ಓಲೆ : ಎಲ್ಲಾರ್ನೂ ತಲಾ 3 ದಿನ ಮುಮಂ ಮಾಡಿಬಿಡಿ!

* ಅಶೋಕ ಜೆಎಮ್
***
ಅನುಮಾನಾಸ್ಪದ 'ಭವಿಷ್ಯ ವಾಣಿ'ಗಿಂತಾ ಹೆಚ್ಚಾಗಿ ನಮಗೆ 'ವರ್ತಮಾನ'ದ ಸ್ಪಷ್ಟ, ವಿವರ, ಸತ್ಯ ಚಿತ್ರಣದ ಅಗತ್ಯವಿದೆ. ಅಸಂಖ್ಯಾತ ಮಾಧ್ಯಮಗಳೇನೋ ಇವೆ, ನಿಜ. ಆದರೆ ಅವೆಲ್ಲಾ ಪೂರ್ವಗ್ರಹ, ಬದ್ಧನೀತಿ, ವೀಕ್ಷಕರ ಸಂಖ್ಯೆ ಕೊಚ್ಚಿಕೊಳ್ಳುವ ವ್ಯವಹಾರ ನೀತಿ ಮತ್ತು ಅತ್ಯಂತ ಅಪಾಯಕಾರಿಯಾಗಿ ರಾಜಕೀಯ ದುರುದ್ದೇಶದಿಂದ ರೋಗಗ್ರಸ್ಥವಾಗಿರುವಂಥವು. ಇಂಥಾ ಬುರುಡೆ ಭವಿಷ್ಯವಾಣಿಗಳು ಸಹ ಈ ಯಾವುದೇ ಅವಗುಣಗಳಿಂದ ಮುಕ್ತವಾಗಿರುವುದು ಸಾಧ್ಯವಿಲ್ಲ. [ಕೋಡಿಶ್ರೀ ಭವಿಷ್ಯವಾಣಿ]
* ಆರ್.ಕೆ. ದಿವಾಕರ
***
ಉಡುಪಿಯಲ್ಲಿ ಜಯಪ್ರಕಾಶ್ ಹೆಗ್ಡೆ ಗೆದ್ದದ್ದೇ ತಡ, ಕಾಂಗ್ರೆಸ್ ಎದ್ದು ನಿಲ್ಲಲ್ಲು ಪ್ರಯತ್ನ ಪಡುತ್ತಿದೆ. ಆದರೆ ಅದು ಅಸಾದ್ಯ. ಗೆದ್ದ ಹೆಗ್ಡೆ ಇನ್ನೂ ಕೂಡ ಸನ್ಮಾನ ಸ್ವಿಕರಿಸುವುದರಲ್ಲೇ ಕಾಲ ದೂಡುತ್ತಿದ್ದಾರೆ. ಪದ್ಮಪ್ರಿಯ ವಿಚಾರದಲ್ಲಿ ಭಟ್ರು ಧರ್ಮಸ್ಥಳ ದೇವರ ಆಣೆ ಹಾಕಿದ ಮೇಲೆ ಆ ವಿಚಾರ ಎತ್ತಲು ಕಾಂಗ್ರೆಸ್ ಹೆದರುತ್ತಿದೆ. ಅದಕ್ಕೆ ಈ ಹೊಸ ಆರೋಪ. ಜಯಪ್ರಕಾಶ್ ಹೆಗ್ಡೆ ಮತ್ತು ಆಸ್ಕರ್ ಕರಾವಳಿ ಪ್ರದೇಶದಲ್ಲಿ ಎಷ್ಟು ಭೂಮಿ ಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕರಿಗೆ ಗೊತ್ತಿಲವೇ? ಅದು ಯಾವ್ಯಾವ ರೀತಿಯಲ್ಲಿ ಕೊಳ್ಳಲಾಯಿತು ಎಂಬ ಬಗ್ಗೆ ಕೂಡ ಅವರಿಗೆ ತಿಳಿದಿದೆ. [ರಘುಪತಿ ಭಟ್ ಮೇಲೆ ಆರೋಪ]
* ರಾಕೇಶ್ ಶೆಟ್ಟಿ
***
ಬೇರೆಯವರ ಮನೆಯ ಹೆಣ್ಣು ಮಕ್ಕಳನ್ನು, ಸುಖ ಸಂಸಾರ ಹಾಗು ನೆಮ್ಮದಿಯ ಬದುಕು ನೀಡುವ ಕುರಿತು ವಾಗ್ಧನ ನೀಡಿ ಮದುವೆಯಾಗಿ, ವರದಕ್ಷಿಣೆಗಾಗಿ ಕಿರುಕುಳ ನೀಡಿ, ಹೆಂಡತಿಯನ್ನು ಸಂರಕ್ಷಿಸುವ ಬದಲು ಅವಳನ್ನು ಕೊಲೆಮಾಡಿ ಅಟ್ಟಹಾಸಗೈದು ಮೆರೆಯುತ್ತಿರುವ ಪುರುಷರೇ ಹುಷಾರ್ ಕಾಲ ಬದಲಾಗಿದ್ದು ಮುಂದೊಂದು ದಿನ ಮಹಿಳೆಯರೇ ಪುರುಷರಿಗೆ ಉಲ್ಟಾ ಹೊಡೆಯಬಹುದು. [ಬಾಗೇಪಲ್ಲಿಯಲ್ಲಿ ನವವಿವಾಹಿತೆ ಹತ್ಯೆ]
* ಪಲ್ಲು
***
ಸುದೀಪ್ ಒಬ್ಬ ಅದ್ಭುತ ನಟ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಒಬ್ಬ ಕನ್ನಡಿಗ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುತಿರುವುದು ನಮಗೆ ಹೆಮ್ಮೆಯ ವಿಷಯ. ಆದರೆ ಇನ್ನು ಮುಂದೆ ಉತ್ತಮ ಕಥೆಗಳನ್ನು ಆಯ್ಕೆ ಮಾಡಿಕೊಂಡು ಮುಂದುವರಿಯಬೇಕಾಗುತ್ತದೆ. ತಮ್ಮ ಈಗಿರುವ ಇಮೇಜ್ ಅನ್ನು ಉಳಿಸಿಕೊಳ್ಳುವುದು ತುಂಬಾ ಮುಖ್ಯ.. all the best kicha... ಎಲ್ಲೇ ಏರು ಹೇಗೆ ಏರು ಎಂದೆಂದಿಗೂ ನೀ ಕನ್ನಡವಾಗಿರು. [ಈಗ ಕುರಿತು ಸುದೀಪ್ ಉವಾಚ]
* ಕನ್ನಡಿಗ
***
ಕನ್ನಡ ಡಬ್ಬಿ0ಗ್ ವಿರೋಧಿಸುತ್ತಿರುವ ಕನ್ನಡ ಚಲನಚಿತ್ರ ವಾಣಿಜ್ಯ ಮ0ಡಳಿ ಬೇರೆ ರಾಜ್ಯ ಅಲ್ಲ, ಬೇರೆ ಭಾಷೆ ಅಲ್ಲ. ಬೇರೆ ಶತ್ರು ದೇಶ ಪಾಕಿಸ್ತಾನದಿ0ದ ಬ0ದಿರುವ ನಟಿ ವೀಣಾ ಮಲಿಕ್ ಗೆ ಕನ್ನಡದಲ್ಲಿ ನಟಿಸಲು ಅವಕಾಶ ಕೊಡುತ್ತಿರುವುದು ನೈತಿಕವಾಗಿ ಸರಿಯೇ? [ಕನ್ನಡದಲ್ಲಿ 'ಡರ್ಟಿ' ವೀಣಾ ಮಲಿಕ್]
* ರಾಘವೇಂದ್ರ ನಾವಡ












Click it and Unblock the Notifications