ಮುತ್ತುವೇಲ್ ಕರುಣಾನಿಧಿ ಸ್ಟಾಲಿನ್ ಬಗ್ಗೆ ಒಂದಿಷ್ಟು ತಿಳಿಯಿರಿ
ಚೆನ್ನೈ, ಮೇ 7: ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಮುಖ್ಯಸ್ಥ, ಶಾಸಕಾಂಗ ಪಕ್ಷದ ನಾಯಕ ಮುತ್ತುವೇಲ್ ಕರುಣಾನಿಧಿ ಸ್ಟಾಲಿನ್ ಅವರು ಇಂದು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ತಮಿಳುನಾಡಿನ ರಾಜ್ಯಪಾಲ ಭನ್ವಾರಿಲಾಲ್ ಪುರೋಹಿತ್ ಅವರು ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ತಮಿಳುನಾಡು ವಿಧಾನಸಭೆ ಚುನಾವಣೆ 2021ರಲ್ಲಿ ಎಐಎಡಿಎಂಕೆ- ಬಿಜೆಪಿ ಮೈತ್ರಿಕೂಟವನ್ನು ಸೋಲಿಸುವ ಮೂಲಕ ಸ್ಟಾಲಿನ್ ನೇತೃತ್ವದಲ್ಲಿ ಡಿಎಂಕೆ ಜಯಭೇರಿ ಬಾರಿಸಿದೆ. ಈ ಮೂಲಕ ದಶಕದ ಬಳಿಕ ಡಿಎಂಕೆ ಅಧಿಕಾರ ಪಡೆದುಕೊಂಡಿದೆ. ಏಪ್ರಿಲ್ 6ರಂದು ನಡೆದ ಚುನಾವಣೆಯಲ್ಲಿ ಡಿಎಂಕೆ ಮೈತ್ರಿಕೂಟವು 234 ಸ್ಥಾನಗಳ ಪೈಕಿ ಡಿಎಂಕೆ 133 ಸ್ಥಾನ ಗಳಿಸಿದರೆ, ಕಾಂಗ್ರೆಸ್ 18 ಸ್ಥಾನ, ವಿಸಿಕೆ 4 ಹಾಗೂ ಎಡಪಕ್ಷಗಳು ತಲಾ 2 ಸ್ಥಾನ ಗಳಿಸಿವೆ. ಎಐಎಡಿಎಂಕೆ 66, ಬಿಜೆಪಿ 4 ಸ್ಥಾನ ಪಡೆದುಕೊಂಡಿವೆ.

ಎಂಕೆ ಸ್ಟಾಲಿನ್ ಬಗ್ಗೆ ಸಂಕ್ಷಿಪ್ತ ಮಾಹಿತಿ
1. ಎಂಕೆ ಸ್ಟಾಲಿನ್ ಪೂರ್ತಿ ಹೆಸರು-ಮುತ್ತುವೇಲ್ ಕರುಣಾನಿಧಿ ಸ್ಟಾಲಿನ್. ಸೋವಿಯೆಟ್ ಯೂನಿಯನ್ ನಾಯಕ ಜೋಸೆಫ್ ಸ್ಟಾಲಿನ್ ಸ್ಮರಣೆಯಲ್ಲಿ ಮುತ್ತುವೇಲ್ ಅವರಿಗೆ ಸ್ಟಾಲಿನ್ ಹೆಸರನ್ನಿಡಲಾಗಿದೆ.
2. ಸ್ಟಾಲಿನ್ ಹೆಸರು ವಿವಾದಕ್ಕೆ ಕಾರಣವಾಗಿ, ಮುತ್ತುವೇಲ್ ಅವರ ಪುತ್ರನಿಗೆ ಅನೇಕ ಶಾಲೆಯಲ್ಲಿ ಪ್ರವೇಶ ಸಿಕ್ಕಿರಲಿಲ್ಲ. ಕೊನೆಗೆ ಮದ್ರಾಸ್ ಕ್ರಿಶ್ಚಿಯನ್ ಕಾಲೇಜ್ ಶಾಲೆಯಲ್ಲಿ ದಾಖಲಾದರು.

ಕರುಣಾನಿಧಿ ಅವರ ಮೂರನೇ ಪುತ್ರ
3. ಎಂಕೆ ಕರುಣಾನಿಧಿ ಅವರ ಎರಡನೇ ಪತ್ನಿ ದಯಾಳು ಅಮ್ಮಾಳ್ ಅವರ ಪುತ್ರ ಮುತ್ತುವೇಲ್, ಕರುಣಾನಿಧಿ ಅವರ ಮೂರನೇ ಪುತ್ರ.
4. ಎಂಕೆ ಸ್ಟಾಲಿನ್ ಅವರಿಗೆ ಎಂ.ಕೆ ಅಳಗಿರಿ ಸೇರಿದಂತೆ ಇಬ್ಬರು ಸೋದರರು, ಕನ್ನಿಮೋಳಿ ಸೇರಿದಂತೆ ಇಬ್ಬರು ಸೋದರಿಯರಿದ್ದಾರೆ.
5. 14ನೇ ವಯಸ್ಸಿಗೆ ಎಂಕೆ ಸ್ಟಾಲಿನ್ ರಾಜಕೀಯ ರಂಗಕ್ಕೆ ಧುಮುಕಿದರು. 1967ರ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡರು.

1975ರಲ್ಲಿ ಸ್ಟಾಲಿನ್ ವಿವಾಹ
6.1975ರಲ್ಲಿ ದುರ್ಗಾ ಅವರನ್ನು ವರಿಸಿದ ಸ್ಟಾಲಿನ್ ಅವರಿಗೆ ಇಬ್ಬರು ಮಕ್ಕಳು. ಉದಯನಿಧಿ ಹಾಗೂ ಸೆಂಥಾಮರೈ.
7. 1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ಇದಕ್ಕಾಗಿ ಬಂಧನಕ್ಕೊಳಪಟ್ಟಿದ್ದರು.
8. ಕ್ರೀಡೆ, ಕಲೆ, ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಾ ಬಂದಿರುವ ಸ್ಟಾಲಿನ್ ಅವರು ಕ್ರಿಕೆಟ್, ಬಾಡ್ಮಿಂಟನ್ ಹಾಗೂ ಚೆಸ್ ಆಡಲು ಇಷ್ಟಪಡುತ್ತಾರೆ.

ತಮಿಳುನಾಡಿನ ಡಿಸಿಎಂ ಆಗಿದ್ದರು
9. 1996 ರಿಂದ 2002ರ ಅವಧಿಯಲ್ಲಿ ಎಂಕೆ ಸ್ಟಾಲಿನ್ ಚೆನ್ನೈ ನಗರದ ಮೇಯರ್ ಆಗಿ ಕಾರ್ಯ ನಿರ್ವಹಿಸಿದ್ದರು.
10. 2009ರಿಂದ 2011ರ ಅವಧಿಯಲ್ಲಿ ತಮಿಳುನಾಡಿನ ಡಿಸಿಎಂ ಆಗಿದ್ದರು. ಇದಾದ ಬಳಿಕ ಡಿಎಂಕೆ ಅಧಿಕಾರಕ್ಕೆ ಬಂದಿರಲಿಲ್ಲ. ಡಿಸಿಎಂ ಪದವಿ ಬಳಿಕ ಸಿಎಂ ಪದವಿಗೇರಿದ್ದಾರೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications