ಸಿದ್ದರಾಮಯ್ಯ ಆಂಧ್ರಪ್ರದೇಶ ಸಿಎಂ ಆಗ್ಬಿಟ್ರು!
ಮಾಧ್ಯಮಗಳ ವರದಿಗಾರಿಕೆಯಲ್ಲಿ ಕೆಲ ಬಾರಿ ಅಚಾತುರ್ಯಗಳು ನಡೆಯುವುದು ಮಾಮೂಲಿ. ಆದರಲ್ಲೂ ಮುದ್ರಣ ಮಾಧ್ಯಮದಲ್ಲಿ ಮುದ್ರಾರಾಕ್ಷಸನ ಹಾವಳಿ ಇದ್ದಂತೆ, ವೆಬ್ ಮಾಧ್ಯಮದಲ್ಲೂ ತಪ್ಪುಗಳು ಸಹಜ. ಆದರೆ, ತಿದ್ದುಪಡಿ ಕ್ಷಣಾರ್ಧದಲ್ಲಿ ಮಾಡಿಕೊಳ್ಳುವ ಸೌಲಭ್ಯವಂತೂ ವೆಬ್ ಮೀಡಿಯಾಗೆ ಇದ್ದೇ ಇದೆ.
ಆದರೆ, ಜನಪ್ರಿಯ ಪತ್ರಿಕೆ ಟೈಮ್ ಆಫ್ ಇಂಡಿಯಾ ಇಂದು(ಜನವರಿ 8, 2.05ಕ್ಕೆ) ಮಧ್ಯಾಹ್ನ ಮಾಡಿರುವ ಒಂದು ಟ್ವೀಟ್ ಪ್ರಮಾದ ಇನ್ನೂ ಸರಿಪಡಿಸಿಲ್ಲ(ಸಮಯ 2.35). ಕೊಡಗಿನ ಮಡಿಕೇರಿಯಲ್ಲಿ ನಡೆದಿರುವ ಕನ್ನಡ ಸಾಹಿತ್ಯ ಸಮ್ಮೇಳನದ ವರದಿಯುಳ್ಳ ಲೇಖನದ ಕೊಂಡಿ ಸಹಿತ 'Only Kannada files get stamp, sign, says Andhra CM Siddaramaiah ' ಎಂದು ಟೈಟಲ್ ಹಾಕಿ ಟ್ವೀಟ್ ಮಾಡಲಾಗಿದೆ.
ಈ ಬಗ್ಗೆ ಕೂಡಲೇ ಅನೇಕ ಮಂದಿ ಎಚ್ಚರಿಸಿದ್ದಾರೆ. ಅದರೆ, ಟ್ವೀಟ್ ಬದಲಾಗಿಲ್ಲ. ಲೇಖನದ ಕೊಂಡಿ ಒಳಹೊಕ್ಕರೆ ಅಲ್ಲಿ ಎಲ್ಲೂ ಆಂಧ್ರ ಸಿಎಂ ಸಿದ್ದರಾಮಯ್ಯ ಎಂಬುದು ಕಾಣುವುದಿಲ್ಲ. ಟ್ವೀಟ್ ನಲ್ಲಿ ಮಾತ್ರ ಸಿದ್ದರಾಮಯ್ಯ ಅವರು ಆಂಧ್ರಪ್ರದೇಶದ ಸಿಎಂ ಆಗಿ ಮುಂದುವರೆದಿದ್ದಾರೆ.
'ತಪ್ಪು ಮಾಡೋದು ಸಹಜ ಕಣೋ ತಿದ್ದಿ ನಡೆಯೋನು ಮನುಜ ಕಣೋ' ಎನ್ನುವ ಹಂಸಲೇಖರ ವಾಕ್ಯ ನೆನಪಾಗುತ್ತದೆ. ಈ ರೀತಿ ಟ್ವೀಟ್ ಅಥವಾ ಫೇಸ್ ಬುಕ್ ಪೋಸ್ಟ್ ಗಳಿಂದ ಯಾವ ಕಂಪನಿಗಳು ಹೊರತಾಗಿಲ್ಲ. ಒನ್ ಇಂಡಿಯಾದಲ್ಲೂ ತಪ್ಪುಗಳನ್ನು ಓದಿರುತ್ತಿರುತ್ತೇನೆ. ಅದರೆ, ತಿದ್ದುಪಡಿ ಮಾಡಿ ಓದುಗರಿಗೆ ಪ್ರತಿಕ್ರಿಯೆ ನೀಡದಿದ್ದರೆ ಅದಕ್ಕಿಂತ ನಿರ್ಲಕ್ಷ್ಯತನ ಮತ್ತೊಂದಿಲ್ಲ. ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಹತ್ತಾರು ಪ್ರತಿಕ್ರಿಯೆಗಳು ಟೈಮ್ಸ್ ಪತ್ರಿಕೆ ವಿರುದ್ಧ ಬಂದಿದೆ.

ಸಿದ್ದರಾಮಯ್ಯ ಆಂಧ್ರಪ್ರದೇಶ ಸಿಎಂ ಆಗ್ಬಿಟ್ರು!
ಜನಪ್ರಿಯ ಪತ್ರಿಕೆ ಟೈಮ್ ಆಫ್ ಇಂಡಿಯಾ ಇಂದು(ಜನವರಿ 8, 2.05ಕ್ಕೆ) ಮಧ್ಯಾಹ್ನ ಮಾಡಿರುವ ಒಂದು ಟ್ವೀಟ್ ಪ್ರಮಾದ
|
ಸಿದ್ದರಾಮಯ್ಯ ಆಂಧ್ರಪ್ರದೇಶ ಸಿಎಂ ಆಗ್ಬಿಟ್ರು!
ಜನಪ್ರಿಯ ಪತ್ರಿಕೆ ಟೈಮ್ ಆಫ್ ಇಂಡಿಯಾ ಇಂದು(ಜನವರಿ 8, 2.05ಕ್ಕೆ) ಮಧ್ಯಾಹ್ನ ಮಾಡಿರುವ ಒಂದು ಟ್ವೀಟ್ ಪ್ರಮಾದಕ್ಕೆ ಅಚ್ಚರಿ
|
ಆಂಧ್ರ ಸಿಎಂ ಆಗಲು ಹೇಗೆ ಸಾಧ್ಯ?
ಜನಪ್ರಿಯ ಪತ್ರಿಕೆ ಟೈಮ್ ಆಫ್ ಇಂಡಿಯಾ ಇಂದು(ಜನವರಿ 8, 2.05ಕ್ಕೆ) ಮಧ್ಯಾಹ್ನ ಮಾಡಿರುವ ಒಂದು ಟ್ವೀಟ್ ಪ್ರಮಾದಕ್ಕೆ ಪ್ರತಿಕ್ರಿಯೆ
|
ಟೈಮ್ಸ್ ಗೇ ಎಲ್ಲಾ ಗೊತ್ತಿದೆ ಅನ್ಸುತ್ತೆ
ಹೌದೇ ಇದು ನಿಜವೇ? ನಾನೇನೋ ಸಿದ್ದರಾಮಯ್ಯ ಅವರು ಕರ್ನಾಟಕ ಸಿಎಂ ಅಂದುಕೊಂಡಿದ್ದೆ
|
ತಿದ್ದುಪಡಿ, ಬದಲಾವಣೆ ಮಾಡಿ ಮೊದಲು
ತಿದ್ದುಪಡಿ, ಬದಲಾವಣೆ ಮಾಡಿ ಮೊದಲು ಅಥವಾ ಟ್ವೀಟ್ ಮಾಡುವ ಮೊದಲು ಒಮ್ಮೆ ಓದಿ
|
ನಿಮಗೆಲ್ಲೋ ಹುಚ್ಚು ಅನ್ಸುತ್ತೆ!
ಜನಪ್ರಿಯ ಪತ್ರಿಕೆ ಟೈಮ್ ಆಫ್ ಇಂಡಿಯಾ ಇಂದು(ಜನವರಿ 8, 2.05ಕ್ಕೆ) ಮಧ್ಯಾಹ್ನ ಮಾಡಿರುವ ಒಂದು ಟ್ವೀಟ್ ಪ್ರಮಾದಕ್ಕೆ ನಿಮಗೆಲ್ಲೋ ಹುಚ್ಚು ಅನ್ಸುತ್ತೆ!ಎಂಬ ಪ್ರತಿಕ್ರಿಯೆ
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications