ಗದಗದ ಹುಯಿಲಗೋಳದಲ್ಲೊಂದು ಡಿಫರೆಂಟ್ ಕವಿಗೋಷ್ಠಿ
ರೋಣ : ಜನಸಂಖ್ಯೆ ಯದ್ವಾತದ್ವಾ ಬೆಳೆಯುತ್ತಿರುವಾಗ ಪರಿಸರ ಉಳಿಸಿ ಎಂಬ ಮಾತಿಗೆ ಪ್ರಾಕ್ಟಿಕಲ್ ಆಗಿ ಅಷ್ಟೊಂದು ಗಟ್ಟಿಯಾಗಿ ಕೇಳಿಸುವುದಿಲ್ಲ. ಪರಿಸರ ಕಾಳಜಿಯ ಮಾತು ದೊಡ್ಡ ಪ್ರಕರಣ ಆಗಬೇಕಾದರೆ ಅದು ಕುದುರೆಮುಖ ಉಳಿಸಿ ಹೋರಾಟವೋ, ರಾಜ್ಯದ ಕರಾವಳಿಯನ್ನು ಉಳಿಸಿ ಎಂಬ ಆಂದೋಳನವೋ ಅಥವಾ ಕೊಜೆಂಟ್ರಿಕ್ಸ್ ತೊಲಗು.. ಎಂಬ ಚಳವಳಿಯ ಹಾಗೆ ದೊಡ್ಡ ಪ್ರಮಾಣದ್ದಾಗಿರಬೇಕು.
ಆದರೆ ಈ ಬೃಹತ್ ಹೋರಾಟಕ್ಕಿಂತ ವ್ಯಕ್ತಿಗತ ಜಾಗೃತಿ ಮುಖ್ಯ ಅಲ್ಲವೇ ? ಎಲ್ಲ ಸಮಾರಂಭಗಳಲ್ಲಿಯೂ ಟೀಪಾಯ್ ಮೇಲೆ ನೀರಿನ ಪ್ಲಾಸ್ಟಿಕ್ ಬಾಟಲಿಗಳು ಸಾಲಾಗಿ ಕೂತಿರುತ್ತವೆ. ವಿಧಾನ ಮಂಡಲದ ಅಧಿವೇಶನಗಳ ಬಗ್ಗೆ ತೋರಿಸುವ ಕ್ಲಿಪ್ಪಿಂಗ್ಗಳಲ್ಲಂತೂ ಕಿನ್ಲೆ ಬಾಟಲಿಗಳ ಸಾಲು ನೋಡಿ ಪ್ಲಾಸ್ಟಿಕ್ ನಿಯಂತ್ರಿಸುವ ಬಗ್ಗೆ ಮಾತಾಡುವ ಸರಕಾರಕ್ಕೆ ಆ ಬಗ್ಗೆ ಒಂದಿಷ್ಟೂ ಪ್ರಜ್ಞೆ ಇಲ್ಲವೇ ಅಂತನಿಸುತ್ತದೆ.
ಪರಿಸರದ ಕಾಳಜಿ ಸಾಮಾನ್ಯ ನಾಗರಿಕರಲ್ಲಿ ಬರದಿದ್ದರೆ ಪರವಾಗಿಲ್ಲ ಬಿಡಿ. ಆದರೆ ಮೌಲ್ಯಗಳ ಬಗ್ಗೆ ಭಾಷಣ ಬಿಡುವ ಸಾಹಿತಿಗಳಿಗೂ ಇದು ನೆನಪಾಗುವುದಿಲ್ಲವಲ್ಲ ಅಂತ ಆಶ್ಚರ್ಯವಾಗುತ್ತದೆ. ಆದರೆ ರೋಣ ತಾಲ್ಲೂಕಿನ ಹುಯಿಲಗೋಳದಲ್ಲಿ ಒಂದು ವಿಶೇಷ ಕಾರ್ಯಕ್ರಮ ಬುಧವಾರ ನಡೆಯಿತು. ಇದು ಪರಿಸರ ಪ್ರಿಯರ ಕವಿಗೋಷ್ಠಿ. ಕವಿಗೋಷ್ಠಿಯ ಉದ್ಘಾಟನೆ ಗಿಡವೊಂದನ್ನು ನೆಡುವ ಮೂಲಕ ನಡೆಯಿತು. ಅರಣ್ಯಾಧಿಕಾರಿ ಕೆ. ಆರ್. ಪ್ರಸಾದ್ ಗಿಡ ನೆಟ್ಟರು.
ಕವಿಗಳು ಹಾಗೂ ಕಲಾವಿದ ಸಿ.ಜಿ.ಬಿ.ಹೀರೇಮಠ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ತುಂಬಾ ಸರಳವಾಗಿದ್ದ ಕಾರ್ಯಕ್ರಮದಲ್ಲಿ ಕವಿತೆಗಳನ್ನು ಓದಿದವರು - ಪ್ರೊ. ರವೀಂದ್ರ ಕೊಪ್ಪರ್, ಬಸವರಾಜ್ ದಂಡಿನ್, ಐ.ಕೆ. ಕಮ್ಮಾರ್, ಕವಿತಾ ದಂಡಿನ್, ಪ್ರೇಮಾ ಮೆಟಿ ಮತ್ತು ಸಂಗಮೇಶ್ ಮೇಣಸಿನಕಾಯಿ.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications