ಭಾರತದಲ್ಲಿ ಕಳೆದ 10 ವರ್ಷದಲ್ಲಿ ಅತಿಹೆಚ್ಚು ಹುಲಿಗಳ ಸಾವು
ಕಾಡುಗಳಲ್ಲಿ ತಡರಾತ್ರಿ ಬೇಟೆಯಾಡಿ ಹೊಟ್ಟೆ ತುಂಬಿಸಿಕೊಂಡು ಹಗಲಿನಲ್ಲಿ ಆರಾಮವಾಗಿ ಮಲುಗುವ ಪ್ರಾಣಿ ಎಂದರೆ ಅದು ಹುಲಿ ಆಗಿದೆ. ಕಾಡಿನಲ್ಲಿ ಹೆಚ್ಚು ಬೇಟೆ ಆಡುವ ಬಲಿಷ್ಠವಾಗಿರುವ ಪ್ರಾಣಿ ಹುಲಿ, ಈ ಪ್ರಾಣಿ ತನ್ನ ಕೈಯಿಗೆ ಸಿಗುವ ಪ್ರಾಣಿಗಳನ್ನು ಕೊಂದು, ತಿಂದುಹಾಕಿ ಹೊಟ್ಟೆ ತುಂಬಿಸಿಕೊಳ್ಳತ್ತದೆ. ಹಸಿವು ತಾಳಲಾರದೆ ಬೇಟೆಯಾಡಲು ಹೊಂಚು ಹಾಕುತ್ತದೆ. ಕಾಡಿನಲ್ಲಿ ಬಲಿಷ್ಠ ಪ್ರಾಣಿ ಎಂದು ಕೆರಯುವ ಹುಲಿಗಳ ಬಗ್ಗೆ ಈಗ ಚಿಂತಾಜನಕವಾಗಿದೆ.
ಹೌದು ಒಂದು ಶತಮಾನದ ಹಿಂದೆ ಸುಮಾರು 1 ಲಕ್ಷ ಹುಲಿಗಳು ಪ್ರಪಂಚದಾದ್ಯಂತ ಕಾಡುಗಳನ್ನು ಆಳಿದವು. ಆದರೆ 21ನೇ ಶತಮಾನದ ಹೊತ್ತಿಗೆ ಕೇವಲ 13 ದೇಶಗಳಲ್ಲಿ ಹುಲಿಗಳ ಸಂಖ್ಯೆ 4 ಸಾವಿರಕ್ಕೂ ಹೆಚ್ಚು ಹುಲಿಗಳು ಇರುವುದೇ ಹೆಚ್ಚು ಎಂದು ವರದಿಗಳು ಇವೆ. ಹೀಗಿರುವಾಗ ಹುಲಿ ಇಂದು ಅಂತರಾಷ್ಟ್ರೀಯ ಹುಲಿ ದಿನವನ್ನು ಆಚರಿಸಿಕೊಳ್ಳುತ್ತಿದ್ದೇವೆ.
ಸಂರಕ್ಷಣೆಯ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಜುಲೈ 29ರಂದು ಅಂತರರಾಷ್ಟ್ರೀಯ ಹುಲಿ ದಿನವನ್ನು ಆಚರಿಸಲಾಗುತ್ತಿದೆ ಆದರೆ, ಇಂದು ನಾವು ಹುಲಿಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೌದು ಅಂತರರಾಷ್ಟ್ರೀಯ ಹುಲಿ ದಿನ ವರದಿಗಳ ಪ್ರಕಾರ, ಭಾರತವು ಕಳೆದ 10 ವರ್ಷಗಳಲ್ಲಿ 1,000ಕ್ಕೂ ಹೆಚ್ಚು ಹುಲಿಗಳನ್ನು ಕಳೆದುಕೊಂಡಿದೆ! ಅರಣ್ಯನಾಶ, ಬೇಟೆಯಾಡುವುದು, ಅವುಗಳ ಆವಾಸಸ್ಥಾನದಲ್ಲಿನ ಇಳಿಕೆ, ಆನುವಂಶಿಕ ವೈವಿಧ್ಯತೆ, ಆಕಸ್ಮಿಕವಾಗಿ ವಸತಿ ಪ್ರದೇಶಗಳಿಗೆ ಪ್ರವೇಶಿಸುವುದರಿಂದ ಕೊಲ್ಲಲ್ಪಡುವುದು, ಹುಲಿ ಪ್ರವಾಸೋದ್ಯಮ ಇವು ಹುಲಿ ಕಡಿಮೆಹಯಾಗಲು ಮುಖ್ಯ ಕಾರಣವಾಗಿವೆ.

ಬೇಟೆಯಿಂದಾಗಿ ಪ್ರಾಣ ಕಳೆದುಕೊಂಡ 193 ಹುಲಿಗಳು
ಈ ಅದ್ಭುತ ಪ್ರಾಣಿಯ ಬಗ್ಗೆ ಜಾಗೃತಿ ಮೂಡಿಸಲು ಜುಲೈ 29ರಂದು ವಿಶ್ವವು ಇಂದು ಅಂತರರಾಷ್ಟ್ರೀಯ ಹುಲಿ ದಿನವನ್ನು ಆಚರಿಸುತ್ತಿದೆ ಆದರೆ 2012-2020ರ ಅವಧಿಯಲ್ಲಿ ಭಾರತವು 1,059 ಹುಲಿಗಳನ್ನು ಕಳೆದುಕೊಂಡಿದೆ! ಎಂದು ಸರ್ಕಾರದ ಅಂಕಿ-ಅಂಶಗಳು ಬಹಿರಂಗಪಡಿಸಿವೆ. 'ಹುಲಿ ರಾಜ್ಯ' ಎಂದು ಕರೆಯಲ್ಪಡುವ ಮಧ್ಯಪ್ರದೇಶ ದೇಶವು ಅತಿ ಹೆಚ್ಚು ಪಟ್ಟೆ ಹೊಂದಿದ ಬೆಕ್ಕುಗಳು(ಹುಲಿ) ಸಾವು ದಾಖಲೆಯಾಗಿರುವುದು ದೇಶಕ್ಕೆ ನಷ್ಟವಾಗಿದೆ.

ಹುಲಿಗಳ ಸಾವುಗಳು
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ಟಿಸಿಎ) ಪ್ರಕಾರ, ಈ ವರ್ಷದಲ್ಲಿ ಇದುವರೆಗೆ 75 ಹುಲಿಗಳು ಸಾವನ್ನಪ್ಪಿದ್ದರೆ, ಕಳೆದ ವರ್ಷ 127 ಹುಲಿಗಳು ಸಾವನ್ನಪ್ಪಿವೆ, ಇದು 2012-2022 ಅವಧಿಯಲ್ಲಿ ಅತಿ ಹೆಚ್ಚು ಹುಲಿಗಳನ್ನು ಭಾರತವು ನಮ್ಮ ದೇಶದ ರಾಷ್ಟ್ರ ಪ್ರಾಣಿಯಾಗಿರುವ ಹುಲಿಗಳನ್ನು ಕಳೆದುಕೊಂಡಿದ್ದೇವೆ.
2020-106
2019-96
2018-101
2017-117
2016-121
2015-82
2014-78
2013-68
2012-88
2022-75

ರಾಜ್ಯವಾರು ಅಂಕಿ ಅಂಶಗಳು:
6 ಹುಲಿಯ ಸಂರಕ್ಷಿತ ಪ್ರದೇಶಗಳನ್ನು ಹೊಂದಿರುವ ಮಧ್ಯಪ್ರದೇಶವು 10 ವರ್ಷಗಳ ಅವಧಿಯಲ್ಲಿ ಗರಿಷ್ಠ ಸಂಖ್ಯೆಯ (270) ಸಾವುಗಳನ್ನು ದಾಖಲಿಸಿದೆ.
ಎಂಪಿ ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ (183), ಕರ್ನಾಟಕ (150), ಉತ್ತರಾಖಂಡ (96), ಅಸ್ಸಾಂ (72), ತಮಿಳುನಾಡು (66), ಉತ್ತರ ಪ್ರದೇಶ (56) ಮತ್ತು ಕೇರಳ (55).
ರಾಜಸ್ಥಾನ, ಬಿಹಾರ, ಪಶ್ಚಿಮ ಬಂಗಾಳ, ಛತ್ತೀಸ್ಗಢ ಮತ್ತು ಆಂಧ್ರಪ್ರದೇಶದಲ್ಲಿ ಕ್ರಮವಾಗಿ 25, 17, 13, 11 ಮತ್ತು 11 ಹುಲಿಗಳು ಸಾವನ್ನಪ್ಪಿವೆ.
ಕಳೆದ ಒಂದೂವರೆ ವರ್ಷಗಳಲ್ಲಿ ಮಧ್ಯಪ್ರದೇಶ 68 ಹುಲಿಗಳನ್ನು ಕಳೆದುಕೊಂಡಿದ್ದರೆ, ಮಹಾರಾಷ್ಟ್ರದಲ್ಲಿ ಈ ಅವಧಿಯಲ್ಲಿ 42 ಹುಲಿಗಳು ಸಾವನ್ನಪ್ಪಿವೆ.
2018ರ ಹುಲಿ ಗಣತಿಯಲ್ಲಿ, ಮಧ್ಯಪ್ರದೇಶವು 526 ಹುಲಿಗಳೊಂದಿಗೆ ಭಾರತದ 'ಹುಲಿ ರಾಜ್ಯ'ವಾಗಿ ಹೊರಹೊಮ್ಮಿದೆ. ನಂತರ ಕರ್ನಾಟಕವು 524 ಹುಲಿಗಳನ್ನು ಹೊಂದಿದೆ.
ಹುಲಿಗಳ ಸಾವಿಗೆ ಬೇಟೆಯಾಡುವಿಕೆಯು ದೊಡ್ಡ ಕಾರಣವಾಗಿ ಉಳಿದಿದೆ.
ಮಾಹಿತಿ ಪ್ರಕಾರ, 2012-2020ರ ಅವಧಿಯಲ್ಲಿ 193 ಹುಲಿಗಳು ಬೇಟೆಯಿಂದಾಗಿ ಸಾವನ್ನಪ್ಪಿವೆ. ಜನವರಿ 2021 ರಿಂದ ಬೇಟೆಯಾಡುವಿಕೆಯಿಂದಾಗಿ ಸಾವಿನ ಡೇಟಾ ಇನ್ನೂ ಲಭ್ಯವಿಲ್ಲ.
ಅಧಿಕಾರಿಗಳು 108 ಹುಲಿಗಳ ಸಾವಿಗೆ "ಸೆಳೆತ" ಕಾರಣವೆಂದು ಗುರುತಿಸಿದ್ದಾರೆ, ಆದರೆ ಈ ಅವಧಿಯಲ್ಲಿ "ಅಸ್ವಾಭಾವಿಕ" ಕಾರಣಗಳಿಂದ 44 ದೊಡ್ಡ ಬೆಕ್ಕುಗಳು ಸತ್ತವು.
NTCA ಪ್ರಕಾರ, ಆರಂಭದಲ್ಲಿ ಎಲ್ಲಾ ಹುಲಿಗಳ ಸಾವಿಗೆ ಬೇಟೆಯಾಡುವಿಕೆಯು ಕಾರಣವೆಂದು ಪರಿಗಣಿಸಲಾಗಿದೆ.
ಮರಣೋತ್ತರ ಪರೀಕ್ಷೆಯ ವರದಿಗಳು, ವಿಧಿವಿಜ್ಞಾನ ಮತ್ತು ಪ್ರಯೋಗಾಲಯದ ವರದಿಗಳು ಮತ್ತು ಸಾಂದರ್ಭಿಕ ಪುರಾವೆಗಳಂತಹ ಪೂರಕ ವಿವರಗಳನ್ನು ನಿರ್ದಿಷ್ಟ ಪ್ರಕರಣವನ್ನು "ನೈಸರ್ಗಿಕ", "ಬೇಟೆಯಾಡುವುದು" ಅಥವಾ "ಅಸ್ವಾಭಾವಿಕ ಆದರೆ ಬೇಟೆಯಾಡುವುದು ಅಲ್ಲ" ಎಂದು ಮುಚ್ಚಲು ಸಂಗ್ರಹಿಸಲಾಗುತ್ತದೆ. ಪ್ರಕರಣವನ್ನು ಸ್ವಾಭಾವಿಕ ಅಥವಾ ಕಳ್ಳಬೇಟೆ ಎಂದು ಸಾಬೀತುಪಡಿಸುವ ಜವಾಬ್ದಾರಿ ರಾಜ್ಯದ ಮೇಲಿದೆ. ಯಾವುದೇ ಸಂದೇಹವಿದ್ದಲ್ಲಿ ಸಾಕ್ಷ್ಯಾಧಾರಗಳ ಹೊರತಾಗಿಯೂ, ಬೇಟೆಯಾಡುವುದನ್ನು ಸಾವಿಗೆ ಕಾರಣವೆಂದು ಹೇಳಲಾಗುತ್ತದೆ.

ಹುಲಿ ಚತುರ್ಭುಜ ಪ್ರಾಣಿ
ಹುಲಿ ಸಸ್ತನಿ ಪ್ರಾಣಿಯಾಗಿದೆ. ಏಕೆಂದರೆ, ಇದು ಮಾನವರಂತೆಯೇ ಶಿಶುಗಳಿಗೆ ಜನ್ಮ ನೀಡುತ್ತದೆ.
ಹುಲಿ ಮಾಂಸಾಹಾರಿ ಪ್ರಾಣಿ.
ಹುಲಿ ರಾತ್ರಿ ಸಮಯದಲ್ಲಿ ಬೇಟೆಯಾಡುತ್ತದೆ ಮತ್ತು ಹಗಲಿನಲ್ಲಿ ಮಲಗುತ್ತದೆ.
ಹುಲಿಯ ದೇಹವು 7ರಿಂದ 10 ಅಡಿ ಉದ್ದವಿರುತ್ತದೆ.
ಭಾರತೀಯ ಹುಲಿಯ ದೇಹದ ಬಣ್ಣವು ಹಳದಿ ಮತ್ತು ಕಂದು ಮಿಶ್ರಣವಾಗಿದೆ ಮತ್ತು ಹುಲಿಯ ಮೇಲೆ ಕಪ್ಪು ಪಟ್ಟೆಗಳಿವೆ.
ಹುಲಿಗೆ ಎರಡು ಕಣ್ಣುಗಳು ಮತ್ತು ಎರಡು ಕಿವಿಗಳು, ಉದ್ದವಾದ ಬಾಲವಿದೆ.
ಹುಲಿ ಕಾಡು, ಹುಲ್ಲುಗಾವಲು, ಕಾಡುಗಳಲ್ಲಿ ಏಕಾಂಗಿಯಾಗಿರಲು ಇಷ್ಟಪಡುತ್ತದೆ.
ಇದರ ಮುಖ್ಯ ಆಹಾರವೆಂದರೆ ಚಿತಾಲ್, ಜಿಂಕೆ, ಕಾಡುಹಂದಿ, ಎಮ್ಮೆ, ಸಾಂಬಾರ್ ಜಿಂಕೆ, ಕೃಷ್ಣ ಮೃಗ, ಮೇಕೆ ಮುಂತಾದ ಪ್ರಾಣಿಗಳು.
Recommended Video
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications