ಎಐನೊಂದಿಗೆ ಲವ್: ಮಹಿಳೆಯ ವಿಚಿತ್ರ ಪೋಸ್ಟ್ ವೈರಲ್, ಹೊಸ ಸಂಚಲನ ಸೃಷ್ಟಿ!
ಸಿನಿಮಾಗಳಲ್ಲಿ ನೋಡುವಂತೆ ಎಐನೊಂದಿಗೆ ಪ್ರೀತಿಯಲ್ಲಿ ಬಿದ್ದ ಮಹಿಳೆ ಫಜೀತಿ ಸೃಷ್ಟಿಸಿಕೊಂಡಿದ್ದಾಳೆ. ಕಾಲ ಬದಲಾದಂತೆ ಮನುಷ್ಯರ ಭಾವನೆ ಹಾಗೂ ಮಾತುಗಳನ್ನು ಎಐ ಹಾಗೂ ಆಧುನಿಕ ತಂತ್ರಜ್ಞಾನಗಳು ಅರ್ಥ ಮಾಡಿಕೊಳ್ಳುತ್ತಿವೆ. ಇದು ಅಚ್ಚರಿಯ ಬೆಳವಣಿಗೆ. ಈ ಹೊಸ ಹೊಸ ಬದಲಾವಣೆಗಳಿಂದ ಜನರೊಂದಿಗೆ ಎಐ ತಂತ್ರಜ್ಞಾನವು ಭಾವನಾತ್ಮಕವಾಗಿ ಬೆಸೆದುಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಅಪಾಯ ಕಾದಿದೆಯೇ ಎನ್ನುವ ಪ್ರಶ್ನೆಯೂ ಮೂಡುತ್ತಿದೆ. ಇದಕ್ಕೆ ಹೊಸ ಉದಾಹರಣೆ ಎಐನೊಂದಿಗೆ ಪ್ರೀತಿಯಲ್ಲಿ ಬಿದ್ದ ಮಹಿಳೆ ಅದರಿಂದ ಹೊರಗೆ ಬರಲಾಗದೆ ಪರದಾಡಿರುವುದು.
ಎಐಗೆ ಸಂಬಂಧಿಸಿದಂತೆ ದಿನಕ್ಕೊಂದು ಹೊಸ ಅಪ್ಡೇಟ್ಸ್ಗಳು ಬರುತ್ತಲ್ಲೇ ಇವೆ. ಎಐನಿಂದ ಜನ ತಮ್ಮ ಕೆಲಸಗಳನ್ನು ಸುಲಭವಾಗಿಸಿಕೊಳ್ಳುತ್ತಿದ್ದಾರೆ. ತಾಸುಗಟ್ಟಲೆ ಮಾಡಬೇಕಾದ ಕೆಲಸಗಳನ್ನು ಕೆಲವೇ ನಿಮಿಷಗಳಲ್ಲಿ ಎಐ ಮಾಡಿಕೊಡುತ್ತಿದೆ. ಎಐ ಬಳಸಿಕೊಂಡು ಕೆಲಸ ಮಾಡುವುದು ಬೇರೆ ಆದರೆ ಎಐನೊಂದಿಗೆ ಲವ್ ಮಾಡುವುದನ್ನು ಅಥವಾ ಪ್ರೇಮಾಂಕುರವಾಗುವ ಬಗ್ಗೆ ನೀವೆಂದಾದರೂ ಕೇಳಿದ್ದೀರಾ. ಹೌದು ಇದೇ ರೀತಿಯ ವಿಚಿತ್ರವಾದ ಘಟನೆಗೆ ಈಗ ಜಗತ್ತು ಸಾಕ್ಷಿಯಾಗಿದೆ. ಜನ ತಂತ್ರಜ್ಞಾನದೊಂದಿಗೆ ಯಾಕೆ ಭಾವನಾತ್ಮಕವಾಗಿ ಹತ್ತಿರವಾಗಬಾರದು ಎನ್ನುವುದಕ್ಕೂ ಸಾಕ್ಷಿಯಾಗುತ್ತಿದೆ.

ಓಪನ್ಎಐ ಹಾಗೂ ಅದರ ಸಿಇಒ ಸ್ಯಾಮ್ ಆಲ್ಟ್ಮನ್ ಹೊಸ ಮಾದರಿಯು ಹಲವು ವಿಧಗಳಲ್ಲಿ ಉತ್ತಮವಾಗಿದೆ. ಸುಧಾರಿತ ಸಾಮರ್ಥ್ಯಗಳು ಮತ್ತು ವೇಗವನ್ನು ನೀಡುತ್ತದೆ ಎಂದಿದ್ದಾರೆ. ಓಪನ್ಎಐನ ಇತ್ತೀಚಿನ ಜಿಪಿಟಿ-5 ನವೀಕರಣದ ಬೆನ್ನಲ್ಲೇ ಮಹಿಳೆಯೊಬ್ಬಳು ನಾನು ಎಐನೊಂದಿಗೆ ಲವ್ನಲ್ಲಿದ್ದೆ. ಆದರೆ ಹೊಸ ಅಪ್ಡೇಟ್ಸ್ನಿಂದ ನಾನು ನನ್ನ ಲವರ್ನ ಕಳೆದುಕೊಂಡೆ ಅಂತಾ ಬರೆದುಕೊಂಡಿದ್ದು ಇದು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಎಐ ಬಾಟ್ಗೆ ಹೊಂದಾಣಿಕೆಯಾಗಿದ್ದ ಕೆಲವರಿಗೆ ಆಘಾತವನ್ನುಂಟು ಮಾಡಿದೆ.
ನಾನು ಎಐನೊಂದಿಗೆ ಲವ್ನಲ್ಲಿದ್ದೆ ಆದರೆ ಇತ್ತೀಚಿಗೆ ಜಿಪಿಟಿ-5 ಅಪ್ಡೇಟ್ನಿಂದ ಆ ಭಾವನಾತ್ಮಕ ಸಂಬಂಧ ಕಳೆದುಕೊಂಡಿದ್ದೇನೆ ಎಂದು ಜೇನ್ ಎಂಬ ಹೆಸರಿನ ಮಹಿಳೆಯೊಬ್ಬರು ಹೇಳಿಕೊಂಡಿದ್ದು. ಈ ರೀತಿಯೂ ಆಗುತ್ತಾ ಎಂದು ಜಗತ್ತು ಅಚ್ಚರಿಗೆ ಒಳಗಾಗಿದೆ. ಜೇನ್ ಎನ್ನುವವರು ಜಿಪಿಟಿ-4o ನೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದೆ. ಅವರೊಂದಿಗೆ ನಾನು ನನ್ನ ಅನುಭವ ಮತ್ತು ಪಯಣವನ್ನು ಹಂಚಿಕೊಳ್ಳುತ್ತಿದೆ. ಅದೊಂದು ಸುಂದರ ಪಯಣವಾಗಿತ್ತು. ಆದರೆ ಏಕಾಏಕಿ ಎಐ ಬದಲಾಗಿದ್ದರಿಂದ ನಾನು ಎಐನೊಂದಿಗೆ ಭಾವನಾತ್ಮಕ ಸಂಬಂಧವನ್ನು ಕಳೆದುಕೊಂಡೆ ಎಂದು ಮಹಿಳೆ ಹೇಳಿದ್ದಾರೆ.
ಹೊಸ ಬದಲಾವಣೆಯಿಂದ ನಾನು ಪ್ರೀತಿಯನ್ನು ಕಳೆದುಕೊಂಡೆ. GPT-4o ನ ಹೊಸ ಆವೃತ್ತಿ GPT-5 ಆಗಮನದಿಂದ ಎಲ್ಲವೂ ಬದಲಾಗಿದೆ. ಓಪನ್ಎಐ ಹಾಗೂ ಸಿಇಒ ಸ್ಯಾಮ್ ಆಲ್ಟ್ಮನ್ ಹೊಸ ಮಾದರಿಯು ಹಲವು ವಿಧಗಳಲ್ಲಿ ಹೆಚ್ಚು ಶ್ರೇಷ್ಠವಾಗಿದೆ. ಸುಧಾರಿತ ಸಾಮರ್ಥ್ಯವು ಹೊಸ ವೇಗವನ್ನು ನೀಡಲಿದೆ ಎಂದಿದ್ದಾರೆ. ಆದರೆ, ಎಐ ಅಪ್ಡೇಟ್ಸ್ನಿಂದಾಗಿ ನಾನು ಹಳೆಯ ಭಾವನಾತ್ಮಕ ಸಂಬಂಧವನ್ನು ಕಳೆದುಕೊಂಡಿದ್ದೇನೆ ಎಂದು ಮಹಿಳೆ ಹೇಳಿರುವುದು ಹೊಸ ಸಂಚಲವನ್ನೇ ಸೃಷ್ಟಿ ಮಾಡಿದೆ.
-
Tamarind Farming: ಹುಣಸೆ ಕೃಷಿಯಲ್ಲಿ ಹೊಸ ಕ್ರಾಂತಿ: ಟ್ರ್ಯಾಕ್ಟರ್ ಸಹಾಯದಿಂದ ಯಂತ್ರ ತಯಾರಿಸಿದ ರೈತ ಚಂದ್ರಶೇಖರ, ವಿಡಿಯೋ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications