ಇಬ್ಬರನ್ನೂ ಬೆಸೆಯಬಲ್ಲ ಏಕೈಕ ಮಂತ್ರ 'ಆತ್ಮೀಯತೆ'
ನಿಜ, ಪ್ರತಿ ಮದುವೆಯಲ್ಲೂ- ಸಂಸಾರದಲ್ಲೂ boredom ಇದ್ದೇ ಇರುತ್ತದೆ. 'ಏನೇ ಪ್ರೀತಿಯಿಟ್ಟುಕೊಂಡು ಮದುವೆಯಾದರೂ ಕ್ರಮೇಣ ಆಕೆಗೆ ಅವನು ಮತ್ತು ಅವನಿಗೆ ಆಕೆ ಬೋರ್ ಆಗತೊಡಗುತ್ತಾರೆ. ಈ ಬದುಕೇ ಬೋರು ಹೊಡೆಯತೊಡಗಿದೆ ಅನ್ನಿಸಬಹುದು. 3 ವರ್ಷಕ್ಕೆ ಈ ಬೋರು ಶುರುವಾದರೆ ಅದು ಏಳನೆಯ ವರ್ಷಕ್ಕೆ ಮತ್ತೂ ಹೆಚ್ಚಿಸಿ, ಹದಿನಾರನೇ ವರ್ಷದ ಹೊತ್ತಿಗೆ ಭಯಂಕರ ಸ್ಥಿತಿ ತಲುಪಿರುತ್ತದೆ ಎಂಬುದು ಇತ್ತೀಚಿನ ರಿಸರ್ಚು ಹೊರ ಹಾಕಿರುವ ಸತ್ಯ.
ಯಾವಾಗ ದಂಪತಿಗಳು ಪರಸ್ಪರ ಬೋರ್ ಆಗುತ್ತಾರೋ, ಆಗ ಸಹಜವಾಗಿಯೇ ಇಬ್ಬರ ನಡುವಿನ ಆತ್ಮೀಯ ಭಾವ ಕಡಿಮೆಯಾಗುತ್ತ ಹೋಗುತ್ತದೆ. ಇದರಿಂದಾಗಿ ಮದುವೆಯ ಅಥವಾ ದಾಂಪತ್ಯದಲ್ಲಿ ಸಿಗಬೇಕಾದ ತೃಪ್ತಿ, satisfaction ನಶಿಸಿ ಹೋಗುತ್ತದೆ. ಉಳಿದೆಲ್ಲಕ್ಕಿಂತ ಇದು ಹೆಚ್ಚು ಅಪಾಯಕಾರಿ. ದಾಂಪತ್ಯದಲ್ಲಿ ಇಡೀ ನೂರು ವರ್ಷ ಎಕ್ಸೈಟ್ ಮೆಂಟ್ ಇರಲು ಸಾಧ್ಯವಿಲ್ಲ. ಆದರೆ ಮದುವೆಯನ್ನು ಗಟ್ಟಿ ಬಂಧವನ್ನಾಗಿ ಇಡಬಲ್ಲಂತಹುದು ಇವೆರಡನ್ನೂ ಮೀರಿದ 'ಆತ್ಮೀಯತೆ'. ಮುಖ್ಯವಾಗಿ ಒಂದು ದಾಂಪತ್ಯವನ್ನು ಕೊನೆ ತನಕ ಕಾಯುವುದೇ ಈ ಆತ್ಮೀಯತೆ.

ಗಂಡನ ಹುಳುಕು ಹಲ್ಲು, ಜಿಪುಣತನ, ಕುಡಿತ, ಹೆಂಡತಿಯ ಬೊಜ್ಜು, ಅವಳ ಪೆಡಸು ಮಾತು, ಕೆಟ್ಟ ಅಡುಗೆ-ಎಲ್ಲವನ್ನೂ ಮರೆಯಿಸಿ ಅವರಿಬಬ್ರನ್ನು ಕಡೆ ತನಕ ಬಂಧಿಸಿಡಬಲ್ಲ ಒಂದೇ ಬೆಸುಗೆಯೆಂದರೆ ಆತ್ಮೀಯತೆ. ಆದರೆ ಇಂಥ ಆತ್ಮೀಯತೆ ಕಳೆದುಕೊಂಡು seven years itchಗೆ ಒಳಗಾಗುವ parallel livingನ ಶಾಪಕ್ಕೆ ತುತ್ತಾಗುವ ಮದುವೆಗಳು ಅದೆಷ್ಟೋ. ಇವು ಜಗತ್ತಿನ ಅತ್ಯುತ್ತಮ ಮದುವೆಗಳಿಗೆ ಆಗಬಹುದು, ಪ್ರೇಮ ವಿವಾಹಗಳಿಗೆ ಆಗಬಹುದು, ಹಿರಿಯರು ನೋಡಿದ ಮದುವೆಗಳಿಗೆ ಆಗಬಹುದು, ಅತ್ಯಂತ ರಸವತ್ತಾದ ಸಾಂಗತ್ಯದ ಫಲವಾಗಿ ಆದ ಗಾಂಧರ್ವ ವಿವಾಹಗಳಿಗೂ ಆಗಬಹುದು. ತಪ್ಪಿಸಿಕೊಂಡವರು ಅಪರೂಪ. [ಮೋಹಕ್ಕೊಳಗಾಗುವ ಆ ಪರಿ...]
More From
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications