ್ಮ ಸಂಗಡ’ ಪುಸ್ತಚಕ ಬಿಡುಗಡೆ ಮಾಡಿದ ಹಿರಿಯ ಲೇಖಕ ಡಾ. ಹಂ.ಪ.ನಾಗರಾಜಯ್ಯ, ಈ ಪುಸ್ತಕದ ಮೂಲಕ ಗೋಕಾಕ್‌ ಚಳವಳಿಯ ನೆನಪುಗಳನ್ನು ಮೆಲುಕು ಹಾಕಬಹುದಾಗಿದೆ ಎಂದರು. ಲೇಖಕಿ ಡಾ। ಎನ್‌.ಗಾಯತ್ರಿ ಅವರು ತ್ರಿವೇಣಿ ಸಾಹಿತ್ಯ ಕುರಿತು ಮಾತನಾಡಿದರು.

ಸಣ್ಣ ಚೌಕಟ್ಟಿನಲ್ಲಿಯೇ ಬದುಕಿನ ವೈರುಧ್ಯಗಳನ್ನು ಮನೋಜ್ಞ ಪಾತ್ರಗಳನ್ನಾಗಿಸಿದ್ದು ತ್ರಿವೇಣಿ ಅವರ ಅಗ್ಗಳಿಕೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಂಪಾ ಬಣ್ಣಿಸಿದರು. ಸಾಹಿತಿಗಳ ಬಗ್ಗೆ ಜನತೆ ಭ್ರಮೆ ಇಟ್ಟುಕೊಳ್ಳಬೇಕಿಲ್ಲ . ಸಾಹಿತಿಗಳ ಸಾಮಾನ್ಯ ಮನುಷ್ಯರೇ ಎಂಬ ತರ್ಕ ಮಂಡಿಸಿದ ಚಂಪಾ, ಬದುಕು ಹಾಗೂ ಬರಹಗಳನ್ನು ಪ್ರತ್ಯೇಕವಾಗಿ ನೋಡಬೇಕು ಎಂದರು.

ಕನ್ನಡ ಕ್ರಿಯಾ ಸಮಿತಿ ಕಾರ್ಯಾಧ್ಯಕ್ಷ ವಿ.ಎಚ್‌.ಚನ್ನೇಗೌಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+