ಗುರುಫಲ : ವೃಷಭ, ಸಿಂಹ, ಮೀನ, ವೃಶ್ಚಿಕ ರಾಶಿಗೆ ಸೂಪರ್
ಕಳೆದ ವರ್ಷದ ಗುರು ಸಂಚಾರದ ಫಲವನ್ನೊದಿದವರಿಗೆ ಈ ವರ್ಷವೂ ಗುರು ಸಂಚಾರದ ಫಲಾಫಲ ಓದುವ ನಿರೀಕ್ಷೆ ಇದ್ದೇ ಇರುತ್ತದೆ. ಹೀಗಾಗಿ 2016ರ ಆಗಸ್ಟ್ 11ರಂದು ಗುರುವು ಸಿಂಹ ರಾಶಿಯಿಂದ ಕನ್ಯಾ ರಾಶಿಗೆ ಕಾಲಿಟ್ಟಿದ್ದಾರೆ. ಗುರು ಸಂಚಾರವು ಒಂದು ರಾಶಿಯಲ್ಲಿ 1 ವರ್ಷ ಕಾಲ ಸಂಚಾರ ಮಾಡುತ್ತಾನೆ. ಗುರು ಸಂಚಾರದ ಫಲಾಫಲ ಪ್ರತಿಯೊಂದು ರಾಶಿಗೆ ಹೇಗಿರಲಿದೆ ಎಂಬುದನ್ನು ಪ್ರತಿ ರಾಶಿಗನುಗುಣವಾಗಿ ವಿವರವಾಗಿ ಇಲ್ಲಿ ನೀಡಲಾಗಿದೆ.
ಗುರುವು ಕನ್ಯಾ ರಾಶಿಯಲ್ಲಿ ಮುಂದಿನ ವರ್ಷದ ಸೆಪ್ಟೆಂಬರ್ 11ರವರೆಗೂ ಕನ್ಯಾ ರಾಶಿಯಲ್ಲಿಯೇ ಇರುತ್ತಾನೆ. ಆ ನಂತರ ಮುಂದಿನ ರಾಶಿ ತುಲಾಗೆ ಪ್ರವೇಶ ಮಾಡುತ್ತಾನೆ. ಮತ್ತೆ ಒಂದು ವರ್ಷದ ಬಳಿಕ ವೃಶ್ಚಿಕ ರಾಶಿಗೆ. ಹೀಗೆ ಪ್ರತಿ ವರ್ಷವೂ ಒಂದೊಂದು ರಾಶಿಯಲ್ಲಿರುವುದರಿಂದ ಗುರುಫಲ ಬೇರೆ ಬೇರೆಯಾಗಿಯೇ ಇರುತ್ತದೆ.
ತುಂಬಾ ಒಳ್ಳೆಯದನ್ನು ಮಾಡುವವನೆಂದೇ ಗುರು ಗ್ರಹದ ಫಲಾಫಲ ಪ್ರಸಿದ್ಧಿ ಹೊಂದಿದೆ. ಹೆಚ್ಚಾಗಿ ಗಂಡು ಸಂತಾನ ಬಯಸುವವರಿಗೆ ಮತ್ತು ಹಣಕಾಸಿನ ವ್ಯವಹಾರ ಮಾಡುವವರು ಅಥವಾ ಸಾಲ ಸೋಲ ಮಾಡಿ ಸೋತವರು ಗುರುಬಲ ಬರುವುದನ್ನೇ ಕಾಯಬೇಕಾಗುತ್ತದೆ. ಗುರುಬಲವಿಲ್ಲದಿದ್ದರೆ ಸಂತಸದ ಜೀವನ ಮರೀಚಿಕೆಯಾಗುತ್ತದೆ. [ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]

