ಮೇಷ ರಾಶಿಗೆ ಗುರುಬಲದ ನಿರೀಕ್ಷೆ ಅಷ್ಟೇನೂ ಬೇಡ
ಈ ರಾಶಿಯವರಿಗೆ ಗುರುವು 6ನೇ ಸ್ಥಾನದಲ್ಲಿ ಇಂದಿನಿಂದ ಸಂಚರಿಸಲಾರಂಭಿಸುತ್ತಾನೆ. ಗುರುವು 6ನೇ ಸ್ಥಾನದಲ್ಲಿ ಅಂತ ಏನೂ ಶುಭಫಲ ನೀಡುವುದಿಲ್ಲ. ಶುಭಫಲದ ನಿರೀಕ್ಷೆಯನ್ನೂ ಕೂಡ ಮಾಡಬಾರದು. ಏಕೆಂದರೆ ಈ ಸಮಯದಲ್ಲಿ ಮೊದಲೇ ಅಷ್ಟಮಶನಿ ಕಾಟದಲ್ಲಿರುವುದರಿಂದ ಆರೋಗ್ಯಕ್ಕೆ ದೈವವೇ "ಚೆಕ್" ಕೊಟ್ಟಂತೆ ಆಗಿರುತ್ತದೆ.
ಹೀಗಾಗಿ ಇದ್ದಬದ್ದ ಹಣವನ್ನು ಉಳಿಸಿಕೊಂಡು ಹೋಗುವ ಪ್ರಯತ್ನ ಮಾಡಬೇಕು. ಏಕೆಂದರೆ 6ನೇ ಸ್ಥಾನವು ಶತ್ರುವಿನ ಸ್ಥಾನವೆಂದೇ ಕರೆಯಲಾಗುತ್ತದೆ. ಹೀಗಾಗಿ ಶತ್ರುಗಳನ್ನು ಹೆಚ್ಚಿಸಿಕೊಳ್ಳದಿರುವುದೇ ಲೇಸು ಈ ರಾಶಿಯವರು ವರ್ಷಪೂರ್ತಿ.
ನೀವು ನೋಡಿರಬಹುದು 200 ರು. ಪೇಂಟ್ ಮನೆಗೆ ಹಚ್ಚಲು ಪೇಂಟರ್ ಗಳು 500 ರು. ತಗೊಳ್ಳುತ್ತಾರೆ. ಹೀಗಾಗಿ ಪೇಂಟ್ ಹಚ್ಚಬೇಕೇ ಬೇಡವೇ ಎಂಬ ಯೋಚನೆ ಬರುತ್ತದೆ. ಇದೇ ರೀತಿ ಈ ರಾಶಿಯವರ ಜೀವನದಲ್ಲಿ ಮುಖ್ಯವಾಗಿಲ್ಲದ ಕೆಲವು ಖರ್ಚು ವೆಚ್ಚಗಳು ಬರಬಹುದು. ಆದ್ದರಿಂದ ಎಲ್ಲ ರೀತಿಯಿಂದಲೂ ಹಣವನ್ನು ಸಿದ್ಧ ಮಾಡಿಕೊಂಡಿಟ್ಟಿರಬೇಕು. ಅನವಶ್ಯಕ ಸಾಲ ಮಾಡದಿರುವುದು ತುಂಬಾ ಮುಖ್ಯ. ಆಮೇಲೆ ಇದ್ದಬದ್ದ ಆಸ್ತಿ ಮಾರಿಯಾದರೂ ಸಾಲ ತೀರಿಸಲು ಹೆಣಗಾಡಬೇಕಾಗುತ್ತದೆ. [ಗುರುಫಲ : ವೃಷಭ, ಸಿಂಹ, ಮೀನ, ವೃಶ್ಚಿಕ ರಾಶಿಗೆ ಸೂಪರ್]

ಮುಂದಿನ ಸೆಪ್ಟೆಂಬರ್ ವರೆಗೂ ಖರ್ಚುಗಳನ್ನು ಎಷ್ಟು ಆಗುತ್ತದೆಯೋ ಅಷ್ಟು ಕಮ್ಮಿ ಮಾಡಿಕೊಳ್ಳಬೇಕು. ತಿಂಗಳಿಗಿಂತ ನಿತ್ಯ ಎಷ್ಟು ಹಣ ಉಳಿಸಬಹುದೋ ಅಷ್ಟು ಉಳಿಸಲು ಪ್ರಾರಂಭಿಸಬೇಕು. ದೇಹಾರೋಗ್ಯಕ್ಕೆ ಸಂಬಂಧಪಟ್ಟಂತೆ ವೈದ್ಯಕೀಯ ಸೌಲಭ್ಯವಿರುವ ಆರೋಗ್ಯ ವಿಮೆ ಮಾಡಿಸಿಕೊಳ್ಳಬೇಕು ಬೇಗ ಬೇಗ. [ಭರಣಿ ನಕ್ಷತ್ರ ವಿಶೇಷ : ಬೆಂಕಿಯೊಂದಿಗೆ ಸರಸ!]
ಮಾನಸಿಕವಾಗಿ ಸ್ವಲ್ಪ ಗೊಂದಲಗಳು ಬರುವುದರಿಂದ ನಿತ್ಯ 8 ಗಂಟೆ ನಿದ್ದೆ, 1 ಗಂಟೆ ಧ್ಯಾನ ಮತ್ತು ಯೋಗ ಮಾಡಲೇಬೇಕು. ಧ್ಯಾನದಿಂದ ಮನಸ್ಸಿನ ಮೇಲೆ ಹಿಡಿತ ಸಾಧಿಸಿಕೊಳ್ಳಬಹುದು. ಬಂದ ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸಬಹುದು. ಒಟ್ಟಿನಲ್ಲಿ ಮೇಷ ರಾಶಿಯವರು ಗುರುಫಲವನ್ನು ಅಷ್ಟೇನೂ ನಿರೀಕ್ಷೆ ಮಾಡುವುದೇನು ಬೇಡ. ಆದರೆ ಗುರುರಾಯರ ದರ್ಶನಾಶೀರ್ವಾದ ಪಡೆಯುತ್ತ ಬಂದರೆ ಕೊಂಚ ಶುಭಫಲ ನಿರೀಕ್ಷಿಸಬಹುದು. [ಮೇಷ ರಾಶಿಗೆ ದುರ್ಮುಖನಾಮ ಸಂವತ್ಸರದ ಫಲಾಫಲ]
-
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ












Click it and Unblock the Notifications