ಸಾಮಾಜಿಕ ಮಾಧ್ಯಮ ದಿನ: ಬಳಕೆದಾರರನ್ನು ಆಹ್ವಾನಿಸುತ್ತಿದೆ 'ಕೂ' ಹೊಸ ಅಭಿಯಾನ!
ಬೆಂಗಳೂರು, ಜೂ.30: ವಿಶ್ವ ಸಾಮಾಜಿಕ ಮಾಧ್ಯಮ ದಿನವನ್ನು ಆಚರಿಸುತ್ತಾ, ಭಾರತದ ಅತ್ಯಂತ ಆತ್ಮೀಯ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಗಳಲ್ಲಿ ಒಂದಾದ ಕೂ ವೇದಿಕೆ ರೋಮಾಂಚಕ ಅಭಿಯಾನವನ್ನು ಪ್ರಾರಂಭಿಸಿದೆ - #ತುಸುಹೆಚ್ಚುಸಾಮಾಜಿಕವಾಗೋಣ.
ಪ್ರೀತಿ ಇರಲಿ, ಅಪೇಕ್ಷೆ ಇರಲಿ ನಾವು ಭಾರತೀಯರು ಎಲ್ಲಾ ವಿಷಯದಲ್ಲೂ ಒಂದು ಮುಷ್ಟಿ ಹೆಚ್ಚು ತೋರ್ಪಡಿಸುತ್ತೇವೆ ಎನ್ನುವುದನ್ನು ಈ ಅಭಿಯಾನ ಸಾರುತ್ತದೆ. ಒಂದು ಅದ್ಭುತ ವಿಡಿಯೋ ಮೂಲಕ ಜನರು ತಮ್ಮ ಜೀವನದಲ್ಲಿ ಅನುಭವಿಸಿದ ಎಲ್ಲ ಹೆಚ್ಚಿನದನ್ನ ಮೆಲುಕುಹಾಕುವುದನ್ನು ಮತ್ತು ನೈಜ ಸಮಯದಲ್ಲಿ 10 ಭಾಷೆಗಳಲ್ಲಿ ಕೂ ಮಾಡುವ ಮೂಲಕ ತುಸು ಹೆಚ್ಚು ಅಭಿವ್ಯಕ್ತಿಸುವುದನ್ನು ಈ ಅಭಿಯಾನ ಪ್ರೇರೇಪಿಸುತ್ತದೆ.
ತಾಯಿಯೊಂದಿಗಿನ ತುಸು ಹೆಚ್ಚೆನಿಸುವ ನಾಟಕೀಯ ಮಾತುಗಳು, ಸಿನಿಮಾದ ವಿಶೇಷ ಹೆಚ್ಚುವರಿ ಡೈಲಾಗ್ ಗಳು, ಹೆಚ್ಚುವರಿ ನಿದ್ರೆ, ಗೋಲ್ ಗಪ್ಪಾಗಳನ್ನು ಸವಿಯುವಾಗ ಬಾಯಿ ಸೇರುವ ಹೆಚ್ಚುವರಿ ಪಾನಿ ಪೂರಿಗಳು..! ಹೀಗೆ ದಿನನಿತ್ಯದ ಜೀವನದ ಸನ್ನಿವೇಶಗಳು ಮತ್ತು ಸಂಭಾಷಣೆಗಳನ್ನು ಚಿತ್ರಿಸುವ ವಿಡಿಯೋ ಭಾರತೀಯರು ನಲುಮೆಯಿಂದ ಆನಂದಿಸುವ ಹೆಚ್ಚುವರಿಗಳನ್ನು ಆನಂದಗಳನ್ನು ಬಿಂಬಿಸುತ್ತದೆ.

ಬದುಕಿನ ಎಲ್ಲಾ ಹೆಚ್ಚುವರಿ ಆಂಶಗಳನ್ನು ಸಂಭ್ರಮಿಸುತ್ತ ಜೀವಿಸುವ ಬಳಕೆದಾರರನ್ನು ತಮ್ಮ ಸ್ಥಳೀಯ ಭಾಷೆಯಲ್ಲಿ ಅಭಿವ್ಯಕ್ತಪಡಿಸುವ ಮೂಲಕ #ತುಸುಹೆಚ್ಚುಸಾಮಾಜಿಕವಾಗೋಣ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸುತ್ತದೆ. ಕವನಗಳು, ಆಧ್ಯಾತ್ಮಿಕತೆ, ಸಂಗೀತ ಅಥವಾ ಪಾಕವಿಧಾನಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮನ್ನು ತಾವು ವ್ಯಕ್ತಪಡಿಸುವ ಬಳಕೆದಾರರನ್ನು ಕೂ ವೇದಿಕೆ ಒಳಗೊಂಡಿದೆ, ಹಾಗಾಗಿ ಈ ಅಭಿಯಾನ ಇಡೀ ಭಾರತದೊಂದಿಗೆ ಸಂಪರ್ಕವನ್ನು ಸಾಧಿಸುತ್ತದೆ.
ಭಾಷೆಯ ಗಡಿಯನ್ನು ಮೀರಲು ಈ ಅಭಿಯಾನವು ಪ್ರೇರಣೆ ನೀಡುವ ಮೂಲಕ ಇತರ ರಾಜ್ಯಗಳ, ಸಂಸ್ಕೃತಿಗಳ ಜನರೊಂದಿಗೆ ಸಂವಹನ ನಡೆಸಲು ಮತ್ತು ಭಾರತವನ್ನು ಅರಿಯಲು ಕೂ ವೇದಿಕೆ ಆಳವಾದ ಸಾಮಾಜಿಕ ಸಂಪರ್ಕವನ್ನು ನಿರ್ಮಿಸುತ್ತದೆ. ಈಗ ಕೂ ಜೊತೆಗೆ ಭಾರತ ಯಾವಾಗಲೂ ತುಸುಹೆಚ್ಚು ಸಾಮಾಜಿಕವಾಗಿರಲಿದೆ ಎಂಬ ಸಂದೇಶದ ಸುತ್ತ #ತುಸು ಹೆಚ್ಚುಸಾಮಾಜಿಕವಾಗೋಣ ಅಭಿಯಾನವನ್ನು ಹೆಣೆಯಲಾಗಿದೆ.
#ತುಸುಹೆಚ್ಚುಸಾಮಾಜಿಕವಾಗೋಣ - ವೇದಿಕೆಯ ಅಂತರ್ಗತ ಸ್ವರೂಪವನ್ನು ಎತ್ತಿ ತೋರಿಸುತ್ತದೆ, ಇದು ಪ್ರತಿಯೊಬ್ಬ ಇಂಟರ್ನೆಟ್ ಬಳಕೆದಾರರಿಗೆ ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಸಾಮಾಜಿಕ ಮಾಧ್ಯಮವನ್ನು ಅನುಭವಿಸಲು ಮತ್ತು ಆನಂದಿಸಲು ಮುಕ್ತ ಅವಕಾಶ ನೀಡುತ್ತದೆ. ಆರಾಮದಾಯಕ ಭಾಷೆಯಲ್ಲಿ ಮತ್ತು ಆಯ್ಕೆಯ ವಿಷಯದಲ್ಲಿ ವ್ಯಕ್ತಪಡಿಸಲು ಸ್ವಾತಂತ್ರ್ಯವನ್ನೂ ಒದಗಿಸುತ್ತದೆ.
-
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು












Click it and Unblock the Notifications