ಗುರುವಿನ ಸ್ವಕ್ಷೇತ್ರವೆಂದೇ ಕರ್ಕ ರಾಶಿಯಲ್ಲಿ ಗುರುವು ಉಚ್ಚ ಸ್ಥಾನದವನಾಗಿರುತ್ತಾನೆ. ಅಲ್ಲಿ ಬಂದಾಗ ಅಂದರೆ ಹನ್ನೆರಡು ವರ್ಷಕ್ಕೊಮ್ಮೆ ಬರುವುದರಿಂದ ತುಂಬಾ ಉತ್ತಮ ಫಲಗಳನ್ನು ನೀಡುತ್ತಾನೆ. ಆದರೆ ಮಕರ ರಾಶಿಯು ಗುರುವಿಗೆ ನೀಚ ರಾಶಿಯಾಗಿರುತ್ತದೆ. ಈ ರಾಶಿಯಲ್ಲಿ ಗುರು ಸಂಚರಿಸುವಾಗ ಶುಭಫಲದ ಬದಲು ಅಶುಭ ಫಲಗಳನ್ನೇ ನೀಡುತ್ತಾನೆ. ಕೆಲವರಿಗೆ ಮಧುಮೇಹ ಮತ್ತು ಇತರೆ ಹೊಟ್ಟೆಗೆ ಸಂಬಂಧಪಟ್ಟ ರೋಗಗಳು ಬರುವುದು ಗುರುಬಲವಿಲ್ಲದಾಗ ಮಾತ್ರ ಎಂಬುದು ಮಾತ್ರ ಸತ್ಯ.
ಗುರುವು ರಾಶಿಯಿಂದ 2, 5, 7, 9, 11ನೇ ಸ್ಥಾನದಲ್ಲಿ ಸಂಚರಿಸುವಾಗ ಶುಭಫಲವನ್ನು ನೀಡುತ್ತಾನೆ. ಹೀಗಾಗಿ ಗುರುಬಲ ಬಂದಾಗ ಮುಖ್ಯ ಕೆಲಸಗಳನ್ನು ಮಾಡಿಕೊಳ್ಳಬೇಕು. ಇನ್ನೊಂದು ಮುಖ್ಯವಾದ ವಿಷಯವೆಂದರೆ, ಗುರುವು ರಾಶಿಯಲ್ಲಿ ಒಂದು ವರ್ಷ ಸಂಚರಿಸಿದರೂ ಕೇವಲ 2 ತಿಂಗಳು ಮಾತ್ರ ಫಲ ನೀಡುತ್ತಾನೆ. ಆ ಫಲವು ಜನ್ಮಜಾತಕದಲ್ಲಿ ಗುರುವು ಇದ್ದ ನಿರ್ದಿಷ್ಟ ಡಿಗ್ರಿಗೆ ಬಂದಾಗ ಮಾತ್ರ ಅವರ ಫಲಾಫಲ ಪಡೆದುಕೊಳ್ಳಬಹುದು. ಕೆಟ್ಟದ್ದು ಇದೆ ಎಂದು ಇಡೀ ವರ್ಷ ಕೆಟ್ಟದ್ದು ಆಗಲ್ಲ. ಒಳ್ಳೆಯದು ಇದೆ ಎಂದು ಇಡೀ ವರ್ಷಪೂರ್ತಿ ಒಳ್ಳೆಯದೇ ಆಗಬೇಕಂತೇನೂ ಇಲ್ಲ. ಒಟ್ಟಿನಲ್ಲಿ ಜನ್ಮಜಾತಕದಲ್ಲಿ ಗುರು ಇರುವ ಡಿಗ್ರಿ ನೋಡಿಕೊಂಡು ಅವನು ರಾಶಿಯಲ್ಲಿ ಆ ಡಿಗ್ರಿಗೆ ಬಂದಾಗ ಜಾಗ್ರತರಾಗುವುದು ಒಳ್ಳೆಯದು.
ಈಗ ಯಾವ ರಾಶಿಯವರು ಯಾವ ರೀತಿಯ ಗುರುವಿನ ಫಲವನ್ನು ಅನುಭವಿಸುತ್ತಾರೆ ಎಂಬುದನ್ನು ಒಮ್ಮೆ ನೋಡೋಣ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications