ರಿಷಿಕಾ ಸಿಂಗ್ ಪೋಸ್ಟರ್ ಗಲಾಟೆ - ಓದುಗರ ಪತ್ರ

ಡರ್ಟಿ ಪಿಕ್ಚರ್ಸ್ ನಲ್ಲಿ ವಿದ್ಯಾಬಾಲನ್ ಮತ್ತು ಇತ್ತೀಚೆಗೆ ಮಳೆಹುಡುಗಿ ಪೂಜಾಗಾಂಧಿ ದಂಡುಪಾಳ್ಯ ಚಿತ್ರದಲ್ಲಿ ಅರೆನಗ್ನವಾದ ವಿಚಾರ ಇಷ್ಟು ಚರ್ಚೆಗೆ ಒಳಗಾಗದೇ ಇದ್ದದ್ದು ಮತ್ತು ಈ ಚಿತ್ರ ಮಾತ್ರ ಯಾಕೆ ಇಷ್ಟು ಚರ್ಚೆಗೆ ಒಳಾಗಾಗುತ್ತಿದೆ ಎನ್ನುವುದು ನನ್ನ ಕುತೂಹಲ.
ಮಹಿಳಾ ಸಂಘಟನೆಗಳು ಈ ಸಿನಿಮಾದ ಪೋಸ್ಟರ್ ವಿಚಾರದಲ್ಲಿ ಇಷ್ಟು ಬೀದಿರಂಪ ಮಾಡುತ್ತಿವೆ ಅಲ್ವೇ ? ಹಾಗಾದ್ರೆ ಪೂಜಾಗಾಂಧಿ ಮತ್ತು ವಿದ್ಯಾಬಾಲನ್ ವಿಷಯದಲ್ಲಿ ಯಾಕೆ ಸಂಘಟನೆಗಳಿಗೆ ಕಾಳಜಿ ಇರಲಿಲ್ಲ. ವಿದ್ಯಾ ಬಾಲನ್ ಮತ್ತು ಪೂಜಾ ಗಾಂಧೀ ಕೂಡ ಮಹಿಳೆಯರು ತಾನೆ? ಅವರಿಬ್ಬರೂ ಅರೆನಗ್ನವಾದಾಗ ಎಲ್ಲರೂ ನೋಡಿದ್ದೇ ನೋಡಿದ್ದು ಹೊರತು ಯಾರೂ ತಕರಾರು ಎತ್ತಿರಲಿಲ್ಲ ಯಾಕಪ್ಪಾ?.
ಟಿವಿ ವಾಹಿನಿಯಲ್ಲಿ ಮಂಗಳವಾರ (ಜ 11) ನಡೆದ ಬಿಸಿಬಿಸಿ ಚರ್ಚಾಕೂಟದಲ್ಲಿ ಚಿತ್ರದ ನಿರ್ದೇಶಕರು ನಾನು ಮುಸ್ಲಿಂ ಕೋಮಿನವನಾದುದರಿಂದ ಚಿತ್ರಕ್ಕೆ ಇಷ್ಟು ತೊಂದರೆಯಾಗುತ್ತಿದೆ ಎಂದು ಅಲವತ್ತು ಕೊಂಡರು. ಈ ಮಾತಿನಲ್ಲಿ ಹುರುಳಿಲ್ಲ ಎಂದು ನನ್ನ ಭಾವನೆ.
ಜವಾಬ್ದಾರಿಯುತ ಮಹಿಳಾ ಸಂಘಟನೆಗಳು ಪ್ರತಿಭಟನೆ ನಡೆಸುವ ಮುಂಚೆ ಚಿತ್ರತಂಡದ ಬಳಿ ಚಿತ್ರಕಥೆಯ ಬಗ್ಗೆ ಮಾತನಾಡಬಹುದಾಗಿತ್ತು. ಡರ್ಟಿ ಪಿಕ್ಚರ್ಸ್ ನಲ್ಲಿ ಸಿಲ್ಕ್ ಸ್ಮಿತಾ ಕಥೆಯಾಧಾರಿತ ಚಿತ್ರವಾಗಿದ್ದಿದ್ದರಿಂದ ಚಿತ್ರಕಥೆಗೆ ಪೂರಕವಾಗಿ ವಿದ್ಯಾಬಾಲನ್ ಅವರನ್ನು ಬಳಸಿಕೊಳ್ಳಲಾಗಿದೆ ಎಂದು ಒಪ್ಪಿಕೊಳ್ಳುವ ಸಂಘಟನೆಗಳು ಈ ಸಿನಿಮಾ ವಿಚಾರದಲ್ಲಿ ತಕರಾರು ಎತ್ತುತ್ತಿರುವುದು ಏಕೆ?
ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಈಗ ವಿವಾದದ ಕೇಂದ್ರಬಿಂದು ಆಗಿರುವ ರಿಷಿಕಾ, ನಗ್ನ ಚಿತ್ರದಲ್ಲಿ ನಟಿಸುವ ದರ್ದ್ ನನಗಿಲ್ಲ, ರಾಜೇಂದ್ರ ಸಿಂಗ್ ಬಾಬು ಅಂತಹ ಹಿರಿಯ ಮತ್ತು ಗೌರವಾನ್ವಿತ ಕುಟುಂದದಿಂದ ಬಂದವಳು ನಾನು. ಪೋಸ್ಟರ್ ನಲ್ಲಿ ತಾಂತ್ರಿಕತೆ ಬಳಸಿ ಆ ರೀತಿಯಲ್ಲಿ ತೋರಿಸಲಾಗಿದೆಯೇ ಹೊರತು ನಾನೇನು ನಗ್ನಳಾಗಿಲ್ಲ. ಚಿತ್ರಕಥೆಗೆ ಆ ದೃಶ್ಯದ ಅವಶ್ಯಕತೆ ಇತ್ತು ಎಂಬ ವಾದ ಮಂಡಿಸಿದರು.
ನಮ್ಮ ಚಿತ್ರರಂಗ ಬೆಳೆಯುತ್ತಿದ್ದಂತೆ ನಮ್ಮ ನಾಯಕಿಯರು ಧರಿಸುವ ಬಟ್ಟೆಗಳ ಅಳತೆಗಳು ದಿನದಿಂದ ದಿನಕ್ಕೆ ಇಂಚಿಂಚು ಕಡಿಮೆ ಆಗುತ್ತಿರುವುದಂತೂ ಸತ್ಯ. ಅದಕ್ಕೆ ಅವಕಾಶಗಳ ಕೊರತೆ ಇರಬಹುದು ಅಥವಾ ಚಿತ್ರರಂಗದಲ್ಲಿ ಭದ್ರವಾಗಿ ನೆಲೆವೂರುವ ಹಂಬಲ ಇರಬಹುದು. ಅಥವಾ ಪ್ರೇಕ್ಷಕ ಮಹಾಶಯನ ಬೆಂಬಲವಿರಲೂಬಹುದು!
ಒಟ್ಟಿನಲ್ಲಿ ಮಹಿಳಾ ಸಂಘಟನೆಗಳು ನಡೆಸುವ ಹೋರಾಟ ಮಹಿಳೆಯರ ಪರವಾಗಿರಲಿ. ನಿಮ್ಮ ಹೋರಾಟ ಪ್ರಚಾರಕ್ಕಾಗಿ ಮಾತ್ರ ಇರದಿರಲಿ. ಒಟ್ಟಿನಲ್ಲಿ ನಿಮ್ಮ ಹೋರಾಟದಲ್ಲಿ ಯಾವುದೇ ತಾರತಮ್ಯ ಇರದಿರಲಿ. ಸರ್ವೇ ಜನಃ ಸುಖಿನೋ ಭವಂತು.
-
'ವಂತಾರ'ಕ್ಕೆ ಒಂದು ವರ್ಷ: ಆರೋಗ್ಯ ಸುಧಾರಿಸಿದ ಅನೇಕ ಪ್ರಾಣಿಗಳು ಮರಳಿ ಕಾಡಿಗೆ -
Bengaluru: ಗೊರಗುಂಟೆಪಾಳ್ಯದ ಟ್ರಾಫಿಕ್ಗೆ ಸಿಗಲಿದ್ಯಾ ಮುಕ್ತಿ? ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು 'ಸುರಂಗ ರಸ್ತೆ' ಪ್ರಸ್ತಾಪ -
Horoscope March 4: ಈ ರಾಶಿಯವರಿಗೆ ವೃತ್ತಿಯಲ್ಲಿ ಸುಧಾರಣೆ, ಆರೋಗ್ಯ ಕಾಳಜಿ ಮುಖ್ಯ, ದಿನ ಭವಿಷ್ಯ ಇಲ್ಲಿದೆ -
Bengaluru: ‘92 ಲಕ್ಷದ ಪ್ಯಾಕೇಜ್ ಇದ್ದರೂ ಉಳಿಯಲಿಲ್ಲ ಕೆಲಸ’; ಒಂದೇ ದಿನ ಶೇ. 40ರಷ್ಟು ಸಿಬ್ಬಂದಿ ವಜಾ ಮಾಡಿದ ಐಟಿ ಕಂಪನಿ -
ಅನಧಿಕೃತವಾಗಿ ಪ್ರವೇಶಿಸಿದರೆ ಗುಂಡು ಹಾರಿಸಲಾಗುವುದು: ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಹುಟ್ಟುಹಾಕಿದ ವಾಯುಪಡೆಯ ಸೂಚನಾ ಫಲಕ -
Horoscope March 5: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ, ಯಾರಿಗೆ ಶುಭ-ಯಾರಿಗೆ ಅಶುಭ -
Toxic release postponed: ಯಶ್ ಅಭಿಮಾನಿಗಳಿಗೆ ಆಘಾತ: "ಟಾಕ್ಸಿಕ್" ಸಿನಿಮಾ ಬಿಡುಗಡೆ ದಿಢೀರ್ ಮುಂದೂಡಿಕೆ -
ಕರ್ನಾಟಕ ವಿದ್ಯುತ್ ನಿಗಮ ಬೆಳಕಿನ ಸಂಸ್ಥೆಗೆ ಕತ್ತಲೆಯ ಛಾಯೆ: ಸರ್ಕಾರಿ ನಿರ್ಲಕ್ಷದ ಒಳನೋಟ -
ಕೃಷಿಕರಿಗೆ ವರದಾನವಾದ ಶೈಲಜಾ ವಿಠಲ್ ಆವಿಷ್ಕರಿಸಿದ 35 ಕೃಷಿ ಯಂತ್ರೋಪಕರಣ, ಸಣ್ಣ ರೈತರಿಗೆ ದೊಡ್ಡ ಲಾಭ -
Elnaaz Norouzi: ಭಾರತದಲ್ಲೇ ನೆಲೆಸಿದ್ದಾರೆ ಇರಾನ್ ಸುಂದರಿ, ಮತ್ತೆ ಅಲ್ಲಿಗೆ ಕಾಲಿಟ್ಟರೆ ನನ್ನ ಕೊಲ್ತಾರೆ ಎಂದ ನಟಿ ಎಲ್ನಾಜ್ -
Saaniya Chandok: ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ಕುಟುಂಬಕ್ಕೆ ಸೊಸೆಯಾಗಿ ಬಂದ ಸಾನಿಯಾ ಚಾಂದೋಕ್ ಯಾರು? -
Rashmika: ಹೈದರಾಬಾದ್ನಲ್ಲಿ ರಶ್ಮಿಕಾ-ವಿಜಯ್ ಅರತಕ್ಷತೆ: ನವದಂಪತಿಗೆ ಡಿಕೆ ಶಿವಕುಮಾರ್ ವಿಶ್












Click it and Unblock the Notifications