Get Updates
Get notified of breaking news, exclusive insights, and must-see stories!

ಓದುಗರ ಓಲೆ : ಹ್ಯಾಟ್ಸ್ ಆಫ್ ಡಾಕ್ಟರ್ ಅನಂತಮೂರ್ತಿ!

Hats off Dr. U.R. Ananthamurthy
ಹ್ಯಾಟ್ಸ್ ಆಫ್ ಡಾಕ್ಟರ್ ಅನಂತಮೂರ್ತಿ.. ಈಗಿನ ಸಮಾಜಕ್ಕೆ ನಿಮ್ಮಂಥ ಬುದ್ಧಿಜೀವಿಗಳ ನಾಯಕತ್ವ ಅವಶ್ಯಕವಿದೆ. ಸಂಘ ಪರಿವಾರದ ಕುಮ್ಮಕ್ಕುಗಳನ್ನು ಹತ್ತಿಕ್ಕಲು ನಾವೆಲ್ಲಾ ಒಂದಾಗೋಣ ಹಾಗು ಅಂತಹ ಕ್ಯಾನ್ಸರ್ ನಮ್ಮ ದೇಶದಿಂದ ಹೊರಗೆ ಹಾಕುವ ತನಕ ಪಣ ತೊಟ್ಟು ಕೆಲಸ ಮಾಡೋಣ. ನಮ್ಮ ದೇಶ ಎಷ್ಟೊಂದು ಅಧೋಗತಿಗೆ ಸಾಗುತ್ತಿದೆ. ಇಲ್ಲಿ ಇದುವರೆಗೆ ಬಂದ ಕಾಮೆಂಟ್ಸ್ ಒಂದು ಸರಿ ನೋಡಿದ್ರೆ, ನಮ್ಮ ದೇಶದಲ್ಲಿ ಸಂಘಪರಿವಾರದ ಏಜೆಂಟ್ಗಳು ತುಂಬ ಎಲರ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ದೇವರೇ ಕಾಪಾಡಬೇಕು ನಮ್ಮ ಕರ್ನಾಟಕ ಹಾಗೂ ನಮ್ಮ ಭಾರತ ದೇಶವನ್ನ.
* ಓಮರ್

***
ಇವನಿಗೆ (ಯುಆರ್ ಅನಂತಮೂರ್ತಿಗೆ) ಅಸ್ಸಾಂನಲ್ಲಿ ಆಗಿರೋ ಗಲಾಟೆ ಬಗ್ಗೆ ಮಾತಾಡೋಕ್ಕೆ ಆಗೋಲ್ಲ. ಯಾಕಂದ್ರೆ ಅಲ್ಲಿ ಇರೋದು ಕಾಂಗ್ರೆಸ್ ಗವರ್ನಮೆಂತ್ ಅದಕ್ಕೆ. ಮೊನ್ನೆ ಅಷ್ಟೇ ಆದ ಮುಂಬೈ ಗಲಾಟೆ ಬಗ್ಗೆ ಮಾತಾಡೋಣ ಅಂದ್ರೆ ಅಲ್ಲಿ ಇರೋದು ಕಾಂಗ್ರೆಸ್ ಗವರ್ನ್ಮೆಂಟ್. ಅಲ್ಲದೆ ಅಲ್ಲಿ ಗಲಾಟೆ ಮಾಡಿದ್ದು ಇವರೇ ಕಳಸಿದ ಜೀಹಾದಿ ಮುಸ್ಲಿಮರೆ! ಪಾಪ! ಕಾಶ್ಮೀರದಲ್ಲಿ ಹುಡುಗಿ ಬುರ್ಖಾ ಹಾಕದೆ ಹೋದರೆ, ಮೊಬೈಲಿನಲ್ಲಿ ಮಾತಾಡಿದರೆ ಆಸಿಡ್ ಹಾಕುತ್ತೇವೆ ಅಂದವರು ಇವರ ಹುಡುಗರೇ ಅಲ್ವ ಸರ್? ಪಾಪ ಎಷ್ಟಾದ್ರೂ ಇವರ ಬುದ್ದಿ ಮಂಕಾಗಿದೆ! ಜನರು ನೀವ್ ಏನ್ ಹೇಳಿದ್ರು ನಂಬಿ ಬಿಡ್ತಾರೆ ಅಂತಾನ? ಖಂಡಿತ ಇಲ್ಲಪ್ಪ! ಕಾಲ ಬದಲಾಗುತ್ತೆ ಸರ್! [ಮಂಗಳೂರು ದಾಳಿ : ಯುಆರ್‌ಎ ಕಿಡಿನುಡಿ]
* ಪ್ರಕಾಶ್

***
ಹೇ ಜೀವಗಳ ಒಲವೆ ಹೇ ಭಾವಗಳ ವನವೇ ನೀವಿರದೆ ನಾನಿಲ್ಲ ನಾನಿರದೇ ನೀವಿಲ್ಲ ಪ್ರೀತಿ ನನ್ನ ಹೆಸರು.... ನೆನಪಿರಲಿ ನೆನಪಿರಲಿ.... ಒಲವು ಒಂಟಿಯಲ್ಲ ಒಂಟಿ ಸೂರ್ಯನಲ್ಲ ಒಂಟಿ ರೆಕ್ಕೆಯಲ್ಲಿ ಹಾರಬಲ್ಲ ಹಕ್ಕಿಯಲ್ಲ ಒಂಟಿ ಪ್ರೇಮಿಯಲ್ಲ ಹೂವು ದುಂಬಿ ಹಾಡು ಅದು..... ನೆನಪಿರಲಿ ನೆನಪಿರಲಿ..... ಪ್ರೀತಿ ಪಾಠವಲ್ಲ, ಪ್ರಣಯದೂಟವಲ್ಲ ಮಧುರ ಪದಗಳ ಪ್ರಾಸಬದ್ಧ ಹಾಡು ಅಲ್ಲ ಬರಿ ಮುತ್ತು ಅಲ್ಲ ಕಾಣಿಸದ ಕಾವ್ಯ ಅದು.... ನೆನಪಿರಲಿ ನೆನಪಿರಲಿ..... ಹಂಸಲೇಖಗೆ ಹಂಸಲೇಖರೇ ಸಾಟಿ.. ನೆನಪಿರಲಿ... ನೆನಪಿರಲಿ. [ಇಂದಿನ ಸಂಗೀತ ನಿರ್ದೇಶಕರಲ್ಲಿ ಯಾರು ಬೆಸ್ಟ್?]
* ಶ್ರೀನಿವಾಸ್

***
ಚೋರ ನಿಂದಿಸಿ ಶಶಿಯ ಬೈದರೆ, ಕ್ಷೀರವನು ಕ್ಷಯರೋಗಿ ಅಳಿದರೆ ವಾರನಸಿಯ ಹೆಳವ ನಿಂದಿಸಿ ನಕ್ಕರೆನಹುದು ಮುಂತಾಗಿ ಕುಮಾರ ವ್ಯಾಸ ಭಾರತದ ಫಲ ಶೃತಿ ಹೇಳುತ್ತದೆ. ಅಂತೆಯೇ ಕತ್ತೆಗೇನು ಗೊತ್ತು ಕಸ್ತೂರಿ ಬೆಲೆ ಎಂಬಂತೆ ಕೆಲಸಕ್ಕೆ ಬಾರದವರು ನಿಂದಿಸಿ ಸಂಶಯ ಪಟ್ಟರೆ ಏನಾಯಿತು? ಅದರ ಬಗ್ಗೆ ಒಲವು ಮತ್ತು ಸಾಧನೆ ಮಾಡುವ ಮನಸ್ಸಿನವರಿಗೆ ವಿಷ್ಣು ಸಹಸ್ರನಾಮ ಪರಮಾತ್ಮ ಒಲಿದು ಇಹ ಪರ ಎರಡರಲ್ಲೂ ಉತ್ತಮ ಗತಿ ಕರುಣಿಸುತ್ತಾನೆ. ಮತ್ತೆ, ಇಂಗ್ಲಿಷ್ ನಲ್ಲಿ ದಯಮಾಡಿ ಪಾರಾಯಣೆ ಮಾಡಲು ಹೋಗಬೇಡಿ. ನಿಮ್ಮ ನಿಮ್ಮ ಮಾತೃ ಭಾಷೆಯಲ್ಲೇ ಪಾರಾಯಣ ಮಾಡಿರಿ. ದೇವನಾಗರಿ ಬಾರದವರು ನಿಮ್ಮ ಮಾತೃ ಭಾಷೆ ಉಪಯೋಗಿಸಿ. [ವಿಷ್ಣುಸಹಸ್ರನಾಮ ಸ್ತೋತ್ರ]
* ಕೇ.ಮೂ.

***
ಅವರಿಬ್ಬರೂ ಪರಸ್ಪರ ಒಪ್ಪಿಗೆಯಿಂದಲೇ ಖಾಸಗಿಯಾಗಿ ಚುಂಬಿಸಿದ್ದಾರೆ. ಅದನ್ನು capture ಮಾಡಿ ನೆಟ್ಟಿಗೆ ಹಾಕಿದ್ದು ಬೇರೆ ಯಾರದ್ದೋ ತಪ್ಪು. ಅಷ್ಟಕ್ಕೂ ಒಪ್ಪಿಗೆಯಿಂದ ಚುಂಬಿಸಿದರೆ ಯಾರ ಗಂಟೇನು ಹೋಗುತ್ತೆ? ಸುಮ್ನೆ ಯಾಕೆ ಅವರ ಮರ್ಯಾದೆ ತೆಗೀತೀರ?[ವೈ ದಿಸ್ ಚುಂಬನ ಕೊಲವೆರಿ ಡಿ?]
* ಅನಿರುದ್ಧ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+