ಉಪಾಸನ : ಪಶ್ಚಿಮ ಘಟ್ಟದಲ್ಲೊಂದು ಮೌಂಟನ್ ಹೌಸ್!

ಕಾಡಿನ ಯಾವುದೋ ಒಂದು ಮರದ ಅಗಲವಾದ ಎಲೆಯ ಮೇಲೆ ಹರಡಿದ ಕುಸಿಲ ಅಕ್ಕಿಯ ತಣ್ಣನೆ ಗಂಜಿ. ಅದರ ಜೊತೆಗೊಂದೆರಡು ಹೋಳು ಉದುರಿದ ಮಾವಿನಕಾಯಿ ಉಪ್ಪಿನಕಾಯಿ ; ದಿನಕ್ಕೆ ಎರಡೇ ಎರಡು ಬಾರಿ ನೀಡಿದರೆ ಸಾಕು, ನಾನು ತೃಪ್ತ.
ಉದುರಿದ ಚೆದುರಿದ ಎಲೆ ಕಸ ಕಡ್ಡಿಗಳನ್ನು ದುಂಡು ಮಾಡಲೊಂದು ಕಸಬರಿಕೆ ಬೇಕು. ಅದನ್ನು ನಾನೇ ಕಟ್ಟಿಕೊಳ್ಳುವೆನು. ಅಲ್ಲಿನ ಅಂಗಳವನ್ನು ನಿತ್ಯ ಗುಡಿಸಿ ಸಚ್ಛವಾಗಿಡುತ್ತಿದ್ದಂತೆಯೇ ನನ್ನ ಸ್ಮೃತಿಪಟಲವೂ ಸ್ವಚ್ಛವಾಯಿತೆಂದು ಭಾವಿಸುತ್ತಾ ಬಾಳುವೆ ಮಾಡುವೆನು.
ಈ ಮಧ್ಯೆ ನಿಧನಿಧಾನವಾಗಿ ಪುರಾಣ, ಇತಿಹಾಸಗಳನ್ನು ಶ್ರದ್ಧೆಯಿಂದ ಮರೆಯುವೆನು. ವರ್ತಮಾನದ ಆಗುಹೋಗುಗಳನ್ನು ನನ್ನ ಕಿವಿಗೆ ಯಾರೂ ಮುಟ್ಟಿಸದಿದ್ದರೆ ನಾ ಪುಣ್ಯವಂತನು, ದಿನವಿಡೀ ಶ್ರಮಜೀವಿಯಾಗಿ, ಇಳಿಹೊತ್ತು ಇಡೀ ಭೂಮಂಡಲಕ್ಕೇ ಧನ್ಯವಾದ ಅರ್ಪಿಸಿ ನಂತರ ಗೋಣಿಯ ಮೇಲೆ ಮೈ ಚೆಲ್ಲುವೆನು.
ನನಗಿನ್ನೇನೂ ಬೇಡ ಪ್ರಭು. ಕೊನೆಯುಸಿರುವವರೆಗೆ ಇಲ್ಲೇ ಇರಲಿಕ್ಕೆ ಬಿಡು... ಬಂದುಹೋಗುವವರ ಸೇವೆಗೆ ಮಾಡುವ ಚಾಕರಿಯನ್ನೇ ದುಡಿಮೆಯ ಮಾರ್ಗ ಎಂದು ಭಾವಿಸಿ ಕೃತಾರ್ಥನಾಗುವೆನು.
*
ರಮ್ಯ ಮತ್ತು ಶಾಂತವಾದ ಆದರೆ ಜನಸಂದಣಿಯಿಲ್ಲದ ಸ್ಥಳಕ್ಕೆ ಮನಶ್ಯಾಂತಿಯನ್ನರಸಿ ಹೋದಾಗ ಇಂಥ ಭಾವತರಂಗಗಳು ಪುಟಿದೇಳುವುದು ಸಹಜ. ಆ ಬಗೆಯ ಕನಸುಗಳು ಮಿಂಚಿ ಕ್ಷಣಾರ್ಧದಲ್ಲಿ ಮಾಯವಾಗುವುದು ಅಷ್ಟೇ ಸಹಜ. ಆಧುನಿಕ ಜಗತ್ತಿನ ಜಂಜಡಗಳಿಂದ ಬೆಂದವರಿಗಂತೂ ಈ ಜಾಗ ದೇವಸ್ಥಾನದಂತೆ ಗೋಚರಿಸುವುದು ನಿಜ.
ಅಂಥದೊಂದು ದೇವಸ್ಥಾನಕ್ಕೆ ಅವತ್ತು ನಾನು ಹೋಗಿದ್ದೆ. ಅಲ್ಲಿ ನನ್ನಲ್ಲಿ ನಾನಾದಾಗ 'ಯೋಗವನೊಲ್ಲೆ ಭೋಗವನೊಲ್ಲೆ" ಎನಿಸಿತು. ಆ ಗಳಿಗೆ ಅಲ್ಲೇ ಸುಳಿದಾಡುತ್ತಿದ್ದ ನಿಶ್ಯಬ್ದ ಸಂಗೀತ ಆಲಿಸುವಾಗ ನಿಮ್ಮ ನೆನಪಾಯಿತು.
*
ಚಿಕ್ಕಮಗಳೂರು ಜಿಲ್ಲೆಯ ಕಳಸ ನಿಮಗೆ ಗೊತ್ತು. ಅನತಿ ದೂರದಲ್ಲಿರುವ ಹೊರನಾಡಿನಲ್ಲಿ ನೆಲೆಸಿರುವ ಅನ್ನಪೂರ್ಣೆ ಸದಾಪೂರ್ಣೆಯಾಗಿರುವ ಸ್ಥಳವೇ 'ಉಪಾಸನ" ಎನ್ನುವುದು ನನ್ನ ವೈಯಕ್ತಿಕ ತೀರ್ಮಾನ. ಏಳು ಗುಡ್ಡಗಳ ಕೆಳಗೆ ಮಲಗಿರುವ ' ಸಂಸೆ " ಎಂಬ ಹಳ್ಳಿಯ ತಲೆಮೇಲಿರುವ ಅಪೂರ್ವ ಪ್ರದೇಶ ಉಪಾಸನ. ಅಲ್ಲಿ ಒಂದು ಮನೆ. ಮನೆಗೆ ಹೊಂದಿಕೊಂಡಂತೆ ಅತಿಥಿ ಗೃಹಗಳು. ಯಾರೂ ಹೋಗದಿದ್ದಾಗ ಅಲ್ಲಿ ವಾಸಿಸುವವರು ಮೂರು ಜನ. ಕಲಾವಿದ ಅಬು , ಆತನ ಮಡದಿ ಲೀನಾ, ಅವರಿಬ್ಬರ ಸಂಗಾತಿ, ಯೋಗಗುರು ಮತ್ತು ಮನಃಶಾಸ್ತ್ರಜ್ಞ ಸುಕುಮಾರ್.
ಊರು ಬಿಟ್ಟು ಯಾವುದಾದರೂ ಕಾಡಿಗೆ ಹೋಗಿಬಿಡಬೇಕು ಎಂದು ಹೇಳುವವರ ಸಂಖ್ಯೆ ಕರ್ನಾಟಕ ಸಾಫ್ಟ್ವೇರ್ ಯುಗದಲ್ಲಿ ಹೆಚ್ಚಾಗುತ್ತಿರುವಾಗ ತಾವೇ ಅಂದುಕೊಂಡುದುದನ್ನು ತಮ್ಮ ಜೀವನದಲ್ಲಿ ಕಾರ್ಯರೂಪಕ್ಕೆ ತಂದವರು ಈ ಮೂವರು.
*
ಕರ್ನಾಟಕದ ಎಷ್ಟೋ ಮಂದಿ ಉಪಾಸನ ಹೆಸರೇ ಕೇಳಿಲ್ಲ. ಆದರೆ, ಯೂರೋಪ್, ಬ್ರಿಟನ್ ಮತ್ತು ಅಮೆರಿಕಾ ದೇಶಗಳಿಂದ ಶಾಂತಿ ಸಮಾಧಾನ ಮತ್ತು ಯೋಗ ಅರಸಿ ಇಲ್ಲಿಗೆ ಬಂದವರು ಬಹಳ. ಮುಂಚಿತವಾಗಿ ತಿಳಿಸಿ, ದಿನಾಂಕ ಗೊತ್ತುಮಾಡಿಕೊಂಡು ತಂಡಗಳಲ್ಲಿ ಆಗಮಿಸುವುದುಂಟು. ನಾಲಕ್ಕು, ಎಂಟು ಹತ್ತು ದಿವಸ ಇರುತ್ತಾರೆ. ಪ್ರತಿದಿನ ಶಿಬಿರಾರ್ಥಿಗಳಿಗೆ ಯೋಗ ಹಾಗೂ ಆರಾಮ ಚಿಕಿತ್ಸೆ ಸಿಗುತ್ತದೆ. ಪರಿಚಿತ ಕಾಡುಮೇಡುಗಳಲ್ಲಿ ನಿತ್ಯ ನಡೆದಾಡುವುದಕ್ಕೆ ಲೋಕಲ್ ಕಂಪನಿ ಸಿಗುತ್ತದೆ. ಸಮೀಪದ ನಿಸರ್ಗದತ್ತ ಈಜುಕೊಳಗಳು , ಮಾನವ ಸಪ್ಪಳವೇ ಕೇಳಿಬರದ ರಮಣೀಯ ತಾಣಗಳು ಹೇರಳವಾಗಿವೆ.
*
ಉಪಾಸನ ಒಂದು ಲಾಭರಹಿತ ಉದ್ದೇಶದ ಸಂಸ್ಥೆ. ಸರಕಾರ, ಅನುದಾನ, ಕಾನೂನು, ಕಟ್ಟಳೆಯಂತಹ ಹಂಗಿನಿಂದ ದೂರನಿಂತು ತನ್ನ ಸಂತೋಷಕ್ಕಾಗಿ ತಾನೇ ಕಂಕಣಕಟ್ಟಿಕೊಂಡ ಸಂಸ್ಥೆ. ಮುಖ್ಯವಾಗಿ ಬಡ ಮತ್ತು ನಿರ್ಭಾಗ್ಯ ಮಕ್ಕಳಿಗೆ ಜತೆಯಾಗಿ ನಿಂತು ಅವರ ಶಿಕ್ಷಣಕ್ಕೆ ಆಸರೆಯಾಗುವ ಸಂಸ್ಥೆ. ನೀವು ಉಪಾಸನಕ್ಕೆ ಹೋಗುವುದಾದರೆ ಎರಡು ಕೆಲಸಗಳು ಒಟ್ಟಿಗೆ ನೆರವೇರುತ್ತವೆ. ಬೆಟ್ಟದ ಮನೆಯಲ್ಲಿ , ಬೆಚ್ಚಗಿನ ಉಪಚಾರ ಸ್ವೀಕರಿಸಿ ನಾಕು ದಿವಸ ಹಾಯಾಗಿರುವ ಅವಕಾಶ ಒಂದು ; ಪ್ರಚಾರ ಬೇಡದೆ ಆತ್ಮಸಂತೋಷಕ್ಕಾಗಿ ಸಮಾಜ ಸೇವೆ ಮಾಡುವ ಕೈಗಳನ್ನು ಬಲಪಡಿಸಿದ ಸಂತೋಷ ಇನ್ನೊಂದು.
ಯಾರೋ ದೇಣಿಗೆ ಕೊಟ್ಟಿ ಫಲವಾಗಿ ನನಗೆ ಆ ಜಾಗ ಸವಿಯಾಯಿತು. ನಾನು ಕೊಟ್ಟ ದೇಣಿಗೆ ಫಲ ನಿಮಗೆ ಸಿಗುತ್ತದೆ. ಹೋಗಿ ಬನ್ನಿ.
*
ದಾರಿ :
ಸ್ವಂತ ವಾಹನದಲ್ಲಿ ಹಾಸನ ಮೂಲಕ ಕಳಸ ತಲುಪಿದರೆ ಅಲ್ಲಿಂದ ಸ್ವಲ್ಪ ದೂರ ಸಂಸೆ. ಸಂಸೆ ತಲುಪಿದರೆ ಅಲ್ಲಿಗೇ ಉಪಾಸನ ಬಂದು ನಿಮ್ಮನ್ನು ಬೆಟ್ಟಕ್ಕೆ ಕರೆದೊಯ್ಯುತ್ತದೆ. ಬೆಂಗಳೂರಿನಿಂದ ಕಳಸಕ್ಕೆ ರಸ್ತೆ ಸಾರಿಗೆ ಸಂಸ್ಥೆಯ ಐರಾವತ ಬಸ್ಸಿದೆ. ಸುಗಮ ಟ್ರಾವೆಲ್ಸ್ ಬಸ್ಸುಗಳು ಸೀದಾ ಸಂಸೆಯಲ್ಲಿ ನಿಮ್ಮನ್ನು ಇಳಿಸುತ್ತವೆ.
ಉಪಾಸನ ಬೇಸಿಗೆಗೆೆ ಚೆನ್ನ, ಮಳೆಗಾಲಕ್ಕೆ ಇನ್ನೂ ಚೆನ್ನ.
ನೆನಪಿಡಿ :
ಇದು ಪಿಕ್ನಿಕ್ ಸ್ಪಾಟ್ ಅಲ್ಲ, ಹನಿಮೂನ್ ತಾಣವಂತೂ ಅಲ್ಲವೇ ಅಲ್ಲ. ಮದ್ಯ ಮಾಂಸಾಹಾರ ಉಪಯೋಗಿಸುವ ಹಾಗಿಲ್ಲ, ಪಶ್ಚಿಮ ಘಟ್ಟ ಸಂಸ್ಕೃತಿಯ ಸಸ್ಯಾಹಾರಿ ಊಟ ಮತ್ತು ಒಳ್ಳೆಯ ಕಾಫಿ ಇಲ್ಲಿ ಲಭ್ಯ.
ಸಂಪರ್ಕ :
ಸಂಸೆ ಸುಕುಮಾರ್ : [email protected]
ದೂರವಾಣಿ : 08263249288
ಅಂಚೆ ವಿಳಾಸ :
ಉಪಾಸನ ಫೌಂಡೇಶನ್ ಆರ್.
ಮಾವಿನಕೊಂಬೆ
ಸಂಸೆ : 577124
ಕರ್ನಾಟಕ, ಇಂಡಿಯ
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications