ಮಕ್ಕಳಿಗಾಗಿ ಊರಿನವರೇ ನಿರ್ಮಿಸಿಕೊಟ್ಟರು ಸರ್ಕಾರಿ ಶಾಲೆ; ಪ್ರತಿ ಕುಟುಂಬದಿಂದ 500 ರೂ. ಕೊಡುಗೆ!
ಭಾರತದ ಬಹುತೇಕ ರಾಜ್ಯಗಳಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿಯು ಶೋಚನೀಯವಾಗಿದೆ. ಕರ್ನಾಟಕದಲ್ಲೂ ಹೇಳಿಕೊಳ್ಳುವಷ್ಟು ಉತ್ತಮವಾಗಿ ಏನು ಇಲ್ಲ. ಕರ್ನಾಟಕದ ಹಲವು ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ಹಾಗೂ ಕಟ್ಟಡಗಳ ಸ್ಥಿತಿಯು ದಯನೀಯವಾಗಿದೆ. ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳು ದಯಾನೀಯ ಪರಿಸ್ಥಿತಿಯಲ್ಲಿ ಇರುವಂತೆಯೇ ದೇಶದ ವಿವಿಧ ರಾಜ್ಯಗಳಲ್ಲೂ ಪರಿಸ್ಥಿತಿ ಇದೇ ರೀತಿ ಇದೆ. ಇದೀಗ ಮಕ್ಕಳಿಗಾಗಿ ಊರಿನವರೇ ಸೇರಿಕೊಂಡು ಸರ್ಕಾರಿ ಶಾಲೆಯೊಂದನ್ನು ಕಟ್ಟಿಕೊಟ್ಟಿದ್ದಾರೆ. ಅಲ್ಲದೆ ಪ್ರತಿ ಕುಟುಂಬದಿಂದ ತಲಾ 500 ರೂಪಾಯಿ ದೇಣಿಗೆಯನ್ನು ಸಹ ಸಂಗ್ರಹಿಸಲಾಗಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.
ಜನರು ತಮ್ಮ ಸ್ವಂತ ಹಣದಿಂದ ಸರ್ಕಾರಿ ಶಾಲೆಗಳನ್ನು ಕಟ್ಟುವ ಪರಿಸ್ಥಿತಿ ಬಂದರೆ, ಅದು ಸಮಾಜದ ಸೇವಾ ಮನೋಭಾವಕ್ಕಿಂತಲೂ ನಮ್ಮ ಆಡಳಿತ ವ್ಯವಸ್ಥೆಯ ವೈಫಲ್ಯವನ್ನು ತೋರಿಸುವ ಎಚ್ಚರಿಕೆಯ ಗಂಟೆಯಾಗಿದೆ ಎಂದೇ ನೆಟ್ಟಿಗರು ಹೇಳಿದ್ದಾರೆ. ಈ ಬೆಳವಣಿಗೆ ನಡೆದಿದ್ದು ಮಧ್ಯಪ್ರದೇಶದ ದಿಂಡೋರಿಯಲ್ಲಿ. ಇಲ್ಲಿನ ಸರ್ಕಾರಿ ಸರ್ಕಾರಿ ಪ್ರಾಥಮಿಕ ಶಾಲೆ ಬಿದ್ದಾಗ ಅದು ಅಸುರಕ್ಷಿತವಾಗಿ ಪರಿಣಮಿಸಿತು. ಹೊಸ ಕಟ್ಟಡವನ್ನು ನಿರ್ಮಾಣ ಮಾಡುವ ಭರವಸೆಯನ್ನು ಸರ್ಕಾರ ನೀಡಿತ್ತು. ಆದರೆ ಪದೇ ಪದೇ ಸ್ಥಳೀಯರು ವಿನಂತಿ ಮಾಡಿ - ವರ್ಷಗಳ ಕಾಲ ಕಾಯುವಿಕೆಯ ಹೊರತಾಗಿಯೂ, ಸರ್ಕಾರಿ ಶಾಲೆ ನಿರ್ಮಾಣ ಕಾರ್ಯ ಪ್ರಗತಿ ಕಾಣುತ್ತಿರಲಿಲ್ಲ.

ಇದನ್ನು ನೋಡಿದ ಗ್ರಾಮಸ್ಥರೇ ಸರ್ಕಾರಿ ಶಾಲೆ ನಿರ್ಮಾಣ ಮಾಡುವುದಕ್ಕೆ ಮುಂದಾದರು. ಅದನ್ನು ಸಾಧಿಸಿದರು ಸಹ. ಸರ್ಕಾರಿ ಶಾಲೆ ನಿರ್ಮಾಣ ಮಾಡುವುದಕ್ಕೆ ಪ್ರತಿ ಕುಟುಂಬದಿಂದ 500 ರೂಪಾಯಿ ಸಂಗ್ರಹ ಮಾಡಲಾಯಿತು. ಸ್ಥಳೀಯ ಯುವಕರು, ಹಿರಿಯರು ಮತ್ತು ನುರಿತ ಕೆಲಸಗಾರರು ತಮ್ಮ ಸಮಯ ಮತ್ತು ಶ್ರಮವನ್ನು ಸ್ವಯಂಪ್ರೇರಿತರಾಗಿ ನೀಡಿದರು. ಒಟ್ಟಾರೆ, ಗ್ರಾಮದ ಮಕ್ಕಳಿಗಾಗಿ ಗ್ರಾಮಸ್ಥರೇ ಸೇರಿ ಸರ್ಕಾರಿ ಶಾಲೆಯೊಂದನ್ನು ನಿರ್ಮಾಣ ಮಾಡಿದರು. ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಅವರ ಬದ್ಧತೆಯು ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿದೆ.
ಸರ್ಕಾರಿ ಶಾಲೆಯನ್ನು ಯಾರೂ ದತ್ತಿ ಯೋಜನೆಯ ಭಾಗವಾಗಿ ತೆಗೆದುಕೊಳ್ಳಲಿಲ್ಲ. ಅದಕ್ಕಿಂತ ದೊಡ್ಡ ಮಟ್ಟದಲ್ಲಿ ಜನ ಈ ಯೋಜನೆಗೆ ಕೈ ಜೋಡಿಸಿದ್ದಾರೆ. ಭಾರತದ ದೊಡ್ಡ ಶಕ್ತಿ ಯಾವಾಗಲೂ ನಮ್ಮ ದೇಶದ ಜನರು ಎಂದು ಇದು ನಮಗೆ ನೆನಪಿಸುತ್ತದೆ. ಸರ್ಕಾರಗಳು ವಿಫಲವಾದಾಗ ಸಾಮಾನ್ಯ ನಾಗರಿಕರು ಮುಂದೆ ಬರುತ್ತಾರೆ. ಆದರೆ ಯಾವುದೇ ಮಗು ತರಗತಿಯನ್ನು ಹೊಂದಲು ಸಮುದಾಯ ನಿಧಿಸಂಗ್ರಹವನ್ನು ಅವಲಂಬಿಸಬೇಕಾಗಿಲ್ಲ.
ಶಾಲಾ ಕಟ್ಟಡಕ್ಕೆ ಕೊಡುಗೆ ನೀಡುವುದು ಮತ್ತು ಮನೆಯ ವೆಚ್ಚಗಳನ್ನು ಪೂರೈಸುವುದರ ನಡುವೆ ಯಾವುದೇ ಪೋಷಕರು ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ಈ ವಿಡಿಯೋವನ್ನು ನೋಡಿರುವ ಹಲವರು ಅಭಿಪ್ರಾಯಪಟ್ಟಿದ್ದಾರೆ. ಯಾವುದೇ ಹಳ್ಳಿಯ ಜನರಿಗೂ ಈ ರೀತಿಯ ಸವಾಲು ಎದುರಾಗಬಾರದು. ದಿಂಡೋರಿಯ ಜನರು ಏಕತೆ, ಸಹಾನುಭೂತಿ ಮತ್ತು ಸಾಮೂಹಿಕ ಜವಾಬ್ದಾರಿಯನ್ನು ಏನನ್ನು ಸಾಧಿಸಬಹುದು ಎಂಬುದನ್ನು ತೋರಿಸಿದ್ದಾರೆ. ಅವರ ಕಾರ್ಯಗಳು ಪ್ರತಿಯೊಂದು ಸಮುದಾಯಕ್ಕೂ ಸ್ಫೂರ್ತಿ ನೀಡಬೇಕು ಎಂದೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications