ವಿಶ್ವೇಶ್ವರಭಟ್ಟರ ಪುಸ್ತಕಗಳ ಬುಟ್ಟಿಗೆ ಇನ್ನೂ ನಾಲಕ್ಕು..
ಅಲ್ಲಿ 'ನೂರೆಂಟು ಮಾತು"ಗಳಿರುತ್ತವೆ, 'ವಕ್ರೋಕ್ತಿ"ಯಿರುತ್ತದೆ, 'ಸುದ್ದಿಮನೆ ಕತೆ"ಗಳಿರುತ್ತವೆ! ಇನ್ನೂ ಏನೇನೋ ಇರುತ್ತವೆ! ಡಿಸೆಂಬರ್ 24ರ ಭಾನುವಾರವನ್ನು ಈಗಲೇ ಕಾದಿರಿಸಿ.
ಬೆಂಗಳೂರು : ವಿಜಯ ಕರ್ನಾಟಕ ದಿನಪತ್ರಿಕೆಯ ಸಂಪಾದಕ ಹಾಗೂ ದಟ್ಸ್ಕನ್ನಡ ಡಾಟ್ಕಾಮ್ ವಾಹಿನಿಯ ಅಂಕಣಕಾರ ವಿಶ್ವೇಶ್ವರಭಟ್ರ, ಇನ್ನೂ ನಾಲ್ಕು ಪುಸ್ತಕಗಳು ಬಿಡುಗಡೆಗೊಳ್ಳಲು ಇದೀಗ ಸಜ್ಜಾಗುತ್ತಿವೆ. ಮಾಧ್ಯಮದ ಪುಟಗಳಲ್ಲಿ ಓತಪ್ರೋತವಾಗಿ ಬರೆಯಿಸಿಕೊಂಡ ಅಕ್ಷರ ಅನುಸಂಧಾನಗಳು ಹಾಳೆಗಳಿಂದ ಜಿಗಿದು ರಟ್ಟಿನೊಳಗೆ ಅಡಗಿಕೊಳ್ಳುವ ಮತ್ತೊಂದು ಮಜಲಿದು.
ಬಿಡುಗಡೆಗೊಳ್ಳಲು ಹವಣಿಸುತ್ತಿರುವ ಕೃತಿಗಳ ವಸ್ತು ವಿಜಯಕರ್ನಾಟಕ ಓದುಗರಿಗೆ ಅಪರಿಚಿತವೇನಲ್ಲ. ಪ್ರತಿ ಗುರುವಾರ ಬೆಳಕು ಕಾಣುವ ಕಳಕಳಿಯ 'ನೂರೆಂಟುಮಾತು"; ಪತ್ರಿಕೆಯಲ್ಲಿ ಧಾರಾವಾಹಿ ಬಗೆಯಲ್ಲಿ ಮೂಡಿಬಂದ ಭಾರತೀಯ ಪತ್ರಿಕೋದ್ಯಮದ ಧೀಮಂತ 'ರಾಮನಾಥ ಗೋಯಾಂಕಾ" ಅವರ ಜೀವನ ಸಾಗುವಳಿಯ ಚಿತ್ರಣ ; ಬದುಕಿನ ನೇರನೋಟಗಳನ್ನು ಸಾಫ್ ಸೀದಾಸಾದಾ ಚಿಮುಕಿಸುವ ' ಮತ್ತಷ್ಟು ವಕ್ರತುಂಡೋಕ್ತಿ" ಮತ್ತು ಪತ್ರಿಕಾಲಯದೊಳಗೆ ತೇಯಿಸಿಕೊಳ್ಳತ್ತಾ ಸವಕಲಾಗುವ ವೃತ್ತಿ-ಮನ-ಧರ್ಮಗಳನ್ನು ಬಿಂಬಿಸುವ 'ಸುದ್ದಿಮನೆ ಕತೆ" ಪುಸ್ತಕಗಳಾಗಿ ಹೊರಬರುತ್ತಿವೆ.
ಅಂಕಿತ ಪ್ರಕಾಶನ (53, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು. 560004) ಹೊರತರುತ್ತಿರುವ ಈ ಪುಸ್ತಕಗಳ ಬಿಡುಗಡೆ ಸಮಾರಂಭ ಕ್ರಿಸ್ಮಸ್ ಈವ್ ಭಾನುವಾರ ನಡೆಯಲಿದೆ. ಬೆಂಗಳೂರಿನ ನಂ. 6, ಬಿ.ಪಿ. ವಾಡಿಯ ರಸ್ತೆಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ಕಲ್ಚರ್ ಸಭಾಂಗಣದಲ್ಲಿ ಪುಸ್ತಕ ಬಿಡುಗಡೆ ಸಮಾರಂಭ ಏರ್ಪಾಟಾಗಿದೆ.
ಮುಖ್ಯ ಅತಿಥಿಗಳಾಗಿ ಹಾಯ್ ಬೆಂಗಳೂರು ವಾರಪತ್ರಿಕೆಯ ಸಂಪಾದಕ ರವಿ ಬೆಳಗೆರೆ, ನಿರ್ದೇಶಕ ಟಿ.ಎನ್. ಸೀತಾರಾಮ್, ಜೀ ಟಿವಿಯ ಮುಖ್ಯಸ್ಥೆ ನಟಿ ಮಾಳವಿಕಾ ಮತ್ತು ವಿಶ್ವೇಶ್ವರಭಟ್ಟರ ಅಮ್ಮ ಗಿರಿಜಾ ಭಟ್ ಇರುತ್ತಾರೆ.
ಪುಸ್ತಕ ಬಿಡುಗಡೆ ಮಾಡಿ ಮಾತನಾಡುವುದರಲ್ಲಿ ಎತ್ತಿದ ಕೈ ಎನಿಸಿರುವ, ಸ್ವತಃ ಭಟ್ಟರ ಕೃತಿಗಳೇ ಬಿಡುಗಡೆಯಾಗುತ್ತಿರುವುದು ಮುಂದಿನ ಭಾನುವಾರ ಬೆಳಗಿನ ಸುದ್ದಿ ಸ್ವಾರಸ್ಯ.ನೆನಪಿರಲಿ, ಕಾರ್ಯಕ್ರಮ ಡಿಸೆಂಬರ್ 24 ಭಾನುವಾರ ಬೆಳಗ್ಗೆ 10.30ಕ್ಕೆ. ಉಪಾಹಾರ 9.30ಕ್ಕೆ.
ನಮ್ಮ ಅಂಕಣಕಾರರ ಇತರ ಕೃತಿಗಳು :
ಮಾತಿನ ಮಂಟಪ -ಶಿಕಾರಿಪುರ ಹರಿಹರೇಶ್ವರ
ವಿಚಿತ್ರಾನ್ನ -ಶ್ರೀವತ್ಸ ಜೋಶಿ
ಜಿಜ್ಞಾಸಾಗಂಗೆಯ ದಡದ ಕಾಲುದಾರಿಯಲ್ಲಿ -ರವಿಕೃಷ್ಣಾರೆಡ್ಡಿ
ಪೂರ್ವ ಪಶ್ಚಿಮ - ಎಂ.ಆರ್.ದತ್ತಾತ್ರಿ
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications