ದ್ವಾದಶ ರಾಶಿಗಳ ಸೆಪ್ಟೆಂಬರ್ ತಿಂಗಳ ಭವಿಷ್ಯ: ಮೇಷ- ಕುಟುಂಬ-ಕೆಲಸಕ್ಕೂ ಪ್ರಾಮುಖ್ಯ ನೀಡಿ
ಈ ತಿಂಗಳು ಎಲ್ಲ ಸಲೀಸಾಗಿ ಸಾಗುತ್ತದೆ. ಆದರೆ ಮಧ್ಯೆ ಕೆಲವು ಸವಾಲುಗಳು ಎದುರಾಗುತ್ತವೆ. ನಿಮ್ಮ ಬದುಕಿನ ಆದ್ಯತೆಗಳನ್ನು ತುಂಬ ಚೆನ್ನಾಗಿ ನಿರ್ಧರಿಸುತ್ತೀರಿ. ಮಾಡುವ ಕೆಲಸಗಳ ಬಗ್ಗೆ ಗಮನ ಹೆಚ್ಚು ಕೊಡುವುದರಿಂದ ಎಲ್ಲ ರಂಗದಲ್ಲೂ ಯಶಸ್ಸು ಸಾಧಿಸಲು ಸಾಧ್ಯ. ದುಡಿಮೆಯೇ ನಿಮ್ಮ ಬಹುಪಾಲು ಸಮಯವನ್ನು ತೆಗೆದುಕೊಂಡು ಬಿಡುತ್ತದೆ. ನಿಮ್ಮ ಕೆಲಸ ಹಾಗೂ ಕುಟುಂಬಕ್ಕೆ ಸರಿಸಮವಾದ ಪ್ರಾಮುಖ್ಯತೆ ಕೊಡಿ.
ಒಂದು ಕಡೆಯಿಂದ ಕೆಲಸದ ಜವಾಬ್ದಾರಿ, ಮತ್ತೊಂದು ಕಡೆಯಿಂದ ಕೌಟುಂಬಿಕ ಜವಾಬ್ದಾರಿ ಎಳೆದಾಡುತ್ತದೆ. ಆದರೆ ಕೆಲಸದ ಗುರಿ ಮುಟ್ಟಿದ ಸಂಭ್ರಮ ಅನುಭವಿಸುವಾಗ ಕುಟುಂಬವನ್ನು ನಿರ್ಲಕ್ಷಿಸಬಾರದಿತ್ತು ಎಂಬ ವಿಷಾದ ನಿಮ್ಮನ್ನು ಕಾಡದಂತೆ ಎಚ್ಚರವಹಿಸಿ.[ಮೇಷ ರಾಶಿಗೆ ಗುರುಬಲದ ನಿರೀಕ್ಷೆ ಅಷ್ಟೇನೂ ಬೇಡ]

ವೃತ್ತಿ: ಕೆಲಸದ ಬಗ್ಗೆ ಹೆಚ್ಚಿನ ಗಮನಹರಿಸಿ. ನಿಮ್ಮ ಹೆಚ್ಚಿನ ಸಮಯ ಇದಕ್ಕಾಗಿ ಮೀಸಲಿಡಬೇಕಾಗುತ್ತದೆ. ತಂಡದ ಹಿರಿಯರ ಜತೆಗೆ ಸಣ್ಣ-ಪುಟ್ಟ ವಾಗ್ವಾದಗಳು ನಡೆಯುವ ಸಾಧ್ಯತೆ ಇದ್ದು; ಹುಷಾರಾಗಿರಿ. ಸೆಪ್ಟೆಂಬರ್ 18ರ ನಂತರ ಕೆಲವು ಸಕಾರಾತ್ಮಕ ಬದಲಾವಣೆಗಳು ಆಗುತ್ತವೆ. ಅದೃಷ್ಟ ನಿಮ್ಮ ಪಾಲಿಗೆ ಒದಗಿಬರುತ್ತದೆ.
ಪ್ರೀತಿ-ಪ್ರೇಮ, ಮದುವೆ: ಇದು ಪರೀಕ್ಷೆಯ ಸಮಯ. ಭಿನ್ನಾಭಿಪ್ರಾಯ, ಗೊಂದಲಗಳ ಹೊರತಾಗಿಯೂ ನೀವು-ನಿಮ್ಮನ್ನು ಇಷ್ಟಪಡುವವರ ಮಧ್ಯೆ ಭಾವನಾತ್ಮಕ ವಿಚಾರಗಳು ಪ್ರಾಮುಖ್ಯ ಪಡೆಯುತ್ತವೆ. ಸೆ.16ರ ನಂತರ ಮಾತುಕತೆಯಲ್ಲಿ ಎಚ್ಚರ. ಮದುವೆ ಆಗಿರುವವರಿಗೆ 19ರ ನಂತರ ಎಲ್ಲ ಸರಿಹೋಗುತ್ತದೆ.[ಮೇಷ ರಾಶಿಗೆ ದುರ್ಮುಖನಾಮ ಸಂವತ್ಸರದ ಫಲಾಫಲ]
ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ: ಮಕ್ಕಳಿಗೆ ಇದು ಸ್ವಲ್ಪ ಕಷ್ಟದ ಸಮಯ. ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಏರುಪೇರಾಗಬಹುದು. ಓದಿನಲ್ಲಿ ಏಕಾಗ್ರತೆ ಕಡಿಮೆಯಾಗುತ್ತದೆ. 19ರ ನಂತರ ಶುಭ ಸುದ್ದಿ ಇದೆ.
-
ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ












Click it and Unblock the Notifications