ಅಂತರ್ಜಾಲ ಬಳಕೆದಾರರ ಸಂಖ್ಯೆ ಹೆಚ್ಚಬೇಕು

'ನಮ್ಮ ಪತ್ರಿಕೆಯ ಓದುಗರ ಪೈಕಿ ಶೇಕಡಾ ಐದರಷ್ಟು ಜನರೂ ಅಂತರ್ಜಾಲವನ್ನು ಬಳಸುವುದಿಲ್ಲ.' ಇದು ಪ್ರಮುಖ ಕನ್ನಡ ದಿನಪತ್ರಿಕೆಯೊಂದರ ಸಾಪ್ತಾಹಿಕ ಪುರವಣಿಯ ಸಂಪಾದಕರು ಕೆಲ ತಿಂಗಳುಗಳ ಕೆಳಗೆ ನನಗೆ ಹೇಳಿದ ಮಾತು.
'ಕೇವಲ ಶೇಕಡಾ 1.5ರಷ್ಟು (ಕನ್ನಡಿಗ) ಜನರು ಅಂತರ್ಜಾಲವನ್ನು ಬಳಸುತ್ತಾರೆ.' ಇದು ಇತ್ತೀಚೆಗೆ ಕನ್ನಡದ ಟ್ಯಾಬ್ಲಾಯ್ಡ್ ಒಂದರಲ್ಲಿ ಲೇಖಕರೊಬ್ಬರು ನೀಡಿರುವ ಹೇಳಿಕೆ.
ನನ್ನ ಪ್ರಕಾರ ಈ ಮೂರೂ ಅಭಿಪ್ರಾಯಗಳಲ್ಲೂ ತಥ್ಯಾಂಶವಿದೆ. ಆದರೆ ನಾವು ನಿರಾಶರಾಗಬೇಕಿಲ್ಲ. ಸದ್ಯಕ್ಕೇನೋ ನಾವು ಆನ್ಲೈನ್ ಪತ್ರಿಕೆಯೂ ಸೇರಿದಂತೆ ಅಂತರ್ಜಾಲವನ್ನು ಓದು, ಬರವಣಿಗೆ, ಚರ್ಚೆ ಮತ್ತು ಅಭಿಪ್ರಾಯ ವಿನಿಮಯಗಳಿಗಾಗಿ ಸಮೃದ್ಧವಾಗಿ ಮತ್ತು ಸಮರ್ಥವಾಗಿ ದುಡಿಸಿಕೊಳ್ಳುತ್ತಿಲ್ಲ, ಆದರೆ, ಅಂತರ್ಜಾಲವು ಮುಂದೆ ಸರ್ವಾಂತರ್ಯಾಮಿ ಹಂತ ತಲುಪತೊಡಗಿದಾಗ ಈ ದುಡಿಮೆ ತಾನಾಗಿಯೇ ಹೆಚ್ಚತೊಡಗುತ್ತದೆ. ಜೊತೆಗೇ, ಹೆಚ್ಚೆಚ್ಚು ಸಮರ್ಥವೂ ಮತ್ತು ಸಮಾಜದಲ್ಲಿ ಪ್ರಭಾವಶಾಲಿಯೂ ಆಗತೊಡಗುತ್ತದೆ. ಇಷ್ಟೇ ಅಲ್ಲ, ಈಗ ಹಲವು ಸಂದರ್ಭಗಳಲ್ಲಿ ತಾನು ಹೇಳಿದ್ದೇ ವೇದವಾಕ್ಯ ಎಂಬಂತೆ ಮೆರೆಯುತ್ತಿರುವ ಮುದ್ರಣ ಮಾಧ್ಯಮವೂ ಆಗ ತಂತಾನೇ 'ದಾರಿಗೆ' ಬರುತ್ತದೆ. ಹೀಗಾಗುವುದು ನಿಜಕ್ಕೂ ಒಂದು ಒಳ್ಳೆಯ ಬೆಳವಣಿಗೆ.
'ಅಂತರ್ಜಾಲ ಪತ್ರಿಕೋದ್ಯಮ'ವೆಂಬುದು ನಮ್ಮ ದೇಶದಲ್ಲಿ ಇನ್ನೂ ಕೂಸು. ಈ ಕೂಸು ಬೆಳೆದು ಮುಂದೆ ಯೌವನಕ್ಕೆ ಕಾಲಿಟ್ಟಾಗ ಅದರ ಪ್ರಭೆ, ಜೊತೆಗೆ ಪ್ರತಾಪ ಎರಡೂ ಪ್ರಖರವಾಗುತ್ತವೆ. ಸಮಾಜದ ಪ್ರಗತಿಯ ದೃಷ್ಟಿಯಿಂದ ಇದು ಸ್ವಾಗತಾರ್ಹ.
ನಿಧಾನವಾಗಿ ನಾವು ಅಂತರ್ಜಾಲದ ಯುಗಕ್ಕೆ ಕಾಲಿರಿಸುತ್ತಿದ್ದೇವೆ. ಇಂಥ ಸಂದರ್ಭದಲ್ಲಿ ನಾವು ಓದುಗರಾಗಿ ಮತ್ತು ಬರಹಗಾರರಾಗಿ ಪತ್ರಿಕೆಯೊಂದರ ಆನ್ಲೈನ್ ಸಾಧ್ಯತೆಗಳನ್ನು ಗರಿಷ್ಠವಾಗಿ ಮತ್ತು ಇತ್ಯಾತ್ಮಕವಾಗಿ ದುಡಿಸಿಕೊಂಡು ಅದ್ಭುತ ಸಾಮಾಜಿಕ ಪ್ರಗತಿಯನ್ನು ಹೊಂದಬಹುದು. ಅಂತರ್ಜಾಲದಲ್ಲಿ ನಮಗೆ ಲಭ್ಯವಿರುವ ಮುಕ್ತಮಾರ್ಗ ಮತ್ತು ಶೀಘ್ರ ಹಾಗೂ ವ್ಯಾಪಕ ಸಂವಹನಾ ಸೌಲಭ್ಯ ಇವು ಈ ನಿಟ್ಟಿನಲ್ಲಿ ನಮಗೆ ಅತ್ಯಂತ ಪ್ರಬಲ ಸಾಧನಗಳಾಗಿ ನೆರವಿಗೆ ಬರುತ್ತವೆ.
ಇದೆಲ್ಲ ಸಾಧ್ಯವಾಗಲು ಮೊದಲು ನಮ್ಮ ದೇಶದಲ್ಲಿ ಅಂತರ್ಜಾಲ ಬಳಕೆದಾರರ ಸಂಖ್ಯೆ ಹೆಚ್ಚಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಪಾತ್ರ ಮಹತ್ತ್ವದ್ದು.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications