ಹಳಿಯಾಳ ಕ್ಷೇತ್ರ: ಕಾಳೀ ಕೃಪೆ ಯಾರ ಮೇಲೆ..?
ಸ್ವಚ್ಛಂದ ಕಾಡು ಹಲವು ಕಾರ್ಖಾನೆಗಳನ್ನು ಹೊಂದಿರುವ ಹಳಿಯಾಳ, ಉತ್ತರ ಕನ್ನಡದ ತಾಲೂಕಾ ಕೇಂದ್ರ.
ದಟ್ಟ ಕಾಡನ್ನು ಹೊಂದಿರುವ ಈ ಪ್ರದೇಶದಲ್ಲಿ ನೈಸರ್ಗಿಕ ಸಂಪನ್ಮೂಲ ಹೇರಳವಾಗಿದೆ. ಇಲ್ಲಿನ ಶಿವಾಜಿ ಕೋಟೆ, ದಾಂಡೇಲಿ, ಕಾಳಿ ನದಿ, ಸೂಪಾ ಆಣೆಕಟ್ಟು ಹೀಗೆ ಸಾಕಷ್ಟು ರಮಣೀಯ ತಾಣಗಳಿಂದಾಗಿ ಪ್ರವಾಸಿಗರಿಗೆ ಈ ತಾಣ ಪ್ರಿಯವಾಗಿದೆ.
ಯಲ್ಲಾಪುರ ಕ್ಷೇತ್ರ: ಹವ್ಯಕರ ಮತಗಳೇ ನಿರ್ಣಾಯಕ
ಈ ಕ್ಷೇತ್ರದಿಂದ ಕಾಂಗ್ರೆಸ್ ನ ಖಾಯಂ ಅಭ್ಯರ್ಥಿ ಆರ್.ವಿ.ದೇಶಪಾಂಡೆ. ಕ್ಷೇತ್ರದ ಪ್ರಸ್ತುತ ಶಾಸಕರೂ ಅವರೇ. ದೇಶಪಾಂಡೆ ಅವರು ಕರ್ನಾಟಕ ಸರ್ಕಾರದಲ್ಲಿ ಮಂತ್ರಿ ಪದವಿ ಪಡೆದಿದ್ದರೂ ಪ್ರತಿವಾರಕ್ಕೂ ಸ್ವಕ್ಷೇತ್ರಕ್ಕೆ ತೆರಳಿ ಮುಂಬರುವ ಚುನಾವಣೆಯಲ್ಲೂ ಗೆಲ್ಲುವ ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಅಲ್ಲದೇ ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳೂ ನಡೆದಿವೆ. ಪ್ರವಾಸೋದ್ಯಮ ಅಭಿವೃದ್ಧಿಗೂ ಹತ್ತು ಹಲವು ಯೋಜನೆಗಳನ್ನು ಕೈಗೊಳ್ಳಲಾಗಿದೆ.
2008 ರಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ ದೇಶಪಾಂಡೆ ಅವರನ್ನು ಅಚ್ಚರಿಯ ರೀತಿಯಲ್ಲಿ ಸೋಲಿಸಿದ್ದ ಸುನೀಲ್ ಹೆಗಡೆ ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸುವ ಸಾಧ್ಯತೆ ಇದೆ. ಆದ್ದರಿಂದ ಜೆಡಿಎಸ್ ಗೆ ಅಭ್ಯರ್ಥಿಯನ್ನು ಹುಡುಕುವುದೇ ಒಂದು ದೊಡ್ಡ ತಲೆನೋವಾಗಿದೆ.
2013 ರಲ್ಲೂ ಜೆಡಿಎಸ್ ನ ಸುನಿಲ್ ಹೆಗಡೆ ಅವರ ವಿರುದ್ಧ ಆರ್ ವಿ ದೇಶಪಾಂಡೆ ಅವರು ತುಂಬಾ ಅಂತರದ ಗೆಲುವನ್ನೇನೂ ಪಡೆದಿರಲಿಲ್ಲ. ಆರ್.ವಿ.ದೇಶಪಾಂಡೆ(ಕಾಂಗ್ರೆಸ್) 55005 ಮತಗಳನ್ನು ಪಡೆದಿದ್ದರೆ, ಸುನಿಲ್ ಹೆಗಡೆ(ಜೆಡಿಎಸ್) 49066 ಮತಗಳನ್ನು ಗಳಿಸಿದ್ದರು.