ನಟಿ ರಮ್ಯಾಗೆ ಎಂಗೇಜ್ಮೆಂಟ್ ಆಗೋಯ್ತಾ? ಸುಳಿವು ಕೊಡ್ತು ಸ್ಪೆಷಲ್ ಉಂಗುರ
ಸ್ಯಾಂಡಲ್ವುಡ್ ನಟಿ ಮೋಹಕತಾರೆ ರಮ್ಯಾ ಅವರು ಸಿನಿಮಾಗಳಿಂದ ದೂರ ಉಳಿದಿದ್ದರೂ ಅಭಿಮಾನಿಗಳಿಂದ ದೂರ ಉಳಿಯಲಿಲ್ಲ. ರಮ್ಯಾ ಎಂದ ಕೂಡಲೇ ಈಗಲೂ ಡ್ರೀಮ್ ಗರ್ಲ್ ಎನ್ನುವವರು ಈಗಲೂ ಇದ್ದಾರೆ. ಸದ್ಯ ಅವರು ಈಗ ಸಿನಿಮಾಗಳಲ್ಲಿ ನಟಿಸುತ್ತಿಲ್ಲವಾದರೂ ಅವರ ಹವಾ ಕಡಿಮೆಯೇನಿಲ್ಲ. ರಮ್ಯಾ ಮದುವೆ ವಿಚಾರ ಕೂಡ ಹಲವು ವರ್ಷಗಳಿಂದ ಟಾಕ್ ಆಫ್ ದಿ ಟೌನ್ ಆಗಿದೆ.
ರಮ್ಯಾ ಅವರು ಕಾಣಿಸಿಕೊಂಡಾಗಲೆಲ್ಲ ಮತ್ತೆ ಸಿನಿಮಾ ಯಾವಾಗ? ನಿಮ್ಮ ಮದುವೆ ಯಾವಾಗ? ಎನ್ನುವ ಪ್ರಶ್ನೆಯೇ ಎದುರಾಗುತ್ತಿತ್ತು. ಇದೀಗ ರಮ್ಯಾ ಅವರು ಸದ್ದಿಲ್ಲದೆ ಎಂಗೇಜ್ಮೆಂಟ್ ಆಗಿದ್ದಾರಾ? ಎನ್ನುವ ಅನುಮಾನ ವ್ಯಕ್ತವಾಗಿದೆ. ಇದಕ್ಕೆ ಕಾರಣ ಅವರ ಕೈಯಲ್ಲಿದ್ದ ಸ್ಪೆಷಲ್ ಉಂಗುರ. ಈ ಬಗ್ಗೆ ನಟಿ ರಮ್ಯಾ ಅವರು ಏನು ಹೇಳಿದ್ರು? ಅಂತಾ ಇಲ್ಲಿ ತಿಳಿಯಿರಿ..ಈ ಸಂಬಂಧ ವಿಡಿಯೋ ವೈರಲ್ ಆಗಿದೆ.

ಇತ್ತೀಚೆಗೆ ನಟಿ ರಕ್ಷಿತಾ ಪ್ರೇಮ್ ಅವರ ಸಹೋದರ ರಾಣಾ ಮದುವೆ ಕಾರ್ಯಕ್ರಮದಲ್ಲಿ ರಮ್ಯಾ ಭಾಗಿಯಾಗಿದ್ದರು. ಈ ವೇಳೆ ರಕ್ಷಿತಾ ಅವರಿಗೆ ರಮ್ಯಾ ಅವರು ತಮ್ಮ ಕೈಯಲ್ಲಿ ಧರಿಸಿದ್ದ ಸ್ಪೆಷಲ್ ಉಂಗುರ ತೋರಿಸಿದ್ದರು. ಇದನ್ನು ಕಂಡ ರಕ್ಷಿತಾ ಕೂಡ ಶಾಕ್ ಆಗಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ರಮ್ಯಾ ಅವರು ಸೈಲೆಂಟಾಗಿ ಎಂಗೇಜ್ಮೆಂಟ್ ಆಗಿಬಿಟ್ರಾ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ರಮ್ಯಾ ಅವರು ಮದುವೆ ವಿಚಾರಕ್ಕೆ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಆಗ ಅವರು ಮುಗುಳ್ನಗುತ್ತಾ ಏನನ್ನೂ ಹೇಳದೆ ಹೊರಟು ಹೋಗುತ್ತಿದ್ದರು. ಈಗ ರಮ್ಯಾ ಅವರ ಉಂಗುರದ ಬಗ್ಗೆ ಚರ್ಚೆಗಳು ಜೋರಾಗಿ ನಡೆಯುತ್ತಿದೆ. ರಮ್ಯಾ ಅವರು ಯಾರಿಗೂ ಹೇಳದೆ ಗುಟ್ಟಾಗಿ ಎಂಗೇಜ್ಮೆಂಟ್ ಮಾಡಿದ್ದಾರಾ? ಎಂದು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ಇನ್ನು ಈ ಬಗ್ಗೆ ರಮ್ಯಾ ಅವರನ್ನು ಮಾಧ್ಯಮದವರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ರಮ್ಯಾ ಏನು? ನನ್ನ ಉಂಗುರದ ಬಗ್ಗೆ ಚರ್ಚೆಯಾಗುತ್ತಿದೆಯಾ? ಯಾಕೆ? ಎಂದು ಶಾಕ್ ಆಗಿ ನಕ್ಕಿದ್ದಾರೆ. ರಮ್ಯಾ ಅವರು ಎಂಗೇಜ್ಮೆಂಟ್ ಆಗಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಕ್ಕೆ ರಮ್ಯಾ ಅವರು ಏನೂ ಮಾತನಾಡದೆ ಮೌನದ ಉತ್ತರ ಕೊಟ್ಟಿದ್ದಾರೆ.
ನಿಮ್ಮ ಮದುವೆ ಯಾವಾಗ ಅಂದಾಗಲೂ ನಾನಿನ್ನೂ ಅದರ ಬಗ್ಗೆ ಡಿಸೈಡ್ ಮಾಡಿಲ್ಲ. ಈ ಬಗ್ಗೆ ಪ್ರಶ್ನೆಗಳನ್ನ ಕೇಳ್ಬೇಡಿ ಎಂದು ಮಾಧ್ಯಮದವರಿಗೆ ಹೇಳಿದ್ದಾರೆ. ಮದುವೆಯಾದರೆ ಮಾತ್ರ ಅಭಿಮಾನಿಗಳಿಗೆ ಸಿಹಿಯೂಟ ಕೊಡಬೇಕಾ? ಬೇಕಾದ್ರೆ ನಾನು ಹಾಗೆಯೇ ಸಿಹಿಯೂಟ ಹಾಕಿಸುತ್ತೇನೆ. ಯಾವಾಗ ಬೇಕಾದರೂ ಊಟ ಮಾಡಬಹುದು, ಇದಕ್ಕಾಗಿ ಮದುವೆ ಆಗಬೇಕು ಎಂದೇನಿಲ್ಲ ಎಂದೂ ರಮ್ಯಾ ಹೇಳಿದ್ದಾರೆ.

ಅಲ್ಲದೆ ದರ್ಶನ್ ಅವರ ಕೇಸ್ ಬಗ್ಗೆ ರಮ್ಯಾ ಅವರನ್ನು ಪ್ರಶ್ನೆ ಕೇಳಲಾಯಿತು. ಈ ಬಗ್ಗೆ ನಾನು ಮಾತನಾಡೋದಿಲ್ಲ ಎಂದು ರಮ್ಯಾ ನೇರವಾಗಿ ಹೇಳಿದ್ದಾರೆ. ರಮ್ಯಾ ಅವರು ರಕ್ಷಿತಾ ಸಹೋದರನ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
-
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ -
Dhurandhar 2: ಬಾಕ್ಸ್ ಆಫೀಸ್ನಲ್ಲಿ 'ಧುರಂಧರ್ 2' ಸುನಾಮಿ: 3 ದಿನಕ್ಕೆ 500 ಕೋಟಿ ಕ್ಲಬ್ ಸೇರಿದ ರಣವೀರ್ ಸಿಂಗ್ ಸಿನಿಮಾ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ?












Click it and Unblock the Notifications