ಸ್ವಾಮಿ ಸದಾನಂದರೇ ಹೀಗೇಕೆ ತದ್ವಿರುದ್ಧ ಹೇಳಿಕೆ ನೀಡುತ್ತಿದ್ದೀರಿ?

ನಿವೃತ್ತ ಲೋಕಾಯುಕ್ತ ನ್ಯಾ ಹೆಗ್ಡೆ ಅವರು 'ಭ್ರಷ್ಟಾಚಾರವಿಲ್ಲದ ಸಂಸ್ಥೆಯೇ ಇಲ್ಲ' ಎಂದು ವಾಸ್ತವದ ಮೇಲೆ ಬೆಳಕು ಚೆಲ್ಲುತ್ತಿದ್ದಂತೆ ಪಾಪ ಸದಾನಂದರು ಎಲ್ಲಿ ಮುಟ್ಟಿ ನೋಡಿಕೊಂಡರೋ ನ್ಯಾ ಹೆಗ್ಡೆ ಹೇಳಿಕೆ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
'ನ್ಯಾ. ಸಂತೋಷ್ ಹೆಗ್ಡೆ ಅವರ ಬಗ್ಗೆ ಅಪಾರ ಗೌರವವಿದೆ. ಆದರೆ ಭ್ರಷ್ಟಾಚಾರವಿಲ್ಲದ ಸಂಸ್ಥೆಯೇ ಇಲ್ಲ ಎನ್ನುವ ಹೆಗ್ಡೆ ಹೇಳಿಕೆಯಿಂದ ತುಂಬಾ ಬೇಸರವಾಗಿದೆ. ಪ್ರಚಾರಕ್ಕಾಗಿ ಮಾಧ್ಯಮದ ಮುಂದೆ ಪದೇ ಪದೇ ಹೇಳಿಕೆ ನೀಡುವುದು ಸಂಪ್ರದಾಯವಲ್ಲ. ತಮ್ಮ ವಿರುದ್ಧದ ಟೀಕೆಗಳಿಗೆ ಈ ರೀತಿ ಆವೇಶಭರಿತವಾಗಿ ಮಾಧ್ಯಮದ ಮುಂದೆ ಬಂದು ಉತ್ತರಿಸುವುದು ಸರಿಯಲ್ಲ' ಎಂದೂ ಅಪ್ಪಣೆ ಕೊಡಿಸಿದ್ದಾರೆ.
ಸ್ವಾಮಿ ಸದಾನಂದರೇ ಯಾಕೆ ತದ್ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದೀರಿ? ನ್ಯಾ. ಸಂತೋಷ್ ಹೆಗ್ಡೆ ಅವರು ಲೋಕಾಯುಕ್ತ ಹುದ್ದಯಿಂದ ಎದ್ದು ಹೋದ ಮೇಲೆ ಆ ಸ್ಥಾನವನ್ನು ಅರ್ಹರಿಗೆ ನೀಡಲು ನೀವು ಹೇಗೆ ವಿಫಲರಾಗುತ್ತಿದ್ದೀರಿ ಎಂಬುದು ನಾಡಿನ ಜನತೆಗೆ ಗೊತ್ತಿದೆ. ಒಂದು ಹಂತದಲ್ಲಿ ಹತಾರಾಶರಾಗಿ 'ನೂರಕ್ಕೆ ನೂರರಷ್ಟು ಯಾರೂ ಪರಿಪೂರ್ಣರಾಗಿರುವುದಿಲ್ಲ' ಎಂದು ನೀವೇ ಹೇಳಿದ್ದನ್ನು ಮರೆತುಹೋದಿರಾ.
ವ್ಯಕ್ತಿಯಾದರೇನೂ, ಸಂಸ್ಥೆಯಾದರೇನೂ? ನೂರಕ್ಕೆ ನೂರರಷ್ಟು ಪರಿಪೂರ್ಣರಾಗಿರುವ ವ್ಯಕ್ತಿಯೇ ನಿಮಗೆ ಸಿಗೊಲ್ಲ ಅಂತಾದರೆ ಇನ್ನು ಸಂಸ್ಥೆಗಳು ಎಲ್ಲಿಂದ ಸಿಗಬೇಕು? ಅದನ್ನೇ ನ್ಯಾ ಸಂತೋಷ್ ಹೆಗ್ಡೆ ಅವರು ಹೇಳಿದ್ದು 'ಭ್ರಷ್ಟಾಚಾರ ಇಲ್ಲದ ಸಂಸ್ಥೆಯೇ ಇಲ್ಲ' ಎಂದು. ಅದಕ್ಕೆ ನೀವೂ ಆವೇಶಭರಿತವಾಗಿ ಮಾಧ್ಯಮದ ಮುಂದೆ ಬಂದು ಉತ್ತರಿಸುವ ಅಗತ್ಯವಿಲ್ಲ.
ಅಷ್ಟಕ್ಕೂ ಯಾರನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ನೀವು ಇಂತಹ ಅಪ್ಪಣೆ ಕೊಡಿಸಿದಿರಿ? ಸ್ವಲ್ಪ ಯೋಚಿಸಿ ನೋಡಿ. ನ್ಯಾಯ-ಅನ್ಯಾಯದ ಮತ್ತೊಂದು ಮುಖ ನಿಮಗೇ ಪರಿಚಯವಾದೀತು.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications