ದಸರಾ ಹಬ್ಬದ ಪ್ರಯುಕ್ತ ಸಂಚಾರ ಸೌಲಭ್ಯ ಹೆಚ್ಚಳ
ಬೆಂಗಳೂರು, ಅ. 6 : ದಸರಾ ಹಬ್ಬದ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಅ.7 ರಿಂದ ಅ.9ರ ವರೆಗೆ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ವಿವಿಧ ಸ್ಥಳಗಳಿಗೆ 910 ಹೆಚ್ಚುವರಿ ಬಸ್ ಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.
ಕೆಂಪೇಗೌಡ ಬಸ್ ನಿಲ್ದಾಣದಿಂದ ಮೈಸೂರು ಹಾಗೂ ಧರ್ಮಸ್ಥಳಕ್ಕೆ 200 ಹೆಚ್ಚುವರಿ ಬಸ್ ಗಳನ್ನು ಮೀಸಲಿರಿಸಿದೆ. ಮೈಸೂರು ರಸ್ತೆಯ ಸ್ಯಾಟ್ ಲೈಟ್ ಬಸ್ ನಿಲ್ದಾಣದಿಂದಲೇ ಹೆಚ್ಚುವರಿ ಬಸ್ ಗಳು ಸಂಚರಿಸಲಿವೆ. ಕುಕ್ಕೆ ಸುಬ್ರಮಣ್ಯ, ಶಿವಮೊಗ್ಗ, ಹಾಸನ, ದಾವಣಗೆರೆ, ಮಂಗಳೂರು, ಬಾಗಲಕೋಟೆ, ಚಿಕ್ಕಮಗಳೂರು, ಬೆಳಗಾವಿ, ಹುಬ್ಬಳ್ಳಿ, ವಿಜಾಪುರ, ಗದಗ, ವಾಯುವ್ಯ ಕರ್ನಾಟಕ ಭಾಗದ ಸ್ಥಳಗಳಿಗೆ ಹಾಗೂ ರಾಯಚೂರು, ಗುಲ್ಬರ್ಗಾ, ಬಳ್ಳಾರಿ, ಕೊಪ್ಪಳ, ಗಂಗಾವತಿ, ಹೊಸಪೇಟೆಯ ಈಶಾನ್ಯ ಭಾಗದ ಪ್ರದೇಶಗಳಿಗೆ ಅ. 7 ರಂದು 290 ಬಸ್ ಗಳು, 8 ರಂದು 310 ಬಸ್ ಗಳು ಹಾಗೂಅ. 9 ರಂದು 110 ಬಸ್ ಗಳು ಸಂಚರಿಸಲಿವೆ.
ಶಾಂತಿ ನಗರ ಬಸ್ ನಿಲ್ದಾಣದಿಂದ ಮಧುರೈ, ಕುಂಭಕೋಣಂ, ತಿರುಚ್ಚಿ, ಚೆನ್ನೈ, ಕೊಯಮತ್ತೂರು ಮತ್ತಿತರ ಸ್ಥಳಗಳಿಗೆ ಹೆಚ್ಚುವರಿ ಬಸ್ ಗಳು ಸಂಚರಿಸಲಿವೆ. ಅಲ್ಲದೇ ತಿರುಪತಿ, ವಿಜಯವಾಡ, ಹೈದರಾಬಾದ್ ನಗರಗಳಿಗೆ ಕೆಂಪೇಗೌಡ ನಿಲ್ದಾಣದಿಂದ ಹೆಚ್ಚುವರಿ ಬಸ್ ಗಳು ಸಂಚರಿಸಲಿವೆ ಎಂದು ರಾಜ್ಯ ರಸ್ತೆ ಸಾರಿಗೆ ಪ್ರಕಟಣೆ ತಿಳಿಸಿದೆ.
(ದಟ್ಸ್
ಕನ್ನಡ
ವಾರ್ತೆ)
ದಸರಾ
ಅರಳು
ಕವಿಗೋಷ್ಠಿ
ಕಾವ್ಯ
ಸುಧೆ
ಗ್ಯಾಲರಿ
:
ಮೈಸೂರಲ್ಲಿ
ಜನಪದ
ಜಾತ್ರೆ
ನಾದಲೋಕದಲ್ಲಿ
ಮಿಂದೆದ್ದ
ಮೈಸೂರು
ಜನ
ಕ್ರೀಡಾ
ತರಬೇತಿಗಾರರ
ಪ್ರತಿಭಟನೆ