"ಮೇ ತನಕ ಮರೆಯೋಲ್ಲ ಜೋಗಿ... ಆಮೇಲೆ ನೋಡೋಲ್ಲ ತಿರುಗಿ!"
ಬೇಡುವೆನು ವರವನ್ನು
ಕೊಡೆ ತಾಯಿ ಮತವನ್ನು
'ಮೇ ' ತನಕ ಮರೆಯೋಲ್ಲ ಜೋಗಿ....
ಆಮೇಲೆ ನೋಡೋಲ್ಲ " ತಿರುಗಿ " ! ಎಂಬ ಹಾಸ್ಯ ಚಟಾಕಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದೇ ಅರ್ಥವನ್ನು ಸ್ಫುರಿಸುವ ಅರ್ಥವತ್ತಾದ ಕಾರ್ಟೂನ್ ಅನ್ನು ರಚಿಸಿದ್ದಾರೆ ಕಾರ್ಟೂನಿಸ್ಟ್ ಶಂಕರ್.
In Pics: ಕಚಗುಳಿ ಇಡುವ ಚುನಾವಣಾ ಕಾರ್ಟೂನ್: ನಕ್ಕು ಹಗುರಾಗಿ
ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನ ಬಾಕಿ ಉಳಿದಿದೆ. ಈ ಹಿನ್ನೆಲೆಯಲ್ಲಿ ಮತದಾರನ ಬಳಿ ಬಂದು ಆತನ ಸಮಸ್ಯೆಗಳನ್ನೆಲ್ಲ ಸಹನೆಯಿಂದ ಆಲಿಸಿ, ಪುಟಗಟ್ಟಲೆ ಭರವಸೆ ನೀಡಿ ಹೋಗುವ ರಾಜಕಾರಣಿಗಳು ನಂತರ ಮತ್ತೆ ಆತನನ್ನು ಭೇಟಿ ಮಾಡುವುದಕ್ಕೆ ಬರುವುದು ಐದು ವರ್ಷದ ನಂತರವೇ. ರಾಜಕೀಯದ ಈ ದುರಂತವನ್ನು ವಕ್ರರೇಖೆಯ ಮೂಲಕ ನೇರವಾಗಿ ತೋರಿಸಿಕೊಟ್ಟಿದ್ದಾರೆ ಶಂಕರ್.

ಕಾಫಿ ಮಾರಿ ದುಡಿಮೆ ಮಾಡುತ್ತಿರುವ ಶಂಕರ್ ಕಾರ್ಟೂನಿಸ್ಟ್ ಅವರಿಗೆ ವ್ಯಂಗ್ಯಚಿತ್ರ ಬರೆಯುವುದು ಪ್ರವೃತ್ತಿ. ವಕ್ರ ರೇಖೆಗಳ ಮೂಲಕವೇ ಸಮಾಜದ ಡೊಂಕನ್ನು, ರಾಜಕಾರಣಿಗಳ ಕೊಂಕನ್ನು ತೋರಿಸುವ ಈ ಅರ್ಥಗರ್ಭಿತ ವ್ಯಂಗ್ಯಚಿತ್ರ ನಿಮಗಾಗಿ ಇಲ್ಲಿದೆ.











Click it and Unblock the Notifications