ಕಾಂಗ್ರೆಸ್ ಟಿಕೆಟ್ ಬೇಕೆ? ಈ ಪ್ರಶ್ನೆಗಳಿಗೆಲ್ಲ ಉತ್ತರಿಸಲೇಬೇಕು!
ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯುವುದು ಅಷ್ಟು ಸಲೀಸಲ್ಲ. ಕಾಂಗ್ರೆಸ್ ನ ದೊಡ್ಡ ತಲೆಗಳು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಟಿಕೆಟ್ ಆಕಾಂಕ್ಷಿಗಳನ್ನು ಸರಿಯಾಗಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರತಿ ಆಕಾಂಕ್ಷಿಗೂ ಕನಿಷ್ಠ ಇಪ್ಪತ್ತು ಪ್ರಶ್ನೆಗಳನ್ನು ಕೇಳುತ್ತದೆ ಮಧುಸೂದನ್ ಮಿಸ್ತ್ರಿ ನೇತೃತ್ವದ ತಂಡ.
ಕಾಂಗ್ರೆಸ್ಸಿನ ಸಂಭವನೀಯ 80 ಅಭ್ಯರ್ಥಿಗಳ ಪಟ್ಟಿ!
ಈ ಪ್ರಕ್ರಿಯೆ ಕಠಿಣವಾಗಿಯೇ ಇರಲಿ ಎಂದು ಮಿಸ್ತ್ರಿ ಅವರಿಗೆ ಸೂಚನೆ ಸಿಕ್ಕಿದೆ. ಇವೇ ಪ್ರಶ್ನೆಗಳನ್ನು ಚುನಾವಣೆಗೆ ಸ್ಪರ್ಧೆ ಮಾಡಲಿರುವ ಹಾಲಿ ಸಚಿವರಿಗೂ ಕೇಳಲಾಗುವುದು. ಈ ಪ್ರಕ್ರಿಯೆ ಅಷ್ಟು ಸುಲಭವಾಗಿಯೂ ಇಲ್ಲ. ಜತೆಗೆ ನಿರೀಕ್ಷಿತವಲ್ಲ. ಎಲ್ಲರಿಗೂ ಎಲ್ಲ ಪ್ರಶ್ನೆಗೆ ಉತ್ತರಿಸುವುದು ಆಗುತ್ತಿಲ್ಲ. ಹಲವು ಪ್ರಶ್ನೆಗಳಿಗೆ ಅಭ್ಯರ್ಥಿಗಳು ಮೌನಕ್ಕೆ ಶರಣಾಗಿದ್ದಾರೆ.
ಕಾಂಗ್ರೆಸ್ ಟಿಕೆಟ್ ಬೇಕಾ? ಸಂದರ್ಶನದಲ್ಲಿ ಪಾಲ್ಗೊಳ್ಳಿ!
ಟಿಕೆಟ್ ಆಕಾಂಕ್ಷಿಗಳಿಗೆ ಕೇಳಿರುವ ಪ್ರಶ್ನೆಗಳು ಇಲ್ಲಿವೆ.
*
ನನಗೆ
ಒಂದು
ಒಳ್ಳೆ
ಕಾರಣ
ನೀಡಿ,
ನಿಮಗೆ
ಯಾಕೆ
ಟಿಕೆಟ್
ನೀಡಬೇಕು?
*
ನಿಮ್ಮ
ವಿಧಾನಸಭಾ
ಕ್ಷೇತ್ರ
ವ್ಯಾಪ್ತಿಯ
ಜಾತಿ
ಲೆಕ್ಕಾಚಾರ
ತಿಳಿಸಿ
*
ನಿಮ್ಮ
ಕ್ಷೇತ್ರ
ವ್ಯಾಪ್ತಿಯಲ್ಲಿ
ಎಷ್ಟು
ವಾರ್ಡ್
ಗಳಿವೆ?
*
ನಿಮ್ಮ
ಶಾಸಕರ
ಕೆಲಸ-ಕಾರ್ಯಕ್ಕೆ
ಎಷ್ಟು
ಅಂಕ
ಕೊಡ್ತೀರಿ
(ಎರಡನೇ
ಬಾರಿಗೆ
ಟಿಕೆಟ್
ಆಕಾಂಕ್ಷಿಯಾದವರಿಗೆ
ಈ
ಪ್ರಶ್ನೆ
ಇಲ್ಲ)
*
ನೀವು
ಗೆಲ್ಲುವ
ಅವಕಾಶ
ಏನಿದೆ?
*
ನಿಮ್ಮ
ಎದುರು
ನಿಲ್ಲುವ
ಅಭ್ಯರ್ಥಿ
ವಿರುದ್ಧ
ರಣತಂತ್ರ
ಏನು?
*
ನೀವು
ಚುನಾವಣೆ
ಗೆದ್ದರೆ
ಮುಂದಿನ
ಯೋಜನೆಗಳು
ಏನಿವೆ?
*
ನಿಮ್ಮ
ಕ್ಷೇತ್ರ
ವ್ಯಾಪ್ತಿಯಲ್ಲಿ
ಎಷ್ಟು
ಹಳ್ಳಿಗಳಿವೆ?
*
ನಿಮ್ಮ
ಕ್ಷೇತ್ರ
ವ್ಯಾಪ್ತಿಯಲ್ಲಿ
ಎಷ್ಟು
ಮತದಾರರಿದ್ದಾರೆ?
*
ಜನರಿಗೆ
ನಿಮ್ಮ
ಬಗ್ಗೆ
ಹಾಗೂ
ಹಾಲಿ
ಶಾಸಕರ
ಬಗ್ಗೆ
ಏನು
ಅಭಿಪ್ರಾಯ
ಇದೆ?
*
ನಿಮ್ಮ
ವಿರುದ್ಧ
ಬಾಕಿಯಿರುವ
ಕೇಸುಗಳಿವೆಯಾ?