ಸ್ವಪ್ನದಲಿ ಬರೆದ ಪ್ರೇಮ ಪತ್ರ ಜೇಬಲ್ಲೇ ಉಳಿಯಿತು!
"ಓ ಮೇಘವೇ ಮೇಘವೇ ಹೋಗಿ ಬಾ
ಈ ಓಲೆಯ ಅವಳಿಗೆ ನೀಡಿ ಬಾ
ನಾ ಹೋಗಲು ಮಾತಾಡಲು ಈ ನಾಚಿಕೆ ಅಂಜಿಕೆ ಮುಂದಿದೆ"
ಎಂದು ಹಂಸಲೇಖರ ಈ ಸಾಲನ್ನು ಗುನುಗುತ್ತ, ನನ್ನೊಳಗೇನೋ ಸಂಚಲನ ಮೂಡಿಸಿದ್ದ ನಿನ್ನ ಆ ಮುಗುಳ್ನಗೆ ಅದಕ್ಕೆ ಮುತ್ತಿಕ್ಕುತ್ತಿದ್ದ ಆ ಮುಂಗುರುಳು ಅದನ್ನು ನೇವರಿಸುವ ಮುದ್ದಾದ ಬೆರಳುಗಳ ಹಿಡಿದು, ಇಳಿಸಂಜೆಯ ಸಾನಿಧ್ಯದಲ್ಲಿ, ಹೆಜ್ಜೆಗೊಂದು ಹೆಜ್ಜೆ ಬೆಸೆಯುತ್ತ ಸಾಗುತ್ತಿರುವ ಕಲ್ಪನೆಯಲ್ಲಿ ಜೊತೆ ಇದ್ದದ್ದು ಮಾತ್ರ ಆಗಾಗ ಅಣಕಿಸುತ್ತಿದ್ದ ಅಕ್ಷರಗಳು, ನೀಲಿ ಶಾಯಿ, ಬೇಡವಾದ ಸಾಲುಗಳು, ಇನ್ನು ಕಣ್ಬಿಡದ ಭಾವನೆಗಳು ಮತ್ತು ಆ ಪಾರ್ಕಿನ ಮೂಲೆಯಲ್ಲಿ ನನ್ನ ದಾರಿಯನ್ನೇ ಎದುರುನೋಡುತ್ತಿದ್ದ ಬಿಳಿಬಣ್ಣ ಧರಿಸಿದ್ದ ಒಂಟಿ ಬೆಂಚು.
ಪ್ರತಿರಾತ್ರಿ ಕನಸಿನಲ್ಲಿ ನೀ ಒಮ್ಮೆ ನನ್ನ ಇಣುಕಿ ನೋಡುವಾಕ್ಷಣ ನಿಜಕ್ಕೂ ನಾನೊಬ್ಬ ಸ್ತಬ್ಧವಾಗಿ ನಿಂತ ಶಬ್ದದಂತೆ, ಇನ್ನು ಮೂಡದ ವಾಕ್ಯದಂತೆ, ಕಾಣದ ಕವಿತೆಯಂತೆ, ಗೇಲಿಮಾಡುವ ನೋಟದಂತೆ, ರಾಜಿಯಾಗದ ಹುಸಿ ಮುನಿಸಂತೆ ಹೀಗೆಲ್ಲಾ ಅಂದುಕೊಂಡ ಹುಂಬತನಕ್ಕೆ ಈ ಲೋಕವೊಂದು "ಪ್ರೇಮಿ" ಎಂಬ ನಾಮಫಲಕವನ್ನು ಹೃದಯಕ್ಕೆ ನೇತು ಹಾಕಿದೆ. [ಲೈಫ್ ಎಂಜಾಯ್ ಮಾಡೋಕೆ, ವೈಫ್ ಜಗಳ ಆಡೋಕೆ!]

ನಿನ್ನನ್ನು ತಲುಪಬೇಕಿದ್ದ ಹೂನೋಟ ಸಿಹಿ ಸಂಕಟದ ಸಂಕೋಚದಲ್ಲಿ ಮರೆಯಲ್ಲಿ ಅವಿತಿರಲು ಗುಲಾಬಿ ಹಿಡಿದು, ಮಂಡಿಯೂರಿ ಪ್ರದರ್ಶನಕಿಟ್ಟ ಬೊಂಬೆಯಂತೆ ನನ್ನ ಪ್ರೇಮವನ್ನು ನಿನ್ನಲ್ಲಿ ನಿವೇದಿಸಲಾರೆ ಎನ್ನುವಷ್ಟರಲ್ಲಿ ಕಂಬನಿ ಜಾರಿತು, ಕತ್ತಲೆ ಒರೆಸಿತು ಸ್ವಪ್ನದಲ್ಲಿ ಸಂಚರಿಸುತ್ತ ಬರೆದ ಪ್ರೇಮ ಪತ್ರ ಜೇಬಲ್ಲೆ ಉಳಿಯಿತು..
ಅಪೂರ್ಣವಾದ ಅಪಾರ ಕವಿತೆಗಳಲ್ಲಿ
ಶತಮಾನಗಳಿಂದ ಕಾಯುತ್ತಿರುವ
ಜೀವಂತ ಭಾವನೆಗಳು ಒಮ್ಮೆಲೆ
ಎದೆಗೆ ಒದ್ದು ಮಾಡಿದ ಘಾಸಿ,
ಇರಬಹುದು ಅವಳ ನೆನಪುಗಳ ಬಹುಮಾನ [ಅಕ್ಷರಗಳ ಖಜಾನೆ ಖಾಲಿ, ನಿಲ್ಲದು ನಿನ್ನ ವರ್ಣಿಸುವ ಖಯಾಲಿ]
ನನ್ನ ಮನಸ್ಸಿನ ಮೊರೆತ ಅವಳ ತಲುಪುವ
ಸಮಯ ಬೀಸುವ ಬಿರುಗಾಳಿಯಲ್ಲಿ
ಕಳೆದುಹೋಗುವ ಭೀತಿ
ತೇಲಿ ಬಂದ ಮೂಕ ರಾಗಕೇ
ವಿರಹ ವಿನಿಮಯದಂಜಿಕೆ
ಕಾವ್ಯವು ಅಂತರಂಗದಿ ಹರಿವ ಗುಪ್ತಗಾಮಿನಿ [ನಿನ್ನ ಗುಳಿ ಕೆನ್ನೆಯ ನಗು ಜೊತೆಗಿರಲು ನಾ ಬಡವನಲ್ಲ]
ಧೂಳ್ಹಿಡಿದ ಡೈರಿಯೊಂದು ಮೂಲೆಯಲ್ಲಿ ಮರುಗುತಿದೆ,
ಅದೇ ಹಳೆಯ ಕವಿತೆಗಳು ಉಸಿರುಗಟ್ಟಿ ಸಾಯುತಿವೆ
ಆದರೆ ಅವಳ ಆಗಮನ ಬಿಡಬಹುದು ನಿಟ್ಟುಸಿರು
ಉಳಿಯಬಹುದು ಕವಿತೆಗಳು ಮತ್ತು
ಕವಿತೆಯೊಳಗಿನ ನನ್ನ ಅನನ್ಯ ಪ್ರೀತಿ
ಸುಪ್ತ ಸಾಗರದಿ ಸದ್ದಿಲ್ಲದೆ
ಅಲೆಗೊಂದು ಅಲೆಯು ಸೇರುವ ಆ ಕ್ಷಣ
ನನ್ನೊಳಗಿನ ಪ್ರೇಮಿಯ ಮರುಹುಟ್ಟಿಗೆ
ಸಂಜೆಯೊಂದೆ ಜೀವಂತ ಸಾಕ್ಷಿ..
ಇರುವಾಗ ನಿನ್ನ ನೆನಪುಗಳು ನನ್ನ ಸುತ್ತ
ನಿಜ ನಾನಿನ್ನೂ ಜೀವಂತ, ಪ್ರೀತಿಯಲ್ಲಿ ಶ್ರೀಮಂತ.
ಇಂತಿ ನಿನ್ನ ಪ್ರೇಮಿ...
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications