ವೃಷಭ ರಾಶಿಯವರಿಗೆ ಈಗ ಸುಗ್ಗಿ ಮತ್ತು ಹಿಗ್ಗುವ ಕಾಲ
ವೃಷಭ ರಾಶಿಯಿಂದ ಗುರು ಐದನೇ ಸ್ಥಾನದಲ್ಲಿ ಸಂಚರಿಸುತ್ತಾನೆ. ತುಂಬಾ ಶುಭಕರ ಸ್ಥಾನವೆಂದೇ ಐದನೇ ಸ್ಥಾನ ಕರೆಯಿಸಿಕೊಳ್ಳುತ್ತದೆ. ಈ ಸ್ಥಾನವು ಸಂಸಾರ ಮತ್ತು ಕುಟುಂಬಕ್ಕೆ ಸಂಬಂಧಪಟ್ಟದ್ದಾಗಿದೆ. ಹೀಗಾಗಿ ಗುರು ಬಂದ ಕೂಡಲೇ ಈ ರಾಶಿಯ ಅವಿವಾಹಿತರು ಈಗ ವಿವಾಹದ ಭಾಗ್ಯವನ್ನು ನೋಡಬಹುದು.
ಯುವಕ-ಯುವತಿಯರಿಗೆ ಗುರುವು ಶುಭಫಲ ನೀಡಿ ಹೊಸ ಜೀವನಕ್ಕೆ ಅಡಿಯಿಡುವಂಗೆ ಮಾಡುತ್ತಾನೆ. ಆದರೆ ಸೂಕ್ತವಾದ ವ್ಯಕ್ತಿಯ ಆಯ್ಕೆ ಮಾತ್ರ ತಪ್ಪಿಸದೇ ಪರೀಕ್ಷಿಸಿಯೇ ಮಾಡಿಕೊಳ್ಳಬೇಕು. ಆಮೇಲೆ ಏನಾದರೂ ಜೀವನ ಸರಿಯಾಗಲ್ಲ.
ಯಾರೊಂದಿಗೆ ಮದುವೆ ಮಾಡಿಕೊಳ್ಳಲು ಒಪ್ಪಿಗೆ ಸೂಚಿಸಿದ್ದಿರೋ ಅವರ ಜನ್ಮಜಾತಕ ಪರಿಶೀಲಿಸಿಕೊಂಡೇ ಮುಂದುವರೆಯಬೇಕು. ಗುರುಬಲದಿಂದಲೇ ಮದುವೆ ಆಗುತ್ತದೆ ಎಂದುಕೊಂಡು ಬಂದಿದ್ದೇ ಪಂಚಾಮೃತವೆಂದುಕೊಂಡು ಒಪ್ಪಿಕೊಳ್ಳುವುದು ಒಳ್ಳೆಯದಲ್ಲ. ಹೀಗಾಗಿ ಹತ್ತತ್ತು ಬಾರಿ ಯೋಚಿಸಿ ಒಪ್ಪಿಗೆ ನೀಡಿ ಬೀಗರೂಟ ಹಾಕಬೇಕು ನೆನಪಿರಲಿ. [ವೃಷಭ ರಾಶಿಗೆ ದುರ್ಮುಖನಾಮ ಸಂವತ್ಸರದ ಫಲಾಫಲ]

ಇನ್ನೊಂದು ಮಾತು ನೆನಪಿರಲಿ, ನಮ್ಮೊಂದಿಗೆ ಯಾರು ಚೆನ್ನಾಗಿ ನಡೆದುಕೊಳ್ಳುತ್ತಾರೆಯೋ ಅವರನ್ನೇ ನಮ್ಮ ಆಪ್ತ ಸಂಬಂಧಿಕರೆಂದುಕೊಳ್ಳಿ. ಏಕೆಂದರೆ ಕೆಲ ಸಂಬಂಧಿಕರು ಆಪ್ತರೂ ಇರುವುದಿಲ್ಲ, ಚೆನ್ನಾಗಿ ನಡೆದುಕೊಂಡೂ ಇರುವುದಿಲ್ಲ. ಪುಣ್ಯಕಾರ್ಯಗಳ ಸಮಯದಲ್ಲಿ ನಾಮುಂದು ತಾಮುಂದು ಎಂದು ಬಂದು ಜೀವನ ಹಾಳಾಗಲು ಕೆಲವೊಮ್ಮೆ ಕಾರಣವಾಗಿರುವ ನಿದರ್ಶನಗಳು ಸಾಕಷ್ಟಿವೆ.
ಮನೆ ಕಟ್ಟಿಸಬೇಕೆನ್ನುವವರು, ಆಸ್ತಿ ಖರೀದಿಸಬೇಕೆನ್ನುವವರಿಗೆ ಹೇಗೋ ಹಣದ ವ್ಯವಸ್ಥೆ ಆಗುತ್ತದೆ. ಒಟ್ಟಿನಲ್ಲಿ ಹೆಚ್ಚಿನ ಪ್ರಮಾಣದ ಸಂತಸದ ಸುದ್ದಿಗಳನ್ನೇ ಕೇಳುವ ವೃಷಭ ರಾಶಿಯವರು ಈ ಒಂದು ವರ್ಷದಲ್ಲಿ ಆಸ್ತಿಪಾಸ್ತಿ ಮಾಡಿಕೊಂಡು ಮುಂದಿನ ಜೀವನ ಪಾವನ ಮಾಡಿಕೊಳ್ಳಬೇಕು. [ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]
ಗಂಡು ಸಂತಾನಕ್ಕೆ ಹರಕೆ ಹೊತ್ತವರಿಗೆ ಈಗ ದೇವರು ಕಣ್ಣು ಬಿಡುವ ಸಮಯ. ಹೀಗಾಗಿ ವೃಷಭ ರಾಶಿಯವರು ಗಂಡು ಹುಟ್ಟುವುದರಿಂದ ಒಳ್ಳೆಯ ಹೆಸರನ್ನು ಈಗಲೇ ನೋಟ್ ಮಾಡಿಟ್ಟುಕೊಳ್ಳಬೇಕು. ಹೊಸದಾಗಿ ಮದುವೆಯಾದವರೂ ಸಹ ಗಂಡು ಪಾಪುವಿನ ನಿರೀಕ್ಷೆ ಮಾಡಬಹುದು.
ನೀವು ನೋಡಿರಬಹುದು ತಿರುಮಲದ ತಿಮ್ಮಪ್ಪ ಯಾವಾಗಲೂ ನಗುಮುಖದಲ್ಲೇ ಇರುತ್ತಾನೆ. ಹಾಗೆ ಇಡೀ ಜೀವನ ನಗುಮುಖದಲ್ಲೇ ಜೀವನ ಸಾಗಿಸಿಕೊಂಡು ಹೋಗುವಂತಹ ಸೌಕರ್ಯಗಳನ್ನು ಗುರುವು ಈಗ ಕೊಡುತ್ತಾನೆ. ಚೆನ್ನಾಗಿ ಜೀವನ ಸಾಗಿಸಿ ಖುಷಿಯಾಗಿರಿ ಮತ್ತೊಬ್ಬರನ್ನೂ ಖುಷಿಯಾಗಿಡಲು ಪ್ರಯತ್ನಿಸಿ. [ವೃಷಭ ರಾಶಿಯ 2016 ವರ್ಷದ ಫಲಾಫಲ ಹೀಗಿದೆ]
-
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ












Click it and Unblock the Notifications