Get Updates
Get notified of breaking news, exclusive insights, and must-see stories!

ಹಳಿಯಾಳ ಕ್ಷೇತ್ರ: ಕಾಳೀ ಕೃಪೆ ಯಾರ ಮೇಲೆ..?

ಸ್ವಚ್ಛಂದ ಕಾಡು ಹಲವು ಕಾರ್ಖಾನೆಗಳನ್ನು ಹೊಂದಿರುವ ಹಳಿಯಾಳ, ಉತ್ತರ ಕನ್ನಡದ ತಾಲೂಕಾ ಕೇಂದ್ರ.

ದಟ್ಟ ಕಾಡನ್ನು ಹೊಂದಿರುವ ಈ ಪ್ರದೇಶದಲ್ಲಿ ನೈಸರ್ಗಿಕ ಸಂಪನ್ಮೂಲ ಹೇರಳವಾಗಿದೆ. ಇಲ್ಲಿನ ಶಿವಾಜಿ ಕೋಟೆ, ದಾಂಡೇಲಿ, ಕಾಳಿ ನದಿ, ಸೂಪಾ ಆಣೆಕಟ್ಟು ಹೀಗೆ ಸಾಕಷ್ಟು ರಮಣೀಯ ತಾಣಗಳಿಂದಾಗಿ ಪ್ರವಾಸಿಗರಿಗೆ ಈ ತಾಣ ಪ್ರಿಯವಾಗಿದೆ.

ಈ ಕ್ಷೇತ್ರದಿಂದ ಕಾಂಗ್ರೆಸ್ ನ ಖಾಯಂ ಅಭ್ಯರ್ಥಿ ಆರ್.ವಿ.ದೇಶಪಾಂಡೆ. ಕ್ಷೇತ್ರದ ಪ್ರಸ್ತುತ ಶಾಸಕರೂ ಅವರೇ. ದೇಶಪಾಂಡೆ ಅವರು ಕರ್ನಾಟಕ ಸರ್ಕಾರದಲ್ಲಿ ಮಂತ್ರಿ ಪದವಿ ಪಡೆದಿದ್ದರೂ ಪ್ರತಿವಾರಕ್ಕೂ ಸ್ವಕ್ಷೇತ್ರಕ್ಕೆ ತೆರಳಿ ಮುಂಬರುವ ಚುನಾವಣೆಯಲ್ಲೂ ಗೆಲ್ಲುವ ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದಾರೆ.

Karnataka Assembly Election 2018: Haliyal Constituency Profile

ಅಲ್ಲದೇ ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳೂ ನಡೆದಿವೆ. ಪ್ರವಾಸೋದ್ಯಮ ಅಭಿವೃದ್ಧಿಗೂ ಹತ್ತು ಹಲವು ಯೋಜನೆಗಳನ್ನು ಕೈಗೊಳ್ಳಲಾಗಿದೆ.

2008 ರಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ ದೇಶಪಾಂಡೆ ಅವರನ್ನು ಅಚ್ಚರಿಯ ರೀತಿಯಲ್ಲಿ ಸೋಲಿಸಿದ್ದ ಸುನೀಲ್ ಹೆಗಡೆ ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸುವ ಸಾಧ್ಯತೆ ಇದೆ. ಆದ್ದರಿಂದ ಜೆಡಿಎಸ್ ಗೆ ಅಭ್ಯರ್ಥಿಯನ್ನು ಹುಡುಕುವುದೇ ಒಂದು ದೊಡ್ಡ ತಲೆನೋವಾಗಿದೆ.

2013 ರಲ್ಲೂ ಜೆಡಿಎಸ್ ನ ಸುನಿಲ್ ಹೆಗಡೆ ಅವರ ವಿರುದ್ಧ ಆರ್ ವಿ ದೇಶಪಾಂಡೆ ಅವರು ತುಂಬಾ ಅಂತರದ ಗೆಲುವನ್ನೇನೂ ಪಡೆದಿರಲಿಲ್ಲ. ಆರ್.ವಿ.ದೇಶಪಾಂಡೆ(ಕಾಂಗ್ರೆಸ್) 55005 ಮತಗಳನ್ನು ಪಡೆದಿದ್ದರೆ, ಸುನಿಲ್ ಹೆಗಡೆ(ಜೆಡಿಎಸ್) 49066 ಮತಗಳನ್ನು ಗಳಿಸಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+