ಬೆಂಗಳೂರು ದೂರದರ್ಶನದಲ್ಲಿ ವಿವಿಧ ಉದ್ಯೋಗಾವಕಾಶ
ದೂರದರ್ಶನ ಬೆಂಗಳೂರು ಕೇಂದ್ರದ ಪ್ರಾದೇಶಿಕ ಸುದ್ದಿ ವಿಭಾಗ ಈ ಕೆಳಗಿನ 6 ವಿವಿಧ ಬಗೆಯ ವರ್ಗಗಳಲ್ಲಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಬೆಂಗಳೂರು, ಮೇ 08 : ದೂರದರ್ಶನ ಬೆಂಗಳೂರು ಕೇಂದ್ರದ ಪ್ರಾದೇಶಿಕ ಸುದ್ದಿ ವಿಭಾಗ ಈ ಕೆಳಗಿನ ವರ್ಗಗಳಲ್ಲಿ ಹಂಗಾಮಿಯಾಗಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸಹಾಯಕ ಸುದ್ದಿ ಸಂಪಾದಕ, ನಿರ್ಮಾಪಕ, ಕಾಪಿ ಎಡಿಟರ್, ವರದಿಗಾರ, ವೀಡಿಯೊ ಎಡಿಟರ್, , ಕ್ಯಾಮರಾಮನ್, ಸಿ.ಜಿ. ಆಪರೇಟರ್ ಹುದ್ದೆಗಳಿಗೆ ಸುದ್ದಿ ವಿಭಾಗದಲ್ಲಿ ಅನುಭವವಿರುವವರು, ಪತ್ರಿಕೋದ್ಯಮದಲ್ಲಿ ಪದವಿ ಪಡೆದವರು ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಆಸಕ್ತಿ ಇರುವವರು 2017, ಮೇ 31ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ
1. ಸಹಾಯಕ ಸುದ್ದಿ ಸಂಪಾದಕ
* ವೇತನ: 1600 ರು. (ದಿನಕ್ಕೆ)
* ವಯೋಮಿತಿ: 25-50
* ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ/ಡಿಪ್ಲೊಮಾ ಉತ್ತೀರ್ಣರಾಗಿರಬೇಕು. ಸುದ್ದಿ ಪ್ರಸಾರ/ಸುದ್ದಿ ಸಂಸ್ಥೆಯಲ್ಲಿ ಕನಿಷ್ಠ 3 ವರ್ಷಗಳ ಅನುಭವ ಉಳ್ಳವರಾಗಿರಬೇಕು.[ಎಸ್ ಬಿಐನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ]
2. ನಿರ್ಮಾಪಕ (Producer)
* ವೇತನ: 1250 ರು. (ದಿನಕ್ಕೆ)
* ವಯೋಮಿತಿ: 25-50
* ವಿದ್ಯಾರ್ಹತೆ: ಮಾನ್ಯತೆ ಪಡೆದ ವಿವಿಯಿಂದ ಪತ್ರಿಕೋದ್ಯಮದಲ್ಲಿ ಪದವಿ/ಡಿಪ್ಲೊಮಾ ಮತ್ತು ಸುದ್ದಿ ಪ್ರಸಾರ/ಸುದ್ದಿ ಸಂಸ್ಥೆಯಲ್ಲಿ ಕನಿಷ್ಠ 3 ವರ್ಷಗಳ ಅನುಭವ.
3. ಕಾಪಿ ಎಡಿಟರ್
* ವೇತನ: 1000 ರು. (ದಿನಕ್ಕೆ)
* ವಯೋಮಿತಿ: 25-50
* ವಿದ್ಯಾರ್ಹತೆ: ಮಾನ್ಯತೆ ಪಡೆದ ವಿವಿಯಿಂದ ಪತ್ರಿಕೋದ್ಯಮದಲ್ಲಿ ಪದವಿ/ಡಿಪ್ಲೊಮಾ ಹಾಗೂ ಸುದ್ದಿ ಪ್ರಸಾರ/ಸುದ್ದಿ ಸಂಸ್ಥೆಯಲ್ಲಿ ಕನಿಷ್ಠ 3 ವರ್ಷಗಳ ಅನುಭವ[ಆರ್ ಬಿಐನಲ್ಲಿ 'ಬಿ-ಗ್ರೇಡ್' ಹುದ್ದೆಗಳಿಗೆ ಅರ್ಜಿ ಆಹ್ವಾನ]
4. ವರದಿಗಾರ
* ವೇತನ: 1600 ರು. ದಿನಕ್ಕೆ (3 ವರ್ಷ ಅನುಭವ ಉಳ್ಳವರಿಗೆ), 1250 ರು. ದಿನಕ್ಕೆ (ಫ್ರೆಶರ್)
* ವಿದ್ಯಾರ್ಹತೆ: ಮಾನ್ಯತೆ ಪಡೆದ ವಿವಿಯಿಂದ ಪತ್ರಿಕೋದ್ಯಮದಲ್ಲಿ ಪದವಿ/ಡಿಪ್ಲೊಮಾ.
* ವಯೋಮಿತಿ: 25-50
5. ವೀಡಿಯೋ ಎಡಿಟರ್
* ವೇತನ: 1000 ರು. (ದಿನಕ್ಕೆ)
* ವಯೋಮಿತಿ: 25-50
* ವಿದ್ಯಾರ್ಹತೆ : ಮಾನ್ಯತೆ ಪಡೆದ ವಿವಿಯಿಂದ ಫಿಲಂ/ವಿಡಿಯೋ ಎಡಿಟಿಂಗ್ ನಲ್ಲಿ ಪದವಿ/ಡಿಪ್ಲೊಮಾ ಸಂಬಂಧಿಸಿದ ಕ್ಷೇತ್ರದಲ್ಲಿ 2 ವರ್ಷ ಅನುಭವ.
6. ಕ್ಯಾಮರಾಮನ್
* ವೇತನ: 1000 ರು. (ದಿನಕ್ಕೆ)
* ವಯೋಮಿತಿ: 25-50
* ವಿದ್ಯಾರ್ಹತೆ: ಮಾನ್ಯತೆ ಪಡೆದ ವಿವಿಯಿಂದ ಸಿನೆಮಾಟೊಗ್ರಫಿ/ ವಿಡಿಯೊಗ್ರಫಿ ಪದವಿ/ಡಿಪ್ಲೊಮಾ ಸಂಬಂಧಿಸಿದ ಕ್ಷೇತ್ರದಲ್ಲಿ 1 ವರ್ಷ ಅನುಭವ.
7. ಸಿ.ಜಿ. ಆಪರೇಟರ್
* ವೇತನ: 750 ರು. (ದಿನಕ್ಕೆ)
* ವಯೋಮಿತಿ: 25-50
* ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ 10+2 ವ್ಯಾಸಂಗ, ಕಂಪ್ಯೂಟರ್ ಅಪ್ಲಿಕೇಶನ್. ಕನ್ನಡ ಭಾಷೆ ಮತ್ತು ಕನ್ನಡ ಟೈಪಿಂಗ್ನಲ್ಲಿ (ಇನ್ಸ್ಕ್ರಿಪ್ಟ್, ನುಡಿ, ಬರಹ,) ಜ್ಞಾನ
* ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯಲ್ಲಿ ಪಾಸ್ ಪೋರ್ಟ್ ಗಾತ್ರದ ಭಾವಚಿತ್ರದೊಂದಿಗೆ 31ನೇ ಮೇ 2017 ಅರ್ಜಿ ಸಲ್ಲಿಸಬೇಕು
* ಸಲ್ಲಿಸಬೇಕಾದ ವಿಳಾಸ
ನಿರ್ದೇಶಕರು (ಸುದ್ದಿ),
ಪ್ರಾದೇಶಿಕ ಸುದ್ದಿ ವಿಭಾಗ,
ದೂರದರ್ಶನ ಕೇಂದ್ರ, ಜೆ.ಸಿ. ನಗರ,
ಬೆಂಗಳೂರು - 560 006.
ವಿಶೇಷ ಸೂಚನೆ
* ಅಭ್ಯರ್ಥಿಗಳು ಕನ್ನಡವನ್ನು ಚೆನ್ನಾಗಿ ಬಲ್ಲವರಾಗಿರಬೇಕು. ಇಂಗ್ಲಿಷ್, ಹಿಂದಿ ಮತ್ತು ಜಾಲತಾಣ ಸೇರಿದಂತೆ ಕಂಪ್ಯೂಟರ್ ಬಳಕೆಯ ಜ್ಞಾನ ಹೊಂದಿರಬೇಕು.
* ಅಭ್ಯರ್ಥಿಗಳು ಬೆಂಗಳೂರು ನಿವಾಸಿಗಳಾಗಿರಬೇಕು.
* ಆಯ್ಕೆ ಪ್ರಕ್ರಿಯೆಯು ಆಯಾ ಹುದ್ದೆಗೆ ತಕ್ಕಂತೆ ಕೌಶಲ್ಯ ಪರೀಕ್ಷೆ/ಲಿಖಿತ ಪರೀಕ್ಷೆ ಒಳಗೊಂಡಿರುತ್ತದೆ.
* ವಿದ್ಯಾರ್ಹತೆ, ವಯಸ್ಸು ಮತ್ತು ಅನುಭವ ದೃಢಪಡಿಸುವ ದಾಖಲಾತಿಗಳನ್ನು ಲಗತ್ತಿಸದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
* ಅಭ್ಯರ್ಥಿಗಳು ಅರ್ಜಿಯಲ್ಲಿ ತಮ್ಮ ಇಮೇಲ್ ವಿಳಾಸ ಮತ್ತು ಮೊಬೈಲ್ ದೂರವಾಣಿ ಸಂಖ್ಯೆಯನ್ನು ತಪ್ಪದೆ ನಮೂದಿಸಬೇಕು. ಕೌಶಲ್ಯ ಪರೀಕ್ಷೆ/ಲಿಖಿತ ಪರೀಕ್ಷೆ ನಡೆಯುವ ದಿನಾಂಕವನ್ನು ಇಮೇಲ್/ಮೊಬೈಲ್ ಫೋನ್ ಮೂಲಕ ತಿಳಿಸಲಾಗುವುದು.
*ಆಯ್ಕೆ ಪ್ರಕ್ರಿಯೆಯನ್ನು ಯಾವುದೇ ಕಾರಣ ನೀಡದೆ ರದ್ದುಪಡಿಸುವ ಹಕ್ಕನ್ನು ಮಹಾನಿರ್ದೇಶಕರು (ಸುದ್ದಿ ಮತ್ತು ಪ್ರಚಲಿತ ವಿದ್ಯಮಾನ), ಡಿಡಿ ನ್ಯೂಸ್ ಹೊಂದಿರುತ್ತಾರೆ.
*ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದ ಯಾವುದೇ ವಿವಾದ ಬೆಂಗಳೂರು ನ್ಯಾಯಾಲಯಗಳ ವ್ಯಾಪ್ತಿಗೆ ಒಳಪಟ್ಟಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು












Click it and Unblock the Notifications