ಶೃಂಗೇರಿ ಕ್ಷೇತ್ರ : ಧರ್ಮದ ನೆಲೆಯಲ್ಲಿ ಅಭ್ಯರ್ಥಿಗಳ ಹಣೆಬರಹ!
ತುಂಗೆ-ಭದ್ರೆಯನ್ನು ಒಡಲಲ್ಲಿ ಪ್ರಕೃತಿಯ ನೆಲೆವೀಡು, ಆದಿಗುರು ಶಂಕರರು ಸ್ಥಾಪಿಸಿದ ಶಾರದಾ ಪೀಠ, ಹರಿಹರಪುರದ ಗುರುಕುಲ, ರಂಭಾಪುರಿ ಮಠ ಸೇರಿದಂತೆ ದೇಗುಲಗಳ ಸುತ್ತ ಮುತ್ತವೇ ಕ್ಷೇತ್ರದ ಅಭ್ಯರ್ಥಿಗಳ ಹಣೆಬರಹ ಸುತ್ತುತ್ತದೆ.
ಮೆಣಸಿನ ಹಾಡ್ಯ, ಬಸರಿಕಟ್ಟೆ, ಬಾಳೆಹೊನ್ನೂರು, ಜಯಪುರ, ಹೇರೂರು, ಕುಂಚೆಬೈಲು, ಮೆಣಸೆ, ಕಿಗ್ಗಾ, ಬೆಳಂದೂರು, ಅಡ್ಡಗದ್ದೆ, ಹರಿಹರಪುರ, ಕೊಪ್ಪ, ಎನ್.ಆರ್ ಪುರ ಎಲ್ಲವೂ ಹಿಂದೂ ಪರ ಮತ ಬ್ಯಾಂಕ್ ಗಳಾಗಿವೆ.
ಬಿಜೆಪಿಯಿಂದ ಮೂರು ಬಾರಿ ಗೆದ್ದಿರುವ ಡಿ.ಎನ್ ಜೀವರಾಜ್ ಅವರು ಈ ಬಾರಿಯೂ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಮತ್ತೊಮ್ಮೆ ಮೋದಿ ಅಲೆ, ಆಡಳಿತ ವಿರೋಧಿ ಅಲೆ ಜೀವರಾಜ್ ಬೆಂಬಲಕ್ಕೆ ನಿಲ್ಲಬಹುದು.
ಸಮಸ್ಯೆಗಳು: ವಾಣಿಜ್ಯ ಚಟುವಟಿಕೆಗಳಿಗೆ ಅಕ್ಕ ಪಕ್ಕದ ರಾಜ್ಯಗಳೇ ಆಧಾರ. ಶಿವಮೊಗ್ಗ, ಕಾರ್ಕಳವೇ ಇಲ್ಲಿನವರಿಗೆ ಕೈಗೆಟಕುವ ತಾಣಗಳು. ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ಸಿಕ್ಕಿಲ್ಲ. ದೇಗುಲ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ಕ್ಷೇತ್ರ್. ಸಾರಿಗೆ ಸಂಪರ್ಕವೂ ಅಷ್ಟಕಷ್ಟೆ. ಖಾಸಗಿ ವಲಯದ ಸಹಕಾರ ಸಾರಿಗೆಯೇ ಇಂದಿಗೂ ಕ್ಷೇತ್ರ ಜೀವಾಳ.

ನಕ್ಸಲ್ ಸಮಸ್ಯೆ ಸದ್ಯಕ್ಕೆ ಹತೋಟಿಯಲ್ಲಿದೆ. ಸಂಪನ್ಮೂಲಗಳ ಬಳಕೆ ಮಾಡಲು ಮಾರ್ಗದರ್ಶನ ಕೊರತೆ ಇದೆ. ಜತೆಗೆ ಇರುವ ತೋಟ, ಗದ್ದೆ, ಜಮೀನು ಪರ ರಾಜ್ಯದವರ ಪಾಲಾಗುತ್ತಿದೆ. ಕ್ಷೇತ್ರಕ್ಕೆ ಇದ್ದ ಪಾವಿತ್ರ್ಯತೆ, ವೈವಿಧ್ಯತೆ ಕ್ಷೀಣವಾಗುತ್ತಿದೆ. ಸಣ್ಣ ಕೈಗಾರಿಕೆಗೆ ಒತ್ತು ನೀಡದ ಕಾರಣ, ಆರ್ಥಿಕ ಬೆಳವಣಿಗೆ ಇನ್ನೂ ಆಗಿಲ್ಲ. ಧಾರ್ಮಿಕ ಕೇಂದ್ರವಾಗಿ ಮಾತ್ರ ಕ್ಷೇತ್ರವನ್ನು ಕಾಣುತ್ತಿರುವುದು ಪೂರಕ ಹಾಗೂ ಮಾರಕ ಅಂಶಗಳಾಗಿವೆ.
2013ರಲ್ಲಿ ಬಿಜೆಪಿಯ ಡಿ.ಎನ್ ಜೀವರಾಜ್ ಅವರು 58,402 ಮತಗಳನ್ನು ಪಡೆದು ಜಯಭೇರಿ ಬಾರಿಸಿದ್ದರು. ಕಾಂಗ್ರೆಸ್ಸಿನ ಪ್ರತಿಸ್ಪರ್ಧಿ ಟಿ.ಡಿ ರಾಜೇಗೌಡ ಅವರು 54,950 ಮತಗಳನ್ನು ಪಡೆದಿದ್ದರು. ಡಿ. ಬಿ ಚಂದ್ರೇಗೌಡ ಹಾಗೂ ಜೀವರಾಜ್ ನಡುವಿನ ಪೈಪೋಟಿ ನೋಡಿದ್ದ ಶೃಂಗೇರಿಯ ಜನತೆ ಈ ಬಾರಿ ಯಾರನ್ನು ಗೆಲ್ಲಿಸುತ್ತಾರೋ ಶಾರದಾಂಬೆಗೆ ಗೊತ್ತು.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications