ದ್ವಾದಶ ರಾಶಿಗಳ ಸೆಪ್ಟೆಂಬರ್ ತಿಂಗಳ ಭವಿಷ್ಯ: ಮೇಷ- ಕುಟುಂಬ-ಕೆಲಸಕ್ಕೂ ಪ್ರಾಮುಖ್ಯ ನೀಡಿ
ಈ ತಿಂಗಳು ಎಲ್ಲ ಸಲೀಸಾಗಿ ಸಾಗುತ್ತದೆ. ಆದರೆ ಮಧ್ಯೆ ಕೆಲವು ಸವಾಲುಗಳು ಎದುರಾಗುತ್ತವೆ. ನಿಮ್ಮ ಬದುಕಿನ ಆದ್ಯತೆಗಳನ್ನು ತುಂಬ ಚೆನ್ನಾಗಿ ನಿರ್ಧರಿಸುತ್ತೀರಿ. ಮಾಡುವ ಕೆಲಸಗಳ ಬಗ್ಗೆ ಗಮನ ಹೆಚ್ಚು ಕೊಡುವುದರಿಂದ ಎಲ್ಲ ರಂಗದಲ್ಲೂ ಯಶಸ್ಸು ಸಾಧಿಸಲು ಸಾಧ್ಯ. ದುಡಿಮೆಯೇ ನಿಮ್ಮ ಬಹುಪಾಲು ಸಮಯವನ್ನು ತೆಗೆದುಕೊಂಡು ಬಿಡುತ್ತದೆ. ನಿಮ್ಮ ಕೆಲಸ ಹಾಗೂ ಕುಟುಂಬಕ್ಕೆ ಸರಿಸಮವಾದ ಪ್ರಾಮುಖ್ಯತೆ ಕೊಡಿ.
ಒಂದು ಕಡೆಯಿಂದ ಕೆಲಸದ ಜವಾಬ್ದಾರಿ, ಮತ್ತೊಂದು ಕಡೆಯಿಂದ ಕೌಟುಂಬಿಕ ಜವಾಬ್ದಾರಿ ಎಳೆದಾಡುತ್ತದೆ. ಆದರೆ ಕೆಲಸದ ಗುರಿ ಮುಟ್ಟಿದ ಸಂಭ್ರಮ ಅನುಭವಿಸುವಾಗ ಕುಟುಂಬವನ್ನು ನಿರ್ಲಕ್ಷಿಸಬಾರದಿತ್ತು ಎಂಬ ವಿಷಾದ ನಿಮ್ಮನ್ನು ಕಾಡದಂತೆ ಎಚ್ಚರವಹಿಸಿ.[ಮೇಷ ರಾಶಿಗೆ ಗುರುಬಲದ ನಿರೀಕ್ಷೆ ಅಷ್ಟೇನೂ ಬೇಡ]

ವೃತ್ತಿ: ಕೆಲಸದ ಬಗ್ಗೆ ಹೆಚ್ಚಿನ ಗಮನಹರಿಸಿ. ನಿಮ್ಮ ಹೆಚ್ಚಿನ ಸಮಯ ಇದಕ್ಕಾಗಿ ಮೀಸಲಿಡಬೇಕಾಗುತ್ತದೆ. ತಂಡದ ಹಿರಿಯರ ಜತೆಗೆ ಸಣ್ಣ-ಪುಟ್ಟ ವಾಗ್ವಾದಗಳು ನಡೆಯುವ ಸಾಧ್ಯತೆ ಇದ್ದು; ಹುಷಾರಾಗಿರಿ. ಸೆಪ್ಟೆಂಬರ್ 18ರ ನಂತರ ಕೆಲವು ಸಕಾರಾತ್ಮಕ ಬದಲಾವಣೆಗಳು ಆಗುತ್ತವೆ. ಅದೃಷ್ಟ ನಿಮ್ಮ ಪಾಲಿಗೆ ಒದಗಿಬರುತ್ತದೆ.
ಪ್ರೀತಿ-ಪ್ರೇಮ, ಮದುವೆ: ಇದು ಪರೀಕ್ಷೆಯ ಸಮಯ. ಭಿನ್ನಾಭಿಪ್ರಾಯ, ಗೊಂದಲಗಳ ಹೊರತಾಗಿಯೂ ನೀವು-ನಿಮ್ಮನ್ನು ಇಷ್ಟಪಡುವವರ ಮಧ್ಯೆ ಭಾವನಾತ್ಮಕ ವಿಚಾರಗಳು ಪ್ರಾಮುಖ್ಯ ಪಡೆಯುತ್ತವೆ. ಸೆ.16ರ ನಂತರ ಮಾತುಕತೆಯಲ್ಲಿ ಎಚ್ಚರ. ಮದುವೆ ಆಗಿರುವವರಿಗೆ 19ರ ನಂತರ ಎಲ್ಲ ಸರಿಹೋಗುತ್ತದೆ.[ಮೇಷ ರಾಶಿಗೆ ದುರ್ಮುಖನಾಮ ಸಂವತ್ಸರದ ಫಲಾಫಲ]
ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ: ಮಕ್ಕಳಿಗೆ ಇದು ಸ್ವಲ್ಪ ಕಷ್ಟದ ಸಮಯ. ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಏರುಪೇರಾಗಬಹುದು. ಓದಿನಲ್ಲಿ ಏಕಾಗ್ರತೆ ಕಡಿಮೆಯಾಗುತ್ತದೆ. 19ರ ನಂತರ ಶುಭ ಸುದ್ದಿ ಇದೆ.
-
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್












Click it and Unblock the Notifications