ಯಾರು ಹಿತವರು? ಅಕ್ಕ' ಹೇಳಕ್ಕಾ?

ಪ್ರಿಯ ಕನ್ನಡಿಗ/ ಕನ್ನಡತಿ,
2006ರ ಅಕ್ಕ-ವಿಶ್ವ ಕನ್ನಡ ಸಮ್ಮೇಳನವನ್ನು ತಾನು ಮಾಡುವುದಾಗಿ ಮುಂದೆ ಬಂದಿರುವ ಕಾವೇರಿ ಕನ್ನಡ ಸಂಘದ ಚಟುವಟಿಕೆಗಳನ್ನು ಈ ಅಂಕಣದಲ್ಲಿ ನೀವು ಓದಿದ್ದೀರಿ. ಅಮೆರಿಕಾ ಮತ್ತು ಇತರ ದೇಶಗಳ ಕನ್ನಡ -ಕನ್ನಡಿಗರಿಗೆ ಸಂಭ್ರಮಮದ ಕ್ಷಣಗಳನ್ನು ಕಟ್ಟಿಕೊಡುವ ಉತ್ಸಾಹ, ಉಮೇದು ಮಾತ್ರವಲ್ಲದೆ ಅದಕ್ಕೆ ಪೂರಕವಾಗುವ ಜನತಾಂತ್ರಿಕ ವ್ಯವಸ್ಥೆಯಲ್ಲಿ ತಾನಿಟ್ಟಿರುವ ಶ್ರದ್ಧೆ ಮತ್ತು ಗೌರವಗಳನ್ನು ಅಷ್ಟರಮಟ್ಟಿಗೆ ಕಾವೇರಿಗರು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಜತೆಗೆ, ವಿಶ್ವ ಕನ್ನಡ ಸಮ್ಮೇಳನವನ್ನು ಆಯೋಜಿಸುವ ತನ್ನ ಸಾಮರ್ಥ್ಯವನ್ನು ಅಂಕಿ ಅಂಶಗಳ ಸಮೇತ ರುಜುವಾತುಪಡಿಸಲು ಅವರು ಸನ್ನದ್ಧರಾಗಿದ್ದಾರೆ.
ಅಕ್ಕನ ಕಕ್ಷೆಯಲ್ಲಿ ಬರುವ ಉತ್ತರ ಅಮೆರಿಕಾದಲ್ಲಿ ನೆಲೆಗೊಂಡಿರುವ ಸಮ್ಮೇಳನೋತ್ಸಾಹಿ ಕನ್ನಡ ಕೂಟವೊಂದು ಪ್ರಾಥಮಿಕವಾಗಿ ನಡೆದುಕೊಳ್ಳಬೇಕಾದ ಪರಿ ಇದು. ಅಮೆರಿಕಾ ಮಾತ್ರವಲ್ಲ. ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಳ್ಳುವ ಕನ್ನಡ ಸಾಹಿತ್ಯ ಸಮ್ಮೇಳನ ವ್ಯವಸ್ಥೆ ಮಾಡುವುದಾಗಿ ಇಂಡಿ, ಭರಮಸಾಗರ, ಮುಳಬಾಗಿಲು, ಪಾವಗಡ ಮುಂತಾದ ಕರ್ನಾಟಕದ 175 ತಾಲೂಕು ಕೇಂದ್ರಗಳ ಸಾಹಿತ್ಯ ಘಟಕಗಳು ಅಧ್ಯಕ್ಷರಿಗೆ ಮನವಿ ಕಳಿಸುತ್ತಾರೆ. ಕನಿಷ್ಠ ಅಗತ್ಯವಾದಷ್ಟು ಪ್ರಮಾಣದಲ್ಲಿ ಯೋಗ್ಯ ಕುಡಿಯುವ ನೀರು ಸರಬರಾಜು ಮಾಡುವ ಹೊಣೆ ಮತ್ತು ಅರ್ಹತೆಯನ್ನು ಅಂತಹ ಕೇಂದ್ರಗಳು ರುಜುವಾತುಪಡಿಸಿ ತೋರಿಸಬೇಕಾಗುತ್ತದೆ.
ಇದು ಒಂದು ಅಂಶ ಮತ್ತು ಹಂತ. ಕಾವೇರಿ ಕನ್ನಡ ಸಂಘದಷ್ಟೇ ಉತ್ಸಾಹವನ್ನು ಮೈದುಂಬಿಕೊಂಡಿರುವ ಇನ್ನೊಂದು , ಮತ್ತೊಂದು ಕನ್ನಡ ಕೂಟ ಉತ್ತರ ಅಮೆರಿಕಾದ ಪೂರ್ವ ಅಥವಾ, ಪಶ್ಚಿಮ ಅಥವಾ ಮಧ್ಯವಲಯ ಅಥವಾ ದಕ್ಷಿಣ ಭಾಗದಲ್ಲಿ ಇರಬಹುದು.'ನಾನೂ ಸಮ್ಮೇಳನ ನಡೆಸಬಲ್ಲೆ" ಎಂಬ ಉತ್ಸಾಹ ಅಂತಹದೊಂದು ಕನ್ನಡ ಕೂಟಕ್ಕೆ ಯಾಕಿರಬಾರದು?
ನನಗೆ ತಿಳಿದಂತೆ ಬೇರಾವ ಕನ್ನಡ ಕೂಟವೂ ಈ ಬಗೆಯ ಉತ್ಸಾಹವನ್ನು ಜಗಜ್ಜಾಹೀರು ಮಾಡಿಲ್ಲ. ಆದರೆ, ಸಮ್ಮೇಳನವನ್ನು ಸಮರ್ಥವಾಗಿ ಏರ್ಪಡಿಸಬಲ್ಲ ಶಕ್ತಿ ಮತ್ತು ಯುಕ್ತಿ ಇರುವ ಬೇಕಾದಷ್ಟು ಕನ್ನಡ ಸಂಘಗಳಿವೆ. ಒಂದೊಂದೂ ಕನ್ನಡ ಕೂಟಗಳು ತನ್ನಷ್ಟಿಗೆ ತಾನೆ ಒಂದು ಮರ. ಕಾವೇರಿ ಬೋಧಿವೃಕ್ಷವಾದರೆ, ವಿದ್ಯಾರಣ್ಯ ಔದುಂಬರ ವೃಕ್ಷ. ನ್ಯೂಯಾರ್ಕ್ ಕನ್ನಡ ಸಂಘ ಆಲದ ಮರವಾದರೆ, ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ ಅರಳಿ ಮರ. ಫ್ಲಾರಿಡಾ ಶ್ರೀಗಂಧ , ಹ್ಯೂಸ್ಟನ್ ಹೊನ್ನೆ, ಪಂಪ ಮತ್ತಿ, ಲಾಸ್ಏಂಜಲಿಸ್ನ ಕಸಾಸಂ ಬೆಟ್ಟದ ನೆಲ್ಲಿಕಾಯಿ ಮರ.
ಮರಗಳ ಜತೆಗೆ ಗಿಡ ಗಂಟಿಗಳೂ ಉಂಟು. ತುಳಸಿ, ಮೊಲ್ಲೆ, ಜಾಕಾಯಿ ಜಾಪತ್ರೆ, ಪನ್ನೇರಲೆ ಪಾರಿಜಾತಗಳಂಥ ಕನ್ನಡ ಶಕ್ತಿಕೇಂದ್ರಗಳು ಬೇಕಾದಷ್ಟಿವೆ. ಇಂತಹ ಯಾವೊಂದು ಕೇಂದ್ರವೂ ಸಮ್ಮೇಳನ ನಡೆಸುವ ಉಮೇದು ಪ್ರಕಟಿಸಬಹುದು. ವಿಶ್ವ ಕನ್ನಡ ಸಮ್ಮೇಳನದ ಜವಾಬ್ದಾರಿಯನ್ನು ಯಾವ ಕೇಂದ್ರವೇ ಕೈಗೆತ್ತಿಕೊಂಡರೂ ಅಕ್ಕನ ವ್ಯಾಪ್ತಿಗೆ ಬರುವುದರಿಂದ ಸಮ್ಮೇಳನ ಎಲ್ಲಿ ನಡೆದರೆ ಸೂಕ್ತ ಎನ್ನುವುದನ್ನು ಅಕ್ಕ ನಿರ್ದೇಶಕ ಮಂಡಳಿ ಅಂತಿಮವಾಗಿ ನಿರ್ಧರಿಸುತ್ತದೆ. ಈ ನಿಯಮ ಕೇವಲ ಪ್ರೋಟೋಕಾಲ್ಗೆ ಪ್ರತೀಕವಾಗಿರದೆ ಉನ್ನತ ಜವಾಬ್ದಾರಿಯ ಲಕ್ಷಣವಾಗಿಯೂ ಆಗಿ ನಿಲ್ಲುತ್ತದೆ.
ಪಂಪ ಕನ್ನಡ ಕೂಟದ ಸದಸ್ಯ , ಮಿಷಿಗನ್ ಪ್ರಜೆ ಡಾ. ಕುದುರು ಮುರಳಿ ಅಕ್ಕದ ಹಾಲಿ ಅಧ್ಯಕ್ಷರು. 2006 ರ ಸಮ್ಮೇಳನ ತಾಣದ ಬಗ್ಗೆ ಅವರು ಮತ್ತು ಅವರ ತಂಡದ ಒಲವು ನಿಲವುಗಳೇನು ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಅಧ್ಯಕ್ಷರ ಮೇಜಿನ ಮೇಲೆ ಎಷ್ಟು ಪ್ರೊಪೋಸಲ್ಗಳು ಇವೆ?, ಗೊತ್ತಿಲ್ಲ.
ಆರ್ಲ್ಯಾಂಡೋದ ಗೇಲಾರ್ಡ್ ಪಾಮ್ ಹೋಟಲಿನ ಒಂದು ಕಾಫಿ ಶಾಪ್ನಲ್ಲಿ ಹರಟೆ ಹೊಡೆಯುತ್ತಿದ್ದಾಗ 'ಮುಂದಿನ ಸಮ್ಮೇಳನ ಲಾಸ್ವೆಗಾಸ್ನಲ್ಲಿ ನಡೆಸಬಹುದು" ಎಂದು ಯಾರೋ ಪುಕ್ಕಟೆ ಸಲಹೆ ಕೊಟ್ಟಿದ್ದು ನನ್ನ ಕಿವಿಗೆ ಬಿದ್ದಿತ್ತು.
ಕ್ಯಾಸಿನೋಗಳ ಸ್ವರ್ಗದಲ್ಲಿ ಕನ್ನಡಿಗರೂ ಇದ್ದಾರಾ? ನಾನು ಆಶ್ಟರ್ಯ ಚಕಿತನಾಗಿದ್ದೆ. ಈ ಮಧ್ಯೆ ಸಮ್ಮೇಳನದ ಮೊಗಸಾಲೆಯಲ್ಲಿ ಕೆಕೆಎನ್ಸಿ ಅಧ್ಯಕ್ಷ ಯೋಗೇಶ್ ದೇವರಾಜ್ ಭೇಟಿಯಾಗಿ ಮುಂದಿನ ಸಮ್ಮೇಳನದ ಬಗ್ಗೆ ಕ್ಯಾಜುಯಲ್ ಆಗಿ ನನ್ನೊಂದಿಗೆ ಮಾತಾಡಿದ್ದರು. 'ನೀವು ಮಾಡುತ್ತೀರಾ" ಎಂಬ ನನ್ನ ಪ್ರಶ್ನೆಗೆ ದೇವರಾಜ್ ಕೊಟ್ಟ ಉತ್ತರ ತಮಾಷೆಯಾಗಿತ್ತು. 'ಬೇ ಏರಿಯಾದಲ್ಲಿ ಪ್ರತಿ ವಾರವೂ ಒಂದು ಸಮ್ಮೇಳನ ನಡೆಯತ್ತೆ. ನಾನಾ ಬಗೆಯ ಕಾರ್ಯಕ್ರಮಗಳಲ್ಲಿ ಬೇಜಾನ್ ಜನ ಭಾಗವಹಿಸುತ್ತಾರೆ. ಒಂದು ಸಣ್ಣ ಹಬ್ಬವಾದರೆ 800-1000 ಜನ ಸೇರ್ತಾರೆ"
ಎಂದು ಹೇಳಿದ ಅವರು ಬಿಟ್ಟ ಕಣ್ಣು ತೆರೆದ ಬಾಯಿ ಆಗಿದ್ದರು. ಅವರ ಮಾತಿನ ಇಂಗಿತಾರ್ಥ ನನಗೆ ಇವತ್ತಿನವರೆವಿಗೂ ಹೊಳೆದಿಲ್ಲ.
ಅಂತೆಯೇ, ನ್ಯೂಯಾರ್ಕಿನ ಕೆಲವು ಕನ್ನಡಿಗರೂ ತಮ್ಮ ಅಭಿಪ್ರಾಯಗಳನ್ನು ಸಮ್ಮೇಳನದ ಕೊನೆಯ ದಿನ ನನ್ನೊಂದಿಗೆ ಹಂಚಿಕೊಂಡಿದ್ದರು.'2000 ಇಸವಿಯ ಸಮ್ಮೇಳನವನ್ನು ನಾವು ಮಾಡಬೇಕಾಗಿತ್ತು . ಆದರೆ , 9/11ರ ಕಾರಣಗಳಿಂದಾಗಿ ಸಮ್ಮೇಳನ ಡೆಟ್ರಾಯಿಟ್ಗೆ ವರ್ಗವಾಯಿತು. ಈ ಬಾರಿ ನಾವು ಮಾಡಬಹುದು, Security is not that big an issue, we guess ಎಂದು ತೀರ್ಮಾನಕೊಟ್ಟು ನ್ಯೂಯಾರ್ಕ್ ವಿಮಾನ ಹತ್ತಿದರು. ಆವತ್ತೇ ಮೊದಲು, ಆವತ್ತೇ ಕೊನೆ. ಅವರಿಂದ ಏನೂ ಸಮಾಚಾರ ಬಂದಿರುವುದಿಲ್ಲ.
ಕೊನೆಗೂ ಮುಖ್ಯವಾಗುವುದು ಸಮ್ಮೇಳನಗಳಲ್ಲ. ನಾವು ನಾವೇ ನಿರ್ಮಿಸಿಕೊಳ್ಳುವ ನಿಯಮಗಳನ್ನು ನಾವೇ ಮುರಿಯಬಾರದು. ಮುರಿದರೆ, ಕನ್ನಡದ ಇ-ಮೇಲ್ ಕಾಕಿಬೋಕಿಗಳಿಗೆ ವೃಥಾ ಆಹಾರ ಸಿಕ್ಕಂತಾಗತ್ತೆ.
ನಮಸ್ಕಾರ!
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications