ಚಿಕ್ಕಬಳ್ಳಾಪುರ ಜಿಲ್ಲೆ: ಶಿವಶಂಕರ್ ರೆಡ್ಡಿ ಖರ್ಚಾಗದ ಅನುದಾನ ಹೆಚ್ಚು
ಚಿಕ್ಕಬಳ್ಳಾಪುರ, ಏಪ್ರಿಲ್ 16 : 2013ರಿಂದ 2017ರ ಡಿಸೆಂಬರ್ ಅವಧಿಯೊಳಗೆ ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ಸರಕಾರದಿಂದ ಬಿಡುಗಡೆಯಾದ ಅನುದಾನ ಎಷ್ಟು, ಆ ಪೈಕಿ ಬಾಕಿ ಉಳಿದದ್ದು ಎಷ್ಟು ಎಂಬುದರ ವಿವರ ತೆರೆದಿಡುವಂಥ ವರದಿ ಇದು.
ಚಿಕ್ಕಬಳ್ಳಾಪುರ- ಡಾ.ಸುಧಾಕರ್ (ಕಾಂಗ್ರೆಸ್), ಚಿಂತಾಮಣಿ - ಜೆ.ಕೆ.ಕೃಷ್ಣಾರೆಡ್ಡಿ (ಜೆಡಿಎಸ್), ಗೌರಿಬಿದನೂರು- ಶಿವಶಂಕರ್ ರೆಡ್ಡಿ (ಕಾಂಗ್ರೆಸ್), ಬಾಗೇಪಲ್ಲಿ- ಸುಬ್ಬಾ ರೆಡ್ಡಿ (ಪಕ್ಷೇತರ) ಹಾಗೂ ಶಿಡ್ಲಘಟ್ಟ- ಎಂ.ರಾಜಣ್ಣ (ಜೆಡಿಎಸ್) ಶಾಸಕರಾಗಿದ್ದಾರೆ. ಯಾವ ವರ್ಷ, ಎಷ್ಟು ಅನುದಾನ ಬಿಡುಗಡೆ ಆಗಿತ್ತು? ಖರ್ಚಾಗಿದ್ದು ಎಷ್ಟು ಎಂಬುದರ ವಿವರ ಇಲ್ಲಿದೆ.
2013-14ರಲ್ಲಿ ಕ್ಷೇತ್ರಗಳಿಗೆ ಬಿಡುಗಡೆಯಾದ ಮೊತ್ತ ತಲಾ 1.96 ಕೋಟಿ, ಬಾಕಿ ಉಳಿದ ಮೊತ್ತದ ವಿವರ ಹೀಗಿದೆ

ಚಿಕ್ಕಬಳ್ಳಾಪುರ 1.90 ಲಕ್ಷ
ಚಿಂತಾಮಣಿ 0.00
ಗೌರಿಬಿದನೂರು 5.40 ಲಕ್ಷ
ಬಾಗೇಪಲ್ಲಿ 0.00
ಶಿಡ್ಲಘಟ್ಟ 0.00
ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಹಾಗೂ ಗೌರಿಬಿದನೂರು ಶಾಸಕ ಶಿವಶಂಕರ್ ರೆಡ್ಡಿ ಹೊರತುಪಡಿಸಿ ಉಳಿದೆಲ್ಲರೂ ಪೂರ್ಣ ಪ್ರಮಾಣದಲ್ಲಿ ಅನುದಾನ ಖರ್ಚು ಮಾಡಿದ್ದಾರೆ.
2014-15ರಲ್ಲಿ ಕ್ಷೇತ್ರಗಳಿಗೆ ಬಿಡುಗಡೆಯಾದ ಮೊತ್ತ ತಲಾ 2 ಕೋಟಿ, ಬಾಕಿ ಉಳಿದ ಮೊತ್ತದ ವಿವರ ಹೀಗಿದೆ
ಚಿಕ್ಕಬಳ್ಳಾಪುರ 3 ಲಕ್ಷ
ಚಿಂತಾಮಣಿ 4.65 ಲಕ್ಷ
ಗೌರಿಬಿದನೂರು 0.35 ಲಕ್ಷ
ಬಾಗೇಪಲ್ಲಿ 0.00
ಶಿಡ್ಲಘಟ್ಟ 0.00
ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್, ಚಿಂತಾಮಣಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಹಾಗೂ ಗೌರಿಬಿದನೂರು ಶಾಸಕ ಶಿವಶಂಕರ್ ರೆಡ್ಡಿ ಹೊರತುಪಡಿಸಿ ಉಳಿದೆಲ್ಲರೂ ಪೂರ್ಣ ಪ್ರಮಾಣದಲ್ಲಿ ಅನುದಾನ ಖರ್ಚು ಮಾಡಿದ್ದಾರೆ.
2015-16ರಲ್ಲಿ ಕ್ಷೇತ್ರಗಳಿಗೆ ಬಿಡುಗಡೆಯಾದ ಮೊತ್ತ ತಲಾ 2 ಕೋಟಿ, ಬಾಕಿ ಉಳಿದ ಮೊತ್ತದ ವಿವರ ಹೀಗಿದೆ.
ಚಿಕ್ಕಬಳ್ಳಾಪುರ 0.00
ಚಿಂತಾಮಣಿ 0.00
ಗೌರಿಬಿದನೂರು 0.77 ಲಕ್ಷ
ಬಾಗೇಪಲ್ಲಿ 0.00
ಶಿಡ್ಲಘಟ್ಟ 0.00
ಗೌರಿಬಿದನೂರು ಶಾಸಕ ಶಿವಶಂಕರ್ ರೆಡ್ಡಿ ಹೊರತುಪಡಿಸಿ ಉಳಿದೆಲ್ಲರೂ ಪೂರ್ಣ ಪ್ರಮಾಣದಲ್ಲಿ ಅನುದಾನ ಖರ್ಚು ಮಾಡಿದ್ದಾರೆ.
2016-17ರಲ್ಲಿ ಕ್ಷೇತ್ರಗಳಿಗೆ ಬಿಡುಗಡೆಯಾದ ಮೊತ್ತ ತಲಾ 2 ಕೋಟಿ, ಬಾಕಿ ಉಳಿದ ಮೊತ್ತದ ವಿವರ ಹೀಗಿದೆ.
ಚಿಕ್ಕಬಳ್ಳಾಪುರ 4 ಲಕ್ಷ
ಚಿಂತಾಮಣಿ 22.90 ಲಕ್ಷ
ಗೌರಿಬಿದನೂರು 1.50 ಲಕ್ಷ
ಬಾಗೇಪಲ್ಲಿ 0.00
ಶಿಡ್ಲಘಟ್ಟ 0.52 ಲಕ್ಷ
ಬಾಗೇಪಲ್ಲಿ ಶಾಸಕ ಸುಬ್ಬಾ ರೆಡ್ಡಿ ಹೊರತುಪಡಿಸಿ ಉಳಿದ ಶಾಸಕರೆಲ್ಲರೂ ಬಾಕಿ ಉಳಿಸಿಕೊಂಡಿದ್ದಾರೆ.
2017-18ರಲ್ಲಿ (2017 ಡಿಸೆಂಬರ್ ತನಕ) ಕ್ಷೇತ್ರಗಳಿಗೆ ಬಿಡುಗಡೆಯಾದ ಮೊತ್ತ ತಲಾ 1.50 ಕೋಟಿ, ಬಾಕಿ ಉಳಿದ ಮೊತ್ತದ ವಿವರ ಹೀಗಿದೆ.
ಚಿಕ್ಕಬಳ್ಳಾಪುರ 8 ಲಕ್ಷ
ಚಿಂತಾಮಣಿ 81.52 ಲಕ್ಷ
ಗೌರಿಬಿದನೂರು 128.86 ಲಕ್ಷ
ಬಾಗೇಪಲ್ಲಿ 89.60 ಲಕ್ಷ
ಶಿಡ್ಲಘಟ್ಟ 49.19 ಲಕ್ಷ
ಈ ಅವಧಿಯಲ್ಲಿ ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ಹೊರತುಪಡಿಸಿ ಉಳಿದವರು ಭಾರೀ ಮೊತ್ತವನ್ನೇ ಬಾಕಿ ಉಳಿಸಿಕೊಂಡಿದ್ದಾರೆ. ಆದರೆ ಗೌರಿಬಿದನೂರಿನ ಶಾಸಕ ಶಿವಶಂಕರ್ ರೆಡ್ಡಿ ಅವರು ಎಲ್ಲ ಅವಧಿಗೂ ಅನುದಾನದ ಮೊತ್ತ ಬಾಕಿ ಉಳಿಸಿಕೊಂಡಿದ್ದಾರೆ.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ -
ಆಕ್ಸಿಜನ್ ಸಿಲಿಂಡರ್ ನೆರವಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ: ಸಲಾಂ ಎಂದ ದೇಶದ ಜನತೆ












Click it and Unblock the Notifications