ಅಕ್ಕಿ ಅಷ್ಟ ಯಾಕ? ಇಂದ ಮಾರ್ಕ್ಸೂ ತುಟ್ಟಿ!

ನಮ್ಮ ಹಿಂದಿನ ತಲೆಮಾರಿನಲ್ಲಿ, ಕಾಲೇಜು ಶಿಕ್ಷಣ ಪಡೆಯುವವರೇ ಕಮ್ಮಿಯಿರುತ್ತಿದ್ದಾಗ, ಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳಿರುವ ಕಾಲೇಜು ಶಿಕ್ಷಕರು ಕಾಲೇಜು ಶುರುವಾದ ತಕ್ಷಣ ವಿದ್ಯಾರ್ಥಿಗಳಲ್ಲಿ ತಮ್ಮ ಭಾವಿ ಅಳಿಯನನ್ನು ಹುಡುಕಿ, ಅವನಿಗೆ ತಮ್ಮ ಕೈಲಾದಷ್ಟು ಹೆಚ್ಚಿಗೆ ಮಾರ್ಕು ಕೊಟ್ಟು, ತಮ್ಮ ಸ್ನೇಹಿತ ಉಪನ್ಯಾಸಕರಿಂದ ಕೊಡಿಸಿ, ಡಿಗ್ರಿ ಮುಗಿದಮೇಲೆ ಮಗಳನ್ನು ಕೊಡತಿದ್ದರಂತೆ. ಆಗ ಕುಟುಂಬ ಯೋಜನೆ ಇನ್ನೂ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿರಲಿಲ್ಲವಾಗಿ ಗುರುಪುತ್ರಿಯರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇರುತ್ತಿತಂತೆ. ಆದರೆ ನಮ್ಮ ಕಾಲೇಜುಕಾಲದ ಹೊತ್ತಿಗೆ ಆ ಸುಭಿಕ್ಷದ ಕಾಲ ಹೊರಟೋಗಿತ್ತು. ಮಗಳನ್ನು ಕೊಡೋದು ದೂರ ಉಳಿಯಿತು, ನಾವು ಕಷ್ಟಪಟ್ಟು ಓದಿ, ನಿಯತ್ತಾಗಿ ಬರೆದ ಉತ್ತರಗಳಿಗೆ ಮಾರ್ಕು ಕೊಡಲು ಜಿಪುಣತನ ಮಾಡುತ್ತಿತ್ತು ನಮ್ಮ ಗುರುವೃಂದ. ಇರಲಿ, ಎಲ್ಲಕ್ಕೂ ಪಡೆದುಬಂದಿರಬೇಕು...
ಮಾರ್ಕುಗಳನ್ನು ತಮ್ಮ ಮನೆಯ ಗಂಟಿನಂತೆ ಭಾವಿಸುವುದು ಹೆಚ್ಚುಕಡಿಮೆ ಎಲ್ಲಾ ಗುರುಗಳ ಸಾಮಾನ್ಯ ಗುಣವಾಗಿತ್ತಾದರೂ, ಕೆಲ ಗುರುಜನ ಮಾರ್ಕುಗಳ ವಿಷಯದಲ್ಲಿ ಇನ್ನೂ ಕೆಲ ವಿಶೇಷತೆಗಳನ್ನು ಹೊಂದಿದ್ದರು. ಒಬ್ಬ ಗುರುಗಳು ತಮ್ಮ ವಿಷಯದಲ್ಲಿ ನಾವು ಪಡೆಯುವ ಮಾರ್ಕುಗಳ ಬಗ್ಗೆ ಎಷ್ಟು ತಲೆಕೆಡಿಸಿಕೊಂಡಿರುತ್ತಿದ್ದರೆಂದರೆ ನಾವು ಯಾವಾಗಲೂ ಅವರ ವಿಷಯವನ್ನೇ ಓದಬೇಕೆಂದು ಬಯಸುತ್ತಿದ್ದರು!
ಇನ್ನೊಬ್ಬ ಗುರುಗಳು ತಮ್ಮ ವಿಷಯದಲ್ಲಿ ಯಾರಿಗೂ, ಯಾವತ್ತಿಗೂ ನೂರಕ್ಕೆ ಅರವತ್ತೈದಕ್ಕಿಂತ ಹೆಚ್ಚು ಮಾರ್ಕು ಕೊಡುತ್ತಿರಲಿಲ್ಲ. ಅದ್ಯಾಕೆ ಹಾಗೆ ಎಂದು ಒಬ್ಬ ವಿದ್ಯಾರ್ಥಿ ಕೇಳಿದಾಗ ನಮ್ಮ ಗುರುವರ್ಯರು "ಅಲ್ಲೋ ತಮ್ಮ್ಯಾ, ನಾ ಕಲಿಯುವಾಗ ನನಗ ಈ ವಿಷಯದಾಗ ನನಗ ಅರವತ್ತೈದು ಮಾರ್ಕ್ಸ್ ಬಂದಿದ್ವು. ನೀನು ನನ್ನ ಕೈಯಾಗ ಕಲ್ತು ನನಗಿಂತ ಶ್ಯಾಣ್ಯಾ ಆಗಿರ್ತೀಯೇನೂ? ಮತ್ತ, ನಿನಗ ಅರವತ್ತೈದಕ್ಕಿಂತಾ ಹೆಚ್ಚಿಗಿ ಹ್ಯಾಂಗ್ ಕೊಡಾಕ್ ಬರ್ತೈತಿ?" ಎಂದು ದಬಾಯಿಸಿದ್ದರಂತೆ ಎಂಬ ಕತೆ ನಮ್ಮ ಕಾಲೇಜಿನ ಮೌಖಿಕ ಸಾಹಿತ್ಯದಲ್ಲಿ ದಾಖಲಾಗಿತ್ತು. ರೂಪಾಯಿಗೆ ಸೇರು ಅಕ್ಕಿ ಬರತಿದ್ದ ಕಾಲದಲ್ಲಿ ಕಾಲೇಜು ಕಲಿತ ಗುರುಗಳಿಗೆ, ನಲವತ್ತು ರೂಪಾಯಿಗೆ ಕಿಲೋ ಅಕ್ಕಿಯಾಗಿರುವ ಈ ಕಾಲದಲ್ಲಿ ಉಳಿದಿದ್ದೆಲ್ಲಾ ತುಟ್ಟಿಯಾದರೂ ಮನುಷ್ಯನ ಜೀವ ಮತ್ತು ಮಾರ್ಕ್ಸು ಮಾತ್ರ ಸೋವಿ ಎಂದು ಯಾರು ಹೇಳ್ಬೇಕು?
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications