ಭಾರತದ ಮೊದಲ ಗಾಜಿನ ಇಗ್ಲೂ ರೆಸ್ಟೋರೆಂಟ್ ಕಾರ್ಯಾರಂಭ, ಇಲ್ಲಿದೆ ಮಾಹಿತಿ
ಜಮ್ಮು ಕಾಶ್ಮೀರದಲ್ಲಿ ವಿಶಿಷ್ಟವಾದ ಗಾಜಿನ ಇಗ್ಲೂ ರೆಸ್ಟೋರೆಂಟ್ ಅನ್ನು ಗುಲ್ಮಾರ್ಗ್ನಲ್ಲಿರುವ ಕೊಲಾಹೊಯ್ ಗ್ರೀನ್ ಹೈಟ್ಸ್ ಎಂಬ ಹೋಟೆಲ್ ಅಭಿವೃದ್ಧಿಪಡಿಸಿದೆ.
ಶ್ರೀನಗರ, ಜನವರಿ 30: ಜಮ್ಮು ಕಾಶ್ಮೀರದ ಗುಲ್ಮಾರ್ಗ್ನಲ್ಲಿ ಹಿಮದಿಂದ ಆವೃತವಾದ ಪರ್ವತಗಳ ಮಧ್ಯದಲ್ಲಿರುವ ಗಾಜಿನ ಇಗ್ಲೂ ರೆಸ್ಟೋರೆಂಟ್ ಕಾಶ್ಮೀರದ ಗಿರಿಧಾಮದಲ್ಲಿ ಈಗ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.
ಈ ಗಾಜಿನ ಗೋಡೆಯ ರೆಸ್ಟೋರೆಂಟ್ನಲ್ಲಿ ಪ್ರವಾಸಿಗರು ತಮ್ಮ ಊಟವನ್ನು ಸವಿಯುವುದು ಮತ್ತು ಛಾಯಾಚಿತ್ರಗಳನ್ನು ತೆಗೆದುಕೊಳ್ಳುವುದನ್ನು ಈಗ ಕಾಣಬಹುದು.
ಈ ವಿಶಿಷ್ಟವಾದ ಗಾಜಿನ ಇಗ್ಲೂ ರೆಸ್ಟೋರೆಂಟ್ ಅನ್ನು ಗುಲ್ಮಾರ್ಗ್ನಲ್ಲಿರುವ ಕೊಲಾಹೊಯ್ ಗ್ರೀನ್ ಹೈಟ್ಸ್ ಎಂಬ ಹೋಟೆಲ್ ಅಭಿವೃದ್ಧಿಪಡಿಸಿದೆ. ಕಣಿವೆಯಲ್ಲಿ ಇದು ಮೊದಲ ಗಾಜಿನ ಇಗ್ಲೂ ರೆಸ್ಟೋರೆಂಟ್ ಎಂದು ಹೋಟೆಲ್ ಹೇಳಿಕೊಂಡಿದೆ. ಮೊದಲು ಅವರು ಕಾಶ್ಮೀರ ಕಣಿವೆಯ ಮೊದಲ ಹಿಮದಿಂದ ಆವೃತವಾದ ರೆಸ್ಟೋರೆಂಟ್ ಅನ್ನು ನಿರ್ಮಿಸಿದ್ದರು ಎಂಬುದು ಗಮನಿಸಬೇಕಾದ ಸಂಗತಿ.

ಹೋಟೆಲ್ ಮ್ಯಾನೇಜರ್ ಹಮೀದ್ ಮಸೌದಿ ಅವರ ಪ್ರಕಾರ, ಗುಲ್ಮಾರ್ಗ್ ಅನ್ನು ಪ್ರವಾಸಿಗರಿಗೆ ಆಕರ್ಷಕವಾಗಿಸಲು ಇದು ಯಾವಾಗಲೂ ವಿಶಿಷ್ಟ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. 2020ರಲ್ಲಿ ಹೋಟೆಲ್ ಏಷ್ಯಾದ ಅತಿದೊಡ್ಡ ಇಗ್ಲೂ ಅನ್ನು ತಯಾರಿಸಿದರೆ, 2021ರಲ್ಲಿ ಅವರು ವಿಶ್ವದ ಅತಿದೊಡ್ಡ ಇಗ್ಲೂ ರೆಸ್ಟೋರೆಂಟ್ನ್ನು ತಯಾರಿಸಿದರು. ಈ ವರ್ಷ ಗಾಜಿನ ಇಗ್ಲೂ ರೆಸ್ಟೋರೆಂಟ್ ಅನ್ನು ತಯಾರಿಸಿದರು. ಇದು ಕಾಶ್ಮೀರದಲ್ಲಿ ಮೊದಲ ಇಗ್ಲೂ ಆಗಿದೆ ಎಂದು ಅವರು ಹೇಳಿದರು.
"ನಾವು ಈ ಪರಿಕಲ್ಪನೆಯನ್ನು ಫಿನ್ಲ್ಯಾಂಡ್ನಿಂದ ತೆಗೆದುಕೊಂಡಿದ್ದೇವೆ. ನಮ್ಮ ಹೋಟೆಲ್ನ ಅಂಗಳದಲ್ಲಿ ಮೂರು ಇಗ್ಲೂಗಳನ್ನು ನಿರ್ಮಿಸಿದ್ದೇವೆ, ಅದು ಹಿಂದೆ ಎಲ್ಲಿಯೂ ನೋಡಿಲ್ಲ. ನಂತರ ನಾವು ಗುಲ್ಮಾರ್ಗ್ನ ಮೊದಲ ಹಂತದಲ್ಲಿ ಮೂರು ಇಗ್ಲೂಗಳನ್ನು ನಿರ್ಮಿಸಿದ್ದೇವೆ. ಇದು ಇಲ್ಲಿಗೆ ಭೇಟಿ ನೀಡುವವರಿಂದ ತುಂಬಾ ಮೆಚ್ಚುಗೆ ಪಡೆದಿದೆ ಎಂದು ಮಸೌದಿ ಹೇಳಿದರು.

ಈ ವಿಶಿಷ್ಟ ಇಗ್ಲೂ ರೆಸ್ಟೋರೆಂಟ್ಗೆ ಆಮದು ಮಾಡಿದ ಫ್ಯಾಬ್ರಿಕೇಟೆಡ್ ವಸ್ತುಗಳನ್ನು ಬಳಸಲಾಗಿದೆ. ಈ ವಿಶಿಷ್ಟವಾದ ಗಾಜಿನ ಮುಂಭಾಗದ ರೆಸ್ಟೋರೆಂಟ್ ಆಂತರಿಕ ಶಾಖವನ್ನು ಕಾಯ್ದುಕೊಳ್ಳುತ್ತದೆ ಮತ್ತು ಉತ್ತಮ ವೀಕ್ಷಣೆಗಳನ್ನು ನೀಡುತ್ತದೆ. ಈ ಪ್ರತಿಯೊಂದು ಗಾಜಿನ ಇಗ್ಲೂಗಳಲ್ಲಿ ಒಮ್ಮೆಗೆ ಎಂಟು ಜನರು ಅದರಲ್ಲಿ ಕುಳಿತುಕೊಳ್ಳಬಹುದು. ನಾವು ಪ್ರವಾಸಿಗರಿಗೆ ವಿಭಿನ್ನ ರೀತಿಯ ಅನುಭವವನ್ನು ನೀಡಲು ಪ್ರಯತ್ನಿಸುತ್ತಿದ್ದೇವೆ ಎಂದು ಮಸೌದಿ ಹೇಳಿದರು.
ಈ ವಿಶಿಷ್ಟ ಗಾಜಿನ ಮುಂಭಾಗದ ರೆಸ್ಟೋರೆಂಟ್ಗಳನ್ನು ಸ್ಥಳೀಯರು ಮಾತ್ರವಲ್ಲದೆ ಹೊರಗಿನ ಜನರು ಹೆಚ್ಚಾಗಿ ಇಷ್ಟಪಡುತ್ತಾರೆ. ಪ್ರವಾಸಿಗರಾದ ಸಯಾಖ್ ಅವರು ಕಾಶ್ಮೀರ ಕಣಿವೆಗೆ ಬಂದು ಗುಲ್ಮಾರ್ಗ್ನಲ್ಲಿ ಸಮಯ ಕಳೆಯಲು ಬಂದಿದ್ದು, ಈ ರೆಸ್ಟೋರೆಂಟ್ಗೆ ಬಂದು ತನಗೆ ವಿಭಿನ್ನ ಅನುಭವವಾಯಿತು ಎಂದು ಹೇಳಿದರು.
ಅದರಲ್ಲಿ ಕುಳಿತಾಗ ಸ್ವರ್ಗದ ಕಿಟಕಿಯಿಂದ ಇಣುಕಿ ನೋಡುತ್ತಿರುವಂತೆ ಭಾಸವಾಯಿತು. ಈ ಗಾಜಿನಿಂದ ಸುತ್ತುವರಿದ ರೆಸ್ಟೋರೆಂಟ್ನಲ್ಲಿ ಚಳಿ ಇಲ್ಲ. ಒಂದು ಕಪ್ ಕಾಫಿಯೊಂದಿಗೆ ಹೊರಗಿನ ನೋಟ ಮತ್ತು ಈ ಅನನ್ಯ ಅನುಭವ, ನಾನು ಅದೃಷ್ಟಶಾಲಿ ಎಂದು ಪರಿಗಣಿಸುತ್ತೇನೆ ಸಯಾಖ್ ಹೇಳಿದರು.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications