ಶಿಕ್ಷಣ ಮಾಧ್ಯಮ ಕನ್ನಡದಲ್ಲೇ ಇರ್ಲಿ, ಇಂಗ್ಲೀಷ್ ಹೇರಿಕೆ ಏಕೆ?

ಇಂಗ್ಲಿಶ್ ಅನ್ನು ಒಂದು ಭಾಷೆಯಾಗಿ ಕಲಿಸಬಹುದು. ಫ್ರಾನ್ಸ್, ಜರ್ಮನಿ, ಜಪಾನು, ಇಸ್ರೇಲ್ ದೇಶಗಳಲ್ಲಿ ಶಾಲಾ ಮಟ್ಟದ ಶಿಕ್ಷಣ ಮಾಧ್ಯಮ ತಮ್ಮದೇ ಭಾಷೆಗಳಲ್ಲಿ ಇದ್ದು ಆ ದೇಶಗಳು ಪ್ರಗತಿ ಹೊಂದಿರುವುದು ನಮ್ಮ ಸರ್ಕಾರದ ಕಣ್ಣಿಗೆ ಬಿದ್ದಂತಿಲ್ಲ. ಕನ್ನಡ ಶಾಲೆಗಳ ಗುಣ ಮಟ್ಟ ಹೆಚ್ಚಿಸಿ, ಒಳ್ಳೆಯ ಶಿಕ್ಷಕರನ್ನು ನೇಮಿಸಿ, ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಟ್ಟು ಕನ್ನಡ ಜನಾಂಗವನ್ನು ಏಳಿಗೆಯ ಪಥದಲಿ ಕರೆದೊಯ್ಯುವ ಛಲ ನಮ್ಮನಾಳುವ ದೊರೆಗಳಿಗೆ ಇಲ್ಲದಿರುವುದು ವಿಪರ್ಯಾಸ.
ಭಾಷಾ ಮಾಧ್ಯಮದ ಬಗ್ಗೆ ವಿಶ್ವ ಸಂಸ್ಥೆ ಮಾಡಿರುವ ಸಂಶೋಧನೆಯಲ್ಲಿ ಆಫ್ರಿಕಾ ಖಂಡದ ಬುರ್ಕಿನೋ ಫಾಸೋ ಎಂಬ ದೇಶದಲ್ಲಿ ಮೂರ್ ಎಂಬ ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ಪಡೆದ ಮಕ್ಕಳು ಫ್ರೆಂಚ್ ಭಾಷೆಯಲ್ಲಿ ಶಿಕ್ಷಣ ಪಡೆದ ಮಕ್ಕಳಿಗಿಂತ ಪ್ರಬುದ್ಧವಾಗಿ ಫ್ರೆಂಚ್ ಭಾಷೆಯನ್ನೂ ಮತ್ತು ಗಣಿತವನ್ನು ಕಲಿತವರಾಗಿದ್ದರೆ ಅಂತ ತಿಳಿದುಬಂದಿದೆ.
ಇದೊಂದು ಉದಾಹರಣೆ ಅಷ್ಟೇ. ಪ್ರಪಂಚದ ನಾನಾ ದೇಶಗಳಲ್ಲಿ ಬಹಳಷ್ಟು ವಿಜ್ಞಾನಿಗಳು ಸ್ಥಳೀಯ ಭಾಷೆ/ಮಾತೃ ಭಾಷೆಯ ಶಿಕ್ಷಣ ಮಾಧ್ಯಮವೇ ಅತ್ಯಂತ ಪರಿಣಾಮಕಾರಿ ಅಂತ ಸಾಬೀತು ಮಾಡಿದ್ದಾರೆ.ನಮ್ಮ ಸರ್ಕಾರ ತಮ್ಮ ಚಿಂತನೆಯನ್ನು ಕೈ ಬಿಟ್ಟು ೧೦ನೆ ತರಗತಿಯ ವರೆಗೆ ಕನ್ನಡ ಮಾಧ್ಯಮವನ್ನು ಮುಂದುವರೆಸಿ ಉನ್ನತ ಶಿಕ್ಷಣವನ್ನು ಸಹ ಕನ್ನಡದಲ್ಲಿ ತರುವತ್ತ ಪ್ರಯತ್ನಿಸಬೇಕು.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications