ಅಕ್ಕಿ ಅಷ್ಟ ಯಾಕ? ಇಂದ ಮಾರ್ಕ್ಸೂ ತುಟ್ಟಿ!

ನಮ್ಮ ಹಿಂದಿನ ತಲೆಮಾರಿನಲ್ಲಿ, ಕಾಲೇಜು ಶಿಕ್ಷಣ ಪಡೆಯುವವರೇ ಕಮ್ಮಿಯಿರುತ್ತಿದ್ದಾಗ, ಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳಿರುವ ಕಾಲೇಜು ಶಿಕ್ಷಕರು ಕಾಲೇಜು ಶುರುವಾದ ತಕ್ಷಣ ವಿದ್ಯಾರ್ಥಿಗಳಲ್ಲಿ ತಮ್ಮ ಭಾವಿ ಅಳಿಯನನ್ನು ಹುಡುಕಿ, ಅವನಿಗೆ ತಮ್ಮ ಕೈಲಾದಷ್ಟು ಹೆಚ್ಚಿಗೆ ಮಾರ್ಕು ಕೊಟ್ಟು, ತಮ್ಮ ಸ್ನೇಹಿತ ಉಪನ್ಯಾಸಕರಿಂದ ಕೊಡಿಸಿ, ಡಿಗ್ರಿ ಮುಗಿದಮೇಲೆ ಮಗಳನ್ನು ಕೊಡತಿದ್ದರಂತೆ. ಆಗ ಕುಟುಂಬ ಯೋಜನೆ ಇನ್ನೂ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿರಲಿಲ್ಲವಾಗಿ ಗುರುಪುತ್ರಿಯರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇರುತ್ತಿತಂತೆ. ಆದರೆ ನಮ್ಮ ಕಾಲೇಜುಕಾಲದ ಹೊತ್ತಿಗೆ ಆ ಸುಭಿಕ್ಷದ ಕಾಲ ಹೊರಟೋಗಿತ್ತು. ಮಗಳನ್ನು ಕೊಡೋದು ದೂರ ಉಳಿಯಿತು, ನಾವು ಕಷ್ಟಪಟ್ಟು ಓದಿ, ನಿಯತ್ತಾಗಿ ಬರೆದ ಉತ್ತರಗಳಿಗೆ ಮಾರ್ಕು ಕೊಡಲು ಜಿಪುಣತನ ಮಾಡುತ್ತಿತ್ತು ನಮ್ಮ ಗುರುವೃಂದ. ಇರಲಿ, ಎಲ್ಲಕ್ಕೂ ಪಡೆದುಬಂದಿರಬೇಕು...
ಮಾರ್ಕುಗಳನ್ನು ತಮ್ಮ ಮನೆಯ ಗಂಟಿನಂತೆ ಭಾವಿಸುವುದು ಹೆಚ್ಚುಕಡಿಮೆ ಎಲ್ಲಾ ಗುರುಗಳ ಸಾಮಾನ್ಯ ಗುಣವಾಗಿತ್ತಾದರೂ, ಕೆಲ ಗುರುಜನ ಮಾರ್ಕುಗಳ ವಿಷಯದಲ್ಲಿ ಇನ್ನೂ ಕೆಲ ವಿಶೇಷತೆಗಳನ್ನು ಹೊಂದಿದ್ದರು. ಒಬ್ಬ ಗುರುಗಳು ತಮ್ಮ ವಿಷಯದಲ್ಲಿ ನಾವು ಪಡೆಯುವ ಮಾರ್ಕುಗಳ ಬಗ್ಗೆ ಎಷ್ಟು ತಲೆಕೆಡಿಸಿಕೊಂಡಿರುತ್ತಿದ್ದರೆಂದರೆ ನಾವು ಯಾವಾಗಲೂ ಅವರ ವಿಷಯವನ್ನೇ ಓದಬೇಕೆಂದು ಬಯಸುತ್ತಿದ್ದರು!
ಇನ್ನೊಬ್ಬ ಗುರುಗಳು ತಮ್ಮ ವಿಷಯದಲ್ಲಿ ಯಾರಿಗೂ, ಯಾವತ್ತಿಗೂ ನೂರಕ್ಕೆ ಅರವತ್ತೈದಕ್ಕಿಂತ ಹೆಚ್ಚು ಮಾರ್ಕು ಕೊಡುತ್ತಿರಲಿಲ್ಲ. ಅದ್ಯಾಕೆ ಹಾಗೆ ಎಂದು ಒಬ್ಬ ವಿದ್ಯಾರ್ಥಿ ಕೇಳಿದಾಗ ನಮ್ಮ ಗುರುವರ್ಯರು "ಅಲ್ಲೋ ತಮ್ಮ್ಯಾ, ನಾ ಕಲಿಯುವಾಗ ನನಗ ಈ ವಿಷಯದಾಗ ನನಗ ಅರವತ್ತೈದು ಮಾರ್ಕ್ಸ್ ಬಂದಿದ್ವು. ನೀನು ನನ್ನ ಕೈಯಾಗ ಕಲ್ತು ನನಗಿಂತ ಶ್ಯಾಣ್ಯಾ ಆಗಿರ್ತೀಯೇನೂ? ಮತ್ತ, ನಿನಗ ಅರವತ್ತೈದಕ್ಕಿಂತಾ ಹೆಚ್ಚಿಗಿ ಹ್ಯಾಂಗ್ ಕೊಡಾಕ್ ಬರ್ತೈತಿ?" ಎಂದು ದಬಾಯಿಸಿದ್ದರಂತೆ ಎಂಬ ಕತೆ ನಮ್ಮ ಕಾಲೇಜಿನ ಮೌಖಿಕ ಸಾಹಿತ್ಯದಲ್ಲಿ ದಾಖಲಾಗಿತ್ತು. ರೂಪಾಯಿಗೆ ಸೇರು ಅಕ್ಕಿ ಬರತಿದ್ದ ಕಾಲದಲ್ಲಿ ಕಾಲೇಜು ಕಲಿತ ಗುರುಗಳಿಗೆ, ನಲವತ್ತು ರೂಪಾಯಿಗೆ ಕಿಲೋ ಅಕ್ಕಿಯಾಗಿರುವ ಈ ಕಾಲದಲ್ಲಿ ಉಳಿದಿದ್ದೆಲ್ಲಾ ತುಟ್ಟಿಯಾದರೂ ಮನುಷ್ಯನ ಜೀವ ಮತ್ತು ಮಾರ್ಕ್ಸು ಮಾತ್ರ ಸೋವಿ ಎಂದು ಯಾರು ಹೇಳ್ಬೇಕು?
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications