ದಸರೆ ಕವಿಗೋಷ್ಠಿಗೆ ಸಮಾರೋಪಕ್ಕೆ ಸಜ್ಜು
ಮೈಸೂರು, ಅ. 6: ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅ.6ರಂದು ಮಧ್ಯಾಹ್ನ 3.30 ಗಂಟೆಗೆ ಜಗನ್ಮೋಹನ ಅರಮನೆ ಆವರಣದಲ್ಲಿ ದಸರಾ ಕವಿಗೋಷ್ಠಿಯನ್ನು ಏರ್ಪಡಿಸಲಾಗಿದೆ. ರಾಷ್ಟ್ರಕವಿ ಡಾ: ಜಿ ಎಸ್ ಶಿವರುದ್ರಪ್ಪ ಅಧ್ಯಕ್ಷತೆ ವಹಿಸುವರು.
ಕವಿಗೋಷ್ಠಿಯಲ್ಲಿ ಭಾಗವಹಿಸುವ ಕವಿಗಳೆಂದರೆ
ಡಾ: ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ, ,ಡಾ: ಹೆಚ್. ಜಿ. ಲಕ್ಕಪ್ಪಗೌಡ, ಡಾ: ಮ. ನ. ಜವರಯ್ಯ , ಪ್ರೊ: ಇಟಗಿ ಈರಣ್ಣ , ಡಾ: ಶತಾವಧಾನಿ ಆರ್ ಗಣೇಶ್, ಸಿ.ಕೆ. ಜೋರಾಪುರ, ಕುಮಾರ ನಿಜಗುಣ, ಖಾನಾಸಾಬಾ ಮಾಲಾಸಾಬಾ ಸುಂಕದ, ಶಂಕರ ಬೈಚಬಾಳ, ಡಾ: ಬೋರೇಗೌಡ ಚಿಕ್ಕಮರಳಿ, ಶ್ರೀಮತಿ ಲಲಿತ ಸಿದ್ದಬಸವಯ್ಯ , ಎಲ್ಸಿ ನಾಗರಾಜು, ಶ್ರೀಮತಿ ಸಂಧ್ಯಾದೇವಿ,ಡಾ: ಗೋವಿಂದ ಹೆಗಡೆ, ಶ್ರೀಮತಿ ಕೆ ಎನ್ ಲಾವಣ್ಯ ಪ್ರಭ, ಆನಂದ ಋಗ್ವೇದಿ, ಚಿದಾನಂದ ಸಾಲಿ,
ಕೃಷ್ಣ ಪೈ ಬಜೆಯಂಡ್ಕ , ಎಸ್ ಆರ್ ಗುರುನಾಥ, ತುಳಸಿತನಯ, ಡಾ: ಸರಸ್ವತಿ ಚಿಮ್ಮಲಗಿ, ರಾಧಾಕೃಷ್ಣ ಉಳಿಯತ್ತಡ್ಕ, ಎಲ್ ಎನ್ ಮುಕುಂದರಾಜ್, ಗೊರೂರು ಅನಂತರಾಜು, ದಾಗಿನಕಟ್ಟೆ ನಾಗೇಂದ್ರಪ್ಪ , ಕೃಷ್ಣನಾಯಕ ಹಿಚಕಡ, ಶ್ರೀಮತಿ ರೋಸಿ ಡಿಸೋಜ, ಡಾ: ಪ್ರಕಾಶ ಗ ಖಾಡೆ, ಮುನೀರ್ ಅಹ್ವದ್ ಜಾಮಿ ಹಾಗೂಕೇಕಡ ಚಂಗಪ್ಪ.
ಕಿರಿಯರ ಹಾಗೂ ಯುವ ಕವಿಗಳ ಕವಿಗೋಷ್ಠಿಯ ಯಶಸ್ಸಿನ ನಂತರ ಹಿರಿಯ ಕವಿಗಳ ಹಿತನುಡಿಯನ್ನು ಆಲಿಸಲು ಮೈಸೂರಿನ ಜನ ಕಾತುರದಿಂದ ಕಾಯುತ್ತಿದ್ದಾರೆ.
ದಸರಾ ಅರಳು ಕವಿಗೋಷ್ಠಿ ಕಾವ್ಯ ಸುಧೆ
ನಾದಲೋಕದಲ್ಲಿ ಮಿಂದೆದ್ದ ಮೈಸೂರು ಜನ
ದಸರಾ ಕ್ಕೆ ಸಾರಿಗೆ ಸಂಸ್ಥೆಯಿಂದ 910 ಬಸ್
ಸರ್ಕಾರದ ವಿರುದ್ಧ ದಂಗೆಯೆದ್ದ ಕ್ರೀಡಾ ತರಬೇತಿಗಾರರು












Click it and Unblock the Notifications