ಅವನೆಡೆಗೇ ಕಣ್ಣರಳಿಸಿ ಮೋಹಗೊಳ್ಳುವ ಪರಿಯಿದೆಯಲ್ಲ?
ದುರಂತವೆಂದರೆ, ನಾವು ಆತ್ಮೀಯತೆ ಕಳೆದುಕೊಂಡಿದ್ದೇವೆ ಎಂಬುದು ಅರ್ಥವಾಗಲಿಕ್ಕೇ ತುಂಬಾ ಸಮಯ ಹಿಡಿಯುತ್ತದೆ. ಒಂಥರಾ ಮರಮೋಸದ ಕಾಯಿಲೆ. ಕ್ಯಾನ್ಸರ್ ಬಂದು ಅದು ಮೊದಲ stageನಲ್ಲೇ ಇದೆ ಅಂತ ಗೊತ್ತಾದರೆ ಅದಕ್ಕೆ ಔಷಧಿ ಇದೆ. ಆದರೆ ಹೆಚ್ಚಿನ ಸಲ. ಅದು ಗೊತ್ತಾಗುವುದೇ ಕೊನೆಯದಾದ ನಾಲ್ಕನೇ stageನಲ್ಲಿ! ಮದುವೆಗಳ ವಿಷಯದಲ್ಲಿ ಇಂಥ ಪ್ರಮಾದಗಳಾಗುತ್ತವೆ.
ಆದರೆ, ಅಷ್ಟು ಚೆನ್ನಾಗಿದ್ದ ನನ್ನ ಸಂಸಾರ, ನನ್ನ ದಾಂಪತ್ಯ ಹೀಗಾಗಿ ಹೋಯಿತಲ್ಲಾ ಅಂತ ಯಾರೂ ತಲೆ ಚಚ್ಚಿಕೊಳ್ಳಬೇಕಾಗಿಲ್ಲ. ಒಣಗಿದ ಪ್ರತಿ ಮರವೂ ಚಿಗುರಬಹುದು. ಹಣ್ಣೆಲೆಗೂ ಆಯುಷ್ಯವುಂಟು. ಇಂಥ ಸಂದರ್ಭದಲ್ಲಿ ಬೇಗ ಎಚ್ಚರಗೊಂಡಷ್ಟೂ ಬೇಗ ಚಿಕಿತ್ಸೆ, ಬೇಗ ಚೇತರಿಕೆ ಸಾಧ್ಯ. ಮೊದಲಿಗಿಂತ ಈಗ ಪರಿಸ್ಥಿತಿ ಸುಧಾರಿಸಿದೆ. Marriage counselling ಅಂತಲೇ ಒಂದು ವಿಶೇಷ ವಿಜ್ಞಾನ, ತರಬೇತಿ ಬೆಳೆದು ನಿಂತಿವೆ. ಬೇರೆ ಯಾರೂ ಬಗೆಹರಿಸಲಾಗದ ವೈವಾಹಿಕ ಸಮಸ್ಯೆಯನ್ನು ಧಾರವಾಡದ ಡಾ. ಆನಂದ ಪಾಂಡುರಂಗಿಯಥ ಮನೋವೈದ್ಯರು ಪರಿಹರಿಸಿ ಬಿಡತ್ತಾರೆ.

ಇಷ್ಟಾಗಿ, ಎಲ್ಲ ಹಾದರಗಳಿಗಂತ, ಮದುವೆಯಾಚೆಗಿನ ಸಂಬಂಧಗಳಿಗಿಂತ, parallel livingಗಿಂತ ಮಧುರವಾದದ್ದು ದಾಂಪತ್ಯ. ಅನೇಕ ಸಲ ನಾವು ಅದರ ಸಂತಸ, ಖುಷಿ, ರುಚಿಯನ್ನಷ್ಟೆ ಉಂಡೆದ್ದರುತ್ತೇವೆ. ಆದರೆ ರುಚಿ ಬದಲಿಸಿಕೊಳ್ಳುವ, ಮತ್ತೆ ಅವಳಲ್ಲಿಗೇ ಹಿಂತಿರುಗುವ, ಮತ್ತೆ ಅವನೆಡೆಗೇ ಕಣ್ಣರಳಿಸಿ ಮೋಹಗೊಳ್ಳುವ ಪರಿಯಿದೆಯಲ್ಲ? ಅದರ ಮಾಧುರ್ಯವೇ ಬೇರೆ. [ಸ್ನೇಹಸೇತು : ಹಾಯ್ ಬೆಂಗಳೂರು]












Click it and Unblock the Notifications