ಜ.20ರ ವೇಳೆಗೆ ಭಾರತದಲ್ಲಿ 341.13 ಲಕ್ಷ ಹೆಕ್ಟೇರ್ ಗೋಧಿ ಬಿತ್ತನೆ
ಬೆಂಗಳೂರು, ಜನವರಿ 22: ಈ ವರ್ಷದ ರಾಬಿ ಋತುವಿನಲ್ಲಿ ಪ್ರಮುಖ ಬೆಳೆಯಾದ ಗೋಧಿ ಬಿತ್ತನೆ ಮತ್ತೆ ತುಸು ಏರಿಕೆ ಕಂಡಿದೆ. ಜನವರಿ 20 ರವರೆಗೂ ಒಂದಷ್ಟು ಕಡೆಗಳಲ್ಲಿ ಬಿತ್ತನೆ ಕಂಡು ಬಂದಿದೆ. ಇದರಿಂದ ಬಿತ್ತನೆ ಪ್ರಮಾಣದಲ್ಲಿ ಏರಿಕೆ ಆಗಿದೆ.
ಈ ಕುರಿತು ಕೇಂದ್ರ ಕೃಷಿ ಸಚಿವಾಲಯವು ಇತ್ತೀಚೆಗೆ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, 2022-23ರ ಪ್ರಸಕ್ತ ರಾಬಿ ಬೆಳೆಯ ಋತುವಿನಲ್ಲಿ (ಜುಲೈ-ಜೂನ್) ಇದುವರೆಗಿನ ಗೋಧಿ ಬಿತ್ತನೆ 341.13 ಲಕ್ಷ ಹೆಕ್ಟೇರ್ಗಿಂತಲೂ ಹೆಚ್ಚಾಗಿದೆ.
ಪ್ರಸಕ್ತ ವರ್ಷ ಚಳಿಗಾಲ ಆರಂಭವಾಗುತ್ತಿದ್ದಂತೆ ಗೋಧಿ ಬಿತ್ತನೆ ಅಕ್ಟೋಬರ್ನಿಂದ ಆರಂಭವಾಯಿತು. ರಾಬಿ ಬೆಳೆಗಳಾದ ಜೋಳ ಹೆಸರು ಬೇಳೆ ಮತ್ತು ಸಾಸಿವೆ ಇತರ ಪ್ರಮುಖ ರಾಬಿ ಬೆಳೆಗಳು ಏಪ್ರಿಲ್ನಲ್ಲಿ ಕೊಯ್ಲಾಗುವ ಸಾಧ್ಯತೆ ಇದೆ.

2023ರ ಜನವರಿ 20 ರವರೆಗೆ ಗೋಧಿ ವ್ಯಾಪ್ತಿಯ ಪ್ರದೇಶ 341.13 ಲಕ್ಷ ಹೆಕ್ಟೇರ್ಗೆ ಏರಿಕೆ ಆಗಿದೆ, ಕಳೆದ ವರ್ಷದ ಇದೇ ಅವಧಿಯಲ್ಲಿ ಗೋಧಿ ಬಿತ್ತನೆ 339.87 ಲಕ್ಷ ಹೆಕ್ಟೇರ್ ಕಂಡಿತ್ತು. ಇನ್ನೂ ದೇಶದ ಇತರೆ ಗೋಧಿ ಬಿತ್ತನೆ ರಾಜ್ಯಗಳ ಬಿತ್ತನೆ ಪ್ರಮಾಣ ನೋಡುವುದಾದರೆ ರಾಜಸ್ಥಾನದಲ್ಲಿ 2.52 ಲಕ್ಷ ಹೆಕ್ಟೇರ್, ಬಿಹಾರ ರಾಜ್ಯದಲ್ಲಿ ಇದುವರೆಗೆ 1.49 ಲಕ್ಷ ಹೆಕ್ಟೇರ್, ಮಹಾರಾಷ್ಟ್ರ 0.92 ಲಕ್ಷ ಹೆಕ್ಟೇರ್, ಛತ್ತೀಸ್ಗಢ 0.54 ಲಕ್ಷ ಹೆಕ್ಟೇರ್, ಗುಜರಾತ್ 0.48 ಲಕ್ಷ ಹೆಕ್ಟೇರ್ ಹಾಗೂ ಉತ್ತರ ಪ್ರದೇಶ 0.22 ಲಕ್ಷ ಹೆಕ್ಟೇರ್ ಬಿತ್ತನೆ ಆಗಿದೆ.
ಅದೇ ರೀತಿ ಕಡಿಮೆ ಗೋಧಿ ಬೆಳೆಯುವ ರಾಜ್ಯಗಳಲ್ಲಿ ಇದುವರೆಗೆ ಮಧ್ಯಪ್ರದೇಶ ರಾಜ್ಯದಲ್ಲಿ 4.15 ಲಕ್ಷ ಹೆಕ್ಟೇರ್, ಜಾರ್ಖಂಡ್ 0.34 ಲಕ್ಷ ಹೆಕ್ಟೇರ್, ಪಂಜಾಬ್ 0.18 ಲಕ್ಷ ಹೆಕ್ಟೇರ್, ಹಿಮಾಚಲ ಪ್ರದೇಶ 0.10 ಲಕ್ಷ ಹೆಕ್ಟೇರ್, ಹರಿಯಾಣ 0.10 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಗೋಧಿ, ಭತ್ತ, ಎಣ್ಣೆಕಾಳು ಬೀಜ ಬಿತ್ತನೆಯಲ್ಲಿ ಸ್ವಲ್ಪ ಏರಿಕೆ
ಲಭ್ಯ ಅಂಕಿ ಅಂಶಗಳು ಪ್ರಕಾರ ದೇಶದಲ್ಲಿ ಭತ್ತದ ಬೀತ್ತನೆಯಲ್ಲೂ ಹೆಚ್ಚಳ ಕಂಡು ಬಂದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಭತ್ತ 23.64 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದರೆ, ಈ ಬಾರಿ 31.54 ಲಕ್ಷ ಹೆಕ್ಟೇರ್ಗೆ ಏರಿಕೆ ಆಗಿದೆ. ಇನ್ನೂ ದ್ವಿದಳ ಧಾನ್ಯಗಳ ವಿಸ್ತೀರ್ಣವು 163.7 ಲಕ್ಷ ಹೆಕ್ಟೇರ್ಗೆ ಪ್ರದೇಶದಿಂದ ಈ ವರ್ಷ 164.12 ಲಕ್ಷ ಹೆಕ್ಟೇರ್ಗೆ ಸ್ವಲ್ಪ ಮಟ್ಟಿಗೆ ಹೆಚ್ಚಳವಾಗಿದೆ.

ಇಷ್ಟೇ ಅಲ್ಲದೇ ಎಣ್ಣೆಬೀಜಗಳನ್ನು ಈ ವರ್ಷ ರೈತರು ಹೆಚ್ಚು ಬಿತ್ತನೆ ಮಾಡಿದೆ. ಇದುವರೆಗೆ ದೇಶದಲ್ಲಿ 108.11 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ವಿವಿಧ ಬಗೆಯಎಣ್ಣೆ ಬೀಜಗಳ ಬಿತ್ತನೆ ಆಗಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ 100.44 ಲಕ್ಷ ಹೆಕ್ಟೇರ್ ಆಗಿತ್ತು. ಇನ್ನೂ ರೇಪ್ಸೀಡ್-ಸಾಸಿವೆ ಬೀಜಗಳ ಬಿತ್ತನೆ ಹಿಂದಿನ 90.18 ಲಕ್ಷ ಹೆಕ್ಟೇರ್ನಿಂದ ಈ ವರ್ಷ 97.1 ಲಕ್ಷ ಹೆಕ್ಟೇರ್ಗೆ ಹೆಚ್ಚಳವಾಗಿದೆ ಎಂದು ತಿಳಿದು ಬಂದಿದೆ.
ಒಂದು ವರ್ಷದ ಹಿಂದೆ 676.97 ಲಕ್ಷ ಹೆಕ್ಟೇರ್ನಿಂದ ಪ್ರಸಕ್ತ ರಬಿ ಹಂಗಾಮಿನ ಜನವರಿ 20 ರವರೆಗೆ ಎಲ್ಲಾ ರೀತಿಯ ರಬಿ ಬೆಳೆಗಳಿಗೆ ಬಿತ್ತನೆಯಾದ ಒಟ್ಟು ಪ್ರದೇಶವು 696.35 ಲಕ್ಷ ಹೆಕ್ಟೇರ್ಗೆ ಹೆಚ್ಚಾಗಿದೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications