ಇನ್ನು ಆರು ತಿಂಗಳಲ್ಲಿ ಚುನಾವಣೆ ನಿಶ್ಚಿತ : ಕೋಡಿಮಠ ಶ್ರೀ

'ಸದಾನಂದ ಗೌಡರ ಸರ್ಕಾರ ಬಂದಾಗಲೂ ಇದೇ ಮಾತನಾಡಿದ್ದೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ. ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಮುಂದುವರೆಯಲಿದೆ. ಹಲವು ಬಾರಿ ಬಿಜೆಪಿ ಸರ್ಕಾರ ಗಡಾಂತರದಿಂದ ಪಾರಾಗಿದೆ. ಆದರೆ, ಈ ಬಾರಿ ಕಷ್ಟ. ಮುಂದಿನ ಆರು ತಿಂಗಳಲ್ಲಿ ಚುನಾವಣೆ ಎದುರಿಸಬೇಕಾಗುತ್ತದೆ. ಇನ್ಮುಂದೆ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗುವುದು ಕಷ್ಟ. ಸಮ್ಮಿಶ್ರ ಸರ್ಕಾರ ರಚನೆ ಸಾಧ್ಯತೆ ಹೆಚ್ಚಾಗಿದೆ. ಎಂದು ಕೋಡಿಮಠಶ್ರೀಗಳು ಹೇಳಿದ್ದಾರೆ.
ರಾಜಕೀಯ ಅಸ್ಥಿರತೆ 2020ರವರೆಗೂ ಮುಂದುವರೆಯಲಿದೆ. ಯಡಿಯೂರಪ್ಪ ಅವರ ಜನಪ್ರಿಯತೆ, ಗೆಲುವು ತಾತ್ಕಾಲಿಕವಾದದ್ದು, ಬಿಜೆಪಿ ಸ್ಥಿರ ಸರ್ಕಾರ ನಡೆಸುವ ಕನಸು ನನಸಾಗಲು ಕಾಲ ಪಕ್ವವಾಗಿಲ್ಲ ಎಂದರು. ವಿಪಕ್ಷಗಳಿಗೂ ಗ್ರಹಗತಿ ಸರಿ ಇಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ರಾಜಕೀಯ ಅಸ್ಥಿರತೆ ಮುಂದುವರೆಯುತ್ತದೆ ಎಂದು ಅರಸೀಕೆರೆಯ ಕೋಡಿಮಠದ ಶ್ರೀಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಸದಾನಂದ ಗೌಡರು ಉತ್ತಮ ರಾಜಕಾರಣಿ. ಅವರ ಒಳ್ಳೆಯತನವೇ ಅವರಿಗೆ ಉನ್ನತ ಸ್ಥಾನ ದೊರಕಿಸಿಕೊಟ್ಟಿದೆ. ಆ ಒಳ್ಳೆಯತನ ಅವರಿಗೆ ಮುಳುವಾಗಿದೆ. ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರಿಗೆ ಆಪ್ತರೊಬ್ಬರಿಂದ ಬಹಳಷ್ಟು ವಿರೋಧ ವ್ಯಕ್ತವಾಗುತ್ತದೆ. ಆದರೂ 2013ರ ವರೆಗೆ ತೊಂದರೆ ಇಲ್ಲ. ಆತಂಕ ಪರಿಹಾರವಾದರೆ ಒಳ್ಳೆಯ ಯೋಗವಿದೆ. ಇಲ್ಲದಿದ್ದರೆ ಅಧಿಕಾರ ಅನಿಶ್ಚಿತ ಎಂದು ಸ್ವಾಮೀಜಿ ಈ ಮುಂಚೆ ಹೇಳಿದ್ದಾರೆ.
ಇತರೆ ಜನ ಪ್ರತಿನಿಧಿಗಳಿಗೆ ಆತಂಕಕಾರಿ ವಿಷಯವನ್ನು ಸ್ವಾಮೀಜಿ ಹೇಳಿದ್ದಾರೆ. 'ಮತ್ತಷ್ಟು ರಾಜಕೀಯ ಮುಖಂಡರು ಜೈಲಿಗೆ ಹೋಗಲಿದ್ದಾರೆ' ಎನ್ನುವ ಮೂಲಕ ಜನಪ್ರತಿನಿಧಿಗಳನ್ನು ಭಯದ ಮಡುವಿಗೆ ತಳ್ಳಿದ್ದಾರೆ. ಮುಂಗಾರು ಮಳೆ ಕ್ಷೀಣವಾಗಿದ್ದು ಇನ್ನು 15ದಿನಗಳಲ್ಲಿ ಉತ್ತಮ ಮಳೆ ಕಾಣಬಹುದು, ಹಿಂಗಾರು ಮಳೆ ಉತ್ತಮವಾಗಿರುತ್ತದೆ.
ಯಡಿಯೂರಪ್ಪ ಭವಿಷ್ಯ: ಯಡಿಯೂರಪ್ಪ ಮತ್ತೆ ತಮಗೆ ಸಿಎಂ ಆಗುವ ಯೋಗಾನುಯೋಗ ಇದೆಯೇ ಎಂಬ ಪ್ರಶ್ನೆಗೆ "ಯಡಿಯೂರಪ್ಪ ಅವರಿಗೆ ಸಿಎಂ ಆಗುವ ಯೋಗ ಮುಂದಿನ 6 ವರ್ಷಗಳ ಕಾಲ ಇಲ್ಲ. ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೆ ಯತ್ನಿಸಲು ಸೂಕ್ತ ಕಾಲವೂ ಕೂಡಿ ಬಂದಿಲ್ಲ, ಯಡಿಯೂರಪ್ಪ ಅವರು ಮೌನದಿಂದ ಇರುವುದು ಒಳ್ಳೆಯದು" ಎಂದು ಶ್ರೀಗಳು ಹೇಳಿದರು.
-
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು -
March 18 Horoscope: ಧನ, ಆರೋಗ್ಯ, ಉದ್ಯೋಗದ ಭವಿಷ್ಯ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Bengaluru Rent: ಬೆಂಗಳೂರಲ್ಲಿ ನಾನ್ವೆಜ್ ಪ್ರಿಯರಿಗೆ ಶಾಕ್: ಮಾಂಸಾಹಾರಿಗಳಿಗೆ ಸಿಗ್ತಿಲ್ಲ ನಗರದಲ್ಲಿ ಬಾಡಿಗೆ ಮನೆ












Click it and Unblock the Notifications