ಭಾರತದ ಮೊದಲ ಗಾಜಿನ ಇಗ್ಲೂ ರೆಸ್ಟೋರೆಂಟ್ ಕಾರ್ಯಾರಂಭ, ಇಲ್ಲಿದೆ ಮಾಹಿತಿ
ಜಮ್ಮು ಕಾಶ್ಮೀರದಲ್ಲಿ ವಿಶಿಷ್ಟವಾದ ಗಾಜಿನ ಇಗ್ಲೂ ರೆಸ್ಟೋರೆಂಟ್ ಅನ್ನು ಗುಲ್ಮಾರ್ಗ್ನಲ್ಲಿರುವ ಕೊಲಾಹೊಯ್ ಗ್ರೀನ್ ಹೈಟ್ಸ್ ಎಂಬ ಹೋಟೆಲ್ ಅಭಿವೃದ್ಧಿಪಡಿಸಿದೆ.
ಶ್ರೀನಗರ, ಜನವರಿ 30: ಜಮ್ಮು ಕಾಶ್ಮೀರದ ಗುಲ್ಮಾರ್ಗ್ನಲ್ಲಿ ಹಿಮದಿಂದ ಆವೃತವಾದ ಪರ್ವತಗಳ ಮಧ್ಯದಲ್ಲಿರುವ ಗಾಜಿನ ಇಗ್ಲೂ ರೆಸ್ಟೋರೆಂಟ್ ಕಾಶ್ಮೀರದ ಗಿರಿಧಾಮದಲ್ಲಿ ಈಗ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.
ಈ ಗಾಜಿನ ಗೋಡೆಯ ರೆಸ್ಟೋರೆಂಟ್ನಲ್ಲಿ ಪ್ರವಾಸಿಗರು ತಮ್ಮ ಊಟವನ್ನು ಸವಿಯುವುದು ಮತ್ತು ಛಾಯಾಚಿತ್ರಗಳನ್ನು ತೆಗೆದುಕೊಳ್ಳುವುದನ್ನು ಈಗ ಕಾಣಬಹುದು.
ಈ ವಿಶಿಷ್ಟವಾದ ಗಾಜಿನ ಇಗ್ಲೂ ರೆಸ್ಟೋರೆಂಟ್ ಅನ್ನು ಗುಲ್ಮಾರ್ಗ್ನಲ್ಲಿರುವ ಕೊಲಾಹೊಯ್ ಗ್ರೀನ್ ಹೈಟ್ಸ್ ಎಂಬ ಹೋಟೆಲ್ ಅಭಿವೃದ್ಧಿಪಡಿಸಿದೆ. ಕಣಿವೆಯಲ್ಲಿ ಇದು ಮೊದಲ ಗಾಜಿನ ಇಗ್ಲೂ ರೆಸ್ಟೋರೆಂಟ್ ಎಂದು ಹೋಟೆಲ್ ಹೇಳಿಕೊಂಡಿದೆ. ಮೊದಲು ಅವರು ಕಾಶ್ಮೀರ ಕಣಿವೆಯ ಮೊದಲ ಹಿಮದಿಂದ ಆವೃತವಾದ ರೆಸ್ಟೋರೆಂಟ್ ಅನ್ನು ನಿರ್ಮಿಸಿದ್ದರು ಎಂಬುದು ಗಮನಿಸಬೇಕಾದ ಸಂಗತಿ.

ಹೋಟೆಲ್ ಮ್ಯಾನೇಜರ್ ಹಮೀದ್ ಮಸೌದಿ ಅವರ ಪ್ರಕಾರ, ಗುಲ್ಮಾರ್ಗ್ ಅನ್ನು ಪ್ರವಾಸಿಗರಿಗೆ ಆಕರ್ಷಕವಾಗಿಸಲು ಇದು ಯಾವಾಗಲೂ ವಿಶಿಷ್ಟ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. 2020ರಲ್ಲಿ ಹೋಟೆಲ್ ಏಷ್ಯಾದ ಅತಿದೊಡ್ಡ ಇಗ್ಲೂ ಅನ್ನು ತಯಾರಿಸಿದರೆ, 2021ರಲ್ಲಿ ಅವರು ವಿಶ್ವದ ಅತಿದೊಡ್ಡ ಇಗ್ಲೂ ರೆಸ್ಟೋರೆಂಟ್ನ್ನು ತಯಾರಿಸಿದರು. ಈ ವರ್ಷ ಗಾಜಿನ ಇಗ್ಲೂ ರೆಸ್ಟೋರೆಂಟ್ ಅನ್ನು ತಯಾರಿಸಿದರು. ಇದು ಕಾಶ್ಮೀರದಲ್ಲಿ ಮೊದಲ ಇಗ್ಲೂ ಆಗಿದೆ ಎಂದು ಅವರು ಹೇಳಿದರು.
"ನಾವು ಈ ಪರಿಕಲ್ಪನೆಯನ್ನು ಫಿನ್ಲ್ಯಾಂಡ್ನಿಂದ ತೆಗೆದುಕೊಂಡಿದ್ದೇವೆ. ನಮ್ಮ ಹೋಟೆಲ್ನ ಅಂಗಳದಲ್ಲಿ ಮೂರು ಇಗ್ಲೂಗಳನ್ನು ನಿರ್ಮಿಸಿದ್ದೇವೆ, ಅದು ಹಿಂದೆ ಎಲ್ಲಿಯೂ ನೋಡಿಲ್ಲ. ನಂತರ ನಾವು ಗುಲ್ಮಾರ್ಗ್ನ ಮೊದಲ ಹಂತದಲ್ಲಿ ಮೂರು ಇಗ್ಲೂಗಳನ್ನು ನಿರ್ಮಿಸಿದ್ದೇವೆ. ಇದು ಇಲ್ಲಿಗೆ ಭೇಟಿ ನೀಡುವವರಿಂದ ತುಂಬಾ ಮೆಚ್ಚುಗೆ ಪಡೆದಿದೆ ಎಂದು ಮಸೌದಿ ಹೇಳಿದರು.

ಈ ವಿಶಿಷ್ಟ ಇಗ್ಲೂ ರೆಸ್ಟೋರೆಂಟ್ಗೆ ಆಮದು ಮಾಡಿದ ಫ್ಯಾಬ್ರಿಕೇಟೆಡ್ ವಸ್ತುಗಳನ್ನು ಬಳಸಲಾಗಿದೆ. ಈ ವಿಶಿಷ್ಟವಾದ ಗಾಜಿನ ಮುಂಭಾಗದ ರೆಸ್ಟೋರೆಂಟ್ ಆಂತರಿಕ ಶಾಖವನ್ನು ಕಾಯ್ದುಕೊಳ್ಳುತ್ತದೆ ಮತ್ತು ಉತ್ತಮ ವೀಕ್ಷಣೆಗಳನ್ನು ನೀಡುತ್ತದೆ. ಈ ಪ್ರತಿಯೊಂದು ಗಾಜಿನ ಇಗ್ಲೂಗಳಲ್ಲಿ ಒಮ್ಮೆಗೆ ಎಂಟು ಜನರು ಅದರಲ್ಲಿ ಕುಳಿತುಕೊಳ್ಳಬಹುದು. ನಾವು ಪ್ರವಾಸಿಗರಿಗೆ ವಿಭಿನ್ನ ರೀತಿಯ ಅನುಭವವನ್ನು ನೀಡಲು ಪ್ರಯತ್ನಿಸುತ್ತಿದ್ದೇವೆ ಎಂದು ಮಸೌದಿ ಹೇಳಿದರು.
ಈ ವಿಶಿಷ್ಟ ಗಾಜಿನ ಮುಂಭಾಗದ ರೆಸ್ಟೋರೆಂಟ್ಗಳನ್ನು ಸ್ಥಳೀಯರು ಮಾತ್ರವಲ್ಲದೆ ಹೊರಗಿನ ಜನರು ಹೆಚ್ಚಾಗಿ ಇಷ್ಟಪಡುತ್ತಾರೆ. ಪ್ರವಾಸಿಗರಾದ ಸಯಾಖ್ ಅವರು ಕಾಶ್ಮೀರ ಕಣಿವೆಗೆ ಬಂದು ಗುಲ್ಮಾರ್ಗ್ನಲ್ಲಿ ಸಮಯ ಕಳೆಯಲು ಬಂದಿದ್ದು, ಈ ರೆಸ್ಟೋರೆಂಟ್ಗೆ ಬಂದು ತನಗೆ ವಿಭಿನ್ನ ಅನುಭವವಾಯಿತು ಎಂದು ಹೇಳಿದರು.
ಅದರಲ್ಲಿ ಕುಳಿತಾಗ ಸ್ವರ್ಗದ ಕಿಟಕಿಯಿಂದ ಇಣುಕಿ ನೋಡುತ್ತಿರುವಂತೆ ಭಾಸವಾಯಿತು. ಈ ಗಾಜಿನಿಂದ ಸುತ್ತುವರಿದ ರೆಸ್ಟೋರೆಂಟ್ನಲ್ಲಿ ಚಳಿ ಇಲ್ಲ. ಒಂದು ಕಪ್ ಕಾಫಿಯೊಂದಿಗೆ ಹೊರಗಿನ ನೋಟ ಮತ್ತು ಈ ಅನನ್ಯ ಅನುಭವ, ನಾನು ಅದೃಷ್ಟಶಾಲಿ ಎಂದು ಪರಿಗಣಿಸುತ್ತೇನೆ ಸಯಾಖ್ ಹೇಳಿದರು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications