ಜೇಬಿನಲ್ಲಿ ಈ ಕಾಳು ಇಟ್ಟುಕೊಂಡರೆ ಶನಿ, ರಾಹು ದೋಷ ನಿವಾರಣೆಯಾಗುವುದು, ಜಾತಕ ಫಲ ಬದಲಾಗುವುದು

ಹಿಂದೂ ಸಂಪ್ರದಾಯದಲ್ಲಿ, ಅಡುಗೆಮನೆಯನ್ನು ಲಕ್ಷ್ಮೀ ದೇವಿಯ ವಾಸ ಸ್ಥಾನ ಎಂದು ಕರೆಯಲಾಗುತ್ತದೆ.ಜ್ಯೋತಿಷ್ಯದ ಪ್ರಕಾರ ಅಡುಗೆಮನೆಯಲ್ಲಿರುವ ಪ್ರತಿಯೊಂದು ವಸ್ತುವು ಒಂದೊಂದು ಗ್ರಹದೊಂದಿಗೆ ಸಂಬಂಧ ಹೊಂದಿವೆ. ವಿಶೇಷವಾಗಿ, ನಾವು ಬಳಸುವ ಸಾಸಿವೆ. ಇದರ ಒಗ್ಗರಣೆ ಹಾಕದೆ ಹೋದರೆ ಅಡುಗೆ ರುಚಿಸುವುದಿಲ್ಲ. ಹಾಗೆಯೇ ಜ್ಯೋತಿಷ್ಯದಲ್ಲಿ ಈ ಪುಟ್ಟ ಕಾಳಿಗೆ ಭಾರೀ ಮಹತ್ವ ಇದೆ. ಜಾತಕದಲ್ಲಿ ಗ್ರಹ ಬಲವನ್ನು ಹೆಚ್ಚಿಸಿ ಬಡತನವನ್ನು ದೂರ ಮಾಡುವಲ್ಲಿ ಈ ಕಾಳು ಅದ್ಭುತಗಳನ್ನೇ ಮಾಡಬಲ್ಲದು. ಸಂಖ್ಯಾಶಾಸ್ತ್ರ ಮತ್ತು ಜ್ಯೋತಿಷ್ಯದ ಪ್ರಕಾರ, ಸಾಸಿವೆ ಬೀಜಗಳು ನವಗ್ರಹಗಳಲ್ಲಿ ಅತ್ಯಂತ ಶಕ್ತಿಶಾಲಿಯಾದ ಶನಿ ಮತ್ತು ರಾಹುವಿನೊಂದಿಗೆ ಬಲವಾದ ಸಂಪರ್ಕವನ್ನು ಹೊಂದಿವೆ.

ನೀವು ಎಷ್ಟೇ ಸಂಪಾದಿಸಿದರೂ ನಿಮ್ಮ ಕೈಯಲ್ಲಿ ಒಂದು ರೂಪಾಯಿಯೂ ಉಳಿಯುವುದಿಲ್ಲವೇ? ಮನೆಯಲ್ಲಿ ಯಾವಾಗಲೂ ಸಣ್ಣ ಪುಟ್ಟ ವಿಚಾರಗಳಿಗೆ ಜಗಳ ನಡೆಯುತ್ತಲೇ ಇದೆಯೇ? ಹೀಗಾದಾಗ ಮನೆ ಮತ್ತು ಮನೆ ಮಂದಿ ಮೇಲೆ ದುಷ್ಟ ಕಣ್ಣು ಮತ್ತು ನಕಾರಾತ್ಮಕ ಶಕ್ತಿಯ ಛಾಯೆ ಬಿದ್ದಿದೆ ಎಂದರ್ಥ. ಇದಕ್ಕೆ ಜ್ಯೋತಿಷ್ಯ ತಜ್ಞರು ಹೇಳುವ ಪರಿಹಾರವೆಂದರೆ ಶನಿವಾರ ರಾತ್ರಿ ಮಲಗುವ ಮುನ್ನ, ಒಂದು ಹಿಡಿ ಸಾಸಿವೆ ಬೀಜಗಳನ್ನು ತೆಗೆದುಕೊಂಡು, ಮನೆಯ ಎಲ್ಲಾ ಸದಸ್ಯರ ತಲೆಯ ಸುತ್ತಲೂ ಮೂರು ಬಾರಿ ಸುತ್ತಿ ಮನೆಯ ಹೊರಗೆ ಎಸೆಯಬೇಕು ಎಂದು. ಹೀಗೆ ಮಾಡುವುದರಿಂದ, ನಿಮ್ಮ ಮೇಲಿನ ಶನಿ ದೋಷ ಮತ್ತು ದುಷ್ಟ ಕಣ್ಣು ತಕ್ಷಣವೇ ನಿವಾರಣೆಯಾಗುತ್ತದೆಯಂತೆ. ಲಕ್ಷ್ಮೀ ದೇವಿಯು ಮನೆಗೆ ಪ್ರವೇಶಿಸಲು ದಾರಿ ಮಾಡಿಕೊಡುತ್ತದೆಯಂತೆ.

Mustard Seeds Remedies

ವ್ಯವಹಾರದಲ್ಲಿ ನಷ್ಟವನ್ನು ಎದುರಿಸುತ್ತಿರಲಿ ಅಥವಾ ಕೆಲಸದಲ್ಲಿ ಬಡ್ತಿ ಪಡೆಯಲು ಕಷ್ಟಪಡುತ್ತಿರಲಿ, ಸಾಸಿವೆ ಬೀಜಗಳೊಂದಿಗೆ ಮತ್ತೊಂದು ಸಣ್ಣ ಪರಿಹಾರ ಕಾರ್ಯವನ್ನು ಮಾಡುವುದರಿಂದ ಜಾತಕದಲ್ಲಿನ ದೆಸೆಯೇ ಬದಲಾಗುತ್ತದೆಯಂತೆ. ಕೆಲವು ಸಾಸಿವೆ ಬೀಜಗಳು ಮತ್ತು ಒಂದು ರೂಪಾಯಿ ನಾಣ್ಯವನ್ನು ಸಣ್ಣ ಕೆಂಪು ಬಟ್ಟೆಯಲ್ಲಿ ಕಟ್ಟಿಕೊಳ್ಳಬೇಕು. ಈ ಪೊಟ್ಟಣವನ್ನು ಕಚೇರಿ ಕ್ಯಾಬಿನ್ ಅಥವಾ ವ್ಯಾಪಾರ ಸ್ಥಳದಲ್ಲಿ ಯಾರೂ ನೋಡದ ಸ್ಥಳದಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ರಾಹು ಮತ್ತು ಶನಿಯ ಆಶೀರ್ವಾದ ಪ್ರಾಪ್ತಿಯಾಗುವುದು. ನಿಮ್ಮ ವ್ಯಾಪಾರ ವ್ಯವಹಾರವು ರಾಕೆಟ್ ವೇಗದಲ್ಲಿ ನಡೆಯುವುದು. ಹಠಾತ್ ಆರ್ಥಿಕ ಲಾಭಗಳು ಉಂಟಾಗುತ್ತವೆ ಮತ್ತು ರಾತ್ರೋರಾತ್ರಿ ಖಾತೆಗೆ ಹಣ ಖಂಡಿತವಾಗಿಯೂ ಬರುತ್ತದೆ ಎನ್ನುತ್ತಾರೆ ಜ್ಯೋತಿಷ್ಯ ಬಲ್ಲವರು.

2028 ರವರೆಗೆ ಈ ರಾಶಿಯವರಿಗೆ ಶನಿದೆಸೆ :ಶನಿದೇವನ ವಕ್ರ ದೃಷ್ಟಿಯಿಂದ ಇವರಿಗೆ ಮುಕ್ತಿ ಯಾವಾಗ?
2028 ರವರೆಗೆ ಈ ರಾಶಿಯವರಿಗೆ ಶನಿದೆಸೆ :ಶನಿದೇವನ ವಕ್ರ ದೃಷ್ಟಿಯಿಂದ ಇವರಿಗೆ ಮುಕ್ತಿ ಯಾವಾಗ?

ಸಂದರ್ಶನಗಳಿಗೆ ಹೋಗುವಾಗ ಅಥವಾ ದೊಡ್ಡ ವ್ಯವಹಾರಗಳ ಮಾತುಕತೆ ನಡೆಸುವಾಗ ಅನೇಕರು ಆತಂಕದಲ್ಲಿಯೇ ಇರುತ್ತಾರೆ. ಅಂತಹ ಸಮಯದಲ್ಲಿ, ಜೇಬಿನಲ್ಲಿ ಅಥವಾ ಪರ್ಸ್‌ನಲ್ಲಿ ಸ್ವಲ್ಪ ಸಾಸಿವೆ ಬೀಜಗಳನ್ನು ಇಟ್ಟುಕೊಳ್ಳುವುದರಿಂದ ನಿಮ್ಮ ಸುತ್ತಲೂ ಸಕಾರಾತ್ಮಕ ಶಕ್ತಿ ನೆಲೆಯಾಗುವುದು. ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವುದಲ್ಲದೆ, ಭೇಟಿಯಾಗುವ ಇತರ ವ್ಯಕ್ತಿಯ ಕಡೆಗೆ ನಿಮ್ಮನ್ನು ಆಕರ್ಷಿಸುತ್ತದೆ. ಇದರಿಂದಾಗಿ, ನಿಂತು ಹೋಗಿರುವ ಎಲ್ಲಾ ಕೆಲಸ ಕಾರ್ಯಗಳು ಕ್ಷಣಾರ್ಧದಲ್ಲಿ ಪೂರ್ಣಗೊಳ್ಳುತ್ತವೆ.

ಅಡುಗೆಮನೆಯಲ್ಲಿರುವ ಸಾಸಿವೆ ಕಾಳಿನ ಡಬ್ಬಿ ಎಂದಿಗೂ ಖಾಲಿಯಾಗದಂತೆ ನೋಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಯಾವುದೇ ಕಾರಣಕ್ಕೂ ಹಣದ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲವಂತೆ. ಸಾಸಿವೆ ಕಾಳಿನ ಪಾತ್ರೆ ಯಾವಾಗಲೂ ತುಂಬಿದ್ದರೆ, ಆ ಮನೆಯಲ್ಲಿ ಅನ್ನಪೂರ್ಣ ದೇವಿಯ ಆಶೀರ್ವಾದ ಇರುತ್ತದೆ.

ಕೆಟ್ಟದ್ದಕ್ಕೆಲ್ಲಾ ಶನೀಶ್ವರನೇ ಕಾರಣವಲ್ಲ! ಶನಿದೆಸೆ ಇದ್ದಾಗಲೂ ಹೆಸರು, ಕೀರ್ತಿ, ಐಶ್ವರ್ಯ ಬರಲು ಹೀಗೆ ಮಾಡಿ
ಕೆಟ್ಟದ್ದಕ್ಕೆಲ್ಲಾ ಶನೀಶ್ವರನೇ ಕಾರಣವಲ್ಲ! ಶನಿದೆಸೆ ಇದ್ದಾಗಲೂ ಹೆಸರು, ಕೀರ್ತಿ, ಐಶ್ವರ್ಯ ಬರಲು ಹೀಗೆ ಮಾಡಿ

ಸಾಸಿವೆ ನೋಡುವುದಕ್ಕೆ ಪುಟ್ಟ ಕಾಳು. ಆದರೆ ಇದು ಕೇವಲ ಅಡುಗೆ ಮನೆಯಲ್ಲಿ ಕಂಡು ಬರುವ ಕಾಳಲ್ಲ. ಬದಲಿಗೆ ದುರದೃಷ್ಟವನ್ನು ಅದೃಷ್ಟವಾಗಿ ಬದಲಾಯಿಸುವ ಮಂತ್ರ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+