ಕ್ಷೇತ್ರ ಪರಿಚಯ : ಬಳ್ಳಾರಿ ನಗರದಲ್ಲಿ ಲಾಡ್ ವಿರುದ್ಧ ರೆಡ್ಡಿ ಹಣಾಹಣಿ
ಈ ಕ್ಷೇತ್ರದ ಸದ್ಯದ ಶಾಸಕ, ಕಾಂಗ್ರೆಸ್ ಪಕ್ಷದ ಅನಿಲ್ ಲಾಡ್. ಇವರ ಎದುರಾಳಿ ಮಾಜಿ ಮೇಯರ್ ಆಗಿ, ಶಾಸಕರಾಗಿದ್ದ ಸೋಮಶೇಖರ್ ರೆಡ್ಡಿ. ಸೋಮಶೇಖರ ರೆಡ್ಡಿ ಅವರು ಜನರೊಂದಿಗಿನ ಒಡನಾಟ ಹೆಚ್ಚು.
ಇದೇ, ಅನಿಲ್ ಲಾಡ್ ಗೂ ಸೋಮಶೇಖರ್ ರೆಡ್ಡಿ ಅವರಿಗೂ ಇರುವ ವ್ಯತ್ಯಾಸ ಎಂದು ಹೇಳಲಾಗುತ್ತಿದೆ. ಈಗ ಸಿದ್ದರಾಮಯ್ಯ ಅವರಿಗೆ ಆಪ್ತರೂ ಆಗಿರುವ ಕಾಂಗ್ರೆಸ್ ನಾಯಕ ಸೂರ್ಯ ನಾರಾಯಣ ರೆಡ್ಡಿ ಅವರ ಹೆಸರು ಕೇಳಿಬಂದಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಭಾರಿ ಪೈಪೋಟಿ ಏರ್ಪಡುವ ಸಾಧ್ಯತೆ ನಿಚ್ಚಳವಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಈ ಕ್ಷೇತ್ರದ ಸದ್ಯದ ಶಾಸಕ, ಕಾಂಗ್ರೆಸ್ ಪಕ್ಷದ ಅನಿಲ್ ಲಾಡ್. ಗಣಿಗಾರಿಕೆ ಉದ್ಯಮಿಯಾಗಿರುವ ದೊಡ್ಡ ಹೆಸರು ಮಾಡಿರುವ ಅನಿಲ್ ಲಾಡ್, ರಾಜಕೀಯದಲ್ಲಿದ್ದರೂ ಅಷ್ಟಾಗಿ ಜನಪ್ರಿಯತೆ ಗಳಿಸಿಲ್ಲ ಎನ್ನುತ್ತವೆ ಕೆಲ ಮೂಲಗಳು. ಅಂದರೆ, ಅವರು ಮಾಸ್ ಲೀಡರ್ ಅಲ್ಲ ಎಂಬುದು ಬಹುಪಾಲು ಜನರ ಅಭಿಪ್ರಾಯ.
ಈ ಬಾರಿಯ ಚುನಾವಣೆಯಲ್ಲಿ ಇವರಿಗೆ ತೀವ್ರ ಪೈಪೋಟಿಯೊಡ್ಡಲು ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಸಜ್ಜಾಗುತ್ತಿದ್ದಾರೆಂಬ ಮಾತು ಕೇಳಿಬರುತ್ತಿವೆ. ಸೋಮಶೇಖರ್ ರೆಡ್ಡಿ ಅವರು ಜನಾರ್ದನ ರೆಡ್ಡಿ ಸಹೋದರ ಹಾಗೂ ಶ್ರೀರಾಮುಲು ಆಪ್ತರು. ರಾಮುಲು ಅವರು ಬಿಆರ್ ಎಸ್ ಪಕ್ಷ ಕಟ್ಟಿದಾಗ ಅವರ ಬೆನ್ನಿಗೆ ನಿಂತವರು. ಆನಂತರ, ರಾಮುಲು ತಮ್ಮ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದಾಗಲೂ ಅವರಿಗೆ ಬೆಂಬಲ ಕೊಟ್ಟವರು.
ಮಾಜಿ ಮೇಯರ್ ಆಗಿ, ಶಾಸಕರಾಗಿದ್ದ ಸೋಮಶೇಖರ್ ರೆಡ್ಡಿ ಜನರೊಂದಿಗಿನ ಒಡನಾಟ ಹೆಚ್ಚು. ಇದೇ, ಅನಿಲ್ ಲಾಡ್ ಗೂ ಸೋಮಶೇಖರ್ ರೆಡ್ಡಿ ಅವರಿಗೂ ಇರುವ ವ್ಯತ್ಯಾಸ ಎಂದು ಹೇಳಲಾಗುತ್ತಿದೆ. ಇಷ್ಟೇ ಅಲ್ಲ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸೋಮಶೇಖರ್ ರೆಡ್ಡಿ ಕಣಕ್ಕಿಳಿದರೆ, ಅವರಿಗೆ ಪ್ರತಿಯಾಗಿ ಜನರೊಂದಿಗೆ ಅಷ್ಟಾಗಿ ಒಡನಾಟ ಮಾಡದ ಅನಿಲ್ ಲಾಡ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಕಾಂಗ್ರೆಸ್ ನಲ್ಲಿಯೋ ಭಿನ್ನಾಭಿಪ್ರಾಯಗಳಿವೆ ಎನ್ನಲಾಗಿದೆ.
ಚುನಾವಣಾ ಪ್ರಚಾರ ಚಿತ್ರಸಂಪುಟ : ಬಿಜೆಪಿ | ಕಾಂಗ್ರೆಸ್ | ಜೆಡಿಎಸ್
ಹಾಗಾಗಿ, ಅದು ಲಾಡ್ ಅವರಿಗೆ ಪರ್ಯಾಯ ನಾಯಕರೊಬ್ಬರ ಹುಡುಕಾಟದಲ್ಲಿದ್ದು, ಆ ಸ್ಥಾನಕ್ಕೆ ಈ ಹಿಂದೆ ಜೆಡಿಎಸ್ ಶಾಸಕರೂ ಆಗಿದ್ದ, ಈಗ ಸಿದ್ದರಾಮಯ್ಯ ಅವರಿಗೆ ಆಪ್ತರೂ ಆಗಿರುವ ಕಾಂಗ್ರೆಸ್ ನಾಯಕ ಸೂರ್ಯ ನಾರಾಯಣ ರೆಡ್ಡಿ ಅವರ ಹೆಸರು ಕೇಳಿಬಂದಿದೆ. ಸೂರ್ಯನಾರಾಯಣ ರೆಡ್ಡಿ ಕೂಡ ಅನೇಕ ಜನಪರ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿರುವುದರಿಂದ ಅವರನ್ನು ಈ ಬಾರಿ ಕಣಕ್ಕಿಳಿಸುವ ಬಗ್ಗೆ ಕಾಂಗ್ರೆಸ್ ಲೆಕ್ಕಾಚಾರ ಹಾಕುತ್ತಿದೆ ಎನ್ನಲಾಗಿದೆ.
ಇದು ಹೀಗೇ ಆದರೆ, ಈ ಬಾರಿಯ ವಿಧಾನಸಭೆ ಚುನಾವಣೆ ವೇಳೆ, ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಹಣಾಹಣಿ ಇರಲಿದೆ